ಎಲ್ಲ ಪುಟಗಳು

ಲೇಖಕರು: shekarsss
ವಿಧ: ಬ್ಲಾಗ್ ಬರಹ
January 07, 2008
ಹೆಸರು ಬೇಕು ನಮಗೆ ಕೂಗಿ ಕರೆಯುವುದಕೆ ನಮ್ಮ ಇರುವನು ದೃಢೀಕರಿಸುವುದಕೆ ಗುರುತಿಸಬೇಕೆಂಬ ನಮ್ಮ ಹಂಬಲಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸ ಬೇಕೆಂಬ ಛಪಲಕ್ಕೆ ದಾರಿ ತೋರುವವಂಗೆ ತಪ್ಪುಗಳ ತಿದ್ದುವವಂಗೆ ವಿಧ್ಯೆ ಕಲಿಸುವವಂಗೆ ಹೆಸರು ಬೇಕೆ ಬೇಕು ದಿಟ್ಟ ಪರಿಶ್ರಮವಿಟ್ಟು ಸಂದ ಪ್ರತಿಫಲವನ್ನು ಸಾಧನೆಯ ಮುಖವೆಂದು ಜಗಕೆ ತಿಲಿಸುವುದಕೆ ಪ್ರೀತಿಸುವವಂಗೆ, ಧ್ವೇಷಿಸುವವಂಗೆ, ಕಷ್ಟ ಕಾರ್ಪಣ್ಯಗಳ ನೀಡುವವಂಗೆ ಬೇಕು ಮೆಟ್ಟಿದ ಮಜಲುಗಳ, ನಿಲುವುಗಳ, ಭಾವಗಳ, ಕಲ್ಪನೆಗಳ, ಕನಸುಗಳ ಹಾದಿಗೆ…
ಲೇಖಕರು: roopablrao
ವಿಧ: ಬ್ಲಾಗ್ ಬರಹ
January 07, 2008
ಇದರ ಹಿಂದಿನ ಭಾಗ http://www.sampada.net/blog/roopablrao/04/01/2008/6936 ಹೌದು ಬಂದಾಕೆ ಮೀನಾಕ್ಶಿ ನಯ ವಿನಯವೇ ಮೂರ್ತವೆತ್ತಂತೆ. ಇಬ್ಬರು ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಬಿಟ್ಟಿದ್ದಳು. ಗಂಡ ಇರಲಿಲ್ಲ. ನಮಗದು ಬೇಕಾಗೂ ಇರಲಿಲ್ಲ ರುಚಿ ರುಚಿ ಅಡಿಗೆ . ಹೊಸ ಹೊಸ ಖಾದ್ಯ . ಬಂದ ದಿನವೆ ಹೇಳಿದಳು "ಮೇಡಮ್ . ನಿಮಗೆಲ್ಲ ಏನೇನು ಬೇಕು ಅಂತ ಹೇಳಿ ಸಾಕು . ಅದನ್ನ ರೆಡಿ ಮಾಡಿಡ್ತೀನಿ. ನಿಮ್ಮ ಕೆಲಸದ ಕಡೆಗೆ ಗಮನ ಕೊಡಿ." ನನಗೋ ಸ್ವರ್ಗಕ್ಕೆ ಮೂರೇ ಗೇಣು. ಎಲ್ಲ ಕೆಲಸವನ್ನು ಅವಳಿಗೆ…
ಲೇಖಕರು: keshav
ವಿಧ: ಬ್ಲಾಗ್ ಬರಹ
January 06, 2008
ಯಶವಂತ ಚಿತ್ತಾಲರ 'ಕತೆಯಾದಳು ಹುಡುಗಿ’ ಯನ್ನು ಒಂದೇ ರಾತ್ರಿ (ರಾತ್ರಿ ೯ ರಿಂದ ೩ ರ ವರೆಗೆ) ಒಂದೇ ಗುಕ್ಕಿನಲ್ಲಿ ಓದಿದಾಗ ನನಗೆ ಹದಿನೇಳೋ ಹದಿನೆಂಟೋ ವರ್ಷ. ಈಗದೆಲ್ಲ ನೆನಪಾಗುತ್ತಿರುವುದು ಹದಿನೇಳೋ ಹದಿನೆಂಟೋ ವರ್ಷದ ನಂತರ ಮತ್ತೆ ಅವರ ’ಐವತ್ತೊಂದು ಕತೆಗಳು’ ಓದಿದಾಗ. ಸಸಿಯಿದ್ದಾಗ, ಒಂದೆರೆಡು ದಿನ ನೀರಿಲ್ಲದಿದ್ದರೆ ಸತ್ತೇ ಹೋಯಿತೇನೋ ಎಂಬಂತೆ ಬಾಡಿದ್ದು, ನೀರು-ಎಳೆಬಿಸಿಲು ಬಿದ್ದ ಮರುದಿನ ನಳನಳಿಸಿ ಅರ್ಧ ಇಂಚು ಬೆಳೆದು ಎರೆಡು ಹೊಸ ಎಲೆ ಚಿಗುರಿ ನಿಂತಿರುತ್ತೆ. ಅದೇ ಸಸಿ ಬೆಳೆದು…
ಲೇಖಕರು: prem_poo gour
ವಿಧ: Basic page
January 06, 2008
’ಕಲಿಯೋದರಲ್ಲಿ ಈತ ತುಂಬ ನಿಧಾನ’ ಅಂತ ಆ ಪುಟ್ಟ ಹುಡುಗನ ಟೀಚರ್‍ ಒಬ್ಬಳು ಆ ಹುಡುಗನೆದುರೇ ಪಾಲಕರಿಗೆ ಹೇಳಿಬಿಡುತ್ತಾಳೆ. ಆ ಬಾಲಕನಿಗೆ ತುಂಬ ಅವಮಾನವಾಗಿಬಿಡುತ್ತದೆ. ಆತ ಆದ ಅವಮಾನವನ್ನು ಸಹಿಸಿಕೊಂಡು ಸುಮ್ಮನೆ ಕೂರುವುದಿಲ್ಲ. ’ಅವಮಾನ’ ಅನ್ನೋದು ಬಹುಶಃ ಹಾಗೆ ಸುಮ್ಮನೆ ಕೂರಿಸುವುದೂ ಇಲ್ಲ. ಆ ಅವಮಾನವನ್ನಾತ ಛಲವನ್ನಾಗಿ ಸ್ವೀಕರಿಸುತ್ತಾನೆ. ಅವಮಾನದ ಛಲವನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಮುಂದೊಂದು ದಿನ ಸಾಧನೆಯ ಪ್ರತೀಕವೆಂಬಂತೆ ಈ ಜಗತ್ತಿನ ಬಹುದೊಡ್ಡ ವಿಜ್ಞಾನಿಯಾಗಿಬಿಡುತ್ತಾನೆ. ಆತ…
ಲೇಖಕರು: hpn
ವಿಧ: ಕಾರ್ಯಕ್ರಮ
January 06, 2008
ಸ್ಥಳ: ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ, ಬೆಂಗಳೂರು. ಚರ್ಚೆಯ ವಿಷಯಗಳು: * [:http://dev.sampada.net/Project_Akshara_Siri|ಪ್ರಾಜೆಕ್ಟ್ ಅಕ್ಷರಸಿರಿ], * [:http://sampadafoundation.org|ಸಂಪದ ಫೌಂಡೇಶನ್] - ಟೆಕ್ನಿಕಲ್ ಕಮಿಟಿಗೆ ಸಂಬಂಧಪಟ್ಟ ನಿರ್ಧಾರಗಳು. ಭಾಗವಹಿಸಲು ಆಸಕ್ತಿಯಿರುವ ಸಂಪದ ಸದಸ್ಯರು ಇನ್ನಷ್ಟು ಮಾಹಿತಿಗಾಗಿ ದಯವಿಟ್ಟು events@sampada.net ಗೆ ಒಂದು ಇ-ಮೇಯ್ಲ್ ಕಳುಹಿಸಿ.
ಲೇಖಕರು: venkatesh
ವಿಧ: Basic page
January 06, 2008
ಎಲ್ಲಾ ರಾಜ್ಯಗಳೂ ತಮ್ಮ ತಮ್ಮ ರಾಜ್ಯಗಳ ಯೋಜನೆಗಳ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳುವ ಸಡಗರ, ದಲ್ಲಿರುವಾಗ, ನಮ್ಮ ಕರ್ ನಾಟಕ ರಾಜ್ಯ, ಅನಿಶ್ಚಿತ ರಾಜಕೀಯು ಬೆಳವಣಿಗೆಗಳ ಸುಳಿಯಲ್ಲಿ ಸಿಲುಕಿ, ನಲುಗಿಹಣ್ಣಾಗಿದೆ. ಶ್ರೀ. ಎಸ್. ಎಮ್ ಕೃಷ್ಣ , ಬೆಂಗಳೂರಿಗೆ ಬರುವ ಸಿದ್ಧತೆಯಲ್ಲಿದ್ದಾರೆ. ಕಾಂಗ್ರೆಸ್ ಹಲ್ಲು ಕಡಿಯುತ್ತಾ ಸೆಣಸಲು ನಿಂತಿದೆ. ಯದಿಯೂರಪ್ಪನವಾರು, ಅದ್ವಾನಿಯವರ ರೀತಿ ರಥಯಾತ್ರೆ ಮಾಡಬಹುದೇ ? ಗೌಡ್ರು ತಮ್ಮ ಹಿಂಬಾಲಕರನ್ನು ಸರಿಯಾಗಿ ನೋಡ್ಕೊತಿದಾರೆ. ಚಿಕ್ಕ ಗೌಡ್ರು…
ಲೇಖಕರು: rameshbalaganchi
ವಿಧ: Basic page
January 06, 2008
ಹೊಸವರುಷ ಬಂದಾಯ್ತು ಹೊಸ್ತಿಲಲಿ ನಿಂದು ಹಳೆಯ ಪಳಿಯುಳಿಕೆಗಳ ಹಳೆಗಾಲ ಸಂದು ಸಡಗರೋಲ್ಲಾಸಗಳ ಜಡರುಗಳ ಕಳೆದು ಹೊಸಹೊಳಹು ಮೂಡಿರಲಿ ನಿನಗೆನ್ನ ಬಂಧು
ಲೇಖಕರು: ಹಿರಣ್ಯಾಕ್ಷ
ವಿಧ: ಚರ್ಚೆಯ ವಿಷಯ
January 06, 2008
೨೦೦೮ ನೇ ಇಸ್ವಿ, ರೈಲ್ವೇ ಗ್ರೂಪ್ ಡಿ ಪರೀಕ್ಷೆ ಬೆಂಗಳೂರು, ಮೈಸೂರು ಹಾಗು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಬಂದವರಲ್ಲಿ ಬಹುತೇಕರು ಪರರಾಜ್ಯದವರು. ಶೇ ೧೦ ಮಾತ್ರ ಕನ್ನಡಿಗರು. ೧. ಕೆಳ ದರ್ಜೆಯ ಕೆಲಸಕ್ಕೆ ಏಕೆ ಬೇಕು ಪರ ರಾಜ್ಯದವರು? ೨. ಕನ್ನಡ ಪತ್ರಿಕೆಗಳಲ್ಲಿ, ರೈಲ್ವೇ ಗ್ರೂಪ್ ಡಿ ಅರ್ಗಿಗಳ ಜಾಹಿರಾತುಗಳು ಏಕೆ ಬರಲಿಲ್ಲ? ಇದನ್ನು ಪ್ರಶ್ನಿಸ ಬೇಕದ್ದು ಕರ್ನಾಟಕದಿಂದ ಚುನಾಯಿತರಾದ ಸಂಸದರ ಕರ್ತವ್ಯ, ಆದರೆ, ಪ್ರಶ್ನಿಸಿದ್ದು ಮಾತ್ರ ಕರ್ನಾಟಕ ರಕ್ಷಣಾ…
ಲೇಖಕರು: rameshbalaganchi
ವಿಧ: Basic page
January 06, 2008
ಅಹ್ಮದ್ನೊಂದಿಗೆ ಗೆಲುವಾಗಿದ್ದಷ್ಟು ನಾನು ನನ್ನ ಬದುಕಿನಲ್ಲೇ ಯಾರ ಜೊತೆಗೂ ಗೆಲುವಾಗಿರಲಿಲ್ಲ. ಅಂದರೆ ಮನೆಯಲ್ಲಿ ನನಗೆ ಸುಖದ ಗಳಿಗೆಗಳೇ ಇರಲಿಲ್ಲವೆಂದಲ್ಲ. ಇದ್ದವು. ಹೆನ್ರಿಯನ್ನು ಮದುವೆಯಾಗುವ ಮೊದಲು ನನಗೆ ತುಂಬಾ ಸ್ನೇಹಿತರಿದ್ದರು. ಪಾರ್ಟಿಗಳು, ನರ್ತನ, ಕುಡಿತ ಅಂತ ತುಂಬಾ ಸುಖಪಟ್ಟಿದ್ದೆ. ಆದರೆ ಅವೆಲ್ಲ ಅಹ್ಮ್ದದ್ನೊಂದಿಗಿನ ಸುಖದ ಕ್ಷಣಗಳಿಗೆ ಸಾಟಿಯಲ್ಲ. ಅವನಷ್ಟು ಹಗುರವಾಗಿ, ಸುಲಲಿತವಾಗಿ, ನಿರ್ಭಿಡೆಯಿಂದ, ನಿರುಮ್ಮಳವಾಗಿ ಯಾರೂ ಇರಲಿಲ್ಲ. ಅವನು ರಮಿಸುತ್ತ ಬದುಕಲು ತಯಾರಿದ್ದ.…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 06, 2008
ಇಂದು ಜನವರಿ ಆರು. ಸರಿಯಾಗಿ ನೂರರವತ್ತೊಂದು ವರ್ಷದ ಹಿಂದೆ, ನಾವು ಒಬ್ಬ ರಾಜನನ್ನು ಕಳೆದುಕೊಂಡೆವು. ಅಥವಾ ನಿಜ ಹೇಳಬೇಕೆಂದರೆ, ಅವತ್ತಿನಿಂದ ಆತ ಚಿರಂಜೀವಿಯಾಗಿಹೋದರು. ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ ’ತ್ಯಾಗ’ ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು. ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು…