ಎಲ್ಲ ಪುಟಗಳು

ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 22, 2007
ಮಾಧ್ಯಮಗಳ ಮಾಯಾ ಬಜಾರ್ ! ಮಾಧ್ಯಮಗಳ ಎಲ್ಲ ಸಮೀಕ್ಷೆ ಮತ್ತು ನಿರೀಕ್ಷೆಗಳನ್ನು ಹುಸಿ ಮಾಡಿ ಮಾಯಾವತಿ ಸ್ವಂತ ಬಲದ ಮೇಲೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಚುನಾವಣೆಯ ಮೂಲಕ ಮೂಡಿ ಬಂದ 'ಕಥಾನಕ'( ಇಂಗ್ಲಿಷ್ ಟಿ.ವಿ. ಮಾಧ್ಯಮಗಳ ಪರಿಭಾಷೆಯಲ್ಲಿ ''Big Story' ) ಎಂದರೆ, ಮಾಯಾವತಿ ರೂಪಿಸಿದ ಹೊಸ, ಯಶಸ್ವಿ ಜಾತಿ ಸಮೀಕರಣವೆಂದು ರಾಷ್ಡ್ರೀಯ ಟಿ.ವಿ.ವಾಹಿನಿಗಳು ಹೇಳುತ್ತಿವೆ. ಆದರೆ, ಇಲ್ಲಿನ ನಿಜವಾದ 'ಕಥಾನಕ' ಎಂದರೆ, ಈ ಚುನಾವಣಾಂತ್ಯ ಸಮೀಕ್ಷೆಗಳ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 22, 2007
'ಮಾಯಾವತಿ ವಿಜಯ'ದ ಹಿಂದಿನ ಸತ್ಯಗಳು. ಮೊನ್ನೆ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಗಳಲ್ಲಿ ಮಾಯಾವತಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ಒಂದು ಹೊಸ ರಾಜಕೀಯ ಪರ್ವದ ಆರಂಭ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ. ಕೇವಲ ಎರಡು ದಶಕಗಳ ಸಕ್ರಿಯ ರಾಜಕಾರಣದಲ್ಲಿ, ಅದೂ ಒಂದು ದಶಕದಿಂದೀಚೆಗೆ ಏಕಾಂಗಿಯಾಗಿ ರಾಜಕಾರಣ ಮಾಡುತ್ತಾ ಬಂದ ದಲಿತ ಮಹಿಳೆಯೊಬ್ಬಳು ಯಾರ ಮುಲಾಜೂ ಇಲ್ಲದೆ, ಸ್ವಂತ ರಾಜಕೀಯ ಶಕ್ತಿಯ ಆಧಾರದ ಮೇಲೆ ರಾಷ್ಟ್ರದ ಅತಿ ದೊಡ್ಡ ಹಾಗೂ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 22, 2007
'ಮಾಯಾವತಿ ವಿಜಯ'ದ ಹಿಂದಿನ ಸತ್ಯಗಳು. ಮೊನ್ನೆ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಗಳಲ್ಲಿ ಮಾಯಾವತಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ಒಂದು ಹೊಸ ರಾಜಕೀಯ ಪರ್ವದ ಆರಂಭ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ. ಕೇವಲ ಎರಡು ದಶಕಗಳ ಸಕ್ರಿಯ ರಾಜಕಾರಣದಲ್ಲಿ, ಅದೂ ಒಂದು ದಶಕದಿಂದೀಚೆಗೆ ಏಕಾಂಗಿಯಾಗಿ ರಾಜಕಾರಣ ಮಾಡುತ್ತಾ ಬಂದ ದಲಿತ ಮಹಿಳೆಯೊಬ್ಬಳು ಯಾರ ಮುಲಾಜೂ ಇಲ್ಲದೆ, ಸ್ವಂತ ರಾಜಕೀಯ ಶಕ್ತಿಯ ಆಧಾರದ ಮೇಲೆ ರಾಷ್ಟ್ರದ ಅತಿ ದೊಡ್ಡ ಹಾಗೂ…
ಲೇಖಕರು: Abhimani
ವಿಧ: ಬ್ಲಾಗ್ ಬರಹ
June 22, 2007
ತನ್ನ ಐದೆಕರೆ ತೋಪಿನಾಗೆ ತುಪಾಕಿ ತಗುಲಿಸಿಕೊಂಡು ತಿರುಗುತ್ತಿದ್ದ ತಿಮ್ಮೇಗೌಡರಿಗೆ ತೋಚಿದ್ದು..ತಾನೊಬ್ಬನೇ ತಿಕಲನಂಗೆ ಸರಿ ಹೊತ್ತಿನಾಗೆ ಇಲ್ಲಿಗಂಟ ಬರಬಾರದಿತ್ತು ಅಂತ.ವಾಪಸ್ ಹೋಗೋದು ಒಳ್ಳೆದು ಅನಿಸ್ತ ಇರೋವಾಗಲೇ “ಜೀವನದಾಗೆ ಯಾವ ನನ್ನ ಮಗಂಗೂ ಹೆದರಲಿಲ್ಲ..ನೋಡೆಬಿಡಾವ ಅದೇನೋ” ಅಂತ ಮತ್ತೆ ಇನ್ನು ಒಳಕ್ಕೆ ನುಗ್ಗಿದರು.ಒಂದು ತಿಂಗಳಿನಾಗೆ ಆಗಲೇ ಮೂರು ಜನ ಕಾವಲಿಗೆ ಅಂತ ಇಟ್ಟೋರು ಅದೇನೋ ದೆಯ್ಯ,ಪಿಸಾಚಿ ಅಂತ ಹೆದರಿ ಓಡಿ ಹೋಗಿದ್ದರು.”ಎಲ್ಲಾ ನರ ಸತ್ತ ನಾಮರ್ದ ಗಳು, ಯಾವೋ ಪೋಲಿ ಹುಡುಗರು…
ಲೇಖಕರು: Pratispandana
ವಿಧ: ಚರ್ಚೆಯ ವಿಷಯ
June 21, 2007
ಬಸವಣ್ಣನನ್ನು ದಯವಿಟ್ಟು ಅವನ ಪಾಡಿಗೆ ಬಿಟ್ಟುಬಿಡಿ - ಗಣೇಶ್.ಕೆ ಜಾತಿ ವಿಶ್ಲೇಷಣೆ ಮಾಡಲಿಕ್ಕೆ ಬಸವಣ್ಣನೇ ಬೇಕಿತ್ತೇ? ಬಸವಣ್ಣನ ಜಾತಿ ನಿರ್ಧರಿಸಿ ಯಾವ ಚುನಾವಣೆಗೆ ಮೀಸಲಾತಿ ಪಟ್ಟಿಯಲ್ಲಿ ಬಸವಣ್ಣನನ್ನು ಸೇರಿಸಲಿಚ್ಛಿಸಿದ್ದಾರೆ? ಯಾವ ಕೆಟಗರಿಯಲ್ಲಿ "ಕೋಟಾ" ನೀಡಲು ನಿರ್ಧಸಿದ್ದಾರೆ? ಒಮ್ಮೆ ಯೋಚಿಸಿ ನೋಡಿ. ಜಾತ್ಯಾತೀತ, ಭಾವ ಸಾಮರಸ್ಯದ ನಾಡನ್ನು ಕಟ್ಟಲು ಯತ್ನಿಸಿದ ಮಹಾನ್ ವ್ಯಕ್ತಿಯ ಜಾತಿ ಇವರಿಗೆ ಯಾಕೆ ಬೇಕು? ಜಾತಿ ವಿಶ್ಲೇಷಣೆ ಅಗತ್ಯವೇ? ಬಸವಣ್ಣನ ಬೋಧನೆಗಳ ಬಗ್ಗೆ ವಿಚಾರಧಾರೆಗಳ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 21, 2007
'ಆನು ದೇವಾ ...': ಜಾತಿ ವ್ಯವಸ್ಥೆ ಕುರಿತ ಹೊಸ ನೋಟದತ್ತ ಬಂಜಗೆರೆ ಜಯಪ್ರಕಾಶರ 'ಆನು ದೇವಾ ಹೊರಗಣವನು...' ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ಕೂಗು ಕೇಳಿ ಬರಲಾರಂಭಿಸಿದೆ. ಈ ಪುಸ್ತಕವನ್ನು ಒಂದು ಸೃಜನಶೀಲ ಸಂಶೋಧನ ಗ್ರಂಥವೆಂದು ಓದಿದ ಯಾರಿಗೂ, ಈ ಕೂಗೇಕೆ ಎಂಬುದೇ ಅರ್ಥವಾಗುತ್ತಿಲ್ಲ. ಏಕೆಂದರೆ, ಬಸವಣ್ಣ ಹುಟ್ಟಿನಿಂದ ಬ್ರಾಹ್ಮಣ ಎಂಬ ಬಗ್ಗೆ ಅಲ್ಲಲ್ಲಿ ಆಗಾಗ್ಗೆ ವ್ಯಕ್ತವಾಗುತ್ತಿದ್ದ ಅನುಮಾನಗಳನ್ನು ಹಳೆ ಮತ್ತು ಹೊಸ ಆಕರಗಳ ಆಧಾರದ ಮೇಲೆ ಪರಿಶೀಲಿಸುವ ಪ್ರಯತ್ನ ಮಾಡುವ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 21, 2007
ಇನ್ನೆಲ್ಲಿ ಆ ತಾಪ... ಆ ಬೆಳಕು! ಕರ್ನಾಟಕದ ಪ್ರತಿಭಟನೆಯ ಧ್ವನಿ ಉಡುಗಿ ಹೋಗಿದೆ. ಪ್ರೊ|| ಕೆ ರಾಮದಾಸ್ ಇನ್ನಿಲ್ಲ. ಕಳೆದ 40 ವರ್ಷಗಳಿಂದ ಸತತವಾಗಿ ರಾಜ್ಯದಲ್ಲಿ ಎಲ್ಲ ರೀತಿಯ 'ಪ್ರಭುತ್ವ'ಗಳ ವಿರುದ್ಧ ಸಮರ ಸಾರಿದ್ದ ರಾಮದಾಸ್, ಅನ್ಯಾಯಗಳ ವಿರುದ್ದ ಪ್ರತಿಭಟನೆಗಳನ್ನು ರೂಪಿಸಬೇಕಿದ್ದ ಸಂಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಜಾಗತೀಕರಣದ ಒತ್ತಡಗಳಿಗೆ ಸಿಕ್ಕಿ ಉಸಿರು ಕಳೆದುಕೊಳ್ಳುತ್ತಿದ್ದಂತೆ, ಒಂಟಿದನಿಯಾಗಿಯೇ ತಮ್ಮ ಸಮರವನ್ನು ಮುಂದುವರೆಸಿದ್ದರು. ಆ ಸಮರವೂ ಈಗ ನಿಲುಗಡೆಗೆ ಬಂದಂತಾಗಿದೆ…
ಲೇಖಕರು: D.S.NAGABHUSHANA
ವಿಧ: ಬ್ಲಾಗ್ ಬರಹ
June 21, 2007
ಅವನತಿಗೊಳ್ಳುತ್ತಿರುವ ಸಂವಾದ ಸಂಸ್ಕೃತಿ... 'ಆವರಣ' ಕೃತಿಯ ಬಗ್ಗೆ ಲೇಖನ ಬರೆಯುವ ನೆಪದಲ್ಲಿ ಹಲವರು ಅನಂತಮೂರ್ತಿ ಮೇಲೆ ವೈಯುಕ್ತಿಕ ದಾಳಿ ನಡೆಸುವ ಯತ್ನ ಮಾಡಿದ್ದಾರೆ. ಇದು ಮತ್ತೆ 'ಆವರಣ' ಕೃತಿಯ ಹಿಂದಿರುವ ರಾಜಕೀಯ ಕಾರ್ಯಕ್ರಮದ ಮುಂದುವರೆದ ಭಾಗವೇ ಆಗಿದೆ. ಅನಂತಮೂರ್ತಿ ಟೀಕಾತೀತರೇನಲ್ಲ. ಅನೇಕ ಬಾರಿ ಅಧಿಕಾರಸ್ಥರ ದಾಕ್ಷಿಣ್ಯಕ್ಕೋ, ಸುಲಭ ಜನಪ್ರಿಯತೆಗಾಗಿಯೋ ವಿರೋಧಾಭಾಸಗಳ ಹೇಳಿಕೆಗಳನ್ನು ನೀಡಿ ಅವರ ಗೆಳೆಯರಿಂದಲೂ, ವಿರೋಧಿಗಳಿಂದಲೂ ಟೀಕೆಗೊಳಗಾಗಿದ್ದಾರೆ. ಆದರೆ, 'ಆವರಣ' ಕುರಿತ…
ಲೇಖಕರು: venkatesh
ವಿಧ: Basic page
June 21, 2007
ನದೀತೀರದಲ್ಲಿ [ಕವಿತಾ ಸಂಕಲನ] ಲೇಖಕರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ. *ಮರದೊಂದಿಗೆ. (ಪು. ೮೯.) ಯತ್ಕಿಂಚಿತ್ ಕಷ್ಟವಲ್ಲ ಮರದೊಂದಿಗೆ ಮಾತುಕತೆ ! ನಿಲ್ಲಬೇಕು ಅಷ್ಟೆ, ಅದರ ಮುಂದೆ ನೀವು ಮರದಂತೆ. ತೋಳುಗಳೇ ಹರೆಗಳಾಗಿ ತೂಗಲಿ ಅವು ತಂಗಾಳಿಗೆ ; ಕಾಲೆ ಕಾಂಡವಾಗಿ, ಬೆರಳು ಬೇರಾಗಲಿ ಅರೆಗಳಿಗೆ. ಮುಖದ ತುಂಬ ನಗೆಯ ಹೂವು ಅರಳಲಿ ಬಲು ಮೆಲ್ಲಗೆ ಬಾಯಿಮುಚ್ಚಿಕೊಂಡು ನಿಲ್ಲಿ ಹಕ್ಕಿ ಬರಲಿ ಅಲ್ಲಿಗೆ ಈಗ ಕೇಳಿ ಮೈಯೆಲ್ಲಾ ಕಿವಿಯಮಾಡಿ ಪಿಸುನುಡಿ ಎಲೆಗಳೇನೊ ಹೇಳುತ್ತಿವೆ ! ಕಣ್ಣಿನಲ್ಲಿ…
ಲೇಖಕರು: kavitha
ವಿಧ: ಬ್ಲಾಗ್ ಬರಹ
June 21, 2007
ತಾಯಿ ಮಂಜಮ್ಮನ ಮುದ್ದಿನ ಮಗನಾಗಿ, ತಂಗಿ ಕಮಲಮ್ಮನ ಪ್ರೀತಿಯ ಅಣ್ಣನಾಗಿ, ಹೆಂಡತಿ ನಿರ್ಮಲಳ ನಲ್ಮೆಯ ಪತಿಯಾಗಿ, ಮಗಳು ಸಮತಾಳ (ಸ್ನೇಹ) ಮೆಚ್ಚಿನ ತಂದೆಯಾಗಿ, ಅಳಿಯ ಓಂಕಾರ್ ನ ನೆಚ್ಚಿನ ಮಾವನಾಗಿ, ಎಲ್ಲಕ್ಕಿಂತ ಮಿಗಿಲಾಗಿ ಬಡ, ದೀನ ದಲಿತರಿಗೆ ಮಾರ್ಗದರ್ಶಿಯಾಗಿದ್ದ, ಎಲ್ಲರಿಗೂ ಬೇಕಾದವರಾಗಿದ್ದ ಮೇಸ್ಟ್ರು ಇನ್ನಿಲ್ಲ. ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ಇಲ್ಲಿ ಹೇಳಬಯಸುತ್ತೇನೆ. ಸರಳ ವಿವಾಹಕ್ಕೆ ಒತ್ತು ನೀಡುತ್ತಿದ್ದ ಅವರು, ಯಾವುದೇ ಅದ್ದೂರಿ ಸಮಾರಂಭಗಳಿಗೆ…