ವಿಧ: Basic page
January 09, 2006
*****ಭಾಗ ೭
ಈ ಸುದ್ಧಿಗಳೆಲ್ಲ ಬಂದಂತೆ ನಮಗೆ ಹರ್ಷರಾಜನು ಪುಲಿಕೇಶಿ ಅರಸನ ಮೇಲೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಸುದ್ಧಿಗಳೂ ತಲುಪಿದವು. ಹರ್ಷ ರಾಜನ ಗುಪ್ತಚಾರರ ಪಡೆಯಲ್ಲಿದ್ದ ನಮ್ಮವರು ಆ ಸುದ್ಧಿಗಳನ್ನು ನಮಗೆ ತಂದು ಕೊಡುತ್ತಿದ್ದರು. ಆ ಅಪಾರ ಸೈನ್ಯವನ್ನು ಸಿದ್ಧಗೊಳಿಸಿ ದೇಶದ ಸೀಮೆಯಾದ ನರ್ಮದಾ ನದಿ ತೀರದಲ್ಲಿ ಬಿಡಾರ ಊರಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಈ ವಾರ್ತೆಗಳೆಲ್ಲ ನಮಗೆ ತಿಳಿದುಬಂದ ಕ್ಷಣದಲ್ಲಿ ನಾನು ವಾತಾಪಿನಗರಕ್ಕೆ ಸಂದೇಶ ಕಳುಹಿಸಿದೆ. ಅಂತೆಯೇ ದಳಶಕ್ತಿಗಳು,…
ವಿಧ: Basic page
January 09, 2006
*****ಭಾಗ ೮
ಪುಲಿಕೇಶಿ ಮಹಾರಾಜನು ಸಾಧಿಸಿದ ದಿಗ್ವಿಜಯದಿಂದ ಅವನು ತಲಾ ತೊಂಬತ್ತೊಂಬತ್ತು ಸಹಸ್ರ ಗ್ರಾಮಗಳ ಮೂರು ಮಹಾರಾಷ್ಟ್ರಕಗಳ ಒಡೆಯನಾಗಿದ್ದನು. ಇದರಿಂದಾಗಿ ಅರಸನು ಪರಮೇಶ್ವರನೆಂಬ ಬಿರುದನ್ನೂ ಹೊಂದಿದನು. ಕರ್ನಾಟ್ಟ ದೇಶ, ಮರಾಠದೇಶ, ಆಂಧ್ರದೇಶ ಕೂಡಿದಂತೆ ಇಡೀ ದಕ್ಷಿಣಾಪಥದ ಒಡೆಯನಾಗಿದ್ದನು.
ಮಹಾರಾಜ, ಮಹಾಮಂತ್ರಿ, ಸೇನಾಧಿಪತಿ ಸಮೇತರಾಗಿ ಎಲ್ಲ ಸಾಮಂತರೂ ಸೈನ್ಯಗಳೊಡನೆ ವಾತಾಪಿಗೆ ಹಿಂತಿರುಗಿದರು. ನಾನೂ ಅವರೊಡನೆಯೇ ವಾತಾಪಿ ನಗರಕ್ಕೆ ಹಿಂತಿರುಗಿದೆ. ನನ್ನ ಗೂಢಚರ್ಯೆಯ ಕೆಲಸ ಸಧ್ಯಕ್ಕೆ…
ವಿಧ: Basic page
January 09, 2006
*****ಭಾಗ ೯
ಈ ಮುಂಚೆಯೇ ವಾತಾಪಿಯಲ್ಲಿದ್ದಾಗ ಮಹಾಮಂತ್ರಿಗಳು ಒಂದು ದಿನ ಬಂದು "ಅರಸ ಅಯ್ಯವೊಳೆಯಲ್ಲಿ ನಿರ್ಮಿಸುತ್ತಿರುವ ದೇವಾಲಯದ ಬಗ್ಗೆ ನಿನಗೆ ತಿಳಿದೇ ಇದೆ. ಅರಸನಿಗೆ ಅವನ ಮುದ್ರೆ ಇತಿಹಾಸದ ಮೇಲೆ ಬೀಳಬೇಕೆಂಬ ಇಚ್ಛೆ. ಹಾಗಾಗಿ ಆ ದೇವಾಲಯದಲ್ಲಿ ಒಂದು ಶಾಸನ ಇರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅರಸನ ಕುಲ, ಹೆಸರು, ದಿನಾಂಕ, ಶೌರ್ಯ, ದಿಗ್ವಿಜಯ, ಹಾಗು ಈಗಿನ ಕಾಲದ ವಿವರಗಳನ್ನು ಬರುವ ಪೀಳಿಗೆಗಳಿಗೆ ತಿಳಿಸುವಂತಹ ಶಾಸನವಾಗಬೇಕು. ಇಂತಹ ಪ್ರತಿಯೊಂದನ್ನು ಸಿದ್ಧ ಗೊಳಿಸು. ನಮ್ಮ ಹಾಗು…
ವಿಧ: Basic page
January 09, 2006
*****ಭಾಗ ೧೦
ವಾತಾಪಿ ಸೇರಿ ಕೆಲವೇ ದಿನಗಳಾಗಿದ್ದವು. ಮೊದಲೇ ಹೇಳಿದಂತೆ ರಾಯಭಾರಿ ಕೆಲಸಕ್ಕೆ ಶಿಕ್ಷಣ ಪಡೆಯುತ್ತಿದ್ದೆ. ಇನ್ನು ಕಾಯಕಾರ್ಥವಾಗಿ ನಾನು ಕಾಮರೂಪಕ್ಕೆ ಹೋಗುವ ಸಮಯವಾಗಿತ್ತು. ಮನೆಯಲ್ಲಿ ಮಾತಾಪಿತರಿಗೆ ನನಗೆ ವಿವಾಹ ಮಾಡಿ ಕಳುಹಿಸಬೇಕೆಂಬ ಆಶಯ. ಆದರೆ ಅದಕ್ಕವಕಾಶವಾಗಲಿಲ್ಲ. ಮಾತಾ-ಪಿತರನ್ನು ಬೀಳ್ಕೊಟ್ಟು ಅರಮನೆಗೆ ಹೊರಟೆ.
ಅರಮನೆಯಲ್ಲಿ ಮಂತ್ರಿಗಳು "ನೀನು ಕಲಿತಿರುವ ಗೂಢಚರ್ಯೆ ಹಾಗು ನೀನು ಮಾಡಿರುವ ವಿಶ್ಲೇಷಣೆ ಕೆಲಸಕ್ಕಿಂತ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಈ ಕೆಲಸದಲ್ಲಿ…
ವಿಧ: Basic page
January 09, 2006
*****ಭಾಗ ೧೧
ನಾನು ಕೂಡಿ ಬಂದ ಸಾರ್ಥವು ವ್ಯಾಪಾರಕ್ಕೆಂದು ಹೊರನಾಡುಗಳಿಗೆ ಹೊರಟಿತ್ತು. ನನಗೆ ಸಿಂಧೂ ನದಿಯನ್ನು ದಾಟಿ ಹೋಗುವ ಇಚ್ಛೆ ಇರಲಿಲ್ಲ. ಹಾಗಾಗಿ ಸಾರ್ಥ ಮುನ್ನಡೆದಂತೆ ಜಾಲಂಧರದಲ್ಲೇ ಉಳಿದುಕೊಂಡೆ.
ಜಾಲಂಧರ - ಐದು ನದಿಗಳ ದೇಶ. ಜಾಲಂಧರ ರಾಜಧಾನಿಯ ಸುತ್ತಳತೆ ಸುಮಾರು ೬-೭ ಕ್ರೋಶಗಳಿದ್ದಿರಬಹುದು. ಕಾಳು, ಬೇಳೆ, ಬಹು ಮುಖ್ಯವಾಗಿ ಭತ್ತ ಬೆಳೆಯಲು ಬಹು ಅನುಕೂಲವಾದ ನೆಲ. ಸುತ್ತ ದಟ್ಟ ಕಾಡು-ಮೇಡುಗಳು, ಹೂವು ಹಣ್ಣುಗಳಿಗೆ ಕೊರತೆಯೇ ಇಲ್ಲ. ಇಲ್ಲಿಯ ವಾತಾವರಣ ಶೈತ್ಯಮಯವಾಗಿದ್ದು ಜನರು…
ವಿಧ: Basic page
January 09, 2006
*****ಭಾಗ ೧೨
ಕೆಲವೇ ದಿನಗಳಲ್ಲಿ ನಮ್ಮಿಬರ ಸ್ನೇಹ ಹೆಚ್ಚಾಯಿತು. ಕಾಲ ಕಳೆದಂತೆ ನನ್ನ ಹೊಸ ಮಿತ್ರ ತನ್ನ ಕತೆಯನ್ನು ದೀರ್ಘವಾಗಿ ಹೇಳಿದ. ಅವನ ದೇಶ ಜಂಬೂದ್ವೀಪದ ಪೂರ್ವಕ್ಕೆ ನೇಪಾಳವನ್ನು ದಾಟಿ ಹಿಮಾಚಲದಾಚೆ ಇರುವ ಮಹಾಚೀನ ಎಂಬ ಹೆಸರಿನ ದೇಶವಂತೆ. ನಾಲ್ಕು ಸಹೋದರರಲ್ಲಿ ಇವನೇ ಕಿರಿಯವ. ಇವನ ತಾತ ಮುತ್ತಾತಂದಿರು ಭಾರಿ ಮೇಧಾವಿಗಳಂತೆ. ಎಂಟು ವರ್ಷದ ವಯಸ್ಸಿಗೇ ಇವನು ಧಾರ್ಮಿಕ ವಿಷಯಗಳಲ್ಲು ಆಸಕ್ತಿ ತೋರುತ್ತಿದ್ದನಂತೆ. ಇವನು ಚಿಕ್ಕವನಾಗಿದ್ದಾಗ ಇವನ ತಂದೆಯೇ ನಾಲ್ಕು ಮಕ್ಕಳಿಗೆ ಅಲ್ಲಿಯ…
ವಿಧ: Basic page
January 09, 2006
*****ಭಾಗ ೧೩
ಜಾಲಂಧರ ಬಿಟ್ಟು ಅಪಾಯಕಾರಿಯಾದ ಪರ್ವತ ಮಾರ್ಗವಾಗಿ ಸುಮಾರು ೩೫೦ ಕ್ರ್ಓಶಗಳ ದೂರ ಪ್ರಯಾಣದ ನಂತರ ಕುಲೂತ ದೇಶವನ್ನು ಸೇರಿದೆವು. ನನ್ನ ಮಿತ್ರ ಉದ್ದಕ್ಕೂ ತನ್ನ ತಾಳೇಗರಿಗಳಂತಹ ಪತ್ರಗಳ ಮೇಲೆ ಏನನ್ನೋ ಬರೆಯುತ್ತಲೇ ಇದ್ದ. ಕುಲೂತ ದೇಶವನ್ನು ಬಿಟ್ಟು ಸುಮಾರು ೩೫೦ ಕ್ರೋಶಗಳು ದಕ್ಷಿಣದಿಕ್ಕಿನಲ್ಲಿ ನಡೆದ ನಂತರ ಶತಾದ್ರು ನದಿಯ ತೀರದಲ್ಲಿದ್ದ ಶತಾದ್ರು ದೇಶವನ್ನು ತಲುಪಿದೆವು. ಶತಾದ್ರು ಬಿಟ್ಟು ನಋತ್ಯ ದಿಕ್ಕಿನಲ್ಲಿ ೪೦೦ ಕ್ರ್ಓಶಗಳ ದೂರ ಸವೆಸಿದ ನಂತರ ಪಾರ್ಯಾತ್ರ ದೇಶವನ್ನು…
ವಿಧ: Basic page
January 09, 2006
***** ಭಾಗ ೧೪
ಸೃಘ್ನ, ಮಾತೀಪುರ, ಬ್ರಹ್ಮಪುರ, ಗೋವಿಶನ, ಅಹಿಕ್ಷೇತ್ರ, ವಿರಸನ ದೇಶಗಳ ಸಂದರ್ಶನದ ನಂತರ ಕಪೀಥ ದೇಶವನ್ನು ತಲುಪಿದೆವು. ನನ್ನ ಮಿತ್ರನಿಗಿಲ್ಲಿ ಸ್ವಲ್ಪ ಸಮಾಧಾನವಾಯಿತು. ಇಲ್ಲಿ ಬೌದ್ಧ ಧರ್ಮ ಅನುಯಾಯಿಗಳು ಹೆಚ್ಚು ಸಂಖ್ಯೆಯಲ್ಲಿದ್ದು ಅವನನ್ನು ಸ್ವಾಗತಿಸಿದರು. ನಮ್ಮ ದೇವಾಲಯಗಳೂ ಸುಮಾರು ಸಂಖ್ಯೆಯಲ್ಲಿದ್ದು, ಈ ಪ್ರದೇಶದ ಇಷ್ಟದೇವ ಮಹೇಶ್ವರನಾಗಿದ್ದ. ಈ ಸ್ಥಳದಲ್ಲಿದ್ದ ಒಂದು ಸುಂದರವಾದ ಸ್ತೂಪದೊಳಗೆ ತಥಾಗಥ ಬುದ್ಧನ ಹಲವಾರು ದಂತಕತೆಗಳು ಕೇಳಿಬಂದವು. ಇವೆಲ್ಲವನ್ನೂ ನನ್ನ…
ವಿಧ: Basic page
January 09, 2006
*****ಭಾಗ ೧೫
ಕನ್ಯಾಕುಬ್ಜವನ್ನು ಸೇರಿ ಹಲವು ದಿನಗಳ ಕಾಲ ನಾನು ದೇವಾಲಯವೊಂದರಲ್ಲಿ ತಂಗಿದ್ದು ಆಚೆಯೇ ಬರಲಿಲ್ಲ. ನನ್ನ ಮಿತ್ರ ಬಂದಾಗಲೆಲ್ಲ ಅಸ್ವಸ್ಥನಾಗಿರುವೆ ಎಂದು ಹೇಳಿ ಕಳುಹಿಸಿಬಿಡುತ್ತಿದ್ದೆ. ಸುತ್ತ-ಮುತ್ತಲಿನ ಜನರ ಬಳಿ ನನ್ನನ್ನು ಹುಡುಕಿಕೊಂಡು ಯಾರಾದರೂ ಬಂದಿದ್ದರೇ ಎಂದು ಕೇಳಿ, ನನ್ನ ಮಿತ್ರನನ್ನು ಬಿಟ್ಟು ಯಾರೂ ಬಂದಿಲ್ಲವೆಂದು ಕೇಳಿ ಸ್ವಲ್ಪ ಧೈರ್ಯ ಹೆಚ್ಚಾಯಿತು. ಕೊನೆಗೆ ಆಗೊಮ್ಮೆ ಈಗೊಮ್ಮೆ ಆಚೆ ಬರಲು ಆರಂಭಿಸಿದೆ.
ಕನ್ಯಾಕುಬ್ಜ ಪ್ರದೇಶ ಸುಮಾರು ಎರಡು ಸಹಸ್ರ ಕ್ರೋಶಗಳ…
ವಿಧ: Basic page
January 09, 2006
*****ಭಾಗ ೧೬
ಹರ್ಷರಾಜನ ಧಾರ್ಮಿಕ ಸಮಾವೇಷದ ಸಮಯವಾಗಿತ್ತು. ಗಜಾರೋಹಣ ಮಾಡುತ್ತ, ನಗಾರಿಗಳ ಬಡಿತ ಹಾಗು ಕಹಳೆಗಳ ನಾದಗಳೊಂದಿಗೆ ಹರ್ಷರಾಜ ಕನ್ಯಾಕುಬ್ಜದ ಬಳಿ ಗಂಗಾ ನದಿಯ ಪಶ್ಚಿಮ ತೀರಕ್ಕೆ ಆಗಮಿಸಿದ. ಅವನ ಆಜ್ಞೆಯ ಮೇರೆಗೆ ಇಪ್ಪತ್ತು ಸಾಮಂತರು ಸುತ್ತ ಮುತ್ತಲಿನ ಪ್ರದೇಶಗಳಿಂದ ಬಂದು ನೆರೆದಿದ್ದರು. ಅವರೊಂದಿಗೆ ಮೂರು ಸಹಸ್ರ ಬ್ರಾಹ್ಮಣರು, ಮೂರು ಸಹಸ್ರ ಬೌದ್ಧ ಶ್ರಮಣರಲ್ಲದೆ ಮೇಧಾವಿಗಳು, ಶ್ರೀಮಂತರು ಮತ್ತಿತರರು ಅಲ್ಲಿಗೆ ಆಗಮಿಸಿದ್ದರು. ಎಲ್ಲರಿಗೂ ತಂಗಲು ಅಲ್ಲಿಯೇ ವಿಹಾರಗಳನ್ನು…