ಎಲ್ಲ ಪುಟಗಳು

ಲೇಖಕರು: olnswamy
ವಿಧ: Basic page
January 28, 2006
ನಾನು ಮತ್ತು ನನ್ನಾಕೆ ಇಪ್ಪತ್ತೈದು ವರ್ಷ ಸುಖವಾಗಿದ್ದೆವು. ಆಮೇಲೆ, ಪರಸ್ಪರ ನೋಡಿ ಮದುವೆಯಾಗಿಬಿಟ್ಟೆವು. ** ಒಳ್ಳೆಯ ಹೆಂಡತಿ ತಾನು ತಪ್ಪು ಮಾಡಿದ್ದಾಗ ಗಂಡನ ತಪ್ಪುಗಳನ್ನೆಲ್ಲ ಉದಾರವಾಗಿ ಕ್ಷಮಿಸುತ್ತಾಳೆ. ** ** ನನ್ನ ಹೆಂಡತಿಗೆ ಒಂದು ಕಾರು ಕೊಡಿಸಿದೆ. ಆಕೆಯಿಂದ ಫೋನು ಬಂತು. "ಕಾರಿನ ಎಂಜಿನ್ನಿಳೊಗೆ ನೀರು ಸೇರಿದೆ." "ಕಾರು ಎಲ್ಲಿದೆ?" "ಕೆರೆಯೊಳಗೆ ಮುಳುಗಿದೆ." ** ಸುಖೀ ಮದುವೆಯ ರಹಸ್ಯ ಎಂದೆಂದಿಗೂ ರಹಸ್ಯವಾಗಿಯೇ ಉಳಿದಿರುತ್ತದೆ. ** ** ಜಗಳ ಆಗ ತಾನೇ ಮುಗಿದಿತ್ತು. "ನಿಮ್ಮನ್ನು…
ಲೇಖಕರು: olnswamy
ವಿಧ: ಬ್ಲಾಗ್ ಬರಹ
January 28, 2006
೨೭.೧.೦೬:ಆಮಿಷವೆಂದರೆ ಮಾಂಸವೆಂದು ಅರ್ಥವಂತೆ. ನನಗೆ ಗೊತ್ತೇ ಇರಲಿಲ್ಲ. ಗೆಳೆಯ ರಾಮು ಹೇಳಿದ್ದು ಅದನ್ನು. ಮಹಾಭಾರತದಲ್ಲಿ ಸೇನಾಪತಿಯಾದ ಭೀಷ್ಮನನ್ನು ಭೇಟಿಯಾಗಲು ಪಾಂಡವರು ಹೋದಾಗ ವ್ಯಾಸ “ಭೀಷ್ಮನು ಹದ್ದುಗಳ ನಡುವೆ ಎಸೆದ ಆಮಿಷವಾದ” ಎಂದು ವರ್ಣಿಸುತ್ತಾನಂತೆ. ಪಾಂಡವರಿಗೆ ಭೀಷ್ಮನ ಬಗ್ಗೆ ಪ್ರೀತಿ ಗೌರವಗಳಾಗಲೀ, ಕೌರವನಿಗೆ ಭಕ್ತಿಯಾಗಲೀ ಇರಲಿಲ್ಲ. ಅವರಿಬ್ಬರಿಗೂ ಬೇಕಾದದ್ದು ಅಧಿಕಾರ, ರಾಜ್ಯ. ಭೀಷ್ಮ ತಮ್ಮವನಾದರೆ ಸಾಕು ಎಂಬ ಹಪಾಹಪಿ. ಅದಕ್ಕೇ ಭೀಷ್ಮನನ್ನು ಹದ್ದುಗಳ ನಡುವೆ ಎಸೆದ ಮಾಂಸ ಅಥವ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
January 27, 2006
ಸಹೋದ್ಯೋಗಿ ಗಣೇಶ ಐತಾಳ ಸಿ ಏ ಐ ಐ ಬಿ ಫಾರ್ಮ್ ಅನ್ನು ತಂದು, ಊಟದ ಸಮಯದಲ್ಲಿ ಎಲ್ಲರಿಗೂ ಕೊಟ್ಟು ತಕ್ಷಣ ತುಂಬಿಕೊಡುವಂತೆ ಹೇಳಿದ್ದ. ಅವನು ಅಂದು ಮಾಡಿದ ಒಳ್ಳೆಯ ಕೆಲಸ ತಕ್ಷಣ ಯಾರಿಗೂ ಗೊತ್ತಾಗದಿದ್ದರೂ ಈಗ ಎಲ್ಲರೂ ಸಂತೋಷ ಪಡುವಂತಾಗಿದೆ. ಏಕೆ ಗೊತ್ತೇ? ಆಗಿನ್ನೂ ಓದು ಮುಗಿಸಿ ಬಂದಿದ್ದ ನಮ್ಮಗಳಿಗೆ ಸಿ ಏ ಐ ಐ ಬಿ ಪರೀಕ್ಷೆ ಬರೆಯಲು ಕಷ್ಟ ಆಗಲಿಲ್ಲ. ಆ ಪರೀಕ್ಷೆಯನ್ನು ಪಾಸು ಮಾಡಿದುದರಿಂದ ಎಕ್ಸ್ಟ್ರಾ ಇನ್ಕ್ರಿಮೆಂಟ್ ಬಂದಿತು ಮತ್ತು ಮುಂದೆ ಪ್ರಮೋಷನ್ ಪರೀಕ್ಷೆ ಬರೆಯಲು ಅನುಕೂಲವಾಯಿತು…
ವಿಧ: ಬ್ಲಾಗ್ ಬರಹ
January 27, 2006
ಸ್ನೇಹಿತರೆ, ಮಿತ್ರ ವಸುಧೇಂದ್ರ ಈ ವರ್ಷವೂ 3 ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅವರು ಸಂಪದ ಬಳಗಕ್ಕೆ ವಿಶೇಷ ಸ್ವಾಗತ ಬಯಸಿದ್ದು ಹೀಗೆ: ಮಾನ್ಯರೆ, ಹೊಸ ಲೇಖಕರನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿರುವ ಛಂದ ಪುಸ್ತಕವು ಈ ವರ್ಷವೂ ಮೂರು ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಈ ಬಾರಿಯ ಛಂದ ಪುಸ್ತಕ ಬಹುಮಾನವನ್ನು ಪಡೆದ ಅಲಕ ತೀರ್ಥಹಳ್ಳಿಯವರ ಕಥಾಸಂಕಲನ ಈ ಕತೆಗಳ ಸಹವಾಸವೇ ಸಾಕು, ಎಂ. ಆರ್. ದತ್ತಾತ್ರಿಯವರ ದಟ್ಸ್ ಕನ್ನಡದ ಅಂಕಣಗಳ ಸಂಗ್ರಹ ಪೂರ್ವ ಪಶ್ಚಿಮ ಮತ್ತು ಜಾನಕಿಯವರ `ಹಾಯ್…
ಲೇಖಕರು: pvravi
ವಿಧ: Basic page
January 27, 2006
ನಾ ಕಂಡ ಎಲ್ಲವನ್ನೂ ದಾಖಲೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆ. ಆದರೆ ದಾಖಲೆ ಎಲ್ಲಿ ಮಾಡಲಿ? ಕೊನೆಗೆ ನನ್ನ ಶರ್ಟಿನ ಜೇಬಿನಲ್ಲಿದ್ದ ಪೆನ್ನೊಂದು ನೆನಪಿಗೆ ಬಂತು. ನಾನು ಮಲಗಿದ್ದ ಹಾಸಿಗೆಯ ಪಕ್ಕದಲ್ಲೇ ಬಿಚ್ಚಿಟ್ಟಿದ್ದ ಶರ್ಟ್ ಕೈಗೆತ್ತಿಕೊಂಡೆ. ಅದರೊಳಗಿನ ನನ್ನ ಚೆಕ್ ಸಹಿ ಮಾಡುವ ಪೆನ್ ಸ್ವಲ್ಪ ಒದ್ದೆಯಾಗಿದ್ದರೂ ನನ್ನ ಕೈ ಮೇಲೆ ಗೀಚಿ ನೋಡಿದಾಗ ಬರೆಯುತ್ತಿತ್ತು. ಬರೆಯಲು ಹಾಳೆಗಳೆಲ್ಲಿ? ಈ ಕಾಲದಲ್ಲಂತೂ ಹಾಳೆಗಳು ಸಿಗುವ ಹಾಗಿಲ್ಲ - ಇನ್ನೂ ನಾವು ಕಾಣುವಂತಹ ಹಾಳೆಗಳ ಅವಿಶ್ಕಾರವೇ…
ಲೇಖಕರು: tvsrinivas41
ವಿಧ: Basic page
January 27, 2006
ಕಲಿಗಾಲವಯ್ಯ ಇಂದಿಗಿದು ಕೆಟ್ಟಕಾಲ ಬೇಸಿಗೆಕಾಲದಲ್ಲಿಯೂ ತೋರುವ ಛಳಿಗಾಲ ನಿನ್ನೆಗೆ ಇಂದಾಗಿಹುದು ದುರ್ಭಿಕ್ಷದ ಕಾಲ ನಾಳೆಗೆ ಇಂದಾಗುವುದು ಸುಭಿಕ್ಷ ಕಾಲ ಕಾಲ ಕೆಳಗೆ ಕುಸಿಯುತಿಹಳು ಭೂಮಾತೆ ನಿಸರ್ಗ ಪ್ರದೂಷಣೆಯಿಂದ ಕಲುಷಿತೆ ಓಝೋನ್ ಪದರ ಕಳಚಿಕೊಳ್ಳುತ್ತಿರುವ ದೇವತೆ ಮುಂದೆ ಉಸಿರಾಡಲೂ ಗಾಳಿ ಸಿಗದ ಕಾಲವಂತೆ ಛಳಿಗಾಲದಲಿ ಮೈಯ ಹಲ್ಲು ಕಟಕಟಿಸುವುದು ಮೈ ಥರ ಥರಗುಟ್ಟುತಾ ನಡುಗುವುದು ಹಿಮ ಕಂಡಿರದ ಪ್ರದೇಶಗಳಲ್ಲೂ ಕಾಣುವಿರಿ ಹಿಮಪಾತ, ಹಿಮಕರಡಿ ಬೇಸಿಗೆಯಲಿ ಇದ್ದಿಲಿನಂತೆ ಮೈ ಕರಕಲು ಮಾಡುವ ಸುಡು…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
January 26, 2006
ಮೊದಲು ಶಾಲೆಗೆ ಹೋದ ನೆನಪು, ಕಾಲೇಜಿಗೆ ಹೋದ ನೆನಪು, ಕೆಲಸಕ್ಕೆ ಹೋದ ನೆನಪು, ವಾಸ್ತವ್ಯಕೆ ಹೊಸ ಊರು ಹೊಸ ಭಾಷಿಗರ, ನಡುವಿನ ಹೊಂದಾಣಿಕೆಯ ನೆನಪು, ಹೀಗೆ ಒಂದರ ಹಿಂದೊಂದರಂತೆ ಮೊದಲ ನೆನಪುಗಳ ಸರಮಾಲೆ ಸಾಗುತ್ತಲೇ ಇರುತ್ತದೆ. ತಮಾಷೆಯೆಂದರೆ ಹೊಂದಿಕೊಂಡೆ ಎಂದುಕೊಳ್ಳುವ ಸಮಯಕ್ಕೆ ಸರಿಯಾಗಿ ಕಾಲವನ್ನು ಮತ್ತೆ ಹೊಸ ಸ್ಥಿತಿಯ ಬದಲಾವಣೆಗೆ ಸರಿಪಡಿಸಿಕೊಳ್ಳಬೇಕಾಗುವುದು. ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಸೇರಿ ೨೪ ವರ್ಷಗಳು ಕಳೆದುವು. ೨೫ನೆಯ ವರ್ಷಕ್ಕೆ ಕಾಲಿಟ್ಟ ಸಮಯದಲ್ಲಿ, ಈ ವರ್ಷ ಪೂರ್ತಿ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
January 25, 2006
ಇಂದಿನ ಮಿಡ್‍ಡೇ ಪತ್ರಿಕೆಯಲ್ಲಿ ಬಂದ ಒಂದು ಸುದ್ದಿ. [:http://ww1.mid-day.com/news/city/2006/january/129279.htm|ಈ ಕೊಂಡಿಗೆ ತಾಗಿಕೊಂಡು] ಸುದ್ದಿಯನ್ನು ಓದಿ. ಪಾಪದ ಹಸುಳೆಗೆ ಮಲತಾಯಿ ಎಂತಹ ಶಿಕ್ಷೆ ಕೊಟ್ಟಿದ್ದಾಳೆ ಅಂತ. ಆ ಮಗು ಧೃತಾಗೆ ಕಾಲ ಮೇಲೆ ಬರೆ ಹಾಕಿ ಚೆನ್ನಾಗಿ ಹೊಡೆದು ಕೈ ಮುರಿದಿದ್ದಾಳಂತೆ - ಮಲತಾಯಿ. ಆ ಮಗುವಿನ ತಂದೆ ಕ್ರೂರಿ. ಹೆಂಡತಿಯ ವ್ಯಾಮೋಹದಿಂದ ಮಗುವಿನ ಕಡೆ ನಿರ್ಲಕ್ಷ್ಯ ತೋರಿದ್ದಾನೆ. ಆ ಮಗುವಿನ ಅಣ್ಣ ತನ್ಮಯನನ್ನು ಹಾಸ್ಟೆಲ್‍ನಲ್ಲಿ…
ಲೇಖಕರು: hpn
ವಿಧ: ಬ್ಲಾಗ್ ಬರಹ
January 25, 2006
[:http://sampada.net/user/msanjay75|ಸಂಜಯ್]ರವರ ಬ್ಲಾಗಿನಲ್ಲಿ ಮುಕ್ತ ಧಾರಾವಾಹಿಯ ಬಗ್ಗೆ ದೊಡ್ಡದೊಂದು ಚರ್ಚೆಯೇ ನಡೆಯುತ್ತಿದೆ. ಹಿಂದೊಮ್ಮೆ ಆ ಪುಟವನ್ನು ನೋಡಿದ್ದೆನಾದರೂ ಇಂದು ಅವರು "ಹರಿ, 'ಮುಕ್ತ' ಬಗ್ಗೆ ನನ್ನ ಬ್ಲಾಗಿನಲ್ಲಿ ನಡೆಯುತ್ತಿರೋ ಚರ್ಚೆ ಫಾಲೋ‌ ಮಾಡ್ತಿದ್ದೀರ?" ಎಂದು ಮೇಯ್ಲ್ ಮಾಡಿದ್ದರು. ನೋಡಲು ಹೋದ್ರೆ ೧೧೪ ಕಾಮೆಂಟುಗಳು! ಯಾವುದನ್ನ ಓದೋದು? ಕೊನೆಗೆ ಕೊನೆಯಲ್ಲಿರುವ ಕೆಲವನ್ನು ನೋಡಿ ಬಂದೆ. ;-) ಕನ್ನಡ ದಾರಾವಾಹಿಗಳ ಬಗ್ಗೆ ಚರ್ಚೆ ಮನೆ ಮಂದಿ, ಅಕ್ಕ ಪಕ್ಕದವರ…
ಲೇಖಕರು: shreekant.mishrikoti
ವಿಧ: Basic page
January 25, 2006
( ಹಿಂದೆ ಶಂಬಾರವರ ಯಾವುದೋ ಪುಸ್ತಕಗಳನ್ನು ( ಹೆಸರು ನೆನಪಿಲ್ಲ ) ಓದುತ್ತಿದ್ದಾಗ ನಾನು ಬರೆದಿಟ್ಟುಕೊಂಡ ಕೆಲವು ವಿಚಾರ ಇಲ್ಲಿವೆ) ೫೦ ವರ್ಷಗಳ ಹಿಂದೆ ನನಗೆ ಹೊಳೆಯಿತು . 'ಎರಡಿಲ್ಲದ ಬಾಳ್ವೆಯೇ ಪೂರ್ಣ ಕೃತಿ' . ಆಚಾರ ವಿಚಾರಗಳಲ್ಲಿ ಅಂತರವು ಉಳಿಯದ ಬಗೆಯಲ್ಲಿ ಬಾಳಲು ಯತ್ನ ಮಾಡಬೇಕು. ಸಾಮಾಜಿಕ ಕಲ್ಯಾಣಕ್ಕೆ ಕಾರಣವಾಗಬಲ್ಲ ಯಾವುದೇ ಸಂಕಲ್ಪ , ಅಧ್ಯಯನ ಮತ್ತು ಕಾಲಕಾಲಕ್ಕೆ ನನ್ನ ನುಡಿಗಳ ಪ್ರಾಮಾಣಿಕ ವಿಮರ್ಶೆ ಇವು ನನ್ನನ್ನು ಈವರೆಗೆ ಕಾಪಾಡಿಕೊಂಡು ಬಂದಿವೆ. .. ಅಗ್ನಿವಿದ್ಯೆ :-…