ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಪುಸ್ತಕ ವಿಮರ್ಶೆ
January 25, 2006
ಇತ್ತೀಚೆಗೆ ಎರಡು ಪುಸ್ತಕ ಓದಿದೆ . ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ (ದಟ್ಸ್ ಕನ್ನಡ ಸಂಪರ್ಕ)) ಆದರೆ ಅದರ ಅನುವಾದ ಬಹಳ ಚೆನ್ನಾಗಿದೆ. ( ಒಂದೇ ಒಂದು ತಪ್ಪು ಗಮನಿಸಿದೆ. ಅದೂ ಯಾಕೆ ಎಂದರೆ , ಸರಾಗ ಓದಿಗೆ ಅಡ್ಡಿಯಾದದ್ದಕ್ಕೆ - ಮುದ್ರಣ ದೋಷಗಳನ್ನು ಸಹಜವಾಗಿ ನಾವು ಗಮನಿಸುವದಿಲ್ಲ - ಆದರೆ ತಪ್ಪು ಪದಕ್ಕೆ ಒಂದು ಬೇರೆ ಅರ್ಥವಿದ್ದಾಗ ನಮ್ಮ ಓದು ಎಡವುತ್ತದೆ ) 'ರಸ್ತೆಯನ್ನು ಅಗಲಿಸಿದ್ದಾರೆ' ಎಂಬುದು ಆ ವಾಕ್ಯ.…
ಲೇಖಕರು: Gopinath Rao
ವಿಧ: Basic page
January 23, 2006
ಹಕ್ಕಿ ಜ್ವರದ ಬಿಸಿ ರೆಕ್ಕೆ ಪುಕ್ಕ ಪಡೆದು ಹಾರಿ ವಿಶ್ವದ ಕೊಕ್ಕಿನವರೆಗೂ ಮುಟ್ಟಿ ಸೊಕ್ಕಿದ ಕೋಳಿ, ಮಿಕ್ಕ ಟರ್ಕಿಗಳೆಲ್ಲ ಸಪಾಯಿ ಮುಖ ಗಂಟಿಕ್ಕಿದ ಚಿಕನ್ ಟಿಕ್ಕಾ ಕೆಂಟುಕಿಗಳಲ್ಲಿ ಮೆಕ್ ಡೊನಾಲ್ಡುಗಳಲ್ಲಿ ಮುಕ್ಕಿ ತಿನ್ನುವ ಮಿಕಗಳಿಲ್ಲ ಹೆಕ್ಕಿದರೆ ನಾಲ್ಕೈದು ಮಂದಿ.. ಜಾಗ ತಿಕಕ್ಕೆ ಮುಖಕ್ಕೆ ಹೊಡೆಯುವವರಿಗೆ ಸಿಕ್ಕಿದೆ ಮಸಾಲೆಯೀಗ ಕೂಗಿಗೆ ಚಕಮಕಿಗೆ ಬೇಕಾದಷ್ಟು ಹೊಸ ರಾಗ... -ಗೋಪೀನಾಥ ರಾವ್ raogopi@yahoo.com
ಲೇಖಕರು: nayak_sathish
ವಿಧ: ಚರ್ಚೆಯ ವಿಷಯ
January 23, 2006
ಕುಮಾರ ಸ್ವಾಮಿ ಬೆಂಬಲವನ್ನು ಹಿಂತೆಗೆದುಕೊಂಡು ತಾನು ಮುಖ್ಯಮಂತ್ರಿಯಾಗ ಹೊರತಿರುವುದರ ಹಿಂದೆ ದೇವೇಗೌಡರ ಪಾತ್ರ ಇದೆ ಎಂದು ಎನಿಸುದಿಲ್ಲವೇ?
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 23, 2006
ನಾವು ಕಲಿತವರು / ನಗರಗಳಲ್ಲಿರುವ ಜನರು ಕನ್ನಡವನ್ನು ಹೆಚ್ಚು ಹೆಚ್ಚು ಕೈಬಿಡುತ್ತಿದ್ದೇವೆ. ಬೆಂಗಳೂರಿನಲ್ಲಿ ನಮ್ಮ ಮನೆಗೆ ಒಬ್ಬ ೪-೫ ವರ್ಷದ ಒಬ್ಬ ಹುಡುಗ ಮನೆಗೆ ಬಂದಿದ್ದ ಅವನು ಗೋಕಾಕದ ನುಡಿಯನ್ನು ಆಡುತ್ತಿದ್ದ . ಹೀಗಿರುವಾಗ ನಮ್ಮ ಮನೆಯಲ್ಲಿ ನನ್ನ ಹೆಂಡತಿ ನೆರೆಮನೆಯವರು ಅವನನ್ನು ಮಾತನಾಡಿಸಿ ಅವನ ಮಾತಿನಿಂದ ಮೋಜು ಅನುಭವಿಸುತ್ತಿದ್ದರು. ನನ್ನ ಹೆಂಡತಿ ಅವನಿಗೆ ಚಾಕೊಲೇಟೊಂದನ್ನು ಕೊಟ್ಟಳು. ಚಾಕೊಲೇಟ್ ಅನ್ನು ಅವನು ಬಿಚ್ಚಿದ. ಚಾಕೊಲೇಟ್ ನ್ ಮೇಲಿನ ರ್‍ಯಾಪ್ಪರ್ ( ಅದಕ್ಕೆ…
ಲೇಖಕರು: shreekant.mishrikoti
ವಿಧ: Basic page
January 23, 2006
(ಶ್ರೀ ಪುರಂದರದಾಸರ ಕ್ಷಮೆ ಕೇಳಿ-ಆಡಲು ಪೋಗುವ ಬಾರೋ ರಂಗ ಕೂಡಿ ಯಮುನ ತೀರದಲ್ಲಿ ಎಂಬಂತೆ ) ತಿರುಗ ಹೋಗೋಣು ಬಾರೋ ಶ್ರೀಕಾ(೧) ಮರೀನು ಡ್ರೈವ(೨) ತೀರದಲ್ಲಿ|| ಓಸೀಪೀ(೩) ಯ ಮಾಡಿದ್ಯಂತೆ ಕಾಸು(೪) ನಿನಗೆ ಕೊಟ್ಟರಂತೆ , ಕೆ -ಲಸ ಭಾಳ ಮಾಡಿದ್ಯಂತೆ ಕರೆದು ವಿಶ್ರಾಂತಿ ಕೊಡುವರಂತೆ ! || ಕಾರ್ಪೋರೇಟು ಸೆಂಟರಂತೆ (೫),ಅಲ್ಲಿ ನಿನ್ನ ಕರೆದರಂತೆ(೬) ಹತ್ತೂವರೆಗೆ ಇರಬೇಕಂತೆ ಕೆಲಸ ಮಾತ್ರ ಇಲ್ಲವಂತೆ ! || ಹರಟೆ ಅಲ್ಲಿ ಹೊಡೆವರಂತೆ ಎರಡು ಗಳಿಕೆ ಮಾಡ್ವರಂತೆ ಪ್ರೊಜೆಕ್ಟಿನೊಡೆಯ…
ಲೇಖಕರು: olnswamy
ವಿಧ: Basic page
January 23, 2006
ಹೊಸ ವರ್ಷದ ಪಾರ್ಟಿಯಲ್ಲಿ ಮೂವರು ಮುದುಕರು ಕೂತು ಮಾತಾಡುತ್ತಿದ್ದರು. “ಇವತ್ತು ಪಾರ್ಟಿಗೆ ಬಂದಿರುವವರಲ್ಲಿ ಎಷ್ಟು ಜನ ಮುಂದಿನ ವರ್ಷದ ಪಾರ್ಟಿಗೆ ಯಾರಿರುತ್ತಾರೋ ಯಾರಿಲ್ಲವೋ, ಯಾರಿಗೆ ಗೊತ್ತು?” ಅವನ ಗೆಳೆಯ ಹೇಳಿದ, “ನೀನು ಮುಂದಿನ ವರ್ಷ ಅಂದದ್ದು ದೂರದ ಮಾತು. ಇವತ್ತು ರಾತ್ರಿ ನಾವು ಮನೆಗೆ ಹೋಗಿ ಶೂ ಬಿಚ್ಚಿ, ಸಾಕ್ಸು ತೆಗೆದಿಟ್ಟ ಮೇಲೆ ನಾಳೆ ಬೆಳಗ್ಗೆ ಅವನ್ನು ಹಾಕಿಕೊಳ್ಳಲು ಇರುತ್ತೇವೋ ಇಲ್ಲವೋ ಯಾರಿಗೆ ಗೊತ್ತು?” ಮೂರನೆಯಾತ ನುಡಿದ: “ಅಯ್ಯಾ ನೀನು ನಾಳೆ ಎಂದು ಬಲು ದೂರದ ಮಾತು…
ಲೇಖಕರು: olnswamy
ವಿಧ: Basic page
January 23, 2006
ನಸ್ರುದ್ದೀನ್ ಮುಲ್ಲಾ ಒಮ್ಮೆ ವಿದ್ವಾಂಸನೊಬ್ಬನನ್ನು ತನ್ನ ಮನೆಗೆ ಊಟಕ್ಕೆ ಕರೆದ.  ವಿದ್ವಾಂಸನಿಗೋ ಬಹಳ ಗರ್ವ. ಮುಲ್ಲಾನ ಮನೆಗೆ ಬಂದ. ಬಾಗಿಲು ತಟ್ಟಿದ. ಮತ್ತೆ ತಟ್ಟಿದ. ಉತ್ತರವಿಲ್ಲ. ಕಿಟಕಿಯೊಳಗೆ ಇಣುಕಿದ. ಯಾರೂ ಇಲ್ಲ. ಕ್ಷಣ ಕ್ಷಣಕ್ಕೂ ವಿದ್ವಾಂಸನ ಕೋಪ ಏರುತ್ತಿತ್ತು. “ನಾನು ಯಾರು ಎಂದು ಮುಲ್ಲಾಗೆ ಗೊತ್ತಿಲಲವೇ? ನನ್ನಂಥವನನ್ನು ಕಾಯಿಸುವುದೇ? ನನ್ನ ಪಾಂಡಿತ್ಯಕ್ಕೆ ಅವಮಾನ, ನನಗೆ ಅವಮಾನ” ಎಂದು ಕುದಿ ಕುದಿದು ಮತ್ತೆ ಮನೆಯ ಮುಂಭಾಗಕ್ಕೆ ಬಂದ. ಮುಲ್ಲಾನ ಮನೆಯ ಬಾಗಿಲ ಮೇಲೆ…
ಲೇಖಕರು: tvsrinivas41
ವಿಧ: Basic page
January 23, 2006
ಸುಖಿಸಿದವರು ಸುಖಿಸದವರು ಸುಖಿಸಿದವರು ದು:ಖಿಸುವವರು ದು:ಖಿಸಿದವರು ದು:ಖಿಸದವರು ದು:ಖಿಸಿದವರು ಸುಖಿಸಿದವರು ತನ್ನಲಿದ್ದೂ ನಾಳೆಯ ನೆನೆದು ಸುಖಿಸದವನೊಬ್ಬ ಇಂದು ಸಿಕ್ಕಿದುದ ತಿಂದು ನಾಳೆಗಿಲ್ಲದೇ ಪರಿತಪಿಸುವನಿನ್ನೊಬ್ಬ ತನ್ನಲಿರದೇ ನಾಳೆಯ ನೆನೆದು ದು:ಖಿಸುವನಿನ್ನೊಬ್ಬ ಇರದೆಯೂ ಇದ್ದುದರಲ್ಲಿಯೇ ತೃಪ್ತಿಸುವ ಮಗದೊಬ್ಬ ಇಂದಿಲ್ಲದೇ ವ್ಯಥೆಪಡುವನೊಬ್ಬ ಇಂದಿಅಲ್ಲದೇ ನಾಳೆ ಸುಖ ಬರಲು ಸುಖಿಸಿದವ ಶ್ರೇಷ್ಟನೊಬ್ಬ ಇದ್ದೂ ಸುಖಿಸಿ ನಾಳೆಯ ನೆನೆಯದವ ಇನ್ನೊಬ್ಬ ಇಂದಿಹುದು, ಅದ ಸವಿಯುವರು…
ವಿಧ: Basic page
January 22, 2006
ನನ್ನ ಮುಂದಿದ್ದ ಮೊದಲ ಪ್ರಶ್ನೆಯೆಂದರೆ ಇಸ್ಮಾಯಿಲ್ ಅವರ ಲೇಖನಕ್ಕೆ ಉತ್ತರಿಸ ಬೇಕೆ ಅಥವಾ ಭಿನ್ನವಾದೊಂದು ಲೇಖನವನ್ನು ಮಾಡಬೇಕೆ ಎಂಬುದು. ಇದಕ್ಕೆ ಕಾರಣ ನನ್ನ ವಾದವನ್ನು ಮಂಡಿಸಲು ಪ್ರೇರಣೆಯಾದುದು ಅವರ ` ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ`. ಕೊನೆಗೆ ಪ್ರತ್ಯೇಕ ಲೇಖನವನ್ನೇ ಮಾಡಲು ನಿರ್ದರಿಸಿದೆ. ಸಾಹಿತ್ಯ ಪರಿಷತ್‌ನ ಸ್ವರೂಪವೇನು ಎಂಬುದರ ಬಗೆಗೆ ಚರ್ಚೆ ಎತ್ತಿಕೊಂಡರೆ ತುಸು ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ. ಸಾಹಿತ್ಯ ಪರಿಷತ್ ಕನ್ನಡಿಗರ ಉದ್ಯೋಗಗಳ ಬಗೆಗೆ,…
ಲೇಖಕರು: olnswamy
ವಿಧ: ಬ್ಲಾಗ್ ಬರಹ
January 22, 2006
ಕೆಲವು ದಿನಗಳ ಹಿಂದೆ ಸಂಪದದ ಓದುಗರೊಬ್ಬರು ಕುವೆಂಪು ಅವರ ಈ ಕವಿತೆಯ ಕೆಲವು ಪದಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ಆಗ ಕವಿತೆ ಕೈಗೆ ಸಿಕ್ಕಿರಲಿಲ್ಲ, ಸಿಕ್ಕ ಮೇಲೆ ನಾನು ಊರಲ್ಲಿರದೆ ಸಮಯವಾಗಿರಲಿಲ್ಲ. ಈಗ ಯಾರು ಆ ಪ್ರಶ್ನೆ ಕೇಳಿದ್ದರೋ ಹುಡುಕಲು ಆಗದು. ಆದರೆ ಈ ಟಿಪ್ಪಣಿ ಕವಿತೆಯಲ್ಲಿ ಆಸಕ್ತರಾದವರಿಗೆ ಸಹಾಯವಾದೀತೆಂದು ಬರೆದಿರುವೆ. ಕುವೆಂಪು ಅವರ ಈ ಕವಿತೆ ತೀರ ಸಾಮಾನ್ಯ. ಭಾವಗೀತೆಯಾಗಿ ಸಿನಿಮಾದಲ್ಲಿ ಬಳಕೆಯಾಗಿ ಪ್ರಿಯವಾಗಿದೆ, ಆದರೆ ನಿಧಾನ ಓದಿಗೆ ಹಲವಾರು ಪ್ರಶ್ನೆಗಳನ್ನು ಹಾಗೇ…