ಎಲ್ಲ ಪುಟಗಳು

ಲೇಖಕರು: hpn
ವಿಧ: ಚರ್ಚೆಯ ವಿಷಯ
January 22, 2006
ಇವತ್ತು "Ask Yahoo!"ನ ಒಂದು ಪ್ರಶ್ನೆಯ ಉತ್ತರವನ್ನೋದುತ್ತಿರುವಾಗ ಕಂಡುಬಂದದ್ದು. ಜಗತ್ತಿನಲ್ಲಿರುವ ಜಾತಿಗಳ ವಿಭಜನೆ ಅದರ ಅನುಯಾಯಿಗಳ ಸಂಖ್ಯೆಯನ್ನಾಧರಿಸಿ ಮಾಡಿ [:http://www.adherents.com/Religions_By_Adherents.html|ಅದನ್ನೊಂದು ಪೈ ಗ್ರಾಫ್ ಮೂಲಕ ಹಾಕಿದ್ದಾರೆ ಒಂದು ತಾಣದಲ್ಲಿ]. ತಮಾಷೆ ನೋಡಿ. ಕ್ರಿಶ್ಚಿಯಾನಿಟಿ ಹಸಿರಾದರೆ, ಇಸ್ಲಾಮ್ ಕೆಂಪು! ;-) ಇಲ್ಲೂ ಅಮೇರಿಕನಿಸಮ್ಮೇ? ;-)
ಲೇಖಕರು: tvsrinivas41
ವಿಧ: Basic page
January 20, 2006
ನನ್ನೂರಂತೆ ಹಳ್ಳಿಗಾಡು ಹಂದಿ ನಾಯಿ ಮರಿಗಳ ಗೂಡು ಅನಾಗರಿಕ, ಅಸಭ್ಯರ ನೆಲೆವೀಡು ಡಾಂಬರಿನ ರಸ್ತೆಯಿಲ್ಲದ ಸುಡುಗಾಡು ... ಅಂತೆ ಗೊಬ್ಬಳಿ ಮುಳ್ಳಿನ ಹಾಸಿಗೆಯ ಹಾದಿ ಸಿಡುಬಿನ ಕಲೆಯ ಹರಳೆಣ್ಣೆಯ ಮುಖ ತಾಯ ಭಾಷೆ ಬಿಟ್ಟಿನ್ನಾವದನ್ನೂ ಅರಿಯದ ಜನ ಮೋಸ ತಟವಟ ವಂಚನೆ ತಿಳಿಯದ ಮನ ... ಅಂತೆ ಊರಿಗೊಂದೇ ಅಡುಗೆ ಮನೆ, ಉರುವಲೊಲೆ ಸಹಬಾಳ್ವೆ ಸಮನ್ವಯವೇ ಜೀವನದ ಮಂತ್ರ ಜಾತಿ ಮತ ಭೇದವನರಿಯದ ಅಣ್ಣ ತಮ್ಮಂದಿರು ಕೋರ್ಟು ಕಛೇರಿ ಜಗಳ ಕದನವರಿಯದ ನನ್ನವರು ಮುದ್ದೆ ತಿನುವ ಮುಗ್ಧರು ನಾಗರಿಕತೆಗೆ ಕನ್ನಡಿ…
ಲೇಖಕರು: ismail
ವಿಧ: ಬ್ಲಾಗ್ ಬರಹ
January 20, 2006
ಮತ್ತೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಅಥವಾ ಕೇವಲ ಸಾಹಿತ್ಯದ ಸಮ್ಮೇಳನ ನಡೆಯುತ್ತಿದೆ. ಇಲ್ಲಿರುವ ಹತ್ತಾರು ಗೋಷ್ಠಿಗಳ, ವಿಶೇಷ ಉಪನ್ಯಾಸಗಳ ವಿಷಯಗಳನ್ನು ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನ ಸಂಘಟಿಸುತ್ತಿರುವವರು ಸಂಪೂರ್ಣ ಸಂವೇದನಾ ಶೂನ್ಯರಾಗಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ. ಬಹಳಷ್ಟು ಮಂದಿ ಈಗಾಗಲೇ ಸಾಹಿತ್ಯ ಸಮ್ಮೇಳನ ವಿಷಯ ಸಾಹಿತ್ಯಕ್ಕೆ ಯಾವ ಮಹತ್ವವನ್ನೂ ಕೊಟ್ಟಿಲ್ಲ ಎಂದು ದೂರುತ್ತಿದ್ದಾರೆ. ವಿಷಯ ಸಾಹಿತ್ಯ ಬಿಡಿ ನಮ್ಮ…
ಲೇಖಕರು: pvravi
ವಿಧ: Basic page
January 20, 2006
ಭಾಗ ೧ ಇಲ್ಲಿದೆ ಭಾಗ ೨ ನೀರಿನೊಳಗೇ ನಿಧಾನವಾಗಿ ನಡೆಯಲಾರಂಭಿಸಿದೆ. ಮೊದಲ ಹೆಜ್ಜೆ ಇಟ್ಟ ತಕ್ಷಣವೇ ತಲೆ ಸುತ್ತುವ ಆಭಾಸ. ಕಷ್ಟ ಪಟ್ಟು ನಾಲ್ಕು ಹೆಜ್ಜೆ ನಡೆದು, ನೀರಿನಿಂದ ಹೊರಗೆದ್ದು ಆ ಋತ್ವಿಕನ ಕಾಲುಗಳಬಳಿ ಕುಸಿದುಬಿದ್ದೆ. ನಾನು ಓದಿದ್ದ 'ಸಯನ್ಸ್ ಫಿಕ್ಷನ್' ಕತೆಗಳು ನಿಜ ಎನ್ನುವಂತೆ ಕಾಲ ಪ್ರಯಾಣ ನನ್ನನ್ನು 'ಡಿಸೋರಿಯಂಟ್' ಮಾಡಿದೆ ಎಂದು ಯೋಚಿಸುವಷ್ಟು ತ್ರಾಣವಿತ್ತು. ಆ ಕ್ಷಣದ ನಂತರ ಎಲ್ಲವೂ ಕತ್ತಲಾಯಿತು. ನನ್ನ ಕಣ್ತೆರೆದಾಗ ಯಾವುದೋ ಮನೆಯ ಒಂದು ಕೋಣೆಯಲ್ಲಿ, ಅಟ್ಟಣಿಗೆಯ ಮೇಲೆ…
ಲೇಖಕರು: Gopinath Rao
ವಿಧ: Basic page
January 19, 2006
ಮಣ್ಣಿನ ಮೊಮ್ಮಗ ಕಣ್ಣೆದುರೇ ಕುಣಿದಾಗ ಎಲ್ಲೆಡೆ ಧೂಳು ನಿಯತ್ತು ಜಾಳು ಜಾಳು ಮಾಸಿದೆ ರೈತನ ಪಂಚೆ ಅಪ್ಪನಿಗೆ ಮುಟ್ಟಿದೆ ಅಂಚೆ ಮುಕ್ಕಡಿಯಾಯ್ತು ದಳ ತಕ್ಕಡಿಯೇ ರಂಗಸ್ಥಳ ಧರ್ಮಕ್ಕೆ ಸಿಕ್ಕಿದ್ದೆಂದು ಧರಂ ಎಳೆದಾಡಿದ್ದು ಮರ್ಮಕ್ಕೆ ಪೆಟ್ಟು ಬಿದ್ದು ಧರ್ಮಕ್ಕೆ ಕೈ ಬಿಟ್ಟಿತು ಬಿಜೆಪಿಗೆ ಹರುಷ ಮುಕ್ಕಲು ಮೂರು ವರುಷ ರಾಜಕೀಯ ಅಂದ್ರೆ ಹೀಗೆ ಕೋತಿಗಳಿಗೇ ಜಾಗೆ! -ಗೋಪೀನಾಥ ರಾವ್
ಲೇಖಕರು: tvsrinivas41
ವಿಧ: Basic page
January 18, 2006
ಪುಟ್ಟನು ಬಂದ ಮನೆಯೊಳಗೆ ಸಕ್ಕರೆ ಕಂಡ ಡಬ್ಬದೊಳಗೆ ಅಮ್ಮನು ಎಲ್ಲೂ ಕಾಣದಿರಲು ಮೆಲ್ಲನೆ ಕೈ ಡಬ್ಬದಲಿ ಇಳಿದಿರಲು ಸಕ್ಕರೆಯ ಸವಿಗಾಗಿ ಪುಟ್ಟ ಕಾದಿರಲು ಬಾಗಿಲ ಬಳಿ ಏನೋ ಸದ್ದಾಗಲು ಅತ್ತಿತ್ತ ನೋಡದೇ ಮುಷ್ಟಿಗೆ ಸಕ್ಕರೆ ಬಂದಿರಲು ಗಬಕ್ಕ್ ಎಂದು ಅದು ಬಾಯ ಸೇರಿರಲು ಇವನಂತೆಯೇ ಸವಿಗಾಗಿ ಬಂದಿಹ ಇರುವೆ ಇವನಿಗಿಲ್ಲ ಅದಿರುವ ಪರಿವೆ ಎಳಸು ಬೆರಳು ಸಿಕ್ಕಿ ಇರುವೆ ಕಚ್ಚಿರಲು ನೋವಿನಿಂದ ಹಾ ಎಂದು ಪುಟ್ಟ ಕೂಗಿರಲು ಬಾಗಿಲ ಹಿಂದಿನಿಂದ ಅಮ್ಮ ಬಂದಳು ಕಳ್ಳ ಅಮ್ಮನ ಕೈಗೆ ಸಿಕ್ಕಿ ಬಿದ್ದನು ಅಮ್ಮನ ಹಿಡಿತಕೆ…
ಲೇಖಕರು: shreekant.mishrikoti
ವಿಧ: Basic page
January 18, 2006
ಮುಂಜಾನೆ ಅಂಗಳದಿ ನೀರು ಚಿಮುಕಿಸಿ ರಂಗವಲ್ಲಿಯ ಹಾಕ ಬಂದ ಹುಡುಗಿಯ ತುಟಿಯಲೊಂದು ನಲಿವ ಸಾಲು ನಿಂದಿಯಾಸೆ ಜಾಗೀ ಬಹಾರ್ ಬೀದಿ ತುದಿಯಲೊಂದು ಮರ ತಂಪು ಗಾಳಿ , ಕೆಂಪು ಗುಲ್ ಮೊಹರ್ ದೂರದಿಂದ ಕೋಕಿಲ ರವ ಸಿಂಗಾರ ಕೈಸಾ ಮೌಸಮ್ ದೇಖಾ ಪೆಹಲೀ ಬಾರ್ ಅವಸರದ ನಡೆಯ ಕನಸುಗಾರ ಅರಿಯದೆಯೇ ತಡೆದ , ಹೊರಳಿದ ಇಂಪು ದನಿ , ಇಲ್ಲ ಜೇನ ಹನಿ ! ನಿಂದಿಯಾಸೆ ಜಾಗೀ ಬಹಾರ್ ಬಟ್ಟಲುಗಣ್ಣು ಕಟ್ಟಿ ಹಾಕವೇ ? ಗ ಟ್ಟಿ ಮನಸು ನೆಟ್ಟಗೆ ನಡೆದ ಮನಸು ಕನ್ನಡಿ , ಬೆಳಕು ಎಲ್ಲೆಡೆ ಕೈಸಾ ಮೌಸಮ್ ದೇಖಾ ಪೆಹಲೀ…
ಲೇಖಕರು: srikanth
ವಿಧ: Basic page
January 18, 2006
ಆ ರಸ್ತೆಯ ಕೆಂಪು ಗುಲ್ಮೋಹರ್ ಸಾಲುಗಳ ನೆರಳಿನಲ್ಲಿ , ಆ ಕೆಂಪಿನ ಹಬ್ಬವನ್ನು ಕಣ್ಣುಗಳು ಆಸ್ವಾದಿಸುತ್ತಾ ನಡೆದರೆ, ಕೆಲವು ದಿನಗಳಲ್ಲಿ ಗುಲ್ಮೋಹರ್ ಗಳೆಲ್ಲ ಬೋಳಾಗಿ , ಬಣ್ಣವೆಲ್ಲಾ ಮಾಯವಾಗುವ ಕೊರಗು ಕಾಡುವ ಮುನ್ನ ಎರಡು ಜೋಡಿಮನೆಗಳು ಕಾಣಸಿಗುತ್ತಿತ್ತು. ಆ ಎರಡು ಮನೆಗಳನ್ನು ಕೈತೋಟವೊಂದು ಬೇರ್ಪಡಿಸುತ್ತಿತ್ತು . ( ಹೆಸರಿಗೆ ಕೈತೋಟವಾದರೂ, ಅದನ್ನು ಎರಡೂ ಮನೆಗಳ ಯಾವ ಕೈಗಳೂ ನೀರೆರೆದು ಬೆಳೆಸಿರಲಿಲ್ಲ. ಸಂಬಳಕ್ಕಿದ್ದ ಮಾಲಿಯೊಬ್ಬನ ಬೆವರಿನ ನೀರನ್ನುಂಡು ತೋಟವು ಹೂವುಗಳಿಂದ…
ಲೇಖಕರು: bloggerkannadiga
ವಿಧ: ಚರ್ಚೆಯ ವಿಷಯ
January 18, 2006
ಅಂತೂ ಇನ್ನೊಂದಿಷ್ಟು ನಿರುದ್ಯೋಗಿ ಕನ್ನಡಿಗ ತಂತ್ರಜ್ಞಾನ ಪದವೀಧರರನ್ನು ಹೊರಬಿಡಲು ನಮ್ಮ ಘನ ಸರ್ಕಾರ ತೀರ್ಮಾನಿಸಿದಂತಿದೆ. ಇಂಜಿನಿಯರಿಂಗ್ ಪದವಿ ಪಠ್ಯಕ್ರಮದಲ್ಲಿ ಕನ್ನಡ ಭಾಷೆಯನ್ನು ಅಳವಡಿಸುವ ಬದಲು ಕನ್ನಡದಲ್ಲೇ ಶಿಕ್ಷಣ ನೀಡುವ ಕ್ರಮ ಖಂಡಿತವಾಗಿಯೂ ಸರಿಯಲ್ಲ. ಅದರ ಬದಲು ಇಂಜಿನಿಯರಿಂಗ್ ಪದವಿಯಲ್ಲಿ ಒಂದು ಕನ್ನಡವನ್ನು ಒಂದು ಕಡ್ಡಾಯ ಭಾಷೆಯನ್ನಾಗಿ ಅಳವಡಿಸಿದ್ದರೆ ಇತರೆ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಕಲಿಯಲು ಅವಕಾಶವಿತ್ತು, ಆದರೆ ಈಗ ಕೈಗೊಂಡಿರುವ ಕ್ರಮದಿಂದ ಯಾರಿಗೂ…
ಲೇಖಕರು: modmani
ವಿಧ: Basic page
January 17, 2006
ಓದುಗರಿಗೆ ಸೂಚನೆ: ಪುಟ ೧೫೦ KB ಕಿಂತ ಹೆಚ್ಚು ದೊಡ್ಡದಿರುವುದರಿಂದ ಲೋಡ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು ಕೆಂಗೂದಲ ಕಿಡಿಗೇಡಿಗಳು. ಕಳೆದ ಶರದೃತುವಿನಲ್ಲೊಂದು ದಿನ, ನನ್ನ ಗೆಳೆಯ ಶೆರ್ಲಾಕ್ ಹೋಮ್ಸನ ಮನೆಗೆ ಹೋಗಿದ್ದೆ. ಅಲ್ಲಿ ಹಿರಿಯ ವ್ಯಕ್ತಿಯೊಬ್ಬ ನನ್ನ ಗೆಳೆಯನೊಂದಿಗೆ ಸುಧೀರ್ಘ ಚರ್ಚೆಯಲ್ಲಿ ಮುಳುಗಿದ್ದ. ಅವನು ನೋಡಲು ಸಾಕಷ್ಟು ದಪ್ಪನಾಗಿದ್ದು, ಕಡುಕೆಂಪು ಬಣ್ಣದ ಕೂದಲನ್ನು ಹೊಂದಿದ್ದ. ನಾನು ಅವರಿಬ್ಬರ ಮಧ್ಯೆ ಒಳನುಗ್ಗಿದ್ದಕ್ಕೆ ಕ್ಷಮೆ ಕೇಳಿ, ಬಾಗಿಲು ಮುಚ್ಚಿಕೊಂಡು…