ಎಲ್ಲ ಪುಟಗಳು

ಲೇಖಕರು: hpn
ವಿಧ: ಬ್ಲಾಗ್ ಬರಹ
November 23, 2005
ನಿಮ್ಮಲ್ಲಿ ಯಾರಿಗಾದರೂ ಉಬುಂಟು ಬಳಸುವ ಆಸಕ್ತಿ ಇದ್ದು ಉಬುಂಟು ಬ್ರೀಝಿ ಸಿ.ಡಿ.ಗಳು ಬೇಕಾದಲ್ಲಿ ನನ್ನನ್ನು ಸಂಪರ್ಕಿಸಿ. ನನ್ನ ಬಳಿ ಇಂಟೆಲ್ ಆರ್ಕಿಟೆಕ್ಚರಿನ ೧೦, ೬೪-ಬಿಟ್ ಪ್ರೊಸೆರುಗಳಿಗಾಗಿ ಹೊರತಂದಿರುವ ಉಬುಂಟುವಿನ ೪ ಸಿಡಿಗಳು, ಹಾಗೂ ಪಿ ಪಿ ಸಿ ಆರ್ಕಿಟೆಕ್ಚರಿನ ೪ ಸಿ.ಡಿ.ಗಳಿವೆ. ಈಗಷ್ಟೇ ಬಂದು ತಲುಪಿತು. "ಉಬುಂಟು? ಹಾಗಂದ್ರೇನು?" ಉಬುಂಟು ಇತ್ತೀಚೆಗೆ ಜನಪ್ರಿಯಗೊಳ್ಳುತ್ತಿರುವ "ಲಿನಕ್ಸ್" ವಿತರಣೆಗಳಲ್ಲಿ ಒಂದು. ಇದನ್ನು ನಿಮ್ಮ ಕಂಪ್ಯೂಟರಿನಲ್ಲಿ ವಿಂಡೋಸ್ ಎಕ್ಸ್ ಪಿ ಬಳಸಿದಂತೆ…
ಲೇಖಕರು: hpn
ವಿಧ: ಬ್ಲಾಗ್ ಬರಹ
November 22, 2005
[:http://www.google.com/reader/lens/|ಗೂಗಲ್ ರೀಡರ್] ಸಾಂಪ್ರದಾಯಿಕ RSS ರೀಡರುಗಳನ್ನು ಸಡ್ಡುಹೊಡೆಯುವ ತಂತ್ರಜ್ಞಾನ. ಇನ್ನೂ ಬೀಟ (ಅಂದರೆ ಪ್ರಾಯೋಗಿಕ) ತಂತ್ರಾಂಶವಾಗಿರುವುದಾದರೂ ನಿಮಗೆ ನಿಮ್ಮ ನೆಚ್ಚಿನ ತಾಣಗಳಿಂದ ಇತ್ತೀಚಿನದ್ದನ್ನು RSS ಮೂಲಕ ಒಂದು ವಿಭಿನ್ನ ರೀತಿಯಲ್ಲಿ ಪಡೆಯುವಂತೆ ಸಾಧ್ಯಮಾಡುತ್ತದೆ. ತುಂಬಾ  ಚೆನ್ನಾಗಿರುವ ಅಂಶವೆಂದರೆ ಈಗೀಗ ಅತ್ಯಂತ ಜನಪ್ರಿಯವಾಗುತ್ತಿರುವ "AJAX" ತಂತ್ರಜ್ಞಾನವನ್ನು seemlessly ಬಳಕೆ ಮಾಡಿರುವುದು.   RSS ಅಂದರೇನು? ಇದನ್ನೋದುತ್ತಿರುವ…
ಲೇಖಕರು: karthik
ವಿಧ: ಬ್ಲಾಗ್ ಬರಹ
November 22, 2005
ಇದು ನನ್ನ ಪ್ರಥಮ ಪ್ರಯತ್ನ. ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ಶನಿವಾರ ತನ್ನ ಆವರಣದಲ್ಲಿ ಪುಸ್ತಕ ಸಂತೆ ಏರ್ಪಡಿಸುತ್ತದೆ. ಅಲ್ಲಿ ಪರಿಷತ್ತಿನ ಪ್ರಕಟಣೆಗಳ ಜೊತೆಗೆ ಖ್ಯಾತ ಪ್ರದರ್ಶಕರ ಮಳಿಗೆಗಳು ಇರುತ್ತವೆ ಅಂತ ಕೇಳ್ಪಟ್ಟಿದ್ದೆ. ಆದರೆ ಹೋದ ಶನಿವಾರ ಅಲ್ಲಿ ಹೋದಾಗ ನಿರಾಶೆ ಕಾದಿತ್ತು. ಆಲ್ಲಿ ಕೆಲವೆ ಕೆಲವು ಮಳಿಗೆಗಳಿದ್ದವು. ಪುಸ್ತಕಗಳೂ ಸಹ ತುಂಬ ಇರಲಿಲ್ಲ. ಹೆಚ್ಚಾಗಿ ಅಡುಗೆ ಪುಸ್ತಕಗಳು, ದೇವರ ನಾಮದ ಪುಸ್ತಕಗಳೆ ಇದ್ದವು. ನಾನು ಅಲ್ಲಿ ಹೊದದ್ದು ಕಾರಂತರ "ಚಿಗುರಿದ ಕನಸು" ಕಾದಂಬರಿ…
ಲೇಖಕರು: ಶಿವ
ವಿಧ: ಚರ್ಚೆಯ ವಿಷಯ
November 22, 2005
ಕೊನೆಗೂ ಬಿಹಾರಕ್ಕೆ ಲಾಲುವಿನಿಂದ ಮುಕ್ತಿ ಸಿಕ್ಕಿದೆ.ಆದ್ರೆ ಬಿಹಾರಕ್ಕೆ ಒಳ್ಲೆಯ ಆಡಳಿತ ಸಿಗಬಹುದೆ? ಜೆಡಿ(ಯು)ವಿನಲ್ಲಿ ಈ ಸರ್ತಿ ಗೆದ್ದವರಲ್ಲಿ ಕಳೆದ ಭಾರಿ ಪಾಸ್ವಾನ್ ಪಾರ್ಟಿಯಿಂದ ಪಕ್ಷಾಂತರ ಮಾಡಿದ ಕೆಲವರು ಇದ್ದಾರೆ. ಅವ್ರು ಪ್ರತಿಫಲವನ್ನು ಕೇಳದೆ ಇರೋದಿಲ್ಲ. ಇನ್ನಾದ್ರು ನಮ್ಮ ಟ್ಯಾಕ್ಸ್ ಹಣ, ಬಿಹಾರಕ್ಕೆ ೬೦೦ ಕೋಟಿ ಪ್ಯಾಕೇಜ್ ಹೆಸರಲ್ಲಿ ಕೊಟ್ರೂ , ಸರಿಯಾಗಿ ವಿನಿಯೋಗ ಆಗಬಹುದಾ?
ಲೇಖಕರು: shankara
ವಿಧ: Basic page
November 22, 2005
ರಚನೆ: ದ. ರಾ. ಬೇಂದ್ರೆ ಬಂಗಾರ ನೀರ ಕಡಲಾಚೆಗೀಚೆಗಿದು ನೀಲ ನೀರ ತೀರ ಮಿಂಚು ಬಲೆದ ತೆರೆ ತೆರೆಗಳಾಗಿ ಅಲೆಯುವುದು ಪುತ್ತ ಪೂರ ಅದು ನಮ್ಮ ಊರು ಇದು ನಿಮ್ಮ ಊರು ತಮ್ಮ ತಮ್ಮ ಊರು ಧೀರ ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ ಹರಿತದ ಭಾವ ಬೆರೆತದ ಜೀವ ಅದರೊಳಗೆ ಒಳಗೆ ಒಳಗೆ ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್ಮ ನಿಮ್ಮ ಆತ್ಮಗಳಿಗೆ ಅಂಬಿಗನು ಬಂದ ನಂಬಿಗನು ಬಂದ ಬಂದತಾ ದಿವ್ಯ ಘಳಿಗೆ ಇದು ಉಪ್ಪು ನೀರ ಕಡಲಲ್ಲೊ ನಮ್ಮ…
ಲೇಖಕರು: shankara
ವಿಧ: Basic page
November 22, 2005
ರಚನೆ: ಕೆ.ಎಸ್. ನರಸಿಂಹಸ್ವಾಮಿ ಕವನ ಸಂಕಲನ: ಮೈಸೂರು ಮಲ್ಲಿಗೆ ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು |ಪ| ಗುಡಿಯ ಗೋಪುರಗಳಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು |೧| ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು |೨| ತಾಯ ಮೊಲೆಯಲ್ಲಿ ಕರು ತುಟಿ ಇಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು |೩| ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು |೪| ಒಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು |…
ಲೇಖಕರು: shankara
ವಿಧ: Basic page
November 22, 2005
ರಚನೆ: ಕೆ.ಎಸ್. ನರಸಿಂಹಸ್ವಾಮಿ ಕವನ ಸಂಕಲನ: ಮೈಸೂರು ಮಲ್ಲಿಗೆ ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ ಹಿಂದೆ ಮುಂದೆ ನೋಡದೆ, ಎದುರು ಮಾತನಾಡದೆ |ಪ| ಕೋಣೆಯೊಳಗೆ ಬಳೆಯ ಸದ್ದು, ನಗುವ ರಸ್ತೆ ಬಿದ್ದು ಬಿದ್ದು ಸುಮ್ಮನಿರಲು ಮಾವನವರು, ಒಳಗೆ ಅಕ್ಕ ಭಾವನರು ಎಂದು ತುಂಟ ಹುಡುಗನ ಬಟ್ಟಾ ಬಯಲಿಗೆಳೆವನು |೧| ಒಂದು ಹೆಣ್ಣಿಗೊಂದು ಗಂಡು, ಹೇಗೊ ಸೇರಿ ಹೊಂದಿಕೊಂಡು ಕಾಣದೊಂದು ಕನಸ ಕಂಡು, ಮಾತಿಗೊಲಿಯದಮೃತ ಉಂಡು ದುಃಖ ಹಗುರವೆನುತಿರೆ, ಪ್ರೇಮವೆನಲು…
ಲೇಖಕರು: shankara
ವಿಧ: Basic page
November 22, 2005
ರಚನೆ: ಕೆ.ಎಸ್. ನರಸಿಂಹಸ್ವಾಮಿ ಕವನ ಸಂಕಲನ: ಮೈಸೂರು ಮಲ್ಲಿಗೆ ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು ಚಂದ್ರಮುಖಿ ನೀನೆನಲು ತಪ್ಪೇನೆ |ಪ| ನಿನ್ನ ಸೌಜನ್ಯವೆ ದಾರಿ ನೆರಳಾಗಿರಲು ನಿತ್ಯ ಸುಖಿ ನೀನೆನಲು ಒಪ್ಪೇನೆ ನಿನ್ನ ನಗೆ ಮಲ್ಲಿಗೆಯ ಪರಿಮಳದ ಪಾತ್ರೆಯಲಿ ಚೆಲ್ಲಿ ಸೂಸುವ ಅಮೃತ ನೀನೇನೆ ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ ಸಿದ್ಧಿಸುವ ಧನ್ಯತೆಯು ನೀನೇನೆ |೧| ನಿನ್ನ ಕಿರುನಗೆಯಿಂದ, ನಗೆಯಿಂದ ನುಡಿಯಿಂದ ಎತ್ತರದ ಮನೆ ನನ್ನ ಬದುಕೆನೆ ಚಂದ್ರನಲಿ ಚಿತ್ರಿಸಿದ, ಚೆಲುವಿನೊಳಗುರಿಯಿಂದ…
ಲೇಖಕರು: shankara
ವಿಧ: Basic page
November 22, 2005
ರಚನೆ: ಕೆ.ಎಸ್. ನರಸಿಂಹಸ್ವಾಮಿ ಕವನ ಸಂಕಲನ: ಮೈಸೂರು ಮಲ್ಲಿಗೆ ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು |ಪ| ತಗ್ಗಿರುವ ಕೊರಳಿನ ಸುತ್ತ ಕರಿಮಣೆ ಒಂದೆ ಸಿಂಗಾರ ಕಾಣದ ಹೆರಳು ಬೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲ್ಲಿ ಹದಿನಾರು ವರುಶದ ನೆರಳು ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ ಹುಚ್ಚು ಹೊಳೆ ಮುಂಗಾರಿನುರುಳು ಬಂಗಾರವಿಲ್ಲದ ಬೆರಳು |೧| ಕಲ್ಲ ಹರಳನ್ನು ಹುಡುಕಿ ಎಲ್ಲಿಗೊ ಎಸೆವಾಗ ಝಲ್ಲೆನುವ ಬಳೆಯ ಸದ್ದು ಅತ್ತ ಯಾರೊ ಹೋದ ಇತ್ತ ಯಾರೊ ಬಂದ ಕಡೆಗೆಲ್ಲ ಕಣ್ಣು ಬಿದ್ದು…
ಲೇಖಕರು: ismail
ವಿಧ: Basic page
November 22, 2005
ಬೆಳಗಾವಿ ಮತ್ತು ಗಡಿಯಲ್ಲಿರುವ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಿರ್ಣಯವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಿತ್ತು. ಇದಕ್ಕೆ ಕರ್ನಾಟಕಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ.(ಈಗ ಕರ್ನಾಟಕ ಸರಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ರದ್ದು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿದೆ.) ಇತ್ತೀಚೆಗೆ ಬೆಳಗಾವಿ ನಗರ ಪಾಲಿಕೆಯ ಮೇಯರ್ ವಿಜಯ್ ಪಾಂಡುರಂಗ ಮೋರೆ ಬೆಂಗಳೂರಿಗೆ ಬಂದು ಶಾಸಕರ ಭವನದಲ್ಲಿ ಇಳಿದುಕೊಂಡಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು '…