ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: ಚರ್ಚೆಯ ವಿಷಯ
August 03, 2005
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲರೂ ಸಮಾನರು. ಎಲ್ಲರ ಜಾತಕಗಳಲ್ಲೂ (ಹುಟ್ಟಿದ ಸಮಯದಲ್ಲಿಯ ಗ್ರಹಗಳ ಸ್ಥಾನ ಮತ್ತು ಅವುಗಳ ಚಲನೆಯ ಬಗೆಗಿನ ಲೇಖನ) ೩೩೭ ಅಂಕಗಳು ಇರುತ್ತವೆ. ಇದನ್ನು ಮುಖ್ಯವಾಗಿ ೧೨ ವಿಷಯಗಳಾಗಿ ವಿಂಗಡಿಸಿದ್ದಾರೆ - ಆರೊಗ್ಯ, ಸಾಂಸಾರಿಕ ಜೀವನ, ಐಶ್ವರ್ಯ, ಸಾಮಾಜಿಕ ಸ್ಥಾನಮಾನ, ತಿಳುವಳಿಕೆ, ಆಯಸ್ಸು ಇತ್ಯಾದಿ. ಸರಿ ಸಮಾನವಾಗಿ ಒಂದೊಂದು ವಿಷಯ ಅಥವಾ ಮನೆಗಳಿಗೆ ೨೮ ಅಂಕಗಳು ಬರುವುವು. ೩೩೭ / ೧೨. ಯಾವುದಾದರೂ ಒಂದು ವಿಷಯದಲ್ಲಿ ಅಂಕಗಳು ಜಾಸ್ತಿ ಇದ್ರೆ ಇನ್ನೊಂದರಲ್ಲಿ ಅದು…
ಲೇಖಕರು: chitta
ವಿಧ: Basic page
August 03, 2005
ವಿಷಯವೇಕೆ ಕವನಕೆ ಮನದ ಭಾವ ರೂಪಕೆ ಹೆಪ್ಪುಗಟ್ಟಿ ಕೂತ ನೆನಪು ಚೆಲುವಿಗಿರುವ ಆ ಒನಪು ಕಾಣುತಿರುವ ಹಗಲುಗನಸು ಕಂಡ ಕನಸು ಆದ ನನಸು ಆಗದಿರಲು ಬಂದ ಮುನಿಸು ಪ್ರಕೃತಿಯ ಈ ಸೊಗಸು ಎಲ್ಲ ಕುಳಿತು ಎದೆಯಲಿ ಇಟ್ಟರೊಮ್ಮೆ ಕಚಗುಳಿ ಕೊಟ್ಟಂತೆಯೆ ಆಹ್ವಾನ ಬರೆಯಲೊಂದು ಕವನ
ಲೇಖಕರು: tvsrinivas41
ವಿಧ: Basic page
August 03, 2005
ಬಹಳ ದಿನಗಳ ಮೇಲೆ ಅಮ್ಮ ಹೆತ್ತಳು ಕಣ್ಮಣಿ ಸುತೆ ಕೊನೆಗಾಲದಿ ಆಸರೆಯಾಗಲು ಕರೆದಳು ಅವಳ ಆಶ್ರಿತೆ ಮೂಲ ನಕ್ಷತ್ರದ ಎರಡನೆ ಪಾದದ ಸಂಜಾತೆ ಕಣ್ಣು ತೆರೆಯುವ ಮೊದಲೇ ತಾಯ ಕಳೆದುಕೊಂಡ ಆಶ್ರಿತೆ ಪತ್ನಿ ವಿಯೋಗದ ದು:ಖ ಮರೆಯಲು ಪತಿಗೆ ಕುಡಿತದ ಮೊರೆ ತಂದೆ ತಾಯಿಯ ಪ್ರೀತಿ ಕಾಣದ ಮಗುವಿಗೆ ಜೀವನವೇ ಹೊರೆ ಯಾವ ಅಡೆ ತಡೆಯಿಲ್ಲದೆ ಬೆಳೆಯಿತು ಮಗು ಬೇಕಾಬಿಟ್ಟಿ ಸಮಾಜ ನೋಡುತಿಹದು ಅವಳ ಸ್ಥಿತಿ ತನ್ನ ಕೈ ಕಟ್ಟಿ ಆಗಾಯಿತು ನಮ್ಮ ಹೀರೋ ಸಮಾಜ ಸೇವಕನ ಎಂಟ್ರಿ ಮುಂದೆ ಗೊತ್ತಾಗುವುದು ಅವನೆಂತಹ ಕಂತ್ರಿ ಹೇಳಿದ…
ಲೇಖಕರು: tvsrinivas41
ವಿಧ: Basic page
August 03, 2005
ಬೇಲೂರಿನ ಮೂರ್ತಿ ನನಗಾಯಿತು ಸ್ಪೂರ್ತಿ ಕೆಲವರಿಗೆ ನಾಲಗೆಗೆ ಬಿದ್ದರೆ ಟಾನಿಕ್ಕು ಸ್ಪೂರ್ತಿ ಬರುವುದು ಅವರಿಗೆ ನಿಜಕ್ಕೂ ಹೆಳವ ನಾನು ಕಾಲು ಇದ್ದರೂ ಕುರುಡ ನಾನು ಕಣ್ಣು ಇದ್ದರೂ ನನ್ನ ನಡೆಸುವಾತನೇ ದೇವನು ನನಗೆ ದಾರಿ ತೋರಿಸುವನೆ ದೇವನು ತಂಪಾದ ಗಾಳಿಯಲಿ ತೇಲುತ್ತಿರುವೆ ಸಿಹಿಯಾದ ವಾಸನೆಯ ಆಘ್ರಾಣಿಸುತ್ತಿರುವೆ ಸೊಗಸಾದ ಸಂಗೀತವನು ಕೇಳುತ್ತಿರುವೆ ಸ್ಮಶಾನ ಮೌನವ ಆನಂದಿಸುತ್ತಿರುವೆ
ಲೇಖಕರು: pavanaja
ವಿಧ: Basic page
August 03, 2005
ಪ್ರತಿಭೆಗೆ ಪುರಸ್ಕಾರ ಇದ್ದಲ್ಲಿ ಬೆಳೆಯುವುದು ಸೃಜನಶೀಲತೆ ಪ್ರಭಾವಕ್ಕೆ ಪುರಸ್ಕಾರ ಇದ್ದಲ್ಲಿ ಬೆಳೆಯುವುದು ಸ್ವಜನಶೀಲತೆ
ಲೇಖಕರು: olnswamy
ವಿಧ: ಬ್ಲಾಗ್ ಬರಹ
August 03, 2005
ಕನ್ನಡದಲ್ಲಿ ಪದಗಳನ್ನು ಸೇರಿಸಿ ಹೊಸಪದಗಳನ್ನು ಸೃಷ್ಟಿಮಾಡಿಕೊಳ್ಳುತ್ತೇವೆ. ಈಗೀಗ ಇಂಥ ಸಾಮರ್ಥ್ಯ ಭಾಷೆಗೆ ಕಡಮೆಯಾಗುತ್ತಿದೆಯೋ ಎಂಬ ಅನುಮಾನ ಕೆಲವರಲ್ಲಿಯಾದರೂ ಮೂಡಿದೆ. ಈ ಕಾಲಮ್ಮಿನಲ್ಲಿ ಕನ್ನಡದಲ್ಲಿ ಬಳಕೆಯಲ್ಲಿದ್ದ, ಈಗಿನ ಬರವಣಿಗೆಯಲ್ಲಿ ಕಾಣದಾಗಿರುವ ಕೆಲವು ಪದಗಳನ್ನು ನಿಮ್ಮ ಗಮನಕ್ಕೆ ತರುವ, ಆ ಮೂಲಕ ಮತ್ತೆ ಚಾಲ್ತಿಗೆ ತರುವ ಪ್ರಯತ್ನ. ಬೇರೆ ಬೇರೆ ಸಂದರ್ಭದ ಬರವಣಿಗೆಯಲ್ಲಿ ಬಳಸಬಹುದಾದ ಇಂಥ ಪದಗಳನ್ನು ನೀವೂ ಸೂಚಿಸಿ. ಸದ್ಯಕ್ಕೆ ಕಣ್ಣು ನನ್ನ ಆಸಕ್ತಿಯ ಪದ. ಕಣ್ಣು ಎಂಬುದರೊಡನೆ ಸೇರಿ…
ಲೇಖಕರು: pavanaja
ವಿಧ: Basic page
August 03, 2005
ಇನ್ಫೋಸಿಸ್ ನಾರಾಯಣಮೂರ್ತಿಯವರಿಗೆ ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಅವರೊಂದಿಗೆ ಸಾರ್ವಜನಿಕರಿಂದ ಫೋನ್-ಇನ್ ಕಾರ್ಯಕ್ರಮವನ್ನು ನೇರ ಪ್ರಸಾರಗೊಳಿಸಿತ್ತು. ಆ ಸಂದರ್ಭದಲ್ಲಿ ನಾನು ಸಂದರ್ಶಕನಾಗಿ ಭಾಗವಹಿಸಿದ್ದೆ. ಆ ದಿನ ನಾನು ಕೇಳಿದ ಒಂದು ಪ್ರಶ್ನೆ ಹೀಗಿತ್ತು: “ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೆ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕು ಎಂದು ಬಹುಪಾಲು ಜನರು ತಿಳಿದುಕೊಂಡಿದ್ದಾರೆ ಇದು ನಿಜವೇ…
ಲೇಖಕರು: pavanaja
ವಿಧ: ಚರ್ಚೆಯ ವಿಷಯ
August 03, 2005
"ಎಲ್ಲಿ ತನಕ ಟೋಪಿ ಹಾಕಿಸಿಕೊಳ್ಳುವವರಿರುತ್ತಾರೊ ಅಲ್ಲಿ ತನಕ ಟೋಪಿ ಹಾಕುವವರಿರುತ್ತಾರೆ". ಮೋಸ ಹೋದವರು ಇತರರಿಗೆ ಎಚ್ಚರಿಸಲು, ಮೋಸ ಹೋದವರ ಕತೆ ಗೊತ್ತಿದ್ದವರಿಗೆ ಇತರರನ್ನು ಜಾಗರೂಕಗೊಳಿಸಲು, ವಿವಿಧ ಕಂಪೆನಿ ಮತ್ತು ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಪಡೆಯಲು, ಇತ್ಯಾದಿಗಳಿಗೆ ಒಂದು ಚರ್ಚಾವೇದಿಕೆ ಸಿದ್ಧಮಾಡಲಾಗಿದೆ. ಅದರ ತಾಣಸೂಚಿ (URL) - http://groups.msn.c…. ಇದರ ಬಗ್ಗೆ ಎಲ್ಲರಿಗೆ ತಿಳಿಸ ಮತ್ತು ನೀವೂ ಬಳಸಿ. ಸಿಗೋಣ, ಪವನಜ
ಲೇಖಕರು: olnswamy
ವಿಧ: Basic page
August 03, 2005
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ ಮಣ್ಣು ಮಾಯೆಯಂಬರು ಮಣ್ಣು ಮಾಯೆಯಲ್ಲ ಮನದ ಮುಂದಣ ಆಶೆಯೇ ಮಾಯೆ ಗುಹೇಶ್ವರ ಮಾಯೆಯ ಬಗ್ಗೆ ಬಹಳ ಜನ ಮಾತಾಡುತ್ತಾರೆ. ಇಲ್ಲಿ ಅಲ್ಲಮ ಮಾಯೆಯನ್ನು ವಿವರಿಸುವ ರೀತಿ ಬೇರೆಯಾಗಿದೆ. ಮಾಯೆ ಹೊರಗೆ ಎಲ್ಲೋ ಇಲ್ಲ. ಈ ಲೋಕವೂ ಮಾಯೆ ಅಲ್ಲ. ಹೊನ್ನು, ಹೆಣ್ಣು, ಮಣ್ಣುಗಳು ಮಾಯೆಯಲ್ಲ. ಮಾಯೆ ಎಂಬುದು ಹಾಗೆ ಇಲ್ಲವೇ ಇಲ್ಲ. ಮಾಯೆ ಎಂಬುದು ಇದ್ದರೆ ಅದು ಮನಸ್ಸಿನಲ್ಲಿ ಮೂಡುವ ಆಸೆಗಳಲ್ಲದೆ ಬೇರೆ ಏನೂ ಅಲ್ಲ. ಕೊಂಚ…
ಲೇಖಕರು: tvsrinivas41
ವಿಧ: Basic page
August 02, 2005
ತುಂಡ ಅಂತ ರವಿಯ ಮನೆಯಲ್ಲಿ ಎಲ್ಲರೂ ಅವನನ್ನು ಕರೆಯುತ್ತಿದ್ದರು. ಅದಕ್ಕೊಂದು ಹಿನ್ನೆಲೆ ಇದೆ. ಅವನು ಯಾವಾಗಲೂ ಬೌಲಿಂಗ್ ಮಾಡ್ತಾ ಇರ್ತಿದ್ದ. ಅಂಗಡಿಗೆ ಹೋಗಿ ಏನಾದರೂ ತೆಗೆದುಕೊಂಡು ಬಾ ಅಂತ ಅಂದ್ರೆ ಬೌಲಿಂಗ ಮಾಡಿಕೊಂಡೇ ಹೋಗ್ತಿದ್ದ. ಸ್ಕೂಲಿಗೆ ಹೋಗುವಾಗಲೂ ಹಾಗೇ. ನೀನು ದೊಡ್ಡವನಾದ್ಮೇಲೆ ಏನಾಗ್ತೀಯೋ ಅಂತ ಯಾರಾದ್ರೂ ಕೇಳಿದ್ರೆ - ಚಂದ್ರಶೇಖರ್ ಥರ ಬೌಲರ್ ಆಗ್ತೀನಿ ಅಂತಿದ್ದ. ಅದಕ್ಕೇ ಅವರಣ್ಣ ಇವನನ್ನು ರೇಗಿಸಲು ಚಂದ್ರುವಿನ ತುಂಡು ಅಂತ ಕರೆಯುತ್ತಿದ್ದ. ಹಾಗೇ ತುಂಡ ಅನ್ನೋ ಅಡ್ಡ…