ಎಲ್ಲ ಪುಟಗಳು

ಲೇಖಕರು: hpn
ವಿಧ: ಚರ್ಚೆಯ ವಿಷಯ
September 23, 2005
ಯುನಿಕೋಡ್ ಬೆಂಬಲವಿರುವ ಓದುಗರು (ಇದನ್ನೋದುತ್ತಿದ್ದೀರ ಎಂದ ಮೇಲೆ ಬೆಂಬಲ ಇರಲೇಬೇಕು) ಶ್ರೀ ಮದ್ಭಗವದ್ಗೀತೆಯನ್ನು ಕನ್ನಡ ಲಿಪಿಯಲ್ಲಿ [:http://bangla.name/citi/bhg/bhg-2-kan.htm|ಇಲ್ಲಿ ಓದಬಹುದು].
ಲೇಖಕರು: hpn
ವಿಧ: ಚರ್ಚೆಯ ವಿಷಯ
September 22, 2005
ಈ ತಿಂಗಳ ವಾರದ ಮೈಕ್ರೊಸಾಫ್ಟಿನ ಭಾಷಾ ಇಂಡಿಯ ಸುದ್ದಿ ಪತ್ರದಲ್ಲಿ 'ಸಂಪದ'ವನ್ನು 'ತಿಂಗಳ ವಾರದ ವೆಬ್ಸೈಟ್' ಆಗಿ ಫೀಚರ್ ಮಾಡಿದ್ದಾರೆ. :) ಓದಿ: [:http://www.bhashaindia.com/SOW/Site_Review.aspx?Id=116|link]
ಲೇಖಕರು: olnswamy
ವಿಧ: Basic page
September 22, 2005
ಎನ್ಕೋ ಸುಪ್ರಸಿದ್ಧ ಕತೆಗಾರ. ಅವನು ಪ್ರೀತಿಯ ಕತೆ ಹೇಳಿದಾಗ ಕೇಳುಗರ ಮನಸ್ಸಿನ ತುಂಬ ಪ್ರೀತಿಯ ಭಾವ ತುಂಬಿಕೊಳ್ಳುತ್ತಿತ್ತು. ಯುದ್ಧದ ಕತೆ ಹೇಳಿದಾಗ ಕೇಳುಗರು ತಾವೂ ಸೈನ್ಯಕ್ಕೆ ಸೇರಿ ಯುದ್ಧಮಾಡಬೇಕು ಎಂದು ಹಾತೊರೆಯುವಂತೆ ಆಗುತ್ತಿತ್ತು. ಒಂದು ದಿನ ಎನ್ಕೋ ಯಮಒಕ ತೆಷು ಎಂಬ ಸಾಮಾನ್ಯ ಮನುಷ್ಯನೊಬ್ಬನನ್ನು ಭೇಟಿಯಾದ. ತೆಷು ಅದಾಗಲೇ ತನ್ನ ಸಾಧನೆಯಲ್ಲಿ ಮುಂದುವರೆದಿದ್ದು ಸ್ವತಃ ಝೆನ್ ಗುರುವಾಗುವಷ್ಟು ಬೆಳೆದಿದ್ದ. “ನೀನು ನಮ್ಮ ನಾಡಿನಲ್ಲೇ ಪ್ರಸಿದ್ಧನಾದ ಕತೆಗಾರನೆಂದು ಕೇಳಿದ್ದೇನೆ,” ತೆಷು…
ಲೇಖಕರು: olnswamy
ವಿಧ: Basic page
September 22, 2005
ಗುರು ಸೆನ್ಗಿಯನ್ನು ಶ್ರೀಮಂತನೊಬ್ಬ ಕೇಳಿದ. “ಗುರುವೇ, ನಮ್ಮ ಮನೆತನದವರಿಗೆ ಒಳ್ಳೆಯದಾಗಲೆಂದು ಆಶೀರ್ವಾದದ ಮಾತುಗಳನ್ನು ಬರೆದುಕೊಡು. ಅದನ್ನು ನಮ್ಮ ವಂಶದವರೆಲ್ಲ ನಿನ್ನ ಹರಕೆಯೆಂದು ಜೋಪಾನವಾಗಿ ಕಾಪಾಡಿಕೊಳ್ಳುತ್ತೇವೆ” ಎಂದ. ದೊಡ್ಡ ಹಾಳೆಯೊಂದನ್ನು ತೆಗೆದುಕೊಂಡು “ಈ ವಂಶದವರ ತಂದೆ ಸಾಯಲಿ, ಮಗ ಸಾಯಲಿ, ಮೊಮ್ಮಗ ಸಾಯಲಿ” ಎಂದು ಬರೆದುಕೊಟ್ಟ ಸೆನ್ಗಿ. ಶ್ರೀಮಂತನಿಗೆ ಬಹಳ ಕೋಪ ಬಂದುಬಿಟ್ಟಿತು. “ಇದೇನು ಗುರುವೇ, ನಾನು ಆಶೀರ್ವಾದದ ಮಾತು ಕೇಳಿದರೆ ತಂದೆ, ಮಗ, ಮೊಮ್ಮಗ ಸಾಯಲಿ” ಎಂದು…
ಲೇಖಕರು: hpn
ವಿಧ: ಚರ್ಚೆಯ ವಿಷಯ
September 21, 2005
ಇಂದು ಏನೋ ಹುಡುಕುತ್ತಿರಲು [:http://www.makkalakavanagalu.esmartweb.com/index.html|ಈ ಪುಟ] ಕಣ್ಣಿಗೆ ಬಿತ್ತು. ಶ್ರೀನಿವಾಸ ಉಡುಪರ ಮಕ್ಕಳ ಕವನಗಳು ನಿಜಕ್ಕೂ ಬಹಳ ಚೆನ್ನಾಗಿವೆ. ಭೇಟಿ ಕೊಡಿ.
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
September 21, 2005
ಇದೊಂದು ವಿಚಿತ್ರವಾದರೂ ಸತ್ಯವಾದ ಸಂಗತಿ. ನನ್ನ ಅನುಭವ. ನಿತ್ಯವೂ ಲೋಕಲ್ ಟ್ರೈನ್‍ನಲ್ಲಿ ಚರ್ಚ್‍ಗೇಟ್ ತಲುಪಿದ ಬಳಿಕ ನನ್ನ ಕಛೇರಿ ಇರುವ ವರ್ಲ್ಡ್ ಟ್ರ್‍ಏಡ್ ಸೆಂಟರ್ ಗೆ ಹೋಗಲು ಬಸ್ ಹಿಡಿಯಬೇಕು. ಮೊದಲ ಬಸ್ ಇರೋದು ಬೆಳಗ್ಗೆಯ ೮.೧೫ಕ್ಕೆ. ಸಾಮಾನ್ಯವಾಗಿ ನಾನು ೮.೧೦ಕ್ಕೆ ಅಲ್ಲಿಯ ಕ್ಯೂನಲ್ಲಿ ನಿಲ್ಲುವೆ. ನಾನು ಹೋಗಿ ನಿಲ್ಲುವ ವೇಳೆಗೆ ಸರಿಯಾಗಿ ಒಂದು ನಾಯಿ ಎಲ್ಲಿಂದಲೋ ಬಂದು ನನ್ನ ಮುಂದೆ ಮಲಗಿಕೊಳ್ಳುವುದು. ನಾನು ಇಲ್ಲಿಯವರೆವಿಗೂ ಇದನ್ನು ಗಮನಿಸಿರಲಿಲ್ಲ. ಮೊನ್ನೆ ಒಂದು ದಿನ ಆ…
ಲೇಖಕರು: Rohit
ವಿಧ: ಬ್ಲಾಗ್ ಬರಹ
September 21, 2005
ತಂತ್ರಜ್ಞಾನ ಬೆಳೆದಂತೆ ಹೊಸ ವಸ್ತುಗಳು ನಿರ್ಮಾಣವಾಗುತ್ತಾ ಹೋಗುತ್ತಿವೆ. ಹಾಗೇ ಅವುಗಳಿಗೆ ಹೊಸ ಕನ್ನಡ ಪದಗಳನ್ನು ರೂಪಿಸಬೇಕಾದ ಗರಜೂ ಸಹ ಬೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಬರೆಯಬೇಕೆಂದರೆ ಈ ಅವಶ್ಯಕತೆಯ ಅಗಾಧತೆ ಮನವರಿಕೆಯಾಗುತ್ತದೆ. ಈ ಸಂದರ್ಭದಲ್ಲಿ ತೇಜಸ್ವಿಯವರು ಬರೆದ ಒಂದು ಲೇಖನ ನೆನಪಾಗುತ್ತದೆ. ಈ ವಿಚಾರದ ಕುರಿತಾದ ಅವರ ಅಭಿಪ್ರಾಯಗಳು ನನಗೆ ಬಹಳ ಇಷ್ಟವಾಗಿವೆ, ಹಾಗು ಅವುಗಳನ್ನು ನಾನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಇದರ ಬಗ್ಗೆ ನೆನ್ನೆ…
ಲೇಖಕರು: honnung
ವಿಧ: ಚರ್ಚೆಯ ವಿಷಯ
September 21, 2005
ಬೇರೆ ಯಾವುದೇ ತಂತ್ರಾಂಶ ಇದಕ್ಕೆ ಬೇಕಿಲ್ಲ. ಬರೀ ನಿಮ್ಮ browser ಸಾಕು. ಇದನ್ನು ಪ್ರಯತ್ನಿಸಿ. [:http://www.google.com/ig|http://www.google.com/ig] -> ನಿಮ್ಮ gmail account ನಿಂದ login ಆಗಿ -> ನಂತರ Add content ಕ್ಲಿಕ್ ಮಾಡಿ -> Create a section ಗೆ ಹೋಗಿ -> RSS feed ನ URL ಹಾಕಿ ಉದಾಹರಣೆಗೆ [:http://sampada.net/node/feed|http://sampada.net/node/feed] ಒಂದೇ ತೊಂದರೆ: ನೀವು gmail account ಹೊಂದಿರಬೇಕು. ಇಂಥವುದೇ ಅವಕಾಶ…
ಲೇಖಕರು: pavanaja
ವಿಧ: ಬ್ಲಾಗ್ ಬರಹ
September 21, 2005
ಗೂಗಲ್ ಅರ್ಥ್ ಬಗ್ಗೆ ನನ್ನ ಲೇಖನ ಎರಡು ವಾರಗಳ ಹಿಂದಿನ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸಂಪದ ಓದುಗರಲ್ಲಿ ಹಲವರು ಅದನ್ನು ಓದಿದ್ದೀರಾ ಮತ್ತು ಮೆಚ್ಚಿಕೊಂಡಿದ್ದೀರಾ. ಈಗ ನಾನು ಹೇಳ ಹೊರಟಿರುವುದು ಆ ಲೇಖನದ ಬಗ್ಗೆ ಅಲ್ಲ. ಸಾಮಾನ್ಯವಾಗಿ ಕನ್ನಡ ಪತ್ರಿಕೆಗಳು (ಕನ್ನಡಿಗರು ಕೂಡ) ಹಿಂಬಾಲಕರಾಗಿರುವುದೇ ಹೆಚ್ಚು. ವಿಜ್ಞಾನ ತಂತ್ರಜ್ಞಾನದ ಲೇಖನಗಳ ವಿಷಯದಲ್ಲಂತೂ ಇದು ಇನ್ನೂ ಹೆಚ್ಚು. ಅದು ಹೇಗೆಂದರೆ ಒಂದು ಹೊಸ ವಿಷಯದ ಬಗ್ಗೆ ಇಂಗ್ಲೀಶಿನ ಎಲ್ಲ ಪತ್ರಿಕೆಗಳಲ್ಲಿ ಲೇಖನ ಬಂದ ನಂತರವೇ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
September 21, 2005
ಇವು ಬೇರೆ ಬೇರೆ ರೂಪದಲ್ಲಿ ಕಣ್ಣಿಗೆ, ಕಿವಿಗೆ ಬಿದ್ದ ತಾತ್ವಿಕ ತರಲೆ ಪ್ರಶ್ನೆಗಳು. ಬೇಕಿದ್ದರೆ ವಿಸ್ತಾರವಾಗಿ ಚರ್ಚಿಸಬಹುದು. ೧. ಈ ಜಗವೇ ನಾಟಕರಂಗ: ಹಾಗಾದರೆ ಪ್ರೇಕ್ಷಕರು ಎಲ್ಲಿರುತ್ತಾರೆ? ೨. ಪ್ರೀತಿ ಕುರುಡು: ಹಾಗಾದರೆ ಮೊದಲ ನೋಟದಲ್ಲೆ ಪ್ರೀತಿ ಹುಟ್ಟಿತು ಅನ್ನುವುದಕ್ಕೆ ಅರ್ಥವೇನು? ೩. ನಾವು ಇತರರಿಗೆ ಸಹಾಯಮಾಡಲೆಂದೇ ಹುಟ್ಟಿದ್ದೇವೆ: ಹಾಗಾದರೆ ಇತರರು ಯಾಕೆ ಇದ್ದಾರೆ? ೪. ನಮ್ಮ ಮೊಳಕಾಲು ಈಗಿರುವಂತಲ್ಲದೆ ಮುಂದಕ್ಕೆ ಮಡಿಸಿಕೊಳ್ಳುವಂತಿದ್ದರೆ ಕುರ್ಚಿಗಳ ಆಕಾರ ಹೇಗಿರುತ್ತಿತ್ತು? ೫…