ಎಲ್ಲ ಪುಟಗಳು

ಲೇಖಕರು: koumodiki
ವಿಧ: ಚರ್ಚೆಯ ವಿಷಯ
October 10, 2005
ಮೊನ್ನೆ ನಡೆದ ಸೂರ್ಯಗ್ರಹಣ ನನ್ನಲಿ ರಾಹು ಮತ್ತು ಕೇತುಗಳ ಬಗ್ಗೆ ಕುತೂಹಲ ಮೂಡಿಸಿತು. ರಾಹು ಮತ್ತು ಕೇತುಗಳೆಂದರೇನು? ಅವುಗಳು ಎಲ್ಲಿ ಇರುತ್ತವೆ? ಈ ಗ್ರಹಗಳು ಏಕೆ ಪ್ರಾಮುಖ್ಯತೆ ಪಡೆದವು? ಈ ಪ್ರಶ್ನೆಗಳಿಗೆ ನನಗೆ [:http://www.sanskrit.org/Astronomy/Rahu.html|ಈ ವೆಬ್-ಪುಟ] ಉತ್ತರ ಕೊಟ್ಟಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಲೇಖಕರು: prakashaka
ವಿಧ: ಚರ್ಚೆಯ ವಿಷಯ
October 10, 2005
ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ 'ತುಳು' ಭಾಷೆ ಈಗ ವಿಶ್ವದೆಲ್ಲೆಡೆ ಪಸರಿಸಿರುವ ತುಳುವರಿಂದಾಗಿ ಮಾನ್ಯತೆ ಪಡೆದಿದೆ. ಕರಾವಳಿಯಲ್ಲಿರುವ ಸಾಮಾನ್ಯ ಎಲ್ಲಾ ಪತ್ರಿಕೆಗಳಲ್ಲೂ ತುಳು ವಿಭಾಗವಿದೆ.. ಹಾಗೂ ನಾನು ನೋಡಿದಂತೆ.. ಮುಂಬಯಿಯ ಜನಪ್ರಿಯ ಪತ್ರಿಕೆ 'ಕರ್ನಾಟಕ ಮಲ್ಲ' ದಲ್ಲಿಯೂ ತುಳುವಿಗೆ ವಿಷೇಶ ಸ್ಥಾನವಿದೆ. ನನ್ನ ಪ್ರಶ್ನೆಯೇನೆಂದರೆ.. ಒಂದು ವೇಳೆ ತುಳು ಬರಹಗಾರರಿದ್ದಲ್ಲಿ.. ಅವರಿಗಾಗಿ ಸಂಪದದಲ್ಲಿ ಜಾಗವಿದೆಯೇ? ಸಂಪದ ಓದುಗರು ಇದನ್ನ ಸ್ವೀಕರಿಸುವಿರಾ? ತುಳುವಿಗೆ 'ಮಲಯಾಳ' ಸ್ವರೂಪದ…
ಲೇಖಕರು: tvsrinivas41
ವಿಧ: Basic page
October 10, 2005
ನೋಡಬನ್ನಿ ಅಣ್ಣೋರೇ ಅಕ್ಕೋರೇ ಎಲ್ಲೂ ನೋಡಲಾಗದ ನೋಡಿರದ ಕೈಲಾಸ ವೈಕುಂಠ ದೇವ ಲೋಕ ಮೂರು ಲೋಕಗಳನ್ನೆಲಾ ಒಂದೇ ಕಡೆ ಒಮ್ಮೆಲೇ ನೋಡುವ ಸೌಭಾಗ್ಯ ನಿಮ್ಮದಾಗಲಿ ಬನ್ನಿ ನಮ್ಮ ಕೈಲಾಸಪಾಳ್ಯಕ್ಕೆ ಇದಿರುವುದು ನನ್ನೂರ ಹೃದಯದಲಿ ಎಲ್ಲ ಖಾಸಗೀ ಬಸ್ಸುಗಳ ಸೌಲಭ್ಯದ ತಾಣ ಮೂಗಿರದವರಿಗೂ ಮೂಗು ಮುಚ್ಚಿಸುವ ದುರ್ಗಂಧದ ನಾಡು ಸೊಳ್ಳೆ ಹಂದಿ ನಾಯಿ ಕತ್ತೆ ಕೋತಿಗಳ ನೆಲೆವೀಡು ಮೊದಲಿಗೇ ನಿಮ್ಮ ಮೂಗಿಗೆ ಬಡಿವುದು ಘೌಸಿಯಾ ಹೊಟೆಲ್ಲಿನ ಅಮಲೇರಿಸುವ ವಾಸನೆ ಪ್ರದೀಪ ಸಿನೆಮಾದಲ್ಲಿನ ಅಶ್ಲೀಲ ಭಿತ್ತಿಪತ್ರ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
October 08, 2005
ಹಾಯ್ಕು ಜಪಾನಿನ ಸಾಹಿತ್ಯದ ಒಂದು ವಿಶಿಷ್ಟ ಕವಿತಾ ರೂಪ. ಕೇವಲ ಹದಿನಾರು ಸಿಲಬಲ್ ಅಥವ ಅಕ್ಷರಗಳ ಜೋಡಣೆಯಲ್ಲಿ ಒಂದು ಮನೋಭಾವ-ಚಿತ್ರದ ನಿರೂಪಣೆ ಮಾಡುತ್ತವೆ ಹಾಯ್ಕುಗಳು. ಸಂಸ್ಕೃತದ ಅನುಷ್ಟುಭ್ ಎಂಬ ಒಂದು ಸಾಲಿಗೆ ಹದಿನಾರು ಅಕ್ಷರಗಳ ಛಂದಸ್ಸಿನಂತೆ ಇದು. ಆದರೆ ಸಂಸ್ಕೃತದ ಈ ಪ್ರಸಿದ್ಧ ಶ್ಲೋಕದಲ್ಲಿ ಹದಿನಾರು ಅಕ್ಷರಗಳ ಎರಡು ಸಾಲು ಇರುತ್ತವೆ, ಹಾಯ್ಕುಗಳಲ್ಲಿ ಒಟ್ಟಾಗಿ ಇರುವುದೇ ಹದಿನಾರು ಅಕ್ಷರ. ಅದನ್ನು ಅದೇ ರೂಪದಲ್ಲಿ ಕನ್ನಡಕ್ಕೆ, ಇಂಗ್ಲಿಷಿಗೂ ತರುವುದು ಕಷ್ಟ. ಸಾಧ್ಯವಾದಷ್ಟೂ ಮಿತವಾಗಿ…
ಲೇಖಕರು: olnswamy
ವಿಧ: Basic page
October 08, 2005
ನನ್ನ ನೋಟ ಸಂಜೆ ಬಿಸಿಲು ಬಿದ್ದ ದೂರ ಶಿಖರವನ್ನು ಸ್ಪರ್ಶಿಸಿದೆ. ಈಗಿನ್ನೂ ಹೆಜ್ಜೆಯಿಟ್ಟ ಹಾದಿಯ ತುದಿಯ ತಲುಪಿದೆ. ನಾವು ಹಿಡಿಯಲಾಗದುದು ನಮ್ಮ ಹಿಡಿಯುವುದು ಹೀಗೆಯೇ. ಶಿಖರದ ಒಳಬೆಳಕು ಒಂದಿದೆ. ನಾವಿನ್ನೂ ಅಲ್ಲಿಗೆ ತಲುಪದಿದ್ದರೂ ದೂರದಿಂದಲೇ ನಮ್ಮೊಳಗೆ ಚೈತನ್ಯವ ತುಂಬುವುದದು ನಾವು ಅರಿಯದಿದ್ದರೂ ನಮ್ಮ ಬದಲಾಯಿಸುವುದು ಆಗಲೇ “ಏನೋ” ಆಗಿಬಿಟ್ಟಿರುವೆವು. ನಮ್ಮೊಳಗಿನ ಅಲೆಯ ತನ್ನತ್ತ ಸೆಳೆವ ಸೂಚನೆ... ನಮಗೆ ತಿಳಿವುದು ಮುಖದ ಮೇಲೆ ಸುಳಿವ ತೆಳು ಗಾಳಿ ಮಾತ್ರ. ರಿಲಕ್ ನ ಇನ್ನೊಂದು ಕವಿತೆ.…
ಲೇಖಕರು: olnswamy
ವಿಧ: Basic page
October 07, 2005
ಪ್ರೀತಿಯ ನಾಡಿನ ಭೂಪಟ ನಮಗೆ ಚನ್ನಾಗಿಯೇ ಗೊತ್ತಿದೆ ಅಲ್ಲಿರುವ ದೇವಾಲಯ, ಅದರ ಬಳಿಯ ಸ್ಮಶಾನ ಚನ್ನಾಗಿಯೇ ಗೊತ್ತಿದೆ ಸ್ಮಶಾನದಲ್ಲಿರುವ ಪ್ರೇಮಿಗಳ ಹೆಸರು ಹೊತ್ತ ಕಲ್ಲು ಅಗಾಧ ನಿಶ್ಶಬ್ದದ ಕಣಿವೆಯಲ್ಲಿ ಬಿದ್ದು ಹೆಸರಿಲ್ಲವಾದವರು ಇವೆಲ್ಲ ಚನ್ನಾಗಿಯೇ ಗೊತ್ತಿದೆ ಗೊತ್ತಿದೆ. ಆದರೂ, ನಿನೂ ನಾನೂ, ಅವಕಾಶವಾದಾಗಲೆಲ್ಲ ಆ ಪುರಾತನ ಮರಗಳ ನೆರಳಲ್ಲಿ ಅಡ್ಡಾಡುವುದು ಅಲ್ಲೆ ಅರಳಿದ ಹೂಗಳ ನಡುವೆ, ಹಸಿರು ಹುಲ್ಲಿನ ಮೇಲೆ ಮಲಗಿ ಮೇಲೆ ಆಕಾಶವನ್ನು ಮುಖಾಮುಖಿ ದಿಟ್ಟಿಸುವುದು ಬಿಡಲಾರೆವು. ರೇನರ್ ಮಾರಿಯಾ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
October 06, 2005
ಸೆಪ್ಟೆಂಬರ್ ೨೭, ೨೦೦೫. ಚಿತ್ರದುರ್ಗದ ಸರ್ಕಾರೀ ಕಲಾ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ. ಪುಸ್ತಕಪ್ರಾಧಿಕಾರ ಏರ್ಪಡಿಸಿದ್ದ ವಾಚನಾಭಿರುಚಿ ಶಿಬಿರ. ಭಾಗವಹಿಸಿದ್ದವರು ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಬಂದಿದ್ದ ಸುಮಾರು ನೂರು ಮಂದಿ ವಿದ್ಯಾರ್ಥಿಗಳು. ನಾನು ಆ ಶಿಬಿರದ ನಿರ್ದೇಶಕನಾಗಿ ಹೋಗಿದ್ದೆ. ಹತ್ತು ಗಂಟೆಗೆ ಕಾರ್ಯಕ್ರಮ ಆರಂಭವಾಯಿತು. ಪ್ರಾರ್ಥನೆ ಇತ್ಯಾದಿ. ಸುಮ್ಮನೆ ಜೇಬು ಮುಟ್ಟಿಕೊಂಡೆ. ಮೊಬೈಲು ಇರಲಿಲ್ಲ. ತಟ್ಟನೆ ಹೊಳೆಯಿತು. ಜುಬ್ಬಾದ ಸೈಡು ಜೇಬಿನಲ್ಲಿಟ್ಟುಕೊಂಡಿದ್ದ…
ಲೇಖಕರು: Gurudatta N S
ವಿಧ: Basic page
October 06, 2005
ಚೈತ್ರ ಬಂದಿದೆ.. ಚಿತ್ತಾರ ಬರೆದಿದೆ.. ಆಹಾ..ಕಲಾಕಾರನೆಂದರೆ ಇವನೇ.... ಮಹಾಕಲಾವಿದ...ಮಹಾ ಕೋವಿದ... ಕ್ಯಾನವಾಸೋ ಎಲ್ಲೆ ಇಲ್ಲದಷ್ಟು.. ಹರವು, ಎತ್ತರ ಎಲ್ಲಾ ಅಕ್ಷಿ ಕಕ್ಷೆಯಷ್ತು.. ಬ್ರಶ್ ಬಳಸಿದನೋ, ಸ್ಪ್ರೇ ಮಾಡಿದನೋ, ನೈಫ಼್ ನಲ್ಲೇ ಹಚ್ಚಿದನೋ,, ನಾನರಿಯೇ.. ಅದೇನು ಹೊಸತು.. ಅದೇನು ಹೊಳಪು.. ನಳನಳಿಪ ರಂಗಲಿ ಚಿತ್ತಾರಕೆ ರಂಗು ಬಳಿದಿದೆ... ಚೈತ್ರನಿಗೆ ಹಸಿರೇ ಮೆಚ್ಚು ನೋಡುಗನಿಗೆ ಮತ್ತಿನ ಹುಚ್ಚು ಕೆಂಪು, ಹಳದಿ, ನೀಲಿ, ನೇರಳೆ, ಕೇಸರಿ ಎಲ್ಲಾ ಹೂವಾಗಿ ಅರಳಿದೆ. ಕಲ್ಲು ಮನದಲ್ಲೂ…
ಲೇಖಕರು: pavanaja
ವಿಧ: ಬ್ಲಾಗ್ ಬರಹ
October 06, 2005
ಮೊನ್ನೆ ತಾನೆ ಮುಂಬಯಿಗೆ ಭೇಟಿ ನೀಡಿದ್ದೆ. ವಿಮಾನ ನಿಲ್ದಾಣದ ಸಮೀಪ ಇರುವ ಪಂಚತಾರಾ ಹೋಟೆಲಿನ ಎದುರುಗಡೆಯ ರಸ್ತೆಯಲ್ಲಿ ಒಂದು ಟ್ಯಾಕ್ಸಿ ಹಿಡಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ಗೆ ಹೋಗಬೇಕಿತ್ತು. ಚಾಲಕ, ಬಹುಶಃ ಪಂಚತಾರಾ ಹೋಟೆಲಿನ ಎದುರುಗಡೆಯಿಂದ ಟ್ಯಾಕ್ಸಿ ಹಿಡಿದುದಕ್ಕೆ ಇರಬೇಕು, “ನೂರು ರೂಪಾಯಿ ಆಗುತ್ತದೆ” ಎಂದ. ನಾನು “ಮೀಟರು ಪ್ರಕಾರ ಬರುವುದಿದ್ದರೆ ಮಾತ್ರ ಬಾ. ಇಲ್ಲದಿದ್ದರೆ ಬೇರೆ ಟ್ಯಾಕ್ಸಿ ಹಿಡಿಯುತ್ತೇನೆ” ಎಂದು ಹೇಳಿ ಟ್ಯಾಕ್ಸಿಯಿಂದ ಇಳಿಯಲು ಅನುವಾದೆ. ಆತ ಕೂಡಲೆ ವರಸೆ…
ಲೇಖಕರು: Gurudatta N S
ವಿಧ: Basic page
October 05, 2005
ಕುಬೇರಪ್ಪ ಕುಬೇರಪ್ಪಾ... ಲಕ್ಷ್ಮೀ ಪೂಜೆ ಮಾಡ್ದಾ..? ಮಾಡೇ ಇರ್ತಿಯಾ ಬಿಡು ದೇವರ ಗೂಡಲ್ಲಿ ಐವತ್ತೋ, ನೂರೋ ರೂಪಾಯಿ ಇಟ್ಟು.... ಇಲ್ಲಾ ರಾಯ್ರೇ, ಲಕ್ಷಾಂತರ ರೂಪಾಯಿಗೆ ಪೂಜೆ ಮಾಡ್ದೆ...!! ಹಾ ಹಾ, ಅದು ಹ್ಯಾಗೇ? ತುಂಬಾ ಸಿಂಪಲ್. ಗಲ್ಲಿ ಗಲ್ಲಿಲಿ ಇರೋ ಎ ಟಿ ಎಮ್ ಸೆಂಟರ್ ಗೆಲ್ಲ ಹೋಗಿ ಅರಿಸಿನ-ಕುಂಕುಮಾ ಪೂಜೆ ಮಾಡ್ಕೊಂಡು ಬಂದೆ!!! ನೀವೆಲ್ಲ ವರ್ಚ್ಯುಲ್ ಲಕ್ಷ್ಮೀ ಪೂಜೆ ಮಾಡಿದರೇ... ನಾನು ಅಕ್ಚ್ಯುಲ್ ಲಕ್ಷ್ಮೀ ಪೂಜೆ ಮಾಡಿದೇ...!!