ಎಲ್ಲ ಪುಟಗಳು

ಲೇಖಕರು: Gurudatta N S
ವಿಧ: Basic page
September 19, 2005
ಅತ್ತ ವ್ಯಾಟಿಕನ್ ಸುದ್ದಿ! ಇತ್ತ ವ್ಯಾಟ್ ಸುದ್ದಿ!! ಈ ನಡುವೆ ಅಲ್ಲಲ್ಲಿ ನೆಲ ನಡುಕ, ಜಲ ಪ್ರಳಯ! ನೆಲವೂ ಸುರಕ್ಷಿತವಲ್ಲ! ಜಲವೂ ಸಲಹುದಿಲ್ಲ!! ದೇವನೊಬ್ಬನಿದ್ದಾನೆಂದರೆ ಆತನ ಧೂತರೂ ನಮ್ಮನ್ನು ನಡುಗಡ್ಡೆಯಲಿ ನಿಲ್ಲಿಸಿ ದೈವಾಧೀನರಾದರು ಅಲ್ಲೆಲ್ಲ 'ಅಂತಿಮ ಯಾತ್ರೆ....' ಇಲ್ಲಿ ಅಶಾಂತಿಯ ಮಧ್ಯೆ 'ಬಸ್' ನ 'ಶಾಂತಿಯ ಯಾತ್ರೆ..' ಈ ಮಧ್ಯೆ ಅಂದೆಂದೋ ಕೈಗೊಂಡ 'ದಂಡೀಯಾತ್ರೆ' ಯ ಮರು ಆಚರಣೆ! ಇದೆಲ್ಲದರ ಗೊಡವೆ ಬೇಡ ನಾವು ನಾವಾಗಿರೋಣಾ ಎಂದರೆ... ಈ 'ದೇಹ' ದ ತುಂಬಾ ನೋವು... ನೋವಿನ ಆಗರ.…
ಲೇಖಕರು: Gurudatta N S
ವಿಧ: Basic page
September 19, 2005
ಡೀ.. ಡೀ...ಡಿಚ್ಚಿ... ಡೀ.. ಡೀ...ಡಿಚ್ಚಿ... ಎಂದು ಡಿಚ್ಚಿ ಹೊಡಿಯುತಿದ್ದ... 'ನೋ ಪಾರ್ಕಿಂಗ್' ಎಂಬ ಫಲಕದ ಕೆಳಗೇ ಪಾರ್ಕ್ ಮಾಡಿದ್ದ ಕಾರಿನ ಕಿಟಕಿ ಗಾಜಿಗೆ. ಆಡಲು, ಹಾಡಲು, ಆಡಾಡಿ....ಉಂಡು ಮಲಗಲು ದಿಕ್ಕು ದಿಸೆ ಇಲ್ಲದ, ನನ್ನವರು ಎಂಬುವರಿಲ್ಲದ ಚಿಣ್ಣಗೆ ಡಿಚ್ಚಿ ಹೊಡೆಯಲು ಯಾರು ಸಿಕ್ಕಾರು? ಅನಾಥರಿಗೆ ಅನಾಥರೇ ದಿಕ್ಕು ಆದರೆ ಇವಗೆ ಇವನ ಪ್ರತಿರೂಪವೇ ದಿಕ್ಕು. -ಸಂಕೇತ್ ಗುರುದತ್ತ
ಲೇಖಕರು: olnswamy
ವಿಧ: Basic page
September 19, 2005
ಗುರು ಬೆನ್ಕಿಯ ಬಳಿ ಶಿಷ್ಯನೊಬ್ಬ ಬಂದು ಗೋಳಾಡಿಕೊಂಡ. “ಗುರುವೇ, ನನಗೆ ತಡೆಯಲಾರದಷ್ಟು ಕೋಪ ಬಂದುಬಿಡುತ್ತದೆ. ಏನು ಮಾಡಲಿ? ಕೋಪವನ್ನು ಹೇಗೆ ಕಳೆದುಕೊಳ್ಳಲಿ?” “ಬಹಳ ವಿಚಿತ್ರವಪ್ಪಾ ಇದು. ಎಲ್ಲಿ, ನಿನ್ನ ಕೋಪವನ್ನು ತೋರಿಸು, ನೋಡೋಣ” ಎಂದ ಗುರು. “ಹೇಗೆ ಸಾಧ್ಯ? ಈಗ ಕೋಪವನ್ನು ತೋರಿಸಲಾರೆ” ಎಂದ ಶಿಷ್ಯ. “ಹಾಗಾದರೆ ಯಾವಾಗ ತೋರಿಸಬಲ್ಲೆ?” ಎಂದು ಕೇಳಿದ ಗುರು. “ಇದ್ದಕ್ಕಿದ್ದಂತೆ, ಯಾವಾಗಲಾದರೂ ತುಂಬ ಕೋಪ ಬಂದುಬಿಡುತ್ತದೆ” ಎಂದ ಶಿಷ್ಯ. “ಹಾಗಿದ್ದರೆ ಕೋಪ ನಿನ್ನ ಸ್ವಭಾವದ್ದಲ್ಲ. ನಿನ್ನ…
ಲೇಖಕರು: olnswamy
ವಿಧ: Basic page
September 19, 2005
ಚೀನಾದ ಝೆನ್ ಗುರು ಸೋಝನ್‌ನನ್ನು ಒಮ್ಮೆ ಶಿಷ್ಯನೊಬ್ಬ ಹೀಗೆ ಕೇಳಿದ: “ಗುರುವೇ, ಈ ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದದ್ದು ಯಾವುದು?” “ಸತ್ತು ಹೋದ ಬೆಕ್ಕಿನ ತಲೆ” ಎಂದು ಉತ್ತರಿಸಿದ ಗುರು. “ಸತ್ತು ಹೋದ ಬೆಕ್ಕಿನ ತಲೆ ಅದು ಹೇಗೆ ಅಮೂಲ್ಯವಾಗುತ್ತದೆ?” ಎಂದು ಕೇಳಿದ ಶಿಷ್ಯ. “ಅದರ ಬೆಲೆಯನ್ನು ಇಷ್ಟೇ ಎಂದು ಯಾರೂ ಹೇಳಲಾರರು, ಅದಕ್ಕೇ” ಎಂದ ಗುರು. [ಕುವೆಂಪು ಅವರು ಹೇಳಿದ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ ಎಂಬ ಮಾತು ನೆನಪಿಗೆ ಬರುತ್ತಿದೆ. “ಬೆಲೆ” ಎಂಬುದು, ಮೌಲ್ಯ ಎಂಬುದು ನಮ್ಮ…
ಲೇಖಕರು: olnswamy
ವಿಧ: Basic page
September 18, 2005
ಮುಲ್ಲಾ ನಸ್ರುದ್ದೀನ್ ಒಬ್ಬ ಸೂಫಿ ದಾರ್ಶನಿಕ. ಸೂಫಿ ಎಂಬುದು ಇಸ್ಲಾಮ್ ಅನುಭಾವಿಗಳ ಒಂದು ಪಂಥ. ಯಾಂತ್ರಿಕವಾದ ಮತನಿಷ್ಠೆಗಿಂತ, ಒಣ ತಾತ್ವಿಕ ಚರ್ಚೆಗಳಿಗಿಂತ, ನೇರವಾಗಿ ದೈವಿಕ ಅನುಭವವನ್ನು ಪಡೆಯುವುದು ಸೂಕ್ತ ಎಂದು ನಂಬಿದ್ದವರು ಸೂಫಿಗಳು. ಕನ್ನಡದ ಶರಣರು, ದಾಸೆರು, ಸೂಫಿಗಳು ಒಂದೇ ಗೂಡಿನ ಹಕ್ಕಿಗಳು. ಸೂಫೀಸ್ ಆಫ್ ಬಿಜಾಪುರ್ ಎಂಬ, ಪೆಂಗ್ವಿನ್ ಪ್ರಕಾಶನದ ಪುಸ್ತಕವು ಕನ್ನಡದ ಸಂಸ್ಕೃತಿಗೂ ಸೂಫೀ ಪರಂಪರೆಗೂ ಇರುವ ಸಂಬಂಧಗಳನ್ನು ವಿವರಿಸುತ್ತದೆ. ಮುಲ್ಲಾ ನಸ್ರುದ್ದೀನ್ ೧೩ನೆಯ…
ಲೇಖಕರು: metikurke
ವಿಧ: Basic page
September 18, 2005
ಚೈತ್ರದಲ್ಲಿ ಚಿಗುರಿದ್ದ ಬಯಕೆ ವೈಶಾಖದ ಬಿಸಿಲಿಗೆ ಬಾಡಿತ್ತು ಜ್ಯೇಷ್ಟ ಆಷಾಢದ ಬಿರುಗಾಳಿಗೆ ಬೇರುಬಿಳಿಲುಗಳೆಲ್ಲ ಹಾರಿ ಹೋಗಿತ್ತು ಶ್ರಾವಣದ ಮೋಡದಲಿ ಬಿದ್ದ ಮಳೆಯಲ್ಲಿ ಚಿಗುರುವಾಸೆ ಮತ್ತೆ ಮೂಡಿತ್ತು ಭಾದ್ರಪದ ಆಶ್ವಯುಜ ಕಾರ್ತೀಕದ ಹನಿಹನಿಯು ಬಯಕೆಗೆ ಗರಿ ಮೂಡಿಸಿತ್ತು ಟಿಸಿಲೊಡೆದು ಗರಿಗೆದರಿ ನೆಲದಲ್ಲಿ ನಿಂತಾಗ ಮಾರ್ಗಶಿರ ಮತ್ತೆ ಪುಷ್ಯ ಕಳೆದಿತ್ತು ಮಾಘ ಫಾಲ್ಗುಣದ ಚಳಿಯಲ್ಲಿ ಮುದುಡಿ ಎಲೆಯುದುರಿ ಚೈತ್ರದಲ್ಲಿ ಮತ್ತೆ ಚಿಗುರಿತ್ತು ಆದರೇನು ಮತ್ತೆ ಬಂದ ವೈಶಾಖದ ಬಿಸಿಲು…
ಲೇಖಕರು: tvsrinivas41
ವಿಧ: Basic page
September 18, 2005
ದಾರಿ ದೀಪಗಳು ಬದುಕಿನ ದಾರಿಯಲಿ ಬಂದು ಹೋಗುವ ದಾರಿ ದೀಪಗಳೆಷ್ಟೋ ಅರಿವಿಗೆ ಬಂದು ಲೆಕ್ಕ ಹಾಕಿರುವುದು ಅಷ್ಟೋ ಇಷ್ಟೋ ಸ್ವಲ್ಪ ಕಾಲ ಉರಿವ ಹೆಚ್ಚು ಪ್ರಕಾಶಮಾನವಾದ ದೀಪ ಕೆಲವು ದೀರ್ಘ ಕಾಲ ಬೆಳಗುವ ಕಡಿಮೆ ಬೆಳಕಿನವು ಹಲವಾರು ಪುಟ್ಟ ದೀಪಕೆ ಬತ್ತಿ ಹೊಸೆದು ತುಪ್ಪ ಹಾಕಿ ಜಗಕೆ ಬೆಳಕ ಚೆಲ್ಲಲು ಕಡ್ಡಿಗೀರಿದವಳು ಅಮ್ಮ ನಡೆದಾಡುವ ದಾರಿಯಲಿ ಮಳೆ ಗಾಳಿಗೆ ನಂದದಿರಲೆಂದು ಹಗಲೂ ರಾತ್ರಿ ಕಾಯ್ದಿಹರು ಸಹವರ್ತಿಗಳು ಹಲವಾರು ತನ್ನ ಮನೆಯನು ಕತ್ತಲಿನಲ್ಲಿಟ್ಟು ಊರ ಉದ್ಧರಿಸಲು ಬೆಳಗುತಿಹುದೀ ದೀಪ ಈ…
ಲೇಖಕರು: hpn
ವಿಧ: ಚರ್ಚೆಯ ವಿಷಯ
September 18, 2005
ಹಿರಿಯ ನಟರೂ, ಕಲಾವಿದರೂ ಆದ ಕೆ ಎಸ್ ಅಶ್ವಥ್ ರವರನ್ನು ಕುರಿತು ಪ್ರಜಾವಾಣಿಯಲ್ಲಿಂದು ಲೇಖನ ಪ್ರಕಟವಾಗಿದೆ. [:http://prajavani.ne…|ಓದಿ].
ಲೇಖಕರು: olnswamy
ವಿಧ: ಬ್ಲಾಗ್ ಬರಹ
September 17, 2005
ಅಪಾಯದ ಅಂಚಿನಲ್ಲಿರುವ ಭಾಷೆಗಳನ್ನು ಕುರಿತು ಭಾಷಾಶಾಸ್ತ್ರಜ್ಞರು ಕಳೆದ ಹತ್ತು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಹಲವಾರು ಕಾರಣಗಳಿಂದ ಒಂದು ಭಾಷೆಯನ್ನಾಡುವ ಜನ ತಮ್ಮ ಭಾಷೆಯನ್ನು ಕೈಬಿಟ್ಟು ದ್ವಿತೀಯಭಾಷೆಯನ್ನು ಪರಸ್ಪರ ಬಳಸತೊಡಗಿದಾಗ ಮತ್ತು ತಂದೆತಾಯಂದಿರು ತಮ್ಮ ಮಕ್ಕಳೊಡನೆ ದ್ವಿತೀಯ ಭಾಷೆಯನ್ನು ಬಳಸತೊಡಗಿದಾಗ ಕ್ರಮೇಣ ಆ ಭಾಷೆಯನ್ನು ಮೊದಲಭಾಷೆಯಾಗಿ ಬಳಸುವ ಜನರೇ ಇಲ್ಲವಾಗಿ ಹೋಗುವ ಅಪಾಯ ಹುಟ್ಟುತ್ತದೆ. ಹೀಗಾದಾಗ ಭಾಷೆ ಸಂಪೂರ್ಣ ಕಣ್ಮರೆಯಾಗದಿದ್ದರೂ ಕೇವಲ ಬರವಣಿಗೆಯ ಭಾಷೆಯಾಗಿ…
ಲೇಖಕರು: R M Rao
ವಿಧ: Basic page
September 16, 2005
ಪತಂಜಲಿಯ ಯೋಗ ಭಾಗ ೮ ಎಂಟನೆಯ ಲೇಖನ ಪತಂಜಲಿಯ ಯೋಗದ ತೃತೀಯ ವಿಭೂತಿ ಪಾದ. ಮನಸ್ಸನ್ನು ಪರಿಶುಧ್ಧಿಗೊಳಿಸಿದಂತೆ ಅನೇಕ ಸಿಧ್ಧಿಗಳು ಬರಬಹುದು. ಸಿಧ್ಧಿಗಳು ಎಂದರೆ ಪವಾಡ ಮಾಡಬಲ್ಲ ಶಕ್ತಿ. ಆದರೆ ಅವುಗಳ ಬಗ್ಗೆ ಜಾಗ್ರತವಾಗಿದ್ದು ಯೋಗದ ಹಾದಿಯಲ್ಲಿ ಮುಂದುವರೆಯುವ ಬಗ್ಗೆ ವಿಭೂತಿಪಾದದಲ್ಲಿ ವಿವರಣೆ ಇದೆ. ಏಕೆಂದರೆ ಅವು ಯೋಗದ ಗುರಿಯನ್ನು ತಲುಪಲು ಇರುವ ಅಡ್ಡಿಗಳು. ಮನಸ್ಸನ್ನು ಒಂದು ಜಾಗದಲ್ಲಿ ನೆಲೆಗೊಳಿದಾಗ ಅದು ಧಾರಣೆ.ಯೋ.ಸೂ.ಪಾದ ೩. ಸೂತ್ರ.೧ ಮನಸ್ಸಿನಲ್ಲಿ ಒಂದೇ ಪ್ರತ್ಯಯವು (…