ಎಲ್ಲ ಪುಟಗಳು

ಲೇಖಕರು: metikurke
ವಿಧ: Basic page
October 18, 2005
ಅಜ್ಜ ಮುತ್ತಜ್ಜ ಅವರಜ್ಜರಿಗು ಹೆಜ್ಜೆ ಹೆಜ್ಜೆಗು ಕಾಡಿ ಕನಲಿಸಿದ ಕಜ್ಜಿಯ ಕಥೆಯಿದನಾಲಿಸಿ ಕೇಳಿರಿ ಜನರೆಲ್ಲ ಅಜರುದ್ರಾದಿ ದೇವಗಳು ಕಜ್ಜಿಯುಪಟಳದಿ ನೊಂದು ಹೆಜ್ಜೇನು ಕಡಿದಂತಾಗಿರಬಹುದು ಹಿಂದಣಲಿ. ೧ ಇದು ಒಂದು ಕ್ರಿಮಿಸೂಕ್ಷ್ಮಾಣು ಬದುಕುವದ ಕಲಿತಿಹುದು ಮೇದು ಚರ್ಮದೊಂದು ಪದರ ಹಗಲಿರುಳು ಪದರ ಪದರವಾಗಿಹ ಚರ್ಮದ ಹದವಾಗಿಹ ಹೊರಪದರವದು ಹಾದಿಯಾಗಿಹುದು ಅದರೋಟದಾಟಕೆ. ೨ ಉಣ್ಣೆಯ ಜಾತಿಗೆ ಸೇರಿಹುದು ಕಣ್ಣಿಗೆ ಕಾಣಿಸದು ಸುಲಭದಲಿ ಹೆಣ್ಣು ಗಂಡೆಂಬ ಭೇಧವಿರದದರೋಡಾಟಕೆ ಬಣ್ಣ…
ಲೇಖಕರು: jyothi rai
ವಿಧ: ಚರ್ಚೆಯ ವಿಷಯ
October 18, 2005
can anybody explain about SQL... (I can read kannada,but m sorry I dont know how to write kannada in unicode)
ಲೇಖಕರು: metikurke
ವಿಧ: Basic page
October 16, 2005
ಅಂದು ಅಂದು ವಿಜಯದಶಮಿ ಅಧರ್ಮವ ಹತ್ತಿಕ್ಕಿ ಧರ್ಮಕ್ಕೆ ಇಂಬು ಕೊಟ್ಟ ದಿನ ಅದು ತ್ರೇತಾಯುಗ ಶ್ರೀ ರಾಮ ಬಿಲ್ಲಿನ ಹುರಿಯೆಳದು ರಾವಣನ ಸೊಲ್ಲು ತುಳಿದು ವಿಭೀಷಣನ ಮೇಲೆಳೆದ ದಿನ ಇಂದು ಇಂದು ಕೂಡ ವಿಜಯದಶಮಿ ಧರ್ಮದ ಸೊಲ್ಲಿಲ್ಲ, ಅಧರ್ಮದ ಹಾಹಾಕಾರ ಎಲ್ಲೆಲ್ಲು ಇದು ಕಲಿಯುಗ ಧರ್ಮಿಷ್ಠರ ಕಾಲೆಳೆದು ದುಷ್ಟರ ಮೇಲೆಳೆದು ನ್ಯಾಯ ನಿಷ್ಠುರತೆ, ಸತ್ಯ ಅಹಿಂಸೆಯ ತುಳಿವ ದಿನ. ಧರ್ಮದ ಸೋಗು, ಅಧರ್ಮದ ಕೂಗು ಸತ್ಯದ ಬೆನ್ನು ಬಾಗು, ಸುಳ್ಳಿಗೆ ಮೃಷ್ಟಾನ್ನದ ತೇಗು ಅಹಿಂಸೆಯ ನೆಲ ಜವುಗು, ಹಿಂಸಾಚಾರದ ಜಿನುಗು…
ಲೇಖಕರು: Rohit
ವಿಧ: ಚರ್ಚೆಯ ವಿಷಯ
October 16, 2005
ನಿನ್ನೆ ಮುಂಬೈಯಲ್ಲಿ ಅಮೃತಧಾರೆ ಚಿತ್ರ ವೀಕ್ಷಿಸಿದ ಕೊನೆಗೆ, ಸಬ್ ಟೈಟಲ್ಸ್ ಕ್ರೆಡಿಟ್ಸ್ ನಮ್ಮ ಬಳಗದ ಓಎಲ್ಎನ್ ರವರಿಗೆ ಎಂದು ತಿಳಿದು ಆಶ್ಚರ್ಯವೇನೂ ಆಗಲಿಲ್ಲ ಬದಲಿಗೆ, ಇದು ಅವರು ಅಧ್ಯಕ್ಷರಾಗಿರುವ ಭಾಷಾಂತರ ಅಕಾಡೆಮಿಯ assignment ಇರಬಹುದೇ ಎಂದು ಅನುಮಾನವುಂಟಾಯ್ತು....
ವಿಧ: ಬ್ಲಾಗ್ ಬರಹ
October 15, 2005
ಇದು ನಾನು ಇತ್ತೀಚೆಗೆ ಸಂಪದದಲ್ಲಿ ಬರೆದ ಬ್ಲಾಗ್‍ನ ಒಂದು ವೈಯುಕ್ತಿಕ critic. ಜೊತೆಗೆ http://sampada.net/node/532#comment-689 ನಲ್ಲಿ ಇಸ್ಮಾಯಿಲರ ಅನಿಸಿಕೆಗಳಿಗೆ ಸಂಬಂಧಿಸಿದಂತೆ ನನ್ನ ಯೋಚನೆಗಳು. ಪತ್ರಕರ್ತರು ಬರೆಯುವ ವರದಿಗಳು biased ಆಗಿದ್ದರೂ ಕೊನೇಪಕ್ಷ ಅವರಿಗೆ ಅದರ ಅರಿವಾದರೂ ಇರುತ್ತದೆಯಲ್ಲವೆ. ನಮ್ಮಂತಹ ಜನಸಾಮನ್ಯರು ಯಾವುದೋ ಆದರ್ಶಕ್ಕೆ ಶರಣಾಗಿ ತಮಗೆ ಗೊತ್ತಿಲ್ಲದೇ ತಮ್ಮ ಮಾತುಕಥೆಗಳಲ್ಲಿ ಆ ಆದರ್ಶದ ಪ್ರತಿಪಾದಕರಾಗುತ್ತೇವೆ. ನಮ್ಮ ಲೇಖನಗಳಲ್ಲಿಯೂ ಇದೇ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
October 15, 2005
11) ಶಿಲೆಯಲ್ಲಿ ಆನೆಯನ್ನು ಕೆತ್ತುವ ಅತಿ ಸುಲಭ ವಿಧಾನ: ದೊಡ್ಡ ಅಮೃತಶಿಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಆನೆಯಂತೆ ಕಾಣದಿರುವ ಭಾಗವನ್ನೆಲ್ಲ ಕೆತ್ತಿ ತೆಗೆದುಬಿಡಿ. 12) ವಯಸ್ಸು ಹೆಚ್ಚಿದಂತೆ ವಿವೇಕ ಹೆಚ್ಚುವುದಿಲ್ಲ. ಸಾಮಾನ್ಯವಾಗಿ ವಯಸ್ಸೊಂದೇ ಹೆಚ್ಚುತ್ತಾ ಹೋಗುತ್ತದೆ. 13) ಭಾರತೀಯರು ಬಲಶಾಲಿಗಳಾಗುತ್ತಿದ್ದಾರೆ. ನಲವತ್ತು ವರ್ಷದ ಹಿಂದೆ ನೂರು ರೂಪಾಯಿಯ ದಿನಸಿ ಹೊರಲು ಇಬ್ಬರು ಬೇಕಾಗುತ್ತಿತ್ತು. ಈಗ ಐದು ವರ್ಷದ ಮಗುವೇ ಆ ಕೆಲಸ ಮಾಡಬಲ್ಲುದು. 14) ಎರಡೂ ಕೈಯಲ್ಲಿ ಒಂದೊಂದು ಜಿಲೇಬಿ…
ಲೇಖಕರು: olnswamy
ವಿಧ: Basic page
October 15, 2005
ತಾಂಗ್ ವಂಶದವರ ಆಳ್ವಿಕೆಯ ಕಾಲದಲ್ಲಿದ್ದ ಝೆನ್ ಗುರು ಝೆನ್‌ಗೆಟ್ಸು ತನ್ನ ಶಿಷ್ಯರಿಗೆ ಹೀಗೆ ಉಪದೇಶಗಳನ್ನು ಮಾಡಿದ: ಈ ಭೂಮಿಯ ಬಗ್ಗೆ, ನೆಲದ ಬಗ್ಗೆ, ವ್ಯಾಮೋಹ ಬೆಳೆಸಿಕೊಳ್ಳದಂತೆ ಬದುಕುವುದೇ ಝೆನ್ ವಿದ್ಯಾರ್ಥಿಯ ಲಕ್ಷಣ. ಇತರರ ಒಳ್ಳೆಯ ಕೆಲಸಗಳನ್ನು ನೋಡಿದಾಗ ನೀನೂ ಹಾಗೆ ಮಾಡುವಂತೆ ನಿನ್ನನ್ನೇ ಪ್ರಚೋದಿಸಿಕೋ. ಇತರರ ಕೆಟ್ಟ ಕೆಲಸಗಳನ್ನು ಕಂಡಾಗ ನಾನು ಹಾಗೆ ಮಾಡಬಾರದು ಎಂದು ಎಚ್ಚರಿಕೆ ಹೇಳಿಕೋ. ನೀನೊಬ್ಬನೇ ಕತ್ತಲೆಯ ಕೋಣೆಯಲ್ಲಿರುವಾಗ ಕೂಡ ನಿನ್ನೆದುರಿಗೆ ಅಪರೂಪದ ಅತಿಥಿ ಇದ್ದಾನೆಂದು…
ಲೇಖಕರು: olnswamy
ವಿಧ: Basic page
October 15, 2005
ಝೆನ್ ಇನ್ನೂ ಜಪಾನಿನಲ್ಲಿ ಪರಿಚಯಗೊಳ್ಳುವ ಮುನ್ನ ತೆಂಡೈ ಪಂಥದ ನಾಲ್ವರು ವಿದ್ಯಾರ್ಥಿಗಳು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಅವರು ನಾಲ್ಕು ಜನರೂ ಆತ್ಮೀಯ ಸ್ನೇಹಿತರು. ಏಳು ದಿನಗಳ ಕಾಲ ಮೌನವನ್ನು ಪಾಲಿಸಬೇಕೆಂದು ನಿರ್ಧರಿಸಿದರು. ಮೊದಲ ದಿನ ಎಲ್ಲರೂ ಮೌನವಾಗಿದ್ದರು. ಮೌನ ವ್ರತ ಸುಸೂತ್ರವಾಗಿ ಸಾಗಿತು. ಸಂಜೆಯಾಯಿತು. ಕತ್ತಲು ಇಳಿಯಿತು. ದೀಪದಲ್ಲಿ ಎಣ್ಣೆ ತೀರುತ್ತ ಬಂದಿತು. ಮೊದಲನೆಯಾತನಿಗೆ ಸುಮ್ಮನಿರಲು ಆಗಲೇ ಇಲ್ಲ. ಸೇವಕನನ್ನು ಕುರಿತು “ದೀಪಕ್ಕೆ ಸ್ವಲ್ಪ ಎಣ್ಣೆ ಹಾಕು” ಎಂದ.…
ಲೇಖಕರು: olnswamy
ವಿಧ: Basic page
October 15, 2005
ಗುರು ರ್ಯೋಕಾನ್ ತನ್ನ ಇಡೀ ಜೀವಿತವನ್ನು ಝೆನ್ ಅಭ್ಯಾಸದಲ್ಲಿ ಕಳೆದಿದ್ದ. ಒಂದು ದಿನ ತನ್ನ ಸೋದರಳಿಯ ವೇಶ್ಯೆಯೊಬ್ಬಳ ಸಹವಾಸಕ್ಕೆ ಬಿದ್ದಿದ್ದಾನೆ, ಸಂಪತ್ತನ್ನೆಲ್ಲ ಹಾಳು ಮಾಡುತ್ತಿದ್ದಾನೆ ಎಂದು ತಿಳಿಯಿತು. ಬಂಧುಗಳೆಲ್ಲ ಬಂದು ರ್ಯೋಕಾನ್ ತನ್ನ ಸೋದರಳಿಯನಿಗೆ ಬುದ್ಧಿ ಹೇಳದಿದ್ದರೆ ಕುಟುಂಬದ ಸಂಪತ್ತೆಲ್ಲ ನಾಶವಾಗುತ್ತದೆ ಎಂದು ಗೋಳಾಡಿದರು. ಸೋದರಳಿಯನನ್ನು ಕಂಡು ಅನೇಕ ವರ್ಷಗಳೇ ಕಳೆದಿದ್ದವು. ಅವನ ಊರಿಗೆ ಹೋಗಲು ರ್ಯೋಕಾನ್ ಬಹಳ ದೂರ ನಡೆಯಬೇಕಿತ್ತು. ಆದರೂ ಹೊರಟ. ಅವನನ್ನು ಕಂಡು…
ಲೇಖಕರು: nilagriva
ವಿಧ: ಬ್ಲಾಗ್ ಬರಹ
October 14, 2005
Yoga's Great Teacher Draws Crowds on Final U.S. Tour - New York Times ಮೇಲಿನ ಕೊಂಡಿಯನ್ನು ನೀವು ಕ್ಲಿಕ್ಕಿಸಿದರೆ ಬೆಂಗಳೂರಿನ ಬಳಿಯ ಬೆಳ್ಳೂರಿನವರಾದ ಬಿ.ಕೆ.ಎಸ್.ಅಯ್ಯಂಗಾರ್ಯರ ಬಗ್ಗೆ ಇರುವ ನ್ಯೂಯಾರ್ಕ್ ಟೈಮ್ಸ್ ನ ಲೇಖನವನ್ನೋದಬಹುದು. ಅಯ್ಯಂಗಾರ್ಯರ ಹೆಸರು ಯೋಗಾಭ್ಯಾಸಿಗಳಿಗೆ ಮಾತ್ರವಲ್ಲ, ಯೋಗದ ಹೆಸರು ಕೇಳಿದ್ದವರಿಗೂ ಚಿರಪರಿಚಿತ. ಅವರ "ಯೋಗದೀಪಿಕೆ" (ಕನ್ನಡದಲ್ಲಿನ ಅನುವಾದ) ಬಹಳ ಒಳ್ಳೆಯ ಗ್ರಂಥ. (ನಮ್ಮ ಮನೆಯಲ್ಲಿದೆ. ನಾನು ಓದಿದ್ದೇನೆ. ಮಾಡಿ ನೋಡಿಲ್ಲ). ಅವರ…