ಎಲ್ಲ ಪುಟಗಳು

ಲೇಖಕರು: Gopinath Rao
ವಿಧ: Basic page
September 14, 2005
ಅದ್ವಾನಿಯೆದುರು ಖುರಾನ ಗುರ್! ಅದಕ್ಕೆ ಗುದ್ದಿ ವಜಾ ಡಿಬಾರ್ ಸಜಾ! ಮರುದಿನ ತಿಂಡಿ ಕಾಫಿ ಆಮೇಲೆ ಶಿಕ್ಷೆ ಮಾಫಿ ಪಕ್ಷಕ್ಕೆ ವಾಪಸ್ ಸುದ್ದಿ ಕಕ್ಷಕ್ಕೆ ಬಂತೇ ಬುದ್ಧಿ? ಮುದಿ ಸರ್ಕಸ್ ಹುಲಿಗಳ ಅದೇ ಹಳೆ ನಾಟಕ ಮಾಫಿ-ಯಾ! ವಾಜಪೇಯಿ ಎಂಬ ರಿಂಗ್ ಮಾಸ್ತರ್ ಈಗ ಪಕ್ಕಾ ಜೋಕರ್! - ಗೋಪೀನಾಥ ರಾವ್ -email: raogopi@yahoo.com
ಲೇಖಕರು: koumodiki
ವಿಧ: Basic page
September 14, 2005
ನಿನೇನು ಹೇಳಬೇಕೆಂದು ಇದ್ದೆಯೊ ಅದರ ಬಗ್ಗೆ ಚಿಂತೆಯಬಿಡು. ಸ್ವಲ್ಪ ಕೆಳು/ ಆಲಿಸು. ಇದು ವಿಚಿತ್ರವೆನಿಸ ಬಹುದು ಅದರೆ ನಿನ್ನನು ನೆನು ವ್ಯಕ್ತ ಪದಿಸುವದಕ್ಕೆ ಇದು ಒನ್ದು ಮರ್ಗ. ಕೆಳು ಪ್ರೆತಿಯಿಂದ ಗಮನಕೊಟ್ಟು ನಿನ್ನ ಸುತ್ತಲಿರುವ ಲೊಕವನ್ನು. ಕೆಳು ನಿನ್ನ ಸುತ್ತಲಿರುವರನ್ನು ಮತ್ತು ಬದುಕನ್ನು. ನಿನು ಎನು ಕೆಳಲಿರುವೆ ಎಂಬದುದರ ಬಗ್ಗೆ ಊಹಿಸಬೆಡ. ಕಿವಿಯಿಂದ ಮತ್ರವಲ್ಲ ಹೃದಯ ಮತ್ತು ಆತ್ಮದಿಂದ ಕೆಳು ಗಮನವಿರಲಿ ಬದುಕು ನಿನ್ನಗೆ ಎನು ಹೆಳುತಿದ್ದೆ ಎಂದು. ಕಲಿಯಲು ವಿಶಯಗಳ ಬರವೆ…
ಲೇಖಕರು: tvsrinivas41
ವಿಧ: Basic page
September 13, 2005
ನಿನ್ನೆಯೊಂದು ವಿಚಿತ್ರ ಸಂಗತಿ ನಡೆಯಿತು. ಏರ್‍ಪೋರ್ಟಿನಿಂದ ನನ್ನ ಸ್ನೇಹಿತ ಸತೀಶ ಫೋನ್ ಮಾಡಿದ್ದ. ಅವನು ಅಲ್ಲಿಯ ಕಸ್ಟಮ್ಸ್‍ನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿದ್ದಾನೆ. ಯಾಕಪ್ಪಾ ಇಷ್ಟು ಬೆಳಗ್ಗೆ ಫೋನ್ ಮಾಡಿದ್ದಾನೆ ಅಂತ ಯೋಚಿಸ್ತಿರುವಾಗಲೇ ಒಂದೇ ಉಸಿರಿನಲ್ಲಿ ಹೇಳಿದ್ದ. ಮುಂಬೈಗೆ ಬಿಲ್ ಗೇಟ್ಸ್ ಬಂದಿದ್ದಾನೆ. ಯಾರಾದ್ರೂ ಕನ್ನಡದವರ ಪರಿಚಯ ಮಾಡಿಸು ಅಂತಿದ್ದಾನೆ. ನಿನ್ನ ಬಗ್ಗೆ ಹೇಳ್ತಿದ್ದೀನಿ. ತಕ್ಷಣ ಬಂದು ಅವನನ್ನು ನಿಮ್ಮ ಮನೆಗೆ ಕರ್ಕೊಂಡು ಹೋಗು, ಎಂದ ಸತೀಶ. ನನಗೆ ತಲೆ ಬುಡ ಅರ್ಥ…
ಲೇಖಕರು: modmani
ವಿಧ: ಬ್ಲಾಗ್ ಬರಹ
September 13, 2005
ನನ್ನ ಮಗನನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಲು, ಬೆಂಗಳೂರಿನಲ್ಲಿ ಪ್ರಯತ್ನಿಸಿದಾಗ ನನಗೆ ತಿಳಿದು ಬಂದ ಅಂಶ. ಎಲ್.ಕೆ.ಜಿ. ಯು.ಕೆ.ಜಿ. ಗಳಲ್ಲಿ ಕನ್ನಡ ಮಾಧ್ಯಮವಿಲ್ಲ. ಇದನ್ನು ಕೇಳಿ ನನಗೆ ತುಂಬಾ ಆಶ್ಚರ್ಯವೇ ಆಯಿತು. ರವಿಶಂಕರ್ ಆಶ್ರಮದ ಉಚಿತ ಶಾಲೆಯಲ್ಲೂ ಎಲ್.ಕೆ.ಜಿ ಗಾಗಿ ಕನ್ನಡ ಮಾಧ್ಯಮವಿರಲಿಲ್ಲ. ಹಾಗಾಗಿ ಇಂಗ್ಲಿಷ್ ಮಾಧ್ಯಮಕ್ಕೇ ಸೇರಿಸಬೇಕಾಯಿತು. ಇದು ಹೀಗೇ ಮುಂದುವರೆದರೆ, ಕನ್ನಡ ಉಳಿಯುವುದೆಂತು..?
ಲೇಖಕರು: koumodiki
ವಿಧ: Basic page
September 13, 2005
ಎನು ಅಂದವೊ ಎನು ಅಹ ಚಂದವೊ ನಮ್ಮುರಿನ ರಸ್ತೆ ಅಹ ಎನು ಸೊಗಸೊ ನಮ್ಮ ರಸ್ತೆ ಎನು ಇಲ್ಲ ಕಮ್ಮಿ ಚಂದ್ರಿನಗಿಂತ ಅವನಲ್ಲು ಇಲ್ಲ ಇಂತಹ ಹಳ್ಳ-ಗುಂಟ ಇಟರೆ ಸಕು ರಸ್ತೆ ಅಲ್ಲಿ ಕಾಲು ಕೆಸರಿಲಲ್ಲಿ ಕುಸ್ತಿಯಡುವಂತೆ ಇರುತ್ತದೆ ನೊಡು ಇನ್ನು ಕೆಳಬೆಕಿಲ್ಲ ಗಡಿ ಒಡಿಸುವವರ ಪಡು ಮುರುದಿದೆ ಮೊನ್ನೆ ನನ್ನ ಗೆಳೆಯನ ಕಲು ಕಲೊಂದೆ ಮುರಿದಿದ್ರೆ ಪರ್ವಾಗಿಲ್ಲ ಅದರೆ ಅವನ ಬೆನ್ನು ಮೂಳೆ ಕುಡ ಹೊಡೆತ ತಿಂದಿದೆಯಲ್ಲ ಜೊತೆಗೆ ಅವನ ಗಡಿಯು ಎರಡು ಚಕ್ರ ಅಗಿದೆ ಪಂಚರ್ ಕೆಲಸವಿಲ್ಲದಂತಗಿದೆ ಅವನ ಗಡಿಯ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
September 13, 2005
ಒಂದು ಭಾಷೆಯೆಂದರೆ ಎಷ್ಟು ಶತಮಾನಗಳ ಮನುಷ್ಯ ಶ್ರಮದ ಫಲ. ಆ ಭಾಷೆಯನ್ನು ಬಳಸಿ ಆ ಜನ ಎಷ್ಟೆಲ್ಲ ತಿಳಿವಳಿಕೆ ಸಂಪಾದಿಸಿದ್ದರೋ, ಜ್ಞಾನ ಪಡೆದಿದ್ದರೋ, ಅವೆಲ್ಲ ಈಗ ಇಲ್ಲವಾಗಿದೆ. ಅವರ ಕನಸು, ಬದುಕಿನ ಹೋರಾಟ, ಬದುಕಿನ ಕ್ರಮ ಎಲ್ಲವೂ, ನೆನಪಾಗಿಯೂ ಉಳಿಯದಂತೆ, ಅಳಿಸಿಹೋಗಿಬಿಟ್ಟಿದೆ. ಭಾಷೆಯ ವಿನಾಶ ಸಂಸ್ಕೃತಿಯ ವಿನಾಶವೇ ಸರಿ. ಹೀಗಾಗುವುದಕ್ಕೆ ನಮ್ಮ ಪ್ರಗತಿಯ ಕಲ್ಪನೆ, ಆಧುನಿಕತೆಯ ಕಲ್ಪನೆ, ಸದೃಢ ಭಾಷೆಯನ್ನು ಕುರಿತ ಮೋಹ ಇವೆಲ್ಲ ಕಾರಣಗಳಾಗುತ್ತವೆ. ಕೇವಲ ಇಂಗ್ಲಿಷ್ ಮಾತ್ರವಲ್ಲ, ಆಯಾ ಪ್ರದೇಶದ…
ಲೇಖಕರು: olnswamy
ವಿಧ: Basic page
September 13, 2005
ಯುದ್ಧ ಕಲೆಯನ್ನು ಅಭ್ಯಾಸ ಮಾಡುತ್ತಿದ್ದ ಒಬ್ಬ ಶಿಷ್ಯ ಗುರುವನ್ನು ಕೇಳಿದ: "ಗುರುವೇ, ನಾನು ಯುದ್ಧ ಕಲೆಯನ್ನು ಕುರಿತು ಎಲ್ಲವನ್ನೂ ತಿಳಿಯಬೇಕೆಂದಿದ್ದೇನೆ. ನಿಮ್ಮೊಡನೆ ಕಲಿಯುತ್ತಿರುವುದರೊಂದಿಗೆ ಬಿಡುವಿನ ಸಮಯದಲ್ಲಿ ಇನ್ನೊಬ್ಬ ಗುರುವಿನ ಬಳಿ ಯುದ್ಧ ಕಲೆಯ ಮತ್ತೊಂದು ಶೈಲಿಯನ್ನೂ ಅಭ್ಯಾಸ ಮಾಡಬೇಂದಿರುವೆ. ನಿಮಗೇನು ಅನ್ನಿಸುತ್ತದೆ?" "ಏಕ ಕಾಲದಲ್ಲಿ ಎರಡು ಮೊಲಗಳನ್ನು ಅಟ್ಟಿಸಿಕೊಂಡು ಹೋದ ಬೇಟೆಗಾರನಿಗೆ ಯಾವ ಮೊಲವೂ ಸಿಗುವುದಿಲ್ಲ" ಎಂದ ಗುರು. [ಮನಸ್ಸನ್ನು ಮತ್ತೊಂದು ಕಡೆಗೆ ಎಳೆಸದೆ…
ಲೇಖಕರು: olnswamy
ವಿಧ: Basic page
September 12, 2005
“ಭವಿಷ್ಯ” ಎನ್ನುತ್ತಿರುವಂತೆಯೇ ಮೊದಲ ಅಕ್ಷರ ಆಗಲೇ ಭೂತಕ್ಕೆ ಸೇರಿಬಿಟ್ಟಿರುತ್ತದೆ. “ಮೌನ” ಎನ್ನುತ್ತಿರುವಂತೆಯೇ ಅದನ್ನು ಕೊಂದಿರುತ್ತೇನೆ. “ಶೂನ್ಯ” ಎನ್ನುತ್ತಿರುವಂತೆಯೇ ಅದನ್ನು ಯಾವುದರಲ್ಲೂ ಹಿಡಿದಿಡಲಾಗದ್ದು ಎಂದು ಹೊಳೆಯುತ್ತದೆ. ವಿಸ್ಲಾವಾ ಝಿಂಬ್ರೋಸ್ಕ [ಹೇಳಲಾಗದ್ದು ನಿಜವಾಗಿರುವಷ್ಟು ಹೇಳಬಹುದಾದ್ದು ನಿಜವಾಗದು, ಅಲ್ಲವೇ? ಇದು ನನ್ನನ್ನು ಬಹಳ ದಿನದಿಂದ ಕಾಡಿರುವ ಇನ್ನೊಂದು ಕವಿತೆ]
ಲೇಖಕರು: tvsrinivas41
ವಿಧ: Basic page
September 12, 2005
ಅಪ್ಪಣ್ಣ ಭಟ್ಟರನ್ನು ಜನರು ಅಪರ ಭಟ್ಟರು ಎಂದೂ ಕರೆಯುತ್ತಿದ್ದರು. ಪ್ರೀತಿಯಿಂದ ಆ ರೀತಿ ಕರೆಯುತ್ತಿದ್ದರೋ ಏನೋ, ಆದರೂ ನನ್ನ ಪ್ರಕಾರ ಅಪ್ಪಣ್ಣ ಭಟ್ಟರು ಅಪರ ಕರ್ಮದಲ್ಲೇ ಜಾಸ್ತಿ ಸಂಪಾದಿಸುತ್ತಿದ್ದರಿಂದ ಮತ್ತು ಪೂರ್ವ ಪ್ರಯೋಗದ ಬಗ್ಗೆ ಜಾಸ್ತಿ ಒಲವು ಇಟ್ಟಿರದಿದ್ದರಿಂದ ಹಾಗೆನ್ನುತ್ತಿದರು ಎಂದು ತಿಳಿದಿದ್ದೇನೆ. ಇಲ್ಲಿ ಒಂದು ಸಣ್ಣ ಸ್ಪಷ್ಟೀಕರಣ ನೀಡಬಯಸುವೆ. ಅಪರ ಕರ್ಮ ಎಂದರೆ ವ್ಯಕ್ತಿ ಸತ್ತ ಮೇಲೆ ಹನ್ನೆರಡು ದಿನಗಳು ಮಾಡುವ ಅಂತ್ಯಕ್ರಿಯೆ. ವ್ಯಕ್ತಿ ಸತ್ತ ನಂತರ ಅವನ ಶವ ಸಂಸ್ಕಾರವಾದ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
September 12, 2005
ಇಂದು ಬೆಳಗ್ಗೆ ಎಂದಿನಂತೆ ಇಲ್ಲಿಯ ಆನ್‍ಲೈನ್ ಪತ್ರಿಕೆಯಾದ ಮಿಡ್‍ಡೇ ಓದಲು ಹೋದಾಗ ಮೊದಲು ಕಂಡದ್ದೇ ಹೃದಯ ಕಲಕುವಂತಹ ಸುದ್ದಿ. ಅದೇನೆಂದರೆ ಮೊನ್ನೆ ವಿಪರೀತ ಮಳೆಯಾಗುತ್ತಿದ್ದು ಜನರೆಲ್ಲರಲ್ಲೂ ಜುಲೈ ೨೬ರ ಕಹಿ ನೆನಪಾಗಿ ದಾದರ ಸ್ಟೇಷನ್ನಿನಲ್ಲಿ ಲೋಕಲ್ ಟ್ರೈನ್ ಹತ್ತಲು ವಿಪರೀತ ಜನಸಂದಣಿ. ರೈಲ್ವೇ ಹಳಿಗಳ ಮೇಲೆ ನೀರು ನಿಂತು ಟ್ರೈನ್ ಸಂಚಾರ ಬಹಳ ಕಡಿಮೆಯಾಗಿದ್ದಿತ್ತು. ಜನರೆಲ್ಲರಿಗೂ ಎದುರಿಗೆ ಆಗೊಮ್ಮೆ ಈಗೊಮ್ಮೆ ಬರುವ ಲೋಕಲ್ ಟ್ರೈನ್ ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಗಾಡಿ ಬಂದಾಗ…