ಪುಸ್ತಕ ಪರಿಚಯ
ಲೇಖಕರು: Ashwin Rao K P
September 21, 2024

ಪರಿಸರ ಸಂಬಂಧಿ ಬರಹಗಳನ್ನು ಬರೆಯುವವರು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ನವೀನಕೃಷ್ಣ ಎಸ್. ಉಪ್ಪಿನಂಗಡಿ ಎನ್ನುವ ಹುಡುಗ ‘ಹೆಜ್ಜೆ ಊರುವ ತನಕ' ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಯ ಕುರಿತು ಸೊಗಸಾದ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ ಪರಿಸರ ತಜ್ಞ, ಪತ್ರಕರ್ತ ಶಶಿಧರ ಹಾಲಾಡಿ. ಇವರು ತಮ್ಮ ಬೆನ್ನುಡಿಯಲ್ಲಿ “ ಪರಿಸರ, ಪರಿಸರದೊಂದಿಗಿನ ಒಡನಾಟದ ಅನುಭವಗಳು, ಪರಿಸರ ವ್ಯಾಪಾರಗಳನ್ನು ನಿಕಪಕ್ಕೆ ಒಡ್ಡುವುದು ಮುಂತಾದ ವಿಷಯಗಳ ಕುರಿತಾಗಿ…
ಲೇಖಕರು: Ashwin Rao K P
September 19, 2024

‘ಆ ಲಯ ಈ ಲಯ’ ನಟರಾಜ್ ಹೊನ್ನವಳ್ಳಿ ಅವರ ಅನುವಾದಿತ ನಾಟಕ ಸಂಕಲನವಾಗಿದೆ. ಕೃತಿಯ ಮೂಲ ಲೇಖಕ ಲೂಯಿ ನಕೋಸಿ. ಎಚ್. ಎಸ್. ಶಿವಪ್ರಕಾಶ್ ಅವರು ಕೃತಿಯ ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ- “ಆಫ್ರಿಕಾದ ಆಧುನಿಕ ನಾಟಕಕಾರರು ಕೇವಲ ಬರವಣಿಗೆಯ ಬಡಗಿಗಳಲ್ಲ; ಅಥವಾ ರಂಗಭೂಮಿಯ ಕಸುಬಿಗರಲ್ಲ. ಬರವಣಿಗೆ ಅವರ ಮಟ್ಟಿಗೆ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ಒಳಹೊರಗಿನ ದೀರ್ಘಕಾಲೀನ ಹೋರಾಟ, ವೊಲೆ ಶೋಯಿಂಕಾನ ಪ್ರಕಾರ ಆಫ್ರಿಕನ್ ಕಲಾಪ್ರತಿಭೆ ವರ್ತಮಾನದ ಅತ್ಯಂತ ತುರ್ತಿನ ಆದ್ಯತೆಗಳ ನಿರೂಪ. ವರ್ಣಭೇದೀಯ…
ಲೇಖಕರು: Ashwin Rao K P
September 17, 2024

ಮಹಿ ಎಂಬ ಆನೆಯ ಕುರಿತಾದ ಮಕ್ಕಳ ಕಥೆಯನ್ನು ಹೇಳ ಹೊರಟಿದ್ದಾರೆ ಆನಂದ್ ನೀಲಕಂಠನ್. ಇವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ರತೀಶ್ ಬಿ ಆರ್. ಈ ಕೃತಿಯ ಲೇಖಕರ ಮಾತಿನಲ್ಲಿ ಆನಂದ್ ನೀಲಕಂಠನ್ ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ...
“ಮಕ್ಕಳಿಗಾಗಿ ನಾನು ಬರೆಯುತ್ತಿರುವ ಮೊದಲ ಸರಣಿ ಪುಸ್ತಕ ಇದು. ಆದರೆ ಈ ಕತೆಯನ್ನು ದೊಡ್ಡವರೂ ಓದಿ ಮನರಂಜನೆ ಪಡೆಯಬಹುದಾಗಿದೆ. ಈಗ ಈ ಕತೆಯನ್ನು ಓದುವ ಮಕ್ಕಳು ಮುಂದೆ ಹಲವು ವರ್ಷಗಳಾಗಿ ದೊಡ್ಡವರಾದ ಮೇಲೆ ಮತ್ತೊಮ್ಮೆ ಇದೇ…
ಲೇಖಕರು: Ashwin Rao K P
September 14, 2024

ಪ್ರತಿಭಾವಂತ ಲೇಖಕರಾದ ಡಾ ಸುಬ್ರಹ್ಮಣ್ಯ ಸಿ ಕುಂದೂರು ಇವರ ‘ಜೀವನ ಯಾನ' ಎನ್ನುವ ಕಾದಂಬರಿ ಇತ್ತೀಚೆಗೆ ಪುಸ್ತಕ ಮನೆ ಪ್ರಕಾಶನದಿಂದ ಬಿಡುಗಡೆಯಾಗಿದೆ. ಈ ತಮ್ಮ ಕಾದಂಬರಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಲೇಖಕರು ತಮ್ಮ ಮಾತಿನಲ್ಲಿ ಹಂಚಿಕೊಂಡಿದ್ದಾರೆ..
“ಕಳೆದ ದಶಕಗಳಿಂದ ಮಲೆನಾಡಿನ ಸಾಂಸ್ಕೃತಿಕ ಪರಿಸರದಲ್ಲಿ ಮಾನವರ ವಲಸೆಯ ಅಭಿವ್ಯಕ್ತಿಯು ಸಾಮಾನ್ಯವಾಗಿ ಗೋಚರವಾಗುತ್ತಿದೆ. ದುಡಿಯುವ ನೆಲೆಯಲ್ಲಿ ನಡೆಯುವ ಮಾನವಕೇಂದ್ರಿತ ಪಲ್ಲಟಗಳು ಸಾಂಸ್ಕೃತಿಕ ಪಟುತ್ವವನ್ನು ಮೀರುವ ಮತ್ತು ಸಮಗೊಳಿಸುವ…
ಲೇಖಕರು: ಬರಹಗಾರರ ಬಳಗ
September 13, 2024

ಪರಿಶುದ್ಧ ಬಾಳೂ
ಕವಿತೆಯೇ ಬರೀ
ಪದಗಳಲ್ಲ
ಕನ್ನಡದ ಪ್ರಮುಖ ವಿಮರ್ಶಕರೆಂದು ಹೆಸರಾದ ಡಾ. ಎಚ್ .ಎಸ್. ಸತ್ಯನಾರಾಯಣ ಅವರು ಈವರೆಗೆ ಬರೀ ಗದ್ಯ ಸಾಹಿತ್ಯ ಪ್ರಕಾರದಲ್ಲಿ ಒಡನಾಡುತ್ತಿದ್ದರು. ಅವರ ಮೊದಲ ಕವನ ಸಂಕಲನ (ಹಾಯ್ಕುಗಳ ಸಂಕಲನ) ಪ್ರಕಟಿಸುವ ಮೂಲಕ ಕವಿಯಾಗ ಬೇಕೆಂಬ ಅವರ ಅಸೆಯನ್ನೂ ಅವರು ಪೂರೈಸಿಕೊಂಡರು. ‘ಮರ ಬರೆದ ರಂಗೋಲಿ’ ಎಂಬ ಹಾಯ್ಕು ಸಂಕಲನ ಮಾಲೂರಿನ ‘ಅಲಂಪು ಪ್ರಕಾಶನ’ದಿಂದ ೨೦೨೩ ರಲ್ಲಿ ಪ್ರಕಟವಾಗಿದೆ, ಅವರೇ ಹೇಳಿದಂತೆ ಹಲವಾರು ಹೈಕು ಬರಹಗಾರರಿಗೆ ಮುನ್ನುಡಿ ಬರೆಯುವ ಕಾರಣಕ್ಕಾಗಿ…
ಲೇಖಕರು: Ashwin Rao K P
September 12, 2024

ರವಿ ಬೆಳಗೆರೆಯವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲಿ ಪ್ರಕಟವಾದ ಕಪಟ ಸ್ವಾಮಿಗಳ ಬಗ್ಗೆ ವರದಿಗಳ ಸಂಗ್ರಹವೇ ‘ಹಾಯ್ ಕಂಡ ಸ್ವಾಮಿಗಳು' ಎನ್ನುವ ಕೃತಿ. ಈ ಪುಸ್ತಕ ರವಿ ಬೆಳಗೆರೆ ಅವರ ನಿಧನದ ನಂತರ ಅವರ ಮಗಳು ಭಾವನಾ ಬೆಳಗೆರೆ ಅವರ ಮುತುವರ್ಜಿಯಲ್ಲಿ ಹೊರಬಂದಿದೆ. ಈ ಕೃತಿಯ ಬೆನ್ನುಡಿಯಲ್ಲಿ ಸ್ವತಃ ಭಾವನಾ ಬೆಳಗೆರೆ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ..
“ಹಿಂದೂಧರ್ಮ, ಗೋರಕ್ಷಣೆ, ಕೇಸರಿ ಉಡುಪು, ಇದು ಈಗ ಭಾರತದಲ್ಲಿ ವಿಪರೀತವಾಗಿ…