ಪುಸ್ತಕ ಪರಿಚಯ
ಲೇಖಕರು: Ashwin Rao K P
October 16, 2024

ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಉಡುಪಿಯ ನಿವಾಸಿ ಡಾ. ಶಶಿಕಿರಣ್ ಶೆಟ್ಟಿ ಇವರು ಪ್ರವೃತ್ತಿಯಲ್ಲಿ ಬಹುಮುಖ ಪ್ರತಿಭೆಗಳ ಸಂಗಮ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವವರ, ಅನಾರೋಗ್ಯಕ್ಕೆ ತುತ್ತಾಗಿರುವವರ, ಆರ್ಥಿಕ ಪರಿಸ್ಥಿತಿ ಹದಗೆಟ್ಟು ದೀನ ಸ್ಥಿತಿಯಲ್ಲಿರುವವರನ್ನು ಪೊರೆಯುವ ಸಾಹಸಿ. ಹೋಮ್ ಡಾಕ್ಟರ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಡಾ. ಶಶಿಕಿರಣ್ ಶೆಟ್ಟಿಯವರು ಬಹಳಷ್ಟು ಮಂದಿಗೆ ಹೊಸ ಬಾಳು ಕೊಡುವಲ್ಲಿ ನೆರವಾಗಿದ್ದಾರೆ. ನೂರಾರು ಮಂದಿ ಇವರ ಹೊಸ ಹೊಸ…
ಲೇಖಕರು: Ashwin Rao K P
October 14, 2024

ಮುದಗಲ್ಲ ಎಂಬ ಊರು ಐತಿಹಾಸಿಕವಾಗಿ ಬಹಳ ಮಹತ್ವ ಪಡೆದಿದೆ. ಈ ಊರಿನಲ್ಲಿ ಕಂಡು ಬರುವ ಶಾಸನಗಳ ಬಗ್ಗೆ ಸವಿವರವಾಗಿ ಡಾ. ಮಹದೇವಪ್ಪ ನಾಗರಾಳ ಅವರು ಮಾಹಿತಿ ನೀಡುತ್ತಿದ್ದಾರೆ ತಮ್ಮ ಕೃತಿ ‘ಮುದಗಲ್ಲ ಇತಿಹಾಸ ಮತ್ತು ಶಾಸನಗಳು' ಇದರಲ್ಲಿ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಚನ್ನಬಸವಯ್ಯ ಹಿರೇಮಠ. ಇವರು ತಮ್ಮ ಮುನ್ನುಡಿಯಲ್ಲಿ ಈ ಊರಿನ ಇತಿಹಾಸ ಮತ್ತು ಶಾಸನಗಳ ಬಗ್ಗೆ ಲೇಖಕರು ಎಷ್ಟು ಸೊಗಸಾದ ಕಾರ್ಯ ಮಾಡಿದ್ದಾರೆ ಎನ್ನುವುದನ್ನು ಹೇಳಿದ್ದಾರೆ. ಅವರ ಮನದಾಳದ ಮಾತುಗಳ ಆಯ್ದ ಭಾಗ ಇಲ್ಲಿದೆ…
ಲೇಖಕರು: Ashwin Rao K P
October 10, 2024

ಕಥೆಗಾರ, ಉಪನ್ಯಾಸಕ ಡಾ. ಆನಂದ ಗೋಪಾಲ್ ಅವರು ಬರೆದ ‘ಜ್ಞಾನ ಫಕೀರ ಪ್ರೊ. ಎಂ ಕರೀಮುದ್ದೀನ್' ಎಂಬ ಕೃತಿ ಇತ್ತೀಚೆಗೆ ಬಿಡುಗಡೆಯಾಗಿದೆ. ಟಿಪ್ಪು ಸುಲ್ತಾನ್ ವಂಶಸ್ತನಾಗಿದ್ದುಕೊಂಡು, ಸುಮಾರು ೬ ಭಾಷೆಯಲ್ಲಿ ಪಾಂಡಿತ್ಯವನ್ನು ಹೊಂದಿದ್ದು, ಖ್ಯಾತ ನಾಮ ಸಾಹಿತಿಗಳ ಸಾಂಗತ್ಯದಲ್ಲಿದ್ದೂ ಸರಳ, ಸಜ್ಜನಿಕೆಯಿಂದ ಜಾತ್ಯಾತೀತವಾಗಿ ಬದುಕಿದ ಕರೀಮುದ್ದೀನ್ ಅವರ ಪರಿಚಯ ಈ ಕೃತಿಯಲ್ಲಿ ಮಾಡಲಾಗಿದೆ. ಇವರ ಬಗ್ಗೆ ಲೇಖಕರಾದ ಡಾ. ಆನಂದ್ ಅವರು ತಮ್ಮ ಮುನ್ನುಡಿಯಲ್ಲಿ ಬರೆದದ್ದು ಹೀಗೆ…
“ ಪ್ರೊ. ಎಂ.…
ಲೇಖಕರು: Ashwin Rao K P
October 08, 2024

ಹೊಸ ಬಗೆಯ, ಹೊಸತನದ ಪುಸ್ತಕಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಕಾಯಕವನ್ನಾಗಿ ಮಾಡಿಕೊಂಡ ಛಂದ ಪುಸ್ತಕ ಪ್ರಕಾಶನದವರು ‘ಸತ್ತವರ ಸೊಲ್ಲು' ಎಂಬ ನಕ್ಸಲ್ ನಾಡಿನ ಮರೀಚಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅಶುತೋಷ್ ಭಾರದ್ವಾಜ್ ಎನ್ನುವ ಪತ್ರಕರ್ತ ಕಂಡ ನಕ್ಸಲ್ ಬದುಕಿನ ಅನಾವರಣವೇ ಈ ಕೃತಿ. ಹಿಂದಿ ಭಾಷೆಯ ಈ ಕೃತಿಯನ್ನು ನೇರವಾಗಿ ಕನ್ನಡಕ್ಕೆ ತಂದಿದ್ದಾರೆ ಉದಯೋನ್ಮುಖ ಬರಹಗಾರರಾದ ಕಾರ್ತಿಕ್ ಆರ್. ಈ ಕೃತಿಗೆ ಬೆನ್ನುಡಿಯನ್ನು ಬರೆಯುವ ಮೂಲಕ ಪ್ರೋತ್ಸಾಹಿಸಿದ್ದಾರೆ ಪದ್ಮನಾಭ…
ಲೇಖಕರು: addoor
October 06, 2024

ಮನುಷ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಾಡಿನ ವಿವಿಧ ಮುಖಗಳನ್ನು ಸರಳವಾಗಿ ಪರಿಚಯಿಸುವ ಪುಸ್ತಕ ಇದು. ಇಂಗ್ಲೀಷಿನಲ್ಲಿ “ವೈಲ್ಡ್ ವುಡ್-ನೋಟ್ಸ್” ಎಂಬ ಶೀರ್ಷಿಕೆ ಹೊಂದಿರುವ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಂ.ಆರ್. ಆನಂದರಾಮಯ್ಯ.
ಇದರಲ್ಲಿರುವ 17 ಪುಟ್ಟ ಅಧ್ಯಾಯಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಮೊದಲ ಅಧ್ಯಾಯ “ವನ್ಯ ಆಕರ್ಷಣೆ”, ನಾವೆಲ್ಲರೂ ಮನೆಯಿಂದ ಹೊರಗೆ ವನಭೋಜನ ಅಥವಾ ರಜಾದಿನವನ್ನು ಏಕೆ ಪ್ರೀತಿಸುತ್ತೇವೆ? ಎಂಬ ಪ್ರಶ್ನೆಯಿಂದ ಶುರು. ಇದಕ್ಕೆ ಹಲವು ಉತ್ತರಗಳನ್ನು…
ಲೇಖಕರು: Ashwin Rao K P
October 05, 2024

ತೆಲುಗು ಭಾಷೆಯ ಖ್ಯಾತ ಕತೆಗಾರ್ತಿ ಹಾಗೂ ಪತ್ರಕರ್ತೆ ಕಲ್ಪನಾ ರೆಂಟಾಲಾ ಅವರ ಕಥಾ ಸಂಕಲನವನ್ನು ರಂಗನಾಥ ರಾಮಚಂದ್ರರಾವು ಅವರು ‘ಐದನೇ ಗೋಡೆ ಮತ್ತು ಇತರ ಕಥೆಗಳು' ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಡಾ ಎಚ್ ಎಲ್ ಪುಷ್ಪ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ...
“ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟಿರುವ ‘ಐದನೇ ಗೋಡೆ’ ಹಲವು ಕಾರಣಕ್ಕೆ ಬಹುಮುಖ್ಯವಾದ ಅನುವಾದಿತ…