ಪುಸ್ತಕ ಪರಿಚಯ
ಲೇಖಕರು: Ashwin Rao K P
January 27, 2025

ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾದ ಸ್ವಾಮಿ ಅಖಂಡಾನಂದ ಇವರು ಬಂಗಾಳಿ ಭಾಷೆಯಲ್ಲಿ ಬರೆದ ಪುಸ್ತಕವನ್ನು ಡಾ. ನರೇಂದ್ರನಾಥ ಬಿ. ಪಾಟೀಲ್ ಆಂಗ್ಲಭಾಷೆಗೆ (In the Lap of the Himalayas) ಅನುವಾದ ಮಾಡಿದ್ದರು. ಆ ಕೃತಿಯ ಮಹತ್ವ ಹಾಗೂ ಸಾರವನ್ನು ಕನ್ನಡ ಬಲ್ಲ ಓದುಗರಿಗಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಹೆಚ್. ರಾಮಚಂದ್ರಸ್ವಾಮಿ. ಸ್ವಾಮಿ ಅಖಂಡಾನಂದ ಅವರ ಹಿಮಾಲಯದ ಅನುಭವಗಳನ್ನು ನಿರೂಪಿಸುವ ಕೃತಿ ಇದು.
ಗಂಗಾಧರ ಮಹಾರಾಜ್ ಎಂದೂ ಬಾಬಾ ಎಂದೂ ಆಪ್ತವಲಯದಲ್ಲಿ ಪ್ರಸಿದ್ಧರಾಗಿರುವ…
ಲೇಖಕರು: Ashwin Rao K P
January 24, 2025

ಬಹುವೇಗದಲ್ಲಿ ಬೆಳೆಯುತ್ತಿರುವ ನಗರ ಎಂದೇ ಹೆಸರಾದ ಬೆಂಗಳೂರು ಬಗ್ಗೆ ಮಾಲಿನಿ ಗೋಯಲ್ ಹಾಗೂ ಪ್ರಶಾಂತ್ ಪ್ರಕಾಶ್ ಅವರು ಆಂಗ್ಲಭಾಷೆಯಲ್ಲಿ ಬರೆದ ‘ಅನ್ ಬಾಕ್ಸಿಂಗ್ ಬೆಂಗಳೂರು’ ಎನ್ನುವ ಕೃತಿಯು ಅದೇ ಹೆಸರಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಲೇಖಕಿ ಪ್ರತಿಭಾ ನಂದಕುಮಾರ್. ಬೆಂಗಳೂರು ನಗರವನ್ನು ಹೊಸ ಆರಂಭಗಳ ನಗರ ಎಂದು ಹೆಸರಿಸಿದ್ದಾರೆ. ಪ್ರತಿಭಾ ನಂದಕುಮಾರ್ ಅವರು ತಮ್ಮ ಅನುವಾದಕಿಯ ಮಾತುಗಳಲ್ಲಿ ಹೇಳಿದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಮಾಲಿನಿ ಗೋಯಲ್ ಮತ್ತು ಪ್ರಶಾಂತ್…
ಲೇಖಕರು: Ashwin Rao K P
January 22, 2025

ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಮುಂಜಾವಿನ ರತ್ನಗಳು’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ನುಡಿಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ಸಾಲುಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ನುಡಿಗಳಿಗಿವೆ. ಕೆಲವು ನುಡಿಗಳು ೨ ವಾಕ್ಯದಲ್ಲೇ ಮುಗಿದರೆ, ಕೆಲವು ೧೫-೨೦ ವಾಕ್ಯಗಳಿಗೆ ಹಿಗ್ಗಿವೆ. ತಮ್ಮ ಮನದಾಳದ ನುಡಿಗಳನ್ನು ರತ್ನಾ ಭಟ್ ಅವರು…
ಲೇಖಕರು: addoor
January 21, 2025

ನಾ. ಕಸ್ತೂರಿ ಅವರು ಕನ್ನಡದ ಸುಪ್ರಸಿದ್ಧ ಹಾಸ್ಯ ಲೇಖಕರು. ಅವರ ಪೂರ್ಣ ಹೆಸರು ಕಸ್ತೂರಿ ರಂಗನಾಥ ನಾರಾಯಣ ಶರ್ಮ. ಅವರ ಹಾಸ್ಯ ಬರಹಗಳು ಸುಲಭಲಭ್ಯವಿಲ್ಲದ ಸಮಯದಲ್ಲಿ, ಅವರ ಉತ್ತಮ ಹಾಸ್ಯಬರಹಗಳನ್ನು ವೈ. ಎನ್. ಗುಂಡೂರಾಯರು ಆಯ್ದು “ಬೆಸ್ಟ್ ಆಫ್ ಕಸ್ತೂರಿ” ಎಂಬ ಪುಸ್ತಕವಾಗಿ ಹಾಸ್ಯಪ್ರಿಯರ ಕೈಗಿತ್ತಿದ್ದಾರೆ.
ಇದರಲ್ಲಿವೆ ನಾ. ಕಸ್ತೂರಿಯವರ ಹಾಸ್ಯ ಬರಹಗಳು, ಕವನಗಳು, ಅನರ್ಥಕೋಶ, ನಗೆ ಚಟಾಕಿಗಳು ಮತ್ತು ಒಂದು ನಾಟಕ.
ಉದ್ಯೋಗ ಹುಡುಕಿ, ಕರ್ನಾಟಕಕ್ಕೆ ಬಂದ ನಾ. ಕಸ್ತೂರಿಯವರು ಕನ್ನಡ ಕಲಿತು,…
ಲೇಖಕರು: Ashwin Rao K P
January 20, 2025

ತಮಿಳು ಭಾಷೆಯ ಖ್ಯಾತ ಕವಿ ಸೀನು ರಾಮಸಾಮಿಯವರ ಆಯ್ದ ಕವನಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಮಲರ್ ವಿಳಿ ಕೆ. ಮಧುಮಿತ. ಇವರ ಈ ಕವನ ಸಂಕಲನಕ್ಕೆ ಡಾ. ಶೀಲಾದೇವಿ ಎಸ್ ಮಳೀಮಠ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳು…
“ಸೀನು ರಾಮಸಾಮಿಯವರ ಕವಿತೆಗಳ ಅನುವಾದಿತ ಕವಿತೆಗಳು "ಮಳೆ ಕುಡಿವ ನಗರ" ಅನುವಾದಕಿ, ಡಾ.ಮಲರ್ವಿಳಿ.ಕೆ, ಮಧುಮಿತ ಅವರು ಅತ್ಯಂತ ಸರಳ ಸಜ್ಜನಿಕೆಯ ಕವಯತ್ರಿ. ಅವರ ಅನುವಾದದಲ್ಲಿ ಓದುಗರನ್ನು ಒಮ್ಮೆಲೆ ಸೆಳೆಯುವ…
ಲೇಖಕರು: Ashwin Rao K P
January 17, 2025

“ಸಾಮಾನ್ಯವಾಗಿ ಸಂಸ್ಕೃತ ವಿದ್ವಾಂಸರು ಸಂಸ್ಕೃತ ಲೇಖಕರೂ ಆದಲ್ಲಿ ಇತರ ಭಾಷೆಗಳ ಬಗೆಗೆ ಅದೊಂದು ಬಗೆಯಾದ ಉದಾಸೀನತೆಯಿರುವುದೆಂಬುದು ಲೋಕದಲ್ಲಿ ಪ್ರಚುರವಾದ ಪ್ರಥೆ. ಕೆಲಮಟ್ಟಿಗೆ ಅಪಪ್ರಥೆಯೂ ಹೌದು. ಒಂದು ವೇಳೆ ಅವರು ಸಂಸ್ಕೃತೇತರ ಭಾಷೆಗಳಲ್ಲಿ -ವಿಶೇಷತಃ ದೇಶ ಭಾಷೆಗಳಲ್ಲಿ -ಬರೆದಾಗ ಅವರ ನುಡಿಗಳಲ್ಲಿ ‘ಸಂಸ್ಕೃತ ಘಾಟು’ ಹೆಚ್ಚಾಗಿರುವುದೆಂಬುದು ಮತ್ತೊಂದು ಆಕ್ಷೇಪ. ಆದರೆ ಡಾ. ವಿಶ್ವಾಸ ಅವರು ಈ ಎರಡು ಆಕ್ಷೇಪಗಳಿಂದಲೂ ಮುಕ್ತರು. ಅವರ ಸಂಸ್ಕೃತ - ಕನ್ನಡಗಳೆರಡೂ ತುಂಬ ಪ್ರಸನ್ನ ಮಧುರ, ನಿಸರ್ಗ…