ಪುಸ್ತಕ ಪರಿಚಯ

ಲೇಖಕರು: Ashwin Rao K P
November 27, 2024
ಮಾಧ್ಯಮ ಕ್ಷೇತ್ರದಲ್ಲಿರುವ ಅನೈತಿಕ ಪೈಪೊಟಿಯು ಮಾಧ್ಯಮ ವೃತ್ತಿ ಮಾಡುವವರನ್ನು ವಿಪರೀತ ಒತ್ತಡದಲ್ಲಿ ಸಿಲುಕಿಸಿದೆ. ಸುದ್ದಿ ಮತ್ತು ಜಾಹೀರಾತುಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಎಲೆಕ್ಟ್ರಾನಿಕ್ ಮಾಧ್ಯಮವು ಮುದ್ರಣ ಮಾಧ್ಯಮದ ಮೇಲೆ ಪ್ರಭಾವ ಬಿರುತ್ತಿದೆ. ರಾಜಕೀಯ ಪಕ್ಷಗಳ ಮುಖಂಡರು ಮಾಧ್ಯಮ ಸಂಸ್ಥೆಗಳ ಒಡೆಯರಾಗುತ್ತಿದ್ದಾರೆ. ಈ ವಿದ್ಯಮಾನಗಳು ಮಾಧ್ಯಮ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮುಡಿಸುತ್ತದೆ. ಇಂದಿನ ಮಾಧ್ಯಮ ಪೀಳಿಗೆಗೆ ಭಾಷಾ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ. ಇಂಥ…
ಲೇಖಕರು: Ashwin Rao K P
November 26, 2024
ಭರವಸೆಯ ಕವಯತ್ರಿ ವಾಣಿ ಭಂಡಾರಿಯವರ ಹೊಸ ಕವನ ಸಂಕಲನ ‘ಖಾಲಿ ಜೋಳಿಗೆಯ ಕನವರಿಕೆಗಳು’ ತಮ್ಮ ಮನದಾಳದ ಮಾತಿನಲ್ಲಿ ವಾಣಿಯವರು ತಾವು ಬರೆದ ಕವನಗಳ ಬಗ್ಗೆ, ಕವನಗಳು ತಮ್ಮೊಳಗೆ ಚಿಗುರೊಡೆದ ಬಗ್ಗೆ ಹೇಳುವುದು ಹೀಗೆ “ಮನದ ಭಾವ ಹಾಡಾದಾಗ” “ಮುಳ್ಳಿನ ಮೇಲಿನ ಸಿಟ್ಟಿಗೆ ಬೇಲಿಗೆ ಬೆಂಕಿ ಹಾಕಬೇಡ ಸಾವಿರ ಮುಳ್ಳುಗಳ ನಡುವೆ ಒಂದು ಹೂ ಅರಳಿತು” (ಗಾಲೀಬ) ಕವಿತೆ ಬರೆಯುವುದೆಂದರೆ ಮನದ ಭಾವಕ್ಕೆ ಹೆಪ್ಪು ಹಾಕಿ ಮಸೆದು ಕಾಯಿಸಿ ಘಮಗುಡಿಸಿ ತುಪ್ಪವಾಗಿಸುವ ಕೆಲಸ. ಇಂತಹ ಮಹತ್ಕಾರ್ಯವು ಯಾಕೆ ಏನು ಹೇಗೆ ಎಲ್ಲಿ…
ಲೇಖಕರು: Ashwin Rao K P
November 22, 2024
ಉದಯೋನ್ಮುಖ ಚಿತ್ರ ನಿರ್ದೇಶಕ, ಕತೆಗಾರ ಕೌಶಿಕ್ ರತ್ನ ಅವರ ನೂತನ ಕಥಾ ಸಂಕಲನ ‘ನಿಧಿ’. ಈ ಕೃತಿಗೆ ಅವರು ಬರೆದ ಲೇಖಕರ ಮಾತುಗಳ ಆಯ್ದ ಭಾಗ ಇಲ್ಲಿದೆ… “ಖಾಲಿ ಜೇಬಲ್ಲಿ ಕೋಟಿಗಟ್ಟಲೆ ದೊಡ್ಡ ಕನಸುಗಳನ್ನು ತುಂಬಿಕೊಂಡು ಊರು, ಮನೆ, ಪ್ರೀತಿ, ಓದು, ಕೆಲಸ ಎಲ್ಲವನ್ನೂ ಬಿಟ್ಟು ರಂಗಭೂಮಿಯ ಮಡಿಲು ಸೇರಿ ನಾಟಕಗಳನ್ನು ಮಾಡುತ್ತಾ, ಧಾರಾವಾಹಿ- ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಅನುಭವಿಸುತ್ತಾ, ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಕಿರು ಚಿತ್ರಗಳನ್ನು ಮಾಡುತ್ತಾ, ನಟರಾಗುವ,…
ಲೇಖಕರು: Ashwin Rao K P
November 19, 2024
ಬರಹಗಾರ್ತಿ, ಪತ್ರಕರ್ತೆ ಪ್ರಿಯಾ ಕೆರ್ವಾಶೆ ತಮ್ಮ ಬಾಲ್ಯದ ನೆನಪುಗಳನ್ನು ‘ಪುಟ್ಟ ಹೆಜ್ಜೆ ದೊಡ್ಡ ಕಣ್ಣು’ ಪುಸ್ತದ ಮೂಲಕ ಹರಡಿದ್ದಾರೆ. ಈ ಕೃತಿಯಲ್ಲಿ ಬಹು ಮುಖ್ಯವಾಗಿ ತುಳುನಾಡಿನಲ್ಲಿ ನಡೆಯುವ ಭೂತದ ಆರಾಧನೆ,ಭೂತ, ಗುಳಿಗ ಮೊದಲಾದುವುಗಳ ಬಗ್ಗೆ ಅವರ ಬಾಲ್ಯದ ನೆನಪುಗಳನ್ನು ಬರೆದು ‘ಇದು ಭೂತ ಕಾಲ’ ಎಂದು ನಿವೇದಿಸಿದ್ದಾರೆ. ಈ ಕೃತಿಗೆ ಸುಂದರವಾದ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ ಜೋಗಿ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಬರಹದ ಕೆಲವು ಸಾಲುಗಳು ಇಲ್ಲಿವೆ… “ಅಪ್ಪನೊಂದಿಗೆ…
ಲೇಖಕರು: addoor
November 18, 2024
ಗೋವಾದ ಮೀನುಗಾರ ದಂಪತಿಗಳ ಮಗ ಜುಜೆ ಎಂಬಾತನ ಬದುಕಿನ ಘಟನೆಗಳ ಮೂಲಕ ಗೋವಾದ ಸ್ವಾತಂತ್ರ್ಯ ಹೋರಾಟದ ಕತೆ ಹೇಳುವ ಪುಸ್ತಕ ಇದು. ಸುರೇಖಾ ಪನಂಡಿಕರ್ ಬರೆದಿರುವ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕೆ. ಸುಧಾ ರಾವ್. ಅಲ್ಲಿನ ಸಮುದ್ರತೀರದಲ್ಲಿ ಆಟವಾಡುತ್ತಾ, ಅಪ್ಪ ಪೆಡ್ರೊ ಮತ್ತು ಅಮ್ಮ ಮರಿಯಾಳಿಗೆ ಬೆಳಗ್ಗೆ ಮೀನು ವಿಂಗಡಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾ ದಿನಗಳೆಯುತ್ತಿದ್ದ ಜುಜೆ. ಶಾಲೆಗೆ ಹೋಗಬೇಕೆಂಬುದು ಅವನ ಕನಸು. ಅದು ಕನಸಾಗಿಯೇ ಉಳಿಯಲು ಕಾರಣ ಅವನ ಹೆತ್ತವರ ಬಡತನ. ಹತ್ತಿರದ…
ಲೇಖಕರು: Ashwin Rao K P
November 15, 2024
‘ಉರಿಯ ಗದ್ದುಗೆ’ ಬಿ.ಆರ್. ಪೊಲೀಸ್ ಪಾಟೀಲ ಅವರ ಕಾದಂಬರಿಯಾಗಿದೆ. ಇದಕ್ಕೆ ಶಶಿಕಾಂತ ಪಟ್ಟಣ ಅವರ ಬೆನ್ನುಡಿ ಬರಹವಿದೆ; ವಿರಕ್ತಪೀಠ ಪರಂಪರೆಯ ತಾಯಿಬೇರು ಎಡೆಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳು. ಅವರ ಬಳಿವಿಡಿದು ಬಂದ ಮಠ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ. ಈ ಮಠದ ೧೯ನೇ ಪೀಠಾಧಿಕಾರಿಗಳಾಗಿ ೧೯೭೪ ಜುಲೈ ೨೯ ರಂದು ಅಧಿಕಾರ ವಹಿಸಿಕೊಂಡ ಪೂಜ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಮೊದಲ ದಿನದಿಂದಲೇ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಪೀಠಕ್ಕೆ ಬರುವ ಮೊದಲು ಹೊಯ್ದಾಟವಿದ್ದರೂ…