ಪುಸ್ತಕ ಪರಿಚಯ

ಲೇಖಕರು: Ashwin Rao K P
January 03, 2025
ಸುಭಾಷ್ ರಾಜಮಾನೆಯವರ ಲೇಖನಗಳ ಸಂಗ್ರಹವು ‘ಕಂಡದ್ದು ಕಾಣದ್ದು’ ಎನ್ನುವ ಹೆಸರಿನಿಂದ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಡಾ. ಕೆ ವಿ ನಾರಾಯಣ. ಇವರು ತಮ್ಮ ಬೆನ್ನುಡಿಯಲ್ಲಿ “ಕಿರಿಯ ಗೆಳೆಯ ಸುಭಾಷ್ ರಾಜಮಾನೆ ಈ ದಿನಮಾನಗಳಲ್ಲಿ ಕಾಣೆಯಾಗುತ್ತಿರುವ ಪುಸ್ತಕಮೋಹಿಗಳ ಪರಂಪರೆಗೆ ಸೇರಿದವರು. ರಾಶಿ ರಾಶಿ ಹೊತ್ತಗೆಗಳನ್ನು ಕೂಡಿಡುವುದರ ಜೊತೆಗೆ ಓದುವ ಹೊಣೆಯನ್ನೂ ಹೊತ್ತಿರುವವರು. ತಾವು ಓದಿದ್ದನ್ನು ಇತರರ ಜೊತೆಗೆ ಹಂಚಿಕೊಳ್ಳಲು ಉತ್ಸುಕರಾಗಿರುವವರು. ಹಾಗೆ ಅವರು ಬರೆದ…
ಲೇಖಕರು: Ashwin Rao K P
January 01, 2025
ಎರಡನೆಯ ವಿಶ್ವಯುದ್ಧ ಕಾಲದ ನೋವು, ನಲಿವು ಮತ್ತು ಗೆಲುವಿನ ಸತ್ಯ ಕಥೆಯ ಎಳೆಯನ್ನು ಹಿಡಿದುಕೊಂಡು ಅದಕ್ಕೆ ತಮ್ಮದೇ ಆದ ಕಲ್ಪನೆಯನ್ನು ಬೆರೆಸಿ ಹದವಾಗಿ ರುಚಿಕರವಾದ ಪಾಕ ಮಾಡಿ ನಮಗೆ ಉಣ ಬಡಿಸಿದ್ದಾರೆ ‘ನಿಗೂಢ ನಾಣ್ಯ' ಖ್ಯಾತಿಯ ಕಾದಂಬರಿಕಾರ ವಿಠಲ್ ಶೆಣೈ. ಈ ಕಾದಂಬರಿಗೆ ಅವರು ಇಟ್ಟ ಹೆಸರು ‘ಹನುಕಿಯಾ - ಆರಿ ಹೋಗದ ದೀಪ' ಎಂದು. ಈ ಕಾದಂಬರಿಯಲ್ಲಿರುವ ಘಟನೆಗಳು ನಡೆಯುವುದು ೧೯೩೯ ರಿಂದ ೨೦೧೫ರ ಕಾಲಘಟ್ಟದಲ್ಲಿ. ‘ಹನುಕಿಯಾ’ ಎನ್ನುವುದು ಯಹೂದಿಗಳ ಪವಿತ್ರ ದೀಪ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ…
ಲೇಖಕರು: Ashwin Rao K P
December 30, 2024
ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ ಎನ್ನುವುದು ಖ್ಯಾತ ಬರಹಗಾರರಾದ ಬೋಳುವಾರು ಮೊಹಮ್ಮದ್ ಅವರು ಬರೆದ ಪ್ರವಾಸ ಕಥನ. ಈ ಪ್ರವಾಸ ಕಥನದಲ್ಲಿ ಬೋಳುವಾರು ಅವರು ನಮ್ಮನ್ನು ಮೆಕ್ಕಾ, ಅಬಿಸೀನಿಯಾ, ತೆಹರಾನ್, ಲಾರ್, ಅಲ್ ಮಸ್ತಾನ್, ಬಗ್ದಾದ್, ಕುವೈತ್, ದುಬೈ, ಮುತ್ತುಪ್ಪಾಡಿ, ಕಾನ್ಪುರ್, ದೆಹಲಿ, ನ್ಯೂಜರ್ಸಿ, ನ್ಯೂಯಾರ್ಕ್, ಸಿಯಾಟಲ್, ಸ್ಯಾನ್ ಫ್ರಾನ್ಸಿಸ್ಕೋ, ಸ್ಯಾನ್ ಹೊಸೆ, ಕುಪರ್ಟಿನೋ ಮೊದಲಾದ ಸ್ಥಳಗಳ ಪರಿಚಯ ಮಾಡಿಕೊಡುತ್ತಾರೆ. ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ ಎನ್ ಎ ಎಂ ಇಸ್ಮಾಯಿಲ್…
ಲೇಖಕರು: Ashwin Rao K P
December 27, 2024
ಲಂಕೇಶ್ ಪತ್ರಿಕೆಯಲ್ಲಿ ಪ್ರತೀ ವಾರ ಮೂಡಿ ಬರುತ್ತಿದ್ದ ‘ಕಟ್ಟೆ ಪುರಾಣ’ ಎಂಬ ವಿಡಂಬನಾತ್ಮಕ ಅಂಕಣ ಬಹು ಜನಪ್ರಿಯವಾಗಿತ್ತು. ಅದನ್ನು ಬರೆಯುತ್ತಿದ್ದವರು ಬಿ.ಚಂದ್ರೇಗೌಡರು. ಇತ್ತೀಚೆಗೆ ‘ಕಟ್ಟೆ ಪುರಾಣ’ ದಿಂದ ಉತ್ತಮವಾದ ಬರಹಗಳನ್ನು ಆಯ್ದು ‘ಬೆಸ್ಟ್ ಆಫ್ ಕಟ್ಟೆ ಪುರಾಣ’ ಎನ್ನುವ ಹೆಸರಿನಲ್ಲಿ ಪುಸ್ತಕವೊಂದನ್ನು ಹೊರ ತಂದಿದ್ದಾರೆ. ಈ ಕೃತಿಗೆ ನಟರಾಜ್ ಹುಳಿಯಾರ್ ಬಹಳ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ. ಲೇಖಕರಾದ ಬಿ.ಚಂದ್ರೇಗೌಡರು ತಮ್ಮ ಪುಸ್ತಕ ಮತ್ತು ಬರಹದ ಬಗ್ಗೆ ಬರೆದ ಕೆಲವು…
ಲೇಖಕರು: Ashwin Rao K P
December 23, 2024
ಎಸ್ ಜಯಶ್ರೀನಿವಾಸ್ ರಾವ್ ಅವರು ಎಸ್ಪೋನಿಯಾ, ಲ್ಯಾಟ್ವಿಯಾ, ಲಿಥುವೇನಿಯಾ ದೇಶದ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಬಾಲ್ಟಿಕ್ ಕಡಲ ಗಾಳಿ’ ಎನ್ನುವ ಹೆಸರಿನ ಈ ಕೃತಿಗೆ ಖ್ಯಾತ ಬರಹಗಾರ ಕೇಶವ ಮಳಗಿ ಅವರು ಮುನ್ನುಡಿಯನ್ನು ಬರೆದು ಹುರಿದುಂಬಿಸಿದ್ದಾರೆ. ಅವರು ಬರೆದ ಮುನ್ನುಡಿಯಿಂದ ಆಯ್ದ ಸಾಲುಗಳು… “ಕಾವ್ಯಾನುವಾದದಲ್ಲಿ ಸಾಹಸಿ ಮನೋಭಾವದ ಎಸ್‌. ಜಯಶ್ರೀನಿವಾಸ ರಾವ್‌ ಆ ಗುಣದಿಂದಾಗಿಯೇ ಇಷ್ಟವಾಗುವ ಕವಿ ಮತ್ತು ಅನುವಾದಕ. ಕನ್ನಡ ಓದುಗರು ಇನ್ನೂ ಮುಖಾಮುಖಿಯಾಗಿರದ ಹೊಸ ಹೊಸ…
ಲೇಖಕರು: Ashwin Rao K P
December 20, 2024
‘ದಲಿತರಿಗೆ ಗಾಂಧೀಜಿ ಮಾಡಿದ ಚಾರಿತ್ರಿಕ ವಂಚನೆ’ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡು ಬಂದಿರುವ ‘ಪೂನಾ ಒಪ್ಪಂದ’ ಎನ್ನುವ ಕೃತಿಯು ೧೯೩೨ರ ಸೆಪ್ಟೆಂಬರ್ ೨೪ರಂದು ನಡೆದ ಒಪ್ಪಂದದ ಬಗ್ಗೆ ಸವಿವರವಾದ ಮಾಹಿತಿ ನೀಡುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರರ ಜೀವನದ ಎರಡು ಪ್ರಮುಖ ಘಟನೆಗಳಾಗಿ ಪೂನಾ ಒಪ್ಪಂದ ಮತ್ತು ಸಂವಿಧಾನ ರಚನೆಯ ಸಂದರ್ಭಗಳನ್ನು ಕಾಣಬಹುದು. ಲಂಡನ್ ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ, ‘ಅಸ್ಪೃಶ್ಯರು ಹಿಂದೂಗಳಲ್ಲ, ಅವರು ಮುಸ್ಲಿಮರಂತೆ ಪ್ರತ್ಯೇಕ ಅಸ್ಮಿತೆಯುಳ್ಳವರು ಎಂಬುದನ್ನು…