ಪುಸ್ತಕ ಪರಿಚಯ
ಲೇಖಕರು: Ashwin Rao K P
November 13, 2024

ವಿಜಯನಗರದ ಸಾಮ್ರಾಟರಾಗಿದ್ದ ಕೃಷ್ಣ ದೇವರಾಯರಿಗೆ ಭಾರತದ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನವಿದೆ. ಇವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿದ್ದರೂ ಸು ರುದ್ರಮೂರ್ತಿಯವರು ಬರೆದ ‘ಶ್ರೀ ಕೃಷ್ಜದೇವರಾಯ’ ಮರೆಯಲಾಗದ ಸಾಮ್ರಾಜ್ಯದ ಸಾಮ್ರಾಟ ಎನ್ನುವ ಕಾದಂಬರಿ ಅವರ ಬಗ್ಗೆ ಹೊಸ ಲೋಕವನ್ನೇ ತೆರೆದಿಡುತ್ತದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಆರ್ ಶೇಷಶಾಸ್ತ್ರಿ. ಅವರು ಬರೆದ ಮುನ್ನುಡಿಯಿಂದ ಆಯ್ದ ಭಾಗ ನಿಮ್ಮ ಓದಿಗಾಗಿ…
“ಭಾರತದ ಅರಸರುಗಳಲ್ಲಿ…
ಲೇಖಕರು: Ashwin Rao K P
November 11, 2024

ಐತಿಚಂಡ ರಮೇಶ ಉತ್ತಪ್ಪ ಅವರ ‘ಕುಶಾ ಕೀ ಕಹಾನಿ’ ಕೃತಿಯು ಲೇಖನಗಳ ಸಂಕಲನ. ಈ ಕೃತಿಗೆ ಬೆನ್ನುಡಿ ಬರೆದಿರುವ ಕವಿರಾಜ್ ಅವರು, ಕುಶಾ ಬರೀ ಕತೆಯಷ್ಟೇ ಹೇಳದೆ ನಾವೆಲ್ಲ ಬಲ್ಲ ದಸರಾ ಪಡೆಯ ಅಭಿಮನ್ಯು, ಬಲರಾಮ ಮುಂತಾದವರ ಕೆಲವು ಮಜಾ ತರುವ ಘಟನೆಗಳನ್ನು ವಿವರಿಸುವಾಗ, ಯಾರೋ ನಮ್ಮವರ ಬಗ್ಗೆಯೇ ಗಾಸಿಪ್ ಮಾಡಿದಂತೆ ಕಿವಿ, ಮನಸ್ಸುಗಳಿಗೆ ಆಪ್ತವೆನ್ನಿಸುತ್ತದೆ. ನಿಜವಾಗಿಯೂ ಆನೆಗಳಿಗೆ ಅದರಲ್ಲೂ ಕಥಾನಾಯಕ ಕುಶನಿಗೆ ಇಷ್ಟು ಹಾಸ್ಯ ಪ್ರಜ್ಞೆ ಇದೆಯೋ ಗೊತ್ತಿಲ್ಲ. ಆದರೆ ಕುಶನ ಮಾತು ಕಟ್ಟುತ್ತಾ ಹೋಗಿರುವ…
ಲೇಖಕರು: Ashwin Rao K P
November 09, 2024

ಇದೊಂದು ರೋಚಕ ಕಥೆ. ಕೇವಲ ರೋಚಕ ಕಥೆ ಮಾತ್ರವಲ್ಲ ಸತ್ಯ ಕಥೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ- ಪಿಶಾಚಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ ಶವಸಾಧನೆ ಇತ್ಯಾದಿ ನಡೆಸುತ್ತಾರೆ. ಅಂತಿಮವಾಗಿ ‘ಕರ್ಣ-ಪಿಶಾಚಿ’ ಅವರ ವಶವಾಗುತ್ತದೆ.
ಸುರೇಶ್ ಸೋಮಪುರ ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಗಳಿಸಿದ ಚಮತ್ಕಾರಗಳನ್ನು ಮಾನವ…
ಲೇಖಕರು: Ashwin Rao K P
November 07, 2024

ಹಳೆಮನೆ ರಾಜಶೇಖರ ಅವರು ಬರೆದ ವಿಭಿನ್ನ ಕಾದಂಬರಿ ‘ಒಡಲುಗೊಂಡವರು’. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಅನುಪಮಾ ಪ್ರಸಾದ್ ಅವರು. ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಸ್ನೇಹಮಯಿ ರಾಜಶೇಖರ ಅವರೆ ನೀವು ಬರೆದ ಕಾದಂಬರಿಯ ಹಸ್ತ ಪ್ರತಿ ಓದಿ ಅಭಿಪ್ರಾಯ ಬರೆಯಬೇಕೆಂದು ಕೇಳಿದ ನಿಮ್ಮ ವಿಶ್ವಾಸಕ್ಕೆ ಶರಣು. ನೀವು ಮಿಂಚಂಚೆಯಲ್ಲಿ ಕಾದಂಬರಿ ಕಳುಹಿಸಿದ ಸಮಯದಲ್ಲಿ ನಾನು ಮತ್ತೊಮ್ಮೆ ನನ್ನ ಮನೆ ಬದಲಿಸುವ ತರಾತುರಿಯಲ್ಲಿದ್ದೆ. ಇರಲಿ ಬಿಡಿ. ಮನೆಯ ಸಾಮಗ್ರಿಗಳ ಮಾರಾಪು…
ಲೇಖಕರು: Ashwin Rao K P
November 05, 2024

ಅಭಿಮನ್ಯು ದಿ ಗ್ರೇಟ್ ’ ಐತಿಚಂಡ ರಮೇಶ ಉತ್ತಪ್ಪ ಅವರ ಲೇಖನಗಳ ಸಂಕಲನ. ಈ ಕೃತಿಯಲ್ಲಿ ಒಂದು ಸಾಕಾನೆ ಜನರ ಮೇಲೆ ಇಷ್ಟೊಂದು ಪ್ರಭಾವ ಬೀರಲು ಸಾಧ್ಯವೇ ಅನ್ನುವಂತಹ ವಿಚಾರ ಪ್ರಸ್ತಾಪನೆ ಆಗುತ್ತದೆ. ಮಕ್ಕಳಿಂದ ಹಿರಿಯರ ತನಕ ಅಭಿಮನ್ಯುವಿನ ಮೇಲೆ ಇದ್ದಂತಹ ಪ್ರೀತಿಯನ್ನು ಇಲ್ಲಿ ಲೇಖಕರು ಪ್ರಸ್ತಾಪಿಸುತ್ತಾರೆ. ಹುಲಿ ಸೆರೆ ಕಾರ್ಯಚರಣೆಯಲ್ಲಿಯೂ ಈತನ ಧೈರ್ಯಕ್ಕೆ ಸರಿಸಾಟಿ ಇಲ್ಲ. ಕಾರ್ಯಾಚರಣೆಯ ವೇಳೆ ಇತರ ಆನೆಗಳು ಹುಲಿ ವಾಸನೆ ಬರುತ್ತಿದ್ದಂತೆ ಮುಂದೆ ಹೋಗಲು ಅಂಜುತ್ತವೆ. ಆದರೆ, ಅಭಿಮನ್ಯು, ಹುಲಿ…
ಲೇಖಕರು: addoor
November 05, 2024

ಕನ್ನಡದ ಹೆಸರುವಾಸಿ ಸಾಹಿತಿ ಬೀchi ಅವರ 26ನೆಯ ಪುಸ್ತಕ ಇದು. ಹಾಸ್ಯ ಸಾಹಿತಿ ಹಾಗೂ ವಿಡಂಬನಾ ಸಾಹಿತಿ ಎಂದೇ ಅವರು ಜನಪ್ರಿಯರು.
ಇದು ಅವರ 108 ಪುಟ್ಟ ಬಿಡಿ ಬರಹಗಳ ಸಂಕಲನ. ಎಂಟರಿಂದ ಹದಿನೈದು ಸಾಲುಗಳ ಹಲವು ಬರಹಗಳು ಇದರಲ್ಲಿವೆ. ಅದಲ್ಲದೆ, ಪ್ರತಿಯೊಂದು ಬರಹದ ಪುಟದ ಕೆಳಭಾಗದಲ್ಲಿ ಸಣ್ಣ ಅಕ್ಷರಗಳಲ್ಲಿ ಚಿಂತನೆಗೆ ಹಚ್ಚುವ ಇನ್ನೊಂದು ಚುಟುಕು ಬರಹವೂ ಇದೆ.
ಇವು ಓದಿ ಮರೆಯಬಹುದಾದ ಬರಹಗಳಲ್ಲ ಎಂಬುದೇ ಇವುಗಳ ವಿಶೇಷತೆ. ಓದಿದಾಗ ಕಚಗುಳಿ ಇಡುವ ಈ ಬರಹಗಳು ಅನಂತರ ನಮ್ಮನ್ನು ಚಿಂತನೆಗೆ…