ಪುಸ್ತಕ ಪರಿಚಯ

June 26, 2023
"ಡುಮಿಂಗ" ಎಂಬ ಕಚಗುಳಿಯಿಕ್ಕುವ ಹೆಸರು ಹೊತ್ತ ಶಶಿ ತರೀಕೆರೆಯವರ ಮೊದಲ ಕಥಾಸಂಕಲನ ಇದು. ಈ ಕತೆಗಳನ್ನು ಓದುವಾಗ ಶಶಿ ತರೀಕೆರೆಯವರು ಕಥೆಗಳಿಗೆ ಹೊಸಬರೆನ್ನುವುದು(?) ನಂಬಲಾಗದ ವಿಷಯ. ಇಲ್ಲಿರುವ ಕತೆಗಳನ್ನು ಹೊಸ ಮನಸ್ಥಿತಿಯಿಂದ ಧ್ಯಾನಿಸಿ ಬರೆದಂತಿವೆ. ಇಂದಿನ ಪೀಳಿಗೆಯ ಮಾನಸಿಕ ತಲ್ಲಣಗಳು ಮತ್ತು ದಿನೇ ದಿನೇ ದ್ವೀಪವಾಗುತ್ತಾ ಜಟಿಲಗೊಳ್ಳುತ್ತಿರುವ ಅವರ ಭಾವನಾಜಗತ್ತಿನ ಇಣುಕು ನೋಟವಿದೆ. ಈ ಸಂಕಲನದ ಬಗ್ಗೆ ಮೂರು ವಿಷಯಗಳನ್ನು ಹೇಳಬೇಕು. ಒಂದು ಕತೆಗಳ ಭಾಷೆ ಮತ್ತು ನಿರೂಪಣಾ ಶೈಲಿ. ಜೇಡಿ…
ಲೇಖಕರು: Ashwin Rao K P
June 24, 2023
“ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್" ಎಂಬ ವಿಭಿನ್ನ ಹೆಸರಿನ ಕಥಾ ಸಂಕಲನವನ್ನು ಹೊರ ತಂದಿದ್ದಾರೆ ಭರವಸೆಯ ಕಥೆಗಾರರಾದ ಮುನವ್ವರ್ ಜೋಗಿಬೆಟ್ಟು ಇವರು. ಸುಮಾರು ೧೧೦ ಪುಟಗಳ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಮತ್ತೊರ್ವ ಕತೆಗಾರ ಕೇಶವ ಮಳಗಿ ಇವರು. ಇವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮಗಾಗಿ... “ತಮ್ಮ ‘ಇಶ್ಖಿನ ಒರತೆಗಳು’ ಕವನ ಸಂಕಲನದಿಂದ ಕೆಲವು ಓದುಗರಿಗಾದರೂ ಪರಿಚಿತರಾದ ಮುನವ್ವರ್ ಜೋಗಿಬೆಟ್ಟು ಇದೀಗ ಹೊಸ ಕಥಾ ಸಂಕಲನದ ಮೂಲಕ ಓದುಗರನ್ನು ಮತ್ತೊಮ್ಮೆ…
ಲೇಖಕರು: Ashwin Rao K P
June 22, 2023
ಕವಿತಾ ಸಾಲಿಮಠ ಅವರ ಗಝಲ್ ಗಳ ಸಂಗ್ರಹವೇ “ದರ್ದಿಗೆ ದಾಖಲೆಗಳಿಲ್ಲ". ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಹೈದರ್ ಹೈ. ತೋರಣಗಲ್ಲು ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ… ಭಾವಕ್ಕೆ ಜೀವ ಕೊಟ್ಟ ಕವಿತ ತನ್ ಉಜಲಾ ಮನ್ ಮೈಲಾ ಸಾಧು ನಾಮ್ ಅನೇಕ್ ಹಮ್ ಸೆ ತೋ ಕಾಲಾ ಕವ್ವ ಭಲಾ ಜೋ ಅಂದರ್ ಬಹಾರ್ ಏಕ್ ಶತಮಾನಗಳ ಹಿಂದೆ ಬರೆದ ಸಂತ ಕಬೀರ ದಾಸರ ಈ ದೋಹ ಅಂತರಂಗದ ಮಲೀನತೆಯನ್ನ ತೊಳೆದು ಒಳ ಹೊರದ ಆತ್ಮ ಶುದ್ದಿಗೆ ಅನುವಾಗಲು ಎಚ್ಚರಿಸುವ…
ಲೇಖಕರು: Ashwin Rao K P
June 20, 2023
‘ಕುಟುಂಬ' ಎಂಬ ಕಥಾ ಸಂಕಲನವನ್ನು ಸಂಪಾದಿಸಿದ್ದಾರೆ ಶೈಲಜಾ ಸುರೇಶ್ ಇವರು. ೧೬೦ ಪುಟಗಳ ಈ ಸಂಕಲನದ ಪ್ರಾರಂಭದ ಕತೆಗಳಾದ ಮಮತಾಮಯಿ, ವರ್ಜಿನ್ ಬೇಬಿ ಇಂತಹ ದಿಟ್ಟ ಮನೋಭಾವದ ಮುಟ್ಟುವಿಕೆಯಾಗಿದೆ. ಯೋಧನ ಮಡದಿ, ಕಡಲಿನಾಚೆಯ ಕುಡಿಗಳು... ಮೊದಲಾದವು ಪ್ರಸ್ತುತ ವಿಷಯಗಳೇ, ಉಳಿದ ಕೆಲವು ಕತೆಗಳಲ್ಲೂ ಪ್ರಕೃತಿ ವರ್ಣನೆ ಸೂರೆಯಾಗಿರುವುದನ್ನು ನೋಡಿದರೆ ಮಹಿಳಾ ಸಾಹಿತ್ಯಕ್ಕಿದ್ದ ಒಂದು ಅಪವಾದ ದೂರವಾದಂತೆನಿಸಿತು" ಎನ್ನುತ್ತಾರೆ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಲೇಖಕಿ ಎಸ್‌.ವಿ. ಪ್ರಭಾವತಿ. ಅವರು…
ಲೇಖಕರು: Ashwin Rao K P
June 17, 2023
‘ನೀ ದೂರ ಹೋದಾಗ’ ಇದು ಫೌಝಿಯಾ ಸಲೀಂ ಅವರ ಕಾದಂಬರಿ. ಕಾದಂಬರಿ ಬರೆಯುವವರೇ ಅಪರೂಪವಾಗಿರುವಾಗ ಇವರು ಬರೆದ ಕಾದಂಬರಿಯು ಹೊಸ ಆಕಾಂಕ್ಷೆಯನ್ನು ಹುಟ್ಟುಹಾಕುತ್ತದೆ. ಹೆಣ್ಣು ಮಗಳೊಬ್ಬಳು ಕಷ್ಟ ಪಟ್ಟು ದುಡಿದು, ಯಾರ ಸಹಾಯವನ್ನೂ ಕೋರದೆ ಹಣ ಗಳಿಸಿ ದೂರದ ದುಬೈಗೆ ಹೋಗುವ ಸಂಗತಿಯನ್ನು ಕಾದಂಬರಿಯಲ್ಲಿ ರೋಚಕವಾಗಿ ವರ್ಣಿಸಿದ್ದಾರೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಮೋಹನ್ ಕುಮಾರ್ ಟಿ. ಇವರು. ಇವರ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ... “ಫೌಝಿಯಾ ಸಲೀಂ(ದುಬೈ)ರವರ ನಾಲ್ಕನೆಯ…
ಲೇಖಕರು: Ashwin Rao K P
June 15, 2023
ಶಿವಕುಮಾರ ಮಾವಲಿ ಅವರ ಮೊದಲ ಕಥಾ ಸಂಕಲನ `ದೇವರು ಅರೆಸ್ಟ್ ಆದ’. ಇಲ್ಲಿಯ ಕತೆಗಳ ನವೀನ ನಿರೂಪಣೆ, ಸೃಜನಾತ್ಮಕತೆ, ನವಿರಾದ ಹಗುರ ಭಾವಗಳು ಓದಿನೊಂದಿಗೆ ನಮ್ಮದಾಗುತ್ತದೆ. ತಮ್ಮ ತಾಜಾತನದ ಕತೆಯ ಎಳೆಯೊಂದಿಗೆ ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗುತ್ತವೆ. ೧೦೪ ಪುಟಗಳ ಈ ಪುಟ್ಟ ಕಥಾ ಸಂಕಲನದ ಎಲ್ಲಾ ಕತೆಗಳು ಓದುವಂತಿವೆ. 'ದೇವರು ಅರೆಸ್ಟ್ ಆದ’ ಕತೆಯು ಬರಹಕ್ಕೂ ಬದುಕಿಗೂ ಸಂಬಂಧವಿಲ್ಲದೆ ನಾಡಿಗೆ ಬುದ್ಧಿ ಹೇಳುವ ಆಷಾಡಭೂತಿಗಳ ಬಣ್ಣ ಬಯಲು ಮಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಕತೆ ಎನಿಸಿಕೊಂಡರೂ…