ಪುಸ್ತಕ ಪರಿಚಯ
ಲೇಖಕರು: Ashwin Rao K P
July 08, 2024

ಶಾಲಾ ಶಿಕ್ಷಕರಾಗಿರುವ ಜನಾರ್ದನ ದುರ್ಗ ಅವರ ಚೊಚ್ಚಲ ಕೃತಿ ‘ಶಾಂತೇಶ್ವರನ ವಚನಗಳು' ಬಿಡುಗಡೆಯಾಗಿದೆ. ಸಂತೋಷದ ಸಂಗತಿ ಎಂದರೆ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಚೊಚ್ಚಲ ಕೃತಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಈ ಕೃತಿಯು ಪಡೆದುಕೊಂಡಿದೆ. ಹಲವಾರು ಸಮಯದಿಂದ ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸಾಪ್ ಬಳಗಗಳಲ್ಲಿ ತಮ್ಮ ‘ಶಾಂತೇಶ್ವರನ ವಚನಗಳನ್ನು' ಹಂಚಿಕೊಳ್ಳುತ್ತಿದ್ದ ಜನಾರ್ದನ ದುರ್ಗ ಅವರು ತಾವು ಬರೆದ ವಚನಗಳಲ್ಲಿ ಅತ್ಯುತ್ತಮ ಎನಿಸಿದ ೨೦೦ ವಚನಗಳನ್ನು ಆಯ್ದು ಈ…
ಲೇಖಕರು: Ashwin Rao K P
July 05, 2024

ನಾತಿಚರಾಮಿ’ ಕೃತಿಯು ಎನ್. ಸಂಧ್ಯಾರಾಣಿ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ಮದುವೆಯ ಪ್ರಮಾಣದಲ್ಲಿ ‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್ಲಿ ಕಾಮಕ್ಕೂ ಅನ್ವಯವಾಗುತ್ತದೆ. ಈ ಪ್ರಮಾಣವು ಗೌರಿಯ ಪಾಲಿಗೆ ನಂಬಿಕೆ, ಭರವಸೆ ಆಗಬೇಕಿತ್ತು, ಆದರೆ ಅದು ಒಂದು ಅಗೋಚರ ಬಂಧನವೂ ಆಗಿರುತ್ತದೆ. ಆ ಬಂಧನ ಕೇವಲ ಮಾಡಿದ ಆ ಪ್ರಮಾಣದ್ದಲ್ಲ, ಬಾಲ್ಯದಿಂದಲೂ ಸಮಾಜದಿಂದ ಕಲಿಸಲ್ಪಟ್ಟ ಸೋ ಕಾಲ್ಡ್ ಮೌಲ್ಯಗಳದ್ದು, ನಂಬಿಕೆಗಳದ್ದು,…
ಲೇಖಕರು: Ashwin Rao K P
July 03, 2024

ನಿವೃತ್ತ ಪೋಲೀಸ್ ಮಹಾ ನಿರ್ದೇಶಕರಾದ ಡಾ. ಡಿ ವಿ ಗುರುಪ್ರಸಾದ್ ಅವರ ಹೊಸ ಕೃತಿ ‘ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೋಲೀಸ್ ಕಥೆಗಳು' ಅಪರಾಧ ಜಗತ್ತಿನ ನೈಜ ಕಥೆಗಳನ್ನು ನಮ್ಮ ಮುಂದೆ ಪತ್ತೇದಾರಿ ಕಥೆಗಳಂತೆ ನಿರೂಪಿಸುತ್ತದೆ. ಸುಮಾರು ೧೫೦ ಪುಟಗಳ ಈ ಕಥಾ ಸಂಕಲನವನ್ನು ನೀವು ಕೈಗೆತ್ತಿಗೊಂಡರೆ ಓದಿ ಮುಗಿಯುವುದೇ ಗೊತ್ತಾಗುವುದಿಲ್ಲ. ಈ ಕೃತಿಗೆ ಡಾ ಡಿ ವಿ ಗುರುಪ್ರಸಾದ್ ಅವರು ಬರೆದ ಲೇಖಕರ ಮಾತುಗಳು ಹೀಗಿವೆ...
“ಸುಮಾರು ನಲವತ್ತು ವರ್ಷಗಳಿಂದ ನೈಜ ಅಪರಾಧಗಳು ಮತ್ತವುಗಳ ಪತ್ತೆಯ ಅಪರಾಧಗಳಿಗೆ…
ಲೇಖಕರು: Ashwin Rao K P
July 01, 2024

ಹೊಂಬಳ್ಳಿ' ಹಿರಿಯ ಲೇಖಕಿ ಎಂ.ಆರ್. ಕಮಲ ಅವರ ಹಗುರ ಪ್ರಬಂಧಗಳ ಸಂಕಲನ. ಬಯಲು ಸೀಮೆಯ ಬೇಲಿಗಳಲ್ಲಿ, ತೆಂಗಿನ ತೋಟಗಳಲ್ಲಿ, ಎಲ್ಲೆಂದರಲ್ಲಿ ಹಬ್ಬುವ ಬಳ್ಳಿಯೇ `ಹೊಂಬಳ್ಳಿ’. ತೋಟದಲ್ಲಿ ಬಿದ್ದಿರುವ ಕುರುಂಬಾಳೆ, ಹೆಡೆಮಟ್ಟೆ, ಸೀಬಿ, ಸೋಗೆ ಮುಂತಾದ ತೆಂಗಿನ ಭಾಗಗಳನ್ನು ಹೊರೆ ಕಟ್ಟಲು ಈ ಬಳ್ಳಿಯನ್ನು ಬಳಸುತ್ತಾರೆ. ಈ ಹೊರೆಯಲ್ಲಿ ನಿರ್ದಿಷ್ಟ ವಸ್ತುಗಳು ಇರಬೇಕೆಂಬ ನಿಯಮವಿಲ್ಲ. ಗಟ್ಟಿಯಾದ ಈ ಬಳ್ಳಿ ಎಲ್ಲವನ್ನು ಬಿಗಿಯಾಗಿ ಹಿಡಿದಿಡಬಲ್ಲದು. ಹಾಗಾಗಿ ಅನೇಕ ವಿಷಯಗಳನ್ನು ಒಟ್ಟಾಗಿಸಿರುವ ಈ ಪ್ರಬಂಧ…
ಲೇಖಕರು: Ashwin Rao K P
June 17, 2024

ಕ್ಯಾನ್ಸರ್ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ವೈದ್ಯರಾದ ಡಾ. ಅಪರ್ಣಾ ಶ್ರೀವತ್ಸ ಅವರು ಬರೆದ ಪುಸ್ತಕವೇ ‘ಕ್ಯಾನ್ಸರ್ ಗೆ ಆನ್ಸರ್'. ಈ ಕೃತಿಯಲ್ಲಿ ಅವರು ಕ್ಯಾನ್ಸರ್ ಪತ್ತೆ, ಅವರ ಗುಣಲಕ್ಷಣಗಳು, ವೈದ್ಯೋಪಚಾರ ಮೊದಲಾದುವುಗಳನ್ನು ಸರಳವಾಗಿ ವಿವರಿಸುತ್ತಾ ಹೋಗಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ…
“‘ಕ್ಯಾನ್ಸರ್’ ಎಂಬ ಹೆಸರಿಗೆ ಕೆಚ್ಚೆದೆಯನ್ನೂ ಅಡಗಿಸುವ ಶಕ್ತಿ ಇದೆ. ‘ಕ್ಯಾನ್ಸರ್’ ಇದೆ ಎಂದು ಪತ್ತೆ ಆದಾಗ ಕೇವಲ ರೋಗಿಯಷ್ಟೇ ಅಲ್ಲ, ಇಡೀ ಪರಿವಾರವೇ ದುಃಖ ಸಾಗರದಲ್ಲಿ…
ಲೇಖಕರು: addoor
June 16, 2024

ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ.
ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ. ನಾಡೋರ, ಎನ್ಕೆ. ಸುಬ್ರಹ್ಮಣ್ಯ, ದು. ನಿಂ. ಬೆಳಗಲಿ, ನೀಲಾಂಬರಿ ಮತ್ತು ಸಹನ.
ಅಮ್ಮ ಹೇಳುತ್ತಿದ್ದ ಶೌರ್ಯದ ಕತೆಗಳನ್ನು ಕೇಳುತ್ತಾ ಬೆಳೆದಿದ್ದ ಶಿವಾಜಿ ಆ ಕತೆಗಳಿಂದ ಬಹಳ ಪ್ರಭಾವಿತನಾಗಿದ್ದ; ಮುಂದೆ ಅವನು ಒಬ್ಬ ಧೀರ ಯೋಧನಾಗಿ ರೂಪುಗೊಂಡು ಮರಾಠಾ ಸಾಮ್ರಾಜ್ಯ ಕಟ್ಟುವ…