ಪುಸ್ತಕ ಪರಿಚಯ
ಲೇಖಕರು: Ashwin Rao K P
November 19, 2022

ನಂದಕುಮಾರ್ ಜಿ.ಕೆ ಅವರ ಇನ್ನೊಂದು ಕಥಾಸಂಕಲನ ಬಿಳೆ ದಾಸ್ವಾಳವಾಗಿದೆ. ಎಲ್ಲಾ ಸಂಗತಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಲೇ ಇನ್ನೊಂದಷ್ಟು ಬೆಲೆಬಾಳುವ ಸರಕನ್ನು ಹೊತ್ತೊಯ್ದು ಓದುಗರನ್ನು ತಲುಪಲು ಸಿದ್ದವಾಗಿದೆ ಅನ್ನೋದು ಐದು ಕತೆಗಳನ್ನು ರಂಗನಾಥ ಶಿವಮೊಗ್ಗ ಅವರು ಮುನ್ನುಡಿಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದು ಹೀಗೆ.... “ಆ ಬೆಲೆಬಾಳುವ ಸರಕುಗಳಲ್ಲಿ ನಾ ಕಂಡ ಒಂದಷ್ಟನ್ನ ನಿಮ್ಮ ಮುಂದೆ ಹಂಚಿಕೊಳ್ಳಬಲ್ಲೆ, ನನ್ನ ಕಣ್ಣಿಗೆ ಕಾಣದೇ ಉಳಿದದ್ದು ಓದುವ ನಿಮಗೆ ಹೊಳೆಸೀತು. ಹಣೆಪಟ್ಟಿ…
ಲೇಖಕರು: Ashwin Rao K P
November 17, 2022

ಡಾ. ಮುಮ್ತಾಜ್ ಬೇಗಂ ಅವರು ತಮ್ಮ ಲೇಖನಗಳ ಸಂಕಲನವನ್ನು ‘ಲೋಕವೇ ತಾನಾದ ಬಳಿಕ' ಎಂಬ ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಹೆಣ್ಣು ತನ್ನ ಬದುಕಿನ ಹಲವು ಮಜಲುಗಳಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾ ಎಲ್ಲರೊಳಗಿದ್ದು ತಾನಾಗ ಬಯಸುವುದಿದೆಯಲ್ಲ ಅದು ನಿಜವಾದ ಲೋಕವಾಗುವುದು ಎಂದರ್ಥ. ಲೋಕದ ಸೃಷ್ಟಿಗೆ ಗಂಡಿನಷ್ಟೇ ಹೆಣ್ಣು ಕಾರಣಳಾಗಿದ್ದರೂ ಆಕೆಯನ್ನು ಅರ್ಥೈಯಿಸುವ ಕ್ರಮ ಇನ್ನೂ ಬದಲಾಗಿಲ್ಲ ಎನ್ನುತ್ತಾರೆ ಲೇಖಕಿ ಮುಮ್ತಾಜ್ ಬೇಗಂ. ಇವರು ತಮ್ಮ ‘ಲೋಕವೇ ತಾನಾದ ಬಳಿಕ' …
ಲೇಖಕರು: addoor
November 17, 2022

ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ ಇದು. ಹೊಸ ಪೀಳಿಗೆಯ ಕವಿ ಎಂದು ಆರಂಭದಲ್ಲಿ ಗುರುತಿಸಲ್ಪಟ್ಟ ಎಚ್.ಎಸ್. ವೆಂಕಟೇಶಮೂರ್ತಿ ಅವರು ಕನ್ನಡಿಗರ ಮೆಚ್ಚಿನ ಕವಿ ಹಾಗು ಸಾಹಿತಿಯಾಗಿ ಬೆಳೆದವರು. ಕನ್ನಡದ ಮೇರುಕೃತಿಗಳ ಆ ಮಾಲೆಗೆ ಇದು ಆಯ್ಕೆಯಾದದ್ದು ಅವರ ಪ್ರತಿಭೆಯ ದ್ಯೋತಕ.
ಕನ್ನಡದ ಪ್ರಸಿದ್ಧ ವಿಮರ್ಶಕರಾದ ಕೀರ್ತಿನಾಥ ಕುರ್ತುಕೋಟಿ ಅವರು ಇದರ ಮುನ್ನುಡಿಯಲ್ಲಿ ಬರೆದಿರುವ ಮಾತುಗಳು: “.... “ಇಂಡಿಯಾದ ನಿಬಿಡಾರಣ್ಯಗಳಲ್ಲಿ…
ಲೇಖಕರು: Ashwin Rao K P
November 15, 2022

ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು ಇವರ ‘ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ' ಮಾಲಿಕೆಯ ಎರಡನೇ ಪುಸ್ತಕವೇ ‘ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ'. ಇದನ್ನು ಬರೆದಿದ್ದಾರೆ ಅಡ್ಡೂರು ಕೃಷ್ಣ ರಾವ್ ಇವರು. ಇವರು ನಿವೃತ್ತ ಬ್ಯಾಂಕ್ ಅಧಿಕಾರಿ, ಬಳಕೆದಾರರ ವೇದಿಕೆಯ ಸಂಚಾಲಕರು, ಸಾವಯಕ ಕೃಷಿಕ ಗ್ರಾಹಕ ಬಳಗದ ಗೌರವ ಅಧ್ಯಕ್ಷರು ಹಾಗೂ ಸ್ವತಃ ಕೃಷಿಕರು. ವಿಷಮುಕ್ತ ಆಹಾರವನ್ನು ನಾವು ನಮ್ಮ ದಿನಬಳಕೆಯಲ್ಲಿ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಈ ಪುಟ್ಟ ಪುಸ್ತಕದಲ್ಲಿ ಬಹಳ ಸೊಗಸಾಗಿ ಬರೆದಿದ್ದಾರೆ.…
ಲೇಖಕರು: Ashwin Rao K P
November 12, 2022

ಮೋಹನದಾಸ ಕರಮಚಂದ ಗಾಂಧಿ ಇವರನ್ನು ಜಗತ್ತು ಮಹಾತ್ಮ ಗಾಂಧೀಜಿ ಎನ್ನುವ ಹೆಸರಿನಿಂದ ಕರೆಯುತ್ತದೆ. ಮಹಾತ್ಮರು ಹೇಳಿದ ಅತ್ಯುತ್ತಮ ಮಾತುಗಳನ್ನು ಈ ಪುಟ್ಟ ಹೊತ್ತಗೆಯಲ್ಲಿ ಸಂಗ್ರಹಿಸಿ ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬಿಡುಗಡೆ ಮಾಡಿದೆ. ‘My Life is My Message’ ಎನ್ನುವ ಆಂಗ್ಲ ಭಾಷೆಯ ಮಾಹಿತಿಯನ್ನು ಕನ್ನಡದಲ್ಲಿ ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಹೆಸರಿನಲ್ಲಿ ಅನುವಾದಿಸಲಾಗಿದೆ. ೪೪ ಪುಟಗಳ ಪುಟ್ಟ ಪುಸ್ತಕದಲ್ಲಿರುವ ಮಹಾತ್ಮರ ಕೆಲವು ಆಯ್ದ ನುಡಿಗಳು…
ಲೇಖಕರು: Ashwin Rao K P
November 10, 2022

ವಿಶ್ವ ಮಾನವ ಕುವೆಂಪು ಪುಸ್ತಕವನ್ನು ಕರ್ನಾಟಕ ಸರಕಾರದ ಅಧೀನದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿದೆ. ಪ್ರತೀ ವರ್ಷ ಕುವೆಂಪು ಅವರ ಜನ್ಮ ದಿನವನ್ನು ಕರ್ನಾಟಕ ಸರಕಾರ ‘ವಿಶ್ವ ಮಾನವ ದಿನಾಚರಣೆ' ಎಂದು ಆಚರಿಸುತ್ತದೆ. ಆ ಹಿನ್ನಲೆಯಲ್ಲಿ ಈ ಕಿರು ಹೊತ್ತಿಗೆಯನ್ನು ಹೊರತಂದಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯಲ್ಲಿ ಕಂಡ ನುಡಿಗಳು “…