ಪುಸ್ತಕ ಪರಿಚಯ
ಲೇಖಕರು: ಬರಹಗಾರರ ಬಳಗ
November 26, 2022

ಮೊದಲೆಲ್ಲ ಹೆಚ್ಚೆಚ್ಚು ಪತ್ತೇದಾರಿ ಕಾದಂಬರಿ ಓದುತ್ತಿದ್ದೆ. ಅದೊಮ್ಮೆ ಅಪ್ಪ ಆತನ ಪರಿಚಯದವರಿಂದ ಎನ್.ನರಸಿಂಹಯ್ಯ ಅವರು ಬರೆದ 'ಕುಂಟ,ಕುರುಡ,ಕುರೂಪಿ' ಅಂಬುದೊಂದು ಪತ್ತೇದಾರಿ ಕಾದಂಬರಿ ಕಡ ತಂದಿದ್ದರು. ಒಮ್ಮೆ ಹಿಡಿದರೆ ಓದುವವರೆಗೆ ಬಿಡದಷ್ಟು ರೋಮಾಂಚನಕಾರಿ ಕಥಾವಸ್ತು ಅದು.ಆಮೇಲೆ ಅದೇ ಅಭ್ಯಾಸವಾಗಿ ಅಪ್ಪನಿಗೆ ದುಂಬಾಲು ಬಿದ್ದು, ಆತನ ಗೆಳೆಯರ ಮನೆಯವರೆಗೂ ಹೋಗಿ ಬೆಳೆಗೆರೆಯ 'ಒಮಾರ್ಟಾ' ಭೈರಪ್ಪರ 'ವಂಶವೃಕ್ಷ' ಐದಾರು ಕಾದಂಬರಿ ತಂದು ಬಿಡದೆ ಓದಿದೆ. ಆಗಿನ ಕಾಲಕ್ಕೆ ಮಯೂರದಲ್ಲಿ…
ಲೇಖಕರು: ಬರಹಗಾರರ ಬಳಗ
November 25, 2022

ಕಸ್ತೂರ್ ಬಾ ರ ಅಂತಿಮ ಸಂಸ್ಕಾರದೊಂದಿಗೆ ಆರಂಭಗೊಳ್ಳುವ ಕಾದಂಬರಿ flashback ತಂತ್ರದ ಮೂಲಕ ಕಸ್ತೂರ್ ಬಾ ಹಾಗೂ ಗಾಂಧಿಯವರ ಬಾಲ್ಯದ ಸುಂದರ ಸನ್ನಿವೇಶಗಳನ್ನು ಚಿತ್ರಿಸುತ್ತಾ, ಮದುವೆ, ಮಕ್ಕಳು, ವೃತ್ತಿ, ಹೋರಾಟಗಳ ಹಾದಿ ತುಳಿಯುತ್ತಾ ಕ್ರಮೇಣ ಗಂಭೀರವಾಗುತ್ತಾ ಸಾಗುತ್ತದೆ. ಹೆಸರಿಗೆ ತಕ್ಕಂತೆ ಕಾದಂಬರಿಯುದ್ದಕ್ಕೂ ಪತಿ-ಪತ್ನಿಯರ ಸಂವಾದವೇ ಪ್ರಧಾನವಾಗಿ, ಅದರ ಮೂಲಕವೇ ಅವರಿಬ್ಬರ ನಡುವಿನ ಸಂಬಂಧದ ಆಳ ಅಗಲಗಳನ್ನೂ ಅನಾವರಣಗೊಳಿಸಲಾಗಿದೆ.
ಪೀಠಿಕೆಯ ಭಾಗದಲ್ಲಿ ಲೇಖಕರು ಕೆಲವು ಅಂಶಗಳನ್ನು…
ಲೇಖಕರು: addoor
November 25, 2022

ಹೆಸರುವಾಸಿ ಕವಿ ಸು.ರಂ. ಎಕ್ಕುಂಡಿಯವರ “ಕಥನ ಕವನ” ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯಲ್ಲಿ ಮರುಮುದ್ರಣವಾದ ಸಂಪುಟ. ಆ ಮಾಲೆಗೆ ಆಯ್ಕೆಯಾದ 100 ಮೇರುಕೃತಿಗಳಲ್ಲೊಂದು.
ಇದರಲ್ಲಿವೆ 53 ಕಥನ ಕವನಗಳು. ಕೆಲವು ಸರಳ ಕವನಗಳು. ಉದಾಹರಣೆಗೆ “ಪಾರಿವಾಳಗಳು" ಕವನ ಇಲ್ಲಿದೆ:
ದಟ್ಟಕಾಡಿನಲೊಂದು ಹೆಮ್ಮರದ ಹೊದರಿನಲಿ ಇರುತ್ತಿತ್ತು ಪುಟ್ಟ ಸಂಸಾರ ಹೂಡಿ
ಮುದ್ದು ಬಿಳಿಪಾರಿವಾಳಗಳ ಜೋಡಿ (1)
ಹಗಲಿರುಳು ಜತೆಗೂಡಿ ಬಾಳಿದವು ಈ ಜೋಡಿ ಎಂದಿಗೂ ಅಗಲಿರವು ಒಂದನೊಂದು
ಹಿಗ್ಗು ತುಂಬಿತು ಹೊದರಿನಲ್ಲಿ ಬಂದು (2…
1
ಲೇಖಕರು: Ashwin Rao K P
November 24, 2022

ಜೋಗಿ, ಜಾನಕಿ, ಎಚ್. ಗಿರೀಶ್ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್ ರಾವ್ ಹತ್ವಾರ್ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್ 16ರಂದು. ಮೂಲತಃ ಸುರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಹಾಯ್ ಬೆಂಗಳೂರು’ ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ…
ಲೇಖಕರು: Ashwin Rao K P
November 22, 2022

ಎಲ್ಲೋ ಬಿದ್ದಿದ್ದ ಕಲ್ಲು ದೇವರಾಗುವುದೂ ಕಥೆಯೇ! ಹಾಗೆಯೇ ಎಂಥ ಕಷ್ಟದಲ್ಲಿಯೂ ಕಲ್ಲಾಗಿಯೇ ಇದ್ದುಬಿಡುವ ದೇವರದೂ ಕಥೆಯೇ. ಹುಣ್ಣಿಮೆಯಂದು ಕಡಲು ಅಬ್ಬರಿಸುವುದೂ ಕಥೆಯೇ, ಚಂಡಮಾರುತದಲ್ಲಿಯೂ ಗುಂಡುಕಲ್ಲಾಗಿ ನಿಂತೇ ಇರುವ ಬೆಟ್ಟದ ಕೆಟ್ಟ ಹಠವೂ ಕಥೆಯೇ. ದಿನವೂ ಎದುರಾಗುವ ಪಕ್ಕದ ಬೀದಿಯ ವ್ಯಕ್ತಿ ಖುಷಿಯಿಂದ ನೋಡಿದರೂ ಕಥೆಯೇ, ಕಣ್ಣು ಕೂಡಿಸದೆ ನೆಲ ನೋಡಿಕೊಂಡು ಹೋಗಿಬಿಟ್ಟರೂ ಕಥೆಯೇ! ಎನ್ನುತ್ತಾರೆ ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿ. ಅವರು ಲೇಖಕ ಮಾರುತಿ ಎನ್ ಎನ್ ಅವರ ‘ಕರುವ್ಗಲ್ಲು’ ಕಥಾ…
ಲೇಖಕರು: ಬರಹಗಾರರ ಬಳಗ
November 21, 2022

ನಮ್ಮ ಮೊಬೈಲ್ ಒಳಗಿನ ಕೆಲವೊಂದು ಹಾಡುಗಳು, ಕೆಲವೊಂದು ಸಿನಿಮಾಗಳನ್ನು ನಾವು ಡಿಲಿಟ್ ಮಾಡುವುದೇ ಇಲ್ಲ. ಕಾರಣ ಅವುಗಳ ಜೊತೆ ನಮಗಿರುವ ತೀರಾ ಹತ್ತಿರದ ಭಾದ್ಯವೆ. ಪದೇ ಪದೇ ಅದೆ ಹಾಡನ್ನೋ ಅಥವಾ ಅದೆ ಸಿನಿಮಾನೋ ಕೇಳೋದು, ನೋಡೋದು ಮಾಡತ್ತೀವಿ. ಅದೆ ರೀತಿ ನಮ್ಮ ಸ್ವಂತದ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಇದ್ದರೂ ಸಹ ಕೆಲವೊಂದು ಪುಸ್ತಕಗಳು ನಮಗೆ ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸಿತ್ತವೆ. ಅಂತಹ ಪ್ರೇರೇಪಿಸಿದ ಪುಸ್ತಕ ವೆಂದರೆ ವೀರಣ್ಣ ಮಡಿವಾಳರ ಖಂಡಕಾವ್ಯವಾದ 'ಎಲ್ಲೋ ಹಾಳಾಗಿ…