ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....

ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....

ಪ್ರಾಣಿಗಳು ಸಲ್ಲಿಸಿದ ಮನವಿ-ಹಕ್ಕೋತ್ತಾಯಗಳ ಮೈಲುದ್ದದ ಪಟ್ಟಿ  ಮೇಲೊಮ್ಮೆ  'ಹಾಗೆ ಕಣ್ಣಾಡಿಸಿ'  , ಮುಖ್ಯಮಂತ್ರಿಗಳು ಪ್ರಾಣಿಗಳನು  ಉದ್ದೇಶಿಸಿ ಕೆಲ ಮಾತುಗಳನ್ನಾಡಿ  ಆದಸ್ತು ಬೇಗ ಅವ್ರ ಬೇಡಿಕೆ ಈಡೇರಿಸುವುದಾಗಿ  ಮಾತು ಕೊಟ್ಟು  ಪ್ರಾಣಿಗಳಿಗೆ ತಮ್ಮ- ತಮ್ಮ ಸ್ವಸ್ತಾನಕ್ಕೆ ಮರಳಲು ಕೋರಿದರು...

'ಮುಖ್ಯಮಂತ್ರಿಗಳ' ಕರುಣಾಪೂರಿತ-ಧೈನ್ಯತೆಯ  ಮುಖ ನೋಡಿ ' ಈ ಯಪ್ಪಾ ನಮ್ಮ ಬೇಡಿಕೆ ಈಡೆರಿಸಬಹುದೇನೋ'  ಅನ್ನುವ ಭರವಸೆಯೋದನೆ  ಪ್ರಾಣಿಗಳು ತಮ್ಮ ತಮ್ಮ ಸ್ವಸ್ತಾನಕ್ಕೆ ಮರಳಿ ಹೊರಟವು..
'ದೊಡ್ಡ ವಿಪತ್ತು' ಅನ್ಕೊಂಡಿದ್ದ  ಈ ಪ್ರಾಣಿಗಳ ಜಾಥ ಹೋರಾಟ  ಶಾಂತಿಯುತವಾಗಿ ಕೊನೆಗೊಂಡುದ್ದು  ಸಮಸ್ತ  ಜನತೆಗೂ ಸಮಾಧಾನದ ವಿಸ್ಯವಾಗಿತ್ತು.  ಮತ್ತು  ಪ್ರಾಣಿಗಳಿಗೂ ನಮ್ಮಂತೆಯೇ ಭಾವನೆಗಳಿವೆ, ಸುಖ -ದುಖ ಅರ್ಥಾಗುತ್ತೆ  ಅವುಗಳ ಕಾಳಜಿ, ಶಾಂತಿಯುತ ಬಾಳಿಕೆ ನಮ್ಮ ಜವಾಬ್ಧಾರಿ. ಅವು ಬಾಳಿ ಬದುಕಿದರೆ ನಾವೂ, ಇಲ್ಲದ್ದಿದ್ದರೆ  -ಈ  ಅವಲಂಬನೆಯ ಸರಪಳಿಯೇ' ತುಂಡಾಗಿ ಮನುಷ್ಯರ ಅಂತ್ಯವೂ ಹೌದು ಎಂಬ  ಅರಿವೂ  ಜನರಿಗಾಯ್ತು...
 
 
 
 

Comments