ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ವಿಶ್ವೇಶ್ವರಯ್ಯನವರಿಗೆ ಶಿರಬಾಗಿ ವಂದಿಸುವೆವು !

ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ವಿಶ್ವೇಶ್ವರಯ್ಯನವರಿಗೆ ಶಿರಬಾಗಿ ವಂದಿಸುವೆವು !

ಕೊಂಡಿ :

http://www.deccanherald.com//content/195456/down-memory-lane-remembering-sir.html?fb_action_ids=4631841313239&fb_action_types=og.likes&fb_source=aggregation&fb_aggregation_id=288381481237582

ಚಿತ್ರ : '೧೯೬೧ ನೇ ಇಸವಿ,  ಡೆಕ್ಕನ್ ಹೆರಾಲ್ಡ್ ದಿನ ಪತ್ರಿಕೆಯ ಕೃಪೆ' :

'ಸರ್. ಎಂ.ವಿ'.ರವರ ಪಕ್ಕದಲ್ಲಿ 'ಪಂಡಿತ್. ಜವಾಹರ್ ಲಾಲ್ ನೆಹ್ರು', ಕುಳಿತಿದ್ದಾರೆ.  ನಿಂತಿರುವವರು, 'ಡಾ, ಎಂ.ಆರ್.ಕೃಷ್ಣ ಮೂರ್ತಿ', 'ಶ್ರೀ.ಮತಿ.ಕೃಷ್ಣಮೂರ್ತಿ'. 'ಮೊಮ್ಮೊಗ' ಮತ್ತು 'ಮೊಮ್ಮಗಳ' ನ್ನು ಚಿತ್ರದಲ್ಲಿ ಕಾಣಬಹುದು.

ಪ್ರತಿವರ್ಷದಂತೆ, ಈ ವರ್ಷ ಸೆಪ್ಟೆಂಬರ್ ತಿಂಗಳ ೧೫ ರಂದು, 'ಇಂಜಿನಿಯರ್ಸ್ ದಿನ,'ವೆಂದು ಆಚರಿಸುವುದು ವಾಡಿಕೆಯಾಗಿದೆ. ಅದು ಅರ್ಥಪೂರ್ಣವೂ ಸರಿ. ಈ ದಿನ, ನಾವೆಲ್ಲಾ 'ಡಾ. ಸರ್. ಎಂ. ವಿ'. ರವರ ಆದರ್ಶಗಳನ್ನೂ ಮಹತ್ಕಾರ್ಯಗಳನ್ನು ನೆನೆಸುವ ಪ್ರಯತ್ನ ಮಾಡಿ, ನಾವೂ ನಮ್ಮ ಜನ್ಮ ಭೂಮಿಗೆ ಸೇವೆಮಾಡುವ ಪಣ ತೊಡಬೇಕು. ನಮ್ಮ ಜನತೆಗೆ, ಇನ್ನಾದರೂ ಒಳ್ಳೆಯ ಕೆಲಸ ಮಾಡಿ ಸಹಕರಿಸುವ ಪ್ರತಿಜ್ಞೆಯನ್ನು ಮಾಡಬೇಕು !

ಸರ್.ಎಂ.ವಿ.ರವರ ಚಿರಸ್ಮಾರಕ.

ಶ್ರೀ. ರಮೇಶ್ ಕಾಮತ್ ರವರ ಅನುಮತಿಯ ಮೇರೆಗೆ :

-ಶ್ರೀ. ರಮೇಶ್ ಕಾಮತ್ ರವರ ಅನುಮತಿ ಮೇರೆಗೆ :

ನನಗೆ ಸುಮಾರು ೫೪ ವರ್ಷ ಹಿಂದೆ ಜರುಗಿದ 'ಡಾ. ಸರ್. ಎಂ. ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸಮಾರಂಭದ ದಿನ'ದ ಜ್ಞಾಪಕ ಪ್ರತಿವರ್ಷದಂತೆ ಈ ವರ್ಷವೂ ಬರುತ್ತಿದೆ. ಅದಕ್ಕೆ ಕಾರಣ, ನಾನು ಸಕ್ರಿಯವಾಗಿ ಅಂದು ಭಾಗವಹಿಸುವ ಪುಣ್ಯ ನನ್ನಪಾಲಿಗೆ ಒದಗಿತ್ತು. ನಾನು, ಸನ್, ೧೯೬೧ ರಲ್ಲಿ,  'ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯುಬಿಲಿ ಟೆಕ್ನೊಲಾಜಿಕಲ್ ಇಸ್ಸ್ಟಿ ಟ್ಯೂಟ್' ನಲ್ಲಿ, 'ಟೆಕ್ಸ್ ಟೈಲ್ಸ್ ಇಂಜಿನಿಯರಿಂಗ್ ಡಿಪ್ಲೊಮ' ಗೆ ಸೇರಿದ್ದೆ. ’ಸ್ಕೌಟ್ ಅಂಡ್ ಗೈಡ್ಸ್’ ನಲ್ಲಿ ಸೇರಿದ್ದೆ. ಆವರ್ಷವೇ ನಮ್ಮ ಭಾರತದ ಶಿಲ್ಪಿ, ಭಾರತ ರತ್ನ, ಡಾ. ವಿಶ್ವೇಶ್ವರಯ್ಯ ನವರ ಶತಮಾನೋತ್ಸವ ಆಚರಿಸುವ ಬಗ್ಗೆ 'ರಾಜ್ಯ ಸರಕಾರದ ಸರ್ಕುಲರ್' ಬಂತು. ಅವರೇ ಸ್ಥಾಪಿಸಿದ 'ಆಕ್ಯುಪೇಶನ್ ಇನ್ ಸ್ಟಿ ಟ್ಯೂಟ್,' ಮತ್ತು 'ಟೆಕ್ನೊಲಾಜಿಕಲ್ ಇನ್ ಸ್ಟಿ ಟ್ಯೂಟ್' ನ  ನಮ್ಮ 'ಪ್ರೊಫೆಸರ್ ಎಮ್.ಆರ್. ಕೃಷ್ಣಮೂರ್ತಿಗಳು' 'ಎಂ.ವಿ.ಯವರ ಶತಮಾನೋತ್ಸವದ  ಮುಂದಾಳತ್ವ'ವನ್ನು ತೆಗೆದುಕೊಂಡಿದ್ದರು. ಅವರು ನಮ್ಮ ಸ್ಕೌಟ್ ಮಾಸ್ಟರ್, 'ಜೋಸೆಫ್' ರವರನ್ನು ಕರೆದು ಆದಿನ ಮಾಡಬೇಕಾದ ರೂಪರೇಖೆಗಳನ್ನು ತಿಳಿಯಪಡಿಸಿದರು. ’ಮೈಸೂರ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ’, ಹಾಗೂ ಬೆಂಗಳೂರ್ ಛೇಂಬರ್ ಆಫ್ ಕಾಮರ್ಸ್’ ಮೊದಲಾದ ಸಂಸ್ಥೆಗಳ ಪ್ರಮುಖರಾಗಿದ್ದ, 'ಜೆ. ಬಿ. ಮಲ್ಲಾರಾಧ್ಯ'ರು 'ಸರ್ ಎಮ್. ವಿ. ಶತಮಾನೋತ್ಸವ  ಸಮಿತಿಯ ಅಧ್ಯಕ್ಷ'ರಾಗಿದ್ದರು. 'ಶ್ರೀ ಬಿ.ಡಿ. ಜತ್ತಿ'ಯವರು ಮುಖ್ಯಮಂತ್ರಿಗಳಾಗಿದ್ದ  ಕಾರ್ಯಕಾಲದಲ್ಲಿ ಜರುಗಿತು. ಸಾಯಂಕಾಲ ಬೆಂಗಳೂರಿನ ಭವ್ಯ 'ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್' ನಲ್ಲಿ 'ಕು. ವೈಜಯಂತಿ ಮಾಲಾರ ಭರತನಾಟ್ಯ ಪ್ರದರ್ಶನ'ವಿತ್ತು. ಆ ಸಮಯದಲ್ಲಿ ವಿಶ್ವೇಶ್ವರಯ್ಯನವರಿಗೆ ಬರಲು ಸಾಧ್ಯವಾಗಲಿಲ್ಲ. ಆದರೆ 'ನೆಹ್ರೂರವರು 'ಹಾಜರಿದ್ದು ಭರತನಾಟ್ಯದ ಭವ್ಯತೆಯನ್ನು ಆಸ್ವಾದಿಸಿದರು. ಅದೊಂದು ಸುಂದರ ಸಂಜೆಯಾಗಿತ್ತು. 

ನಮ್ಮ ಪ್ರೊಫೆಸರ್, ಕೃಷ್ಣಮೂರ್ತಿಯವರಿಗೆ  ಡಾ. ಎಮ್.ವಿ. ಚಿಕ್ಕಪ್ಪನಾಗಬೇಕು. ಮನೆಯಿಂದ ಕಾರಿನಲ್ಲಿ ಬಂದು 'ಲಾಲ್ಬಾಗ್ ನ ಗಾಜಿನ ಮನೆ'ಯ ಮುಂದೆ ಇಳಿಸಿದಾಗ, ವಿಶ್ವೇಶ್ವರಯ್ಯನವರನ್ನು ಕುರ್ಚಿಯಲ್ಲಿ ಕೂಡಿಸಿ ಎತ್ತಿಕೊಂಡು ವೇದಿಕೆಗೆ ಕರೆತರುವ ಕೆಲಸವನ್ನು  ಸ್ಕೌಟ್ ಅಂಡ್ ಗೈಡ್  ಗಳಾಗಿಡ್ಡ ನಾವು ವಹಿಸಿಕೊಂಡಿದ್ದೆವು.  ನಾನು ಮತ್ತು ನಮ್ಮ ವರ್ಗದ ಗೆಳೆಯರಿಗೆ  ಈ ಗೌರವ ದೊರೆಕಿತು. ಆಗ ಇನ್ನೂ ಬೆಂಗಳೂರಿನಲ್ಲಿ ಹೊಸಬನಾಗಿದ್ದ ನನಗೆ ವಿಶ್ವೇಶ್ವರಯ್ಯನವರ ತಲೆಯನ್ನು ಹಿಡಿದು  ವೇದಿಕೆಯವರೆಗೆ  ತರುವ ಒಂದು ಗೌರವ ದೊರಕಿತು. ಅಬ್ಬ, ಅವರ ಕಣ್ಣುಗಳು ಮಿಂಚುತ್ತಿದ್ದವು. ಮುಖದಲ್ಲಿ ಅದೇನು ಗಾಂಭೀರ್ಯ, ಹಾಗೂ ಹೊಳಪು ! ಭಾರವಾದ ಜರತಾರಿ ಪೇಟ ಹೊತ್ತ ತಲೆ, ಮತ್ತು ಪುಟ್ಟ ಕೃಶವಾದ, ಇನ್ನೇನು ಮುರಿದು ಹೋಗುತ್ತದೆಯೋ  ಎನ್ನುವಷ್ಟು ನಾಜೂಕಾದ ಕುತ್ತಿಗೆ;  ಆ ಸನ್ನಿವೇಶ ನನಗೆ ಮತ್ತು ನನ್ನ ಗೆಳೆಯರಿಗೆ,  ಇನ್ನೂ ನೆನಪಿದೆ.
 
ಸಾಯಂಕಾಲ, ಸರ್. ಎಂ.ವಿ.ರವರ ಸಾಧನೆಗಳು,  ಮೊದಲಾದ ವಿಚಾರಗಳನ್ನು ನೆನೆದ ಬಳಿಕ ನಾಟ್ಯ ಮಯೂರಿ, ಬೆಡಗಿ, ಸೌಂದರ್ಯನಿಧಿ, 'ಕು. ವೈಜಯಂತಿ ಮಾಲಾ'ರ ಅದ್ಭುತ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.  ಅಲ್ಲಿಗೆ ಬಂದ ನೆಹರೂ, ಹಾಗೂ ರಾಷ್ಟ್ರದ ಹಲವಾರು  ಗಣ್ಯರು, ಆಹ್ವಾನಿತರೆಲ್ಲಾ, 'ಭಾರತ ನಾಟ್ಯ' ವನ್ನು ನೋಡಿ ಆನಂದಿಸಿದರು. ಆಧುನಿಕ ಭಾರತದ ಶಿಲ್ಪಿಗಳಲ್ಲೊಬ್ಬರಾಗಿದ್ದ ಡಾ. ಎಮ್.ವಿ. ರವರು, ಕರ್ನಾಟಕಕ್ಕೆ ಮಾಡಿದ ಸೇವೆಯನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿಡಬೇಕು. 'ಕೃಷ್ಣರಾಜಸಾಗರ', 'ಮೈಸೂರ್ ಬ್ಯಾಂಕ್', 'ಮೈಸೂರ್ ವಿಶ್ವವಿದ್ಯಾಲಯ', ಹಲವಾರು ಕಾರ್ಖಾನೆಗಳು,(ಐರನ್ ಮತ್ತು ಸ್ಟೀಲ್ ಫಾಕ್ಟರಿ, ಸಕ್ಕರೆ, ಸಿಮೆಂಟ್, ಸ್ಯಾಂಡಲ್ ವುಡ್, ಪೇಪರ್, ವಿದ್ಯುತ್ಛಕ್ತಿ ಇತ್ಯಾದಿ, ಇತ್ಯಾದಿ. ಇಂಜಿನಿಯರಿಂಗ್ ಕಾಲೇಜ್, ಪಾಲಿಟೆಕ್ನಿಕ್ ಗಳು, 'ಆಲ್ ಇಂಡಿಯ ಮ್ಯಾನ್ಯುಫಾಕ್ಕ್ಚರರ್ಸ್ ಅಸೋಸಿಯೇಷನ್', ಇಂತಹ  ಮಹಾನುಭಾವನ ಹೆಸರನ್ನು 'ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'ಕ್ಕೆ ಇಟ್ಟು ನಗರದ ಘನತೆಯನ್ನು ಹೆಚ್ಚಿಸುವ ಕಾರ್ಯವನ್ನು, ರಾಜ್ಯ ಸರ್ಕಾರ ಇನ್ನೂ ಮಾಡಿಲ್ಲ. ನಮ್ಮ ಜಾತಿಗೆ ಬೆಂಬಲ, ಬೇರೆಯವರಿಗೆ ಅಧಿಕಾರ ಕೊಡಬೇಡಿ ಇತ್ಯಾದಿ ಕೂಗಾಟಗಳನ್ನು ಕೇಳಿ ಕೇಳಿ ಬೇಸರಬಂದಿದೆ. ದಿನಬೆಳಗಾದರೆ ಕುರ್ಚಿಗಾಗಿ ಹೊಡೆದಾಡುತ್ತಿರುವ ನಮ್ಮ ರಾಜಕಾರಣಿಗಳಿಗೆ, ಎಂದು ಒಳ್ಳೆಯ ಬುದ್ಧಿಬರುತ್ತದೆಯೋ, ಎಂದು  ಕಾದು ನೋಡಬೇಕಾಗಿದೆ. ಯಾವ ಪಕ್ಷವೂ ಜನರ ಹಿತಾಸಕ್ತಿಗಳನ್ನು ಗಮನಿಸುತ್ತಿಲ್ಲ. ಈ ಮಧ್ಯೆ, ಜನತದಳ ಅಧಿಕಾರಕ್ಕಾಗಿ ಕಾದು ಕುಳಿತಿದೆ. 
 
'ಡೆಕ್ಕನ್ ಹೆರಾಲ್ಡ್ ದಿನ ಪತ್ರಿಕೆ'ಯಲ್ಲಿ ಆ ದಿನದ ಕಾರ್ಯಕ್ರಮಗಳೆಲ್ಲಾ ದಾಖಲಾಗಿದ್ದವು. 
 
 
 
Rating
No votes yet

Comments

ನಾನು ವಿಕಿಪೀಡಿಯಕ್ಕೆ ಬರೆದ, ಚಿಕ್ಕ-ಪುಟ್ಟ,ಮೊದಲಾದ ಸುಮಾರು ೧೦೦೦ ಕ್ಕೂ ಹೆಚ್ಚು ಲೇಖನಗಳಲ್ಲಿ ಕೆಲವು ಮನಸ್ಸಿಗೆ ಹಿಡಿಸಿವೆ. ಆರ್. ಕೆ. ಲಕ್ಷ್ಮಣ್ ರವರ ಲೇಖನ, ಜೆ.ಆರ್.ಡಿ.ಟಾಟ,(ವಿಶೇಶ ಲೇಖನವೆಂದು ದಾಖಲಾಗಿದೆ) ಉಸೈನ್ ಬೋಲ್ಟ್, ಇತ್ಯಾದಿ. ಟೊರಾಂಟೋ ಪಬ್ಲಿಕ್ ಲೈಬ್ರರಿ, ದೆಹಲಿಯ ಹಾಗೂ ಟೊರಾಂಟೋನಗರದ ಅಕ್ಷರ್ ಪುರುಶೋತ್ತಮ್ ಮಂದಿರ್, ಹತ್ತಿ ಬೆಳೆ,(ವಿಶೇಶ ಲೇಖನವೆಂದು ದಾಖಲಾಗಿದೆ) ಮೊದಲಾದವು ಸೇರಿವೆ. ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ. ಅದನ್ನು ಸರಿಯಾಗಿ ಓದಿ ಯಾರುಬೇಕಾದರೂ ಈದಿನದ ಬದಲಾವಣೆಗಳನ್ನೂ ಸೇರಿಸಿ ನವೀನೀಕರಿಸಬಹುದು. ಅಭಿಪ್ರಾಯಗಳು ಅಸ್ಪಷ್ಟ ಇಲ್ಲವೇ ಪೂರ್ವಾಗ್ರಹಪೀಡಿತವಾಗಿರದೆ ಇರಬೇಕು. ಮೇಲಾಗಿ ವಿಶಯ ಪ್ರತಿಪಾದನೆಯೇ ಮುಖ್ಯ ಗುರಿ. ನಮ್ಮ ಸ್ಪಂದನೆಗಳಲ್ಲ. ಇತ್ಯಾದಿ ವಿಕಿಪೀಡಿಯವನ್ನು ಒಂದು ಅತ್ಯುತ್ತಮ ವಿಶ್ವಕೋಶವನ್ನಾಗಿಸಿವೆ. ಇಂಗ್ಲೀಷ್ ಲೇಖನಗಳು ಬೇಕಾದಷ್ಟಿವೆ. ಅವೆಲ್ಲಾ ವಿಕಿಪೀಡಿಯದ ನೀತಿಗೆ ಅನುಗುಣವಾಗಿವೆ. ಕನ್ನಡದ ಲೇಖನಗಳು ತೀರ ಕಡಿಮೆ. ಈಗೀಗ ೧೦ ಸಾವಿರವನ್ನು ದಾಟಿವೆ. ಬೆಂಗಾಲಿ, ತಮಿಳು, ಮರಾಠಿ, ತೆಲುಗು, ಮಲೆಯಾಳಿ, ಲೇಖನಗಳು ಸಾಕಾದಷ್ಟಿವೆ. ಕನ್ನಡ ಇನ್ನೂ ಬಹಳ ಹಿಂದಿದೆ. ಇದು ನನಗೆ ಅತೀವ ಬೇಸರವನ್ನು ಉಂಟುಮಾಡುತ್ತದೆ.

ಟೊರಾಂಟೋನಗರದಲ್ಲಿದ್ದಾಗ ನಾನು ಗೂಗಲ್ ತಾಣವನ್ನು ತೆರೆದಿಟ್ಟಾಗ, ಬೆಂಗಾಲಿ, ಪಂಜಾಬಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕೆಲವು ಮಾಹಿತಿಗಳು ದೊರೆತವೆ. ಆದರೆ ಎಲ್ಲೂ ಕನ್ನಡದ ಸೊಲ್ಲೇ ಇಲ್ಲ. ನಗರದಲ್ಲಿ ಕನ್ನಡ ಸಂಗವಿದೆ. ಆದರೆ ಅವರ ಸುಂದರ ವೆಬ್ ಸೈಟ್ ನಲ್ಲಿ ಕನ್ನಡದ ವಿವಗಗಳಿರಲಿಲ್ಲ. ನಾನು ಆ ವಿಶಯಗಳನ್ನು ಅನುವಾದಿಸಿ ಕನ್ನಡ ವಿಕಿಪೀಡಿಯದಲ್ಲಿ ದಾಖಲಿಸಿದೆ. ಅಲ್ಲಿನ ಅಧಿಕಾರಿಗಳು ಪ್ರಶಂಸಿದರು. ಆದರೆ ನನಗೆ ಬೇಕಾದ ಚಿತ್ರಗಳನ್ನು ಇನ್ನೂ ಒದಗಿಸಿಲ್ಲ.
ಅಕ್ಷರ ಪುರುಷೋತ್ತಮ ಮಂದಿರ ಲೇಖನದಲ್ಲಿ ಅದನ್ನು ತಲುಪಲು ಹೇಗೆ ಮುಂದುವರಿಯಬೇಕು, ಯಾವ ಬಸ್ಸು, ಯಾವ ರೈಲು ಇತ್ಯಾದಿ ಹಿಡಿಯಬೇಕು ಎನ್ನುವ ವಿವರಗಳನ್ನು ದಾಖಲಿಸಿದ್ದೇನೆ. ಯೇಕೆಂದರೆ, ನನಗೆ ಗೂಗಲ್ ನಲ್ಲಿ ಸರಿಯಾದ ಮಾಹಿತಿ ಸಿಗದೆ ಪರದಾಡಬೇಕಾಯಿತು.