ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ..!

ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ..!

ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ ... ಇದು ತಪ್ಪಾದ ಉಚ್ಚಾರಣೆ .

"ಶಿವಪೂಜೆ ನಡುವೆ ಕರಡಿಗೆ(ಲಿಂಗವೊತ್ತಿಗೆ - ಲಿಂಗವನ್ನು ಇಟ್ಟುಕೊಳ್ಳುವ ಒಂದು ಪುಟ್ಟ ಪೆಟ್ಟಿಗೆ ) ಬಿಟ್ಟ ಹಾಗೆ " - ಇದು ಸರಿಯಾದ ಉಚ್ಚಾರಣೆ

ಕರಡಿಗೆ ಅನ್ನುವುದು ಬಹಳ ಜನಕ್ಕೆ ಪರಿಚಯವಿಲ್ಲದಿರುವುದು(ವೀರಶೈವದವರನ್ನು ಹೊರತುಪಡಿಸಿ) ಮತ್ತು ಕಾಲಕ್ರಮೇಣ ಇದು ಕರಡಿಗೆಯಿಂದ ಕರಡಿ ಅಯಿತು.

ವಿವರಣೆ : ಶಿವಪೂಜೆಗೆ ಮುಖ್ಯವಾಗಿ ಬೇಕಾಗಿರುವುದು ಶಿವಲಿಂಗ, ಇದನ್ನು ಕರಡಿಗೆಯೆಂಬ ಪುಟ್ಟ ಪೆಟ್ಟಿಗೆಯಲ್ಲಿ ಇಟ್ಟು ಅದನ್ನು ಶಿವದಾರದಿಂದ ಪೋಣಿಸಿ ಅದನ್ನು ಸದಾಕಾಲ ಕೊರಳಲ್ಲಿ ಧರಿಸುತ್ತಾರೆ.

ಶರಣರು ಶಿವಪೂಜೆ ಮಾಡಬೇಕೆಂದಾಗಲೆಲ್ಲ, ತಮ್ಮ ಕೊರಳಲ್ಲಿಯೇಯಿರುವ ಕರಡಿಗೆಯಿಂದ ಶಿವಲಿಂಗವನ್ನು(ಇಷ್ಟಲಿಂಗ) ತೆಗೆದು ಪೂಜೆ ಮಾಡಿಕೊಳ್ಳುತ್ತಾರೆ. ಇದರಿಂದ ತಿಳಿಯುತ್ತೆ - ಶಿವಪೂಜೆ ಮಾಡಿಕೊಳ್ಳಲು ಕರಡಿಗೆ ಮುಖ್ಯ ಕರಡಿ ಅಲ್ಲಾ.

ಈ ಗಾದೆಯ ಮೂಲ ಉಚ್ಚಾರಣೆ ನನಗೆ ತಿಳಿದಿದ್ದು - ರಾಜಕುಮಾರ್ ಅವರ ಒಂದು ಹಳೆಯ ಚಿತ್ರ ನೋಡುವಾಗ, ಅಲ್ಲಿಯ ತನಕ ನಾನು ಕೂಡ ಎಲ್ಲರಂತೆ ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ ಎಂದು ತಿಳಿದಿದ್ದೆ!

‪#‎ಸರಿಯಾದಅರ್ಥ‬

Submitted by Darshan Kumar Thu, 07/10/2014 - 04:46

ನೀವು ಹೇಳಿದ್ದು ಸರಿ, ಕರಡಿ ಯಾಕೆ ಯಾವುದೇ ಪ್ರಾಣಿ ಬಂದರೆ ಸಾಕು ಎಲ್ಲ ಬಿಟ್ಟು ಹೋಗುತ್ತಾರೆ.  ಆದರೆ ೩೦ ವರ್ಷಗಳ ಹಿಂದೆ ಸರಿಯಾಗಿದ್ದ ಗಾದೆ  ಅದರ ಮೂಲ ಸ್ವರೂಪವನ್ನೇ ಈಗ ಬದಲಾಯಿಸಿ ಬಿಟ್ಟಿದ್ದೇವೆ 

Submitted by makara Thu, 07/10/2014 - 20:36

ದರ್ಶನ್ ಅವರೆ ನಿಮ್ಮ ಅನಿಸಿಕೆ ಸರಿ, ಶಿವಪೂಜೆ ನಡುವೆ ಕರಡಿಗೆ ಬಿಟ್ಟು ಬಂದ ಹಾಗೆ. ಮದುವೆಗೆ ಹೋಗುವವರು ಮದುಮಗನನ್ನ ಬಿಟ್ಟು ಹೋದ ಹಾಗೆ ಎನ್ನುವ ಗಾದೆಗೆ ಸಮನಾದುದು ಇದು.