ಮುಕ್ತಕ
ನಗನಾಣ್ಯ ಇರಲೇನು ಝಣಝಣಣ ಎನ್ನುತಲಿ
ನಗೆಯು ಇಲ್ಲದಿರೆ ಜೀವನವು ಭಣಭಣವು |
ಬಗೆಬಗೆಯ ಚಿಂತೆಗಳ ಹಗುರದಲಿ ತೇಲಿಸುವ
ನಗೆ ಎಂದಿಗೂ ಇರಲಿ ಪರಮಾತ್ಮನೆ ||
- Read more about ಮುಕ್ತಕ
- Log in or register to post comments
ನಗನಾಣ್ಯ ಇರಲೇನು ಝಣಝಣಣ ಎನ್ನುತಲಿ
ನಗೆಯು ಇಲ್ಲದಿರೆ ಜೀವನವು ಭಣಭಣವು |
ಬಗೆಬಗೆಯ ಚಿಂತೆಗಳ ಹಗುರದಲಿ ತೇಲಿಸುವ
ನಗೆ ಎಂದಿಗೂ ಇರಲಿ ಪರಮಾತ್ಮನೆ ||
ನೋಡಿ ನಮ್ಮ ಸಮಾಜ ಹಾಳಾಗಿದೆ, ಮೊದಲಿನ ಹಾಗೆ ಏನು ಇಲ್ಲ. ಈ ಸಿಕ್ಕಾಪಟ್ಟೆ ರೀಲ್ಸ್ ಗಳನ್ನು ಮಾಡಿಕೊಂಡು ಯಾರದು ಮಾತುಗಳಿಗೆ ತಾವು ತುಟಿಯಲ್ಲಾಡಿಸುತ್ತಾ ಯಾವುದೋ ಹಾಡಿಗೆ ಅರ್ಧಂಬರ್ಧ ಬಟ್ಟೆ ಹಾಕಿ ಕುಣಿಯುತ್ತ ಕ್ಷಣದಲ್ಲಿ ಪ್ರಸಿದ್ಧಿಗೆ ಬರಬೇಕು ಅನ್ನೋ ತೆವಲಿಗೆ ಬಿದ್ದು ಹಾಳಾಗುತ್ತಿದ್ದಾರೆ. ಆದ್ರೆ ಇವರಿಗೆ ಒಂದು ದಿನವೂ ಅರ್ಥ ಆಗ್ಲಿಲ್ಲ.
ಬೆಳಿಗ್ಗೆ ಬೇಗ ಬೇಗನೇ ಹೆಜ್ಜೆ ಹಾಕುತ್ತಾ ಶಾಲೆಗೆ ಬರುತ್ತಿದ್ದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಬೆಳಿಗ್ಗೆ ಬೇಗನೇ ಆರಂಭವಾಗುತ್ತದೆ. ಅಂದು ನನಗೆ ವಿಶೇಷ ತರಗತಿ ಇದ್ದುದರಿಂದ ನನ್ನ ನಡಿಗೆ ವೇಗವಾಗಿಯೇ ಇತ್ತು. ಶಾಲೆಯ ಎದುರಿನ ಮೆಟ್ಟಿಲು ಹತ್ತಿಕೊಂಡು ನಾನು ಒಳಗೆ ಪ್ರವೇಶಿಸುತ್ತಿದ್ದಂತೆ ಮುದ್ದೆಯಾದ ಕಾಗದದ ದೊಡ್ಡ ಚೂರೊಂದು ಮೆಟ್ಟಿಲ ಮೇಲೆ ಬಿದ್ದಿರುವುದನ್ನು ನೋಡಿದೆ.
ತಂಪು ಜಾಗದಲಿಂತು
ಜಗದ ಕನ್ನಡಿಯೊಳಾ ತೋರಿಕೆಯನಿರಗೊಡುತ ತನ್ನೊಳಿರವಿನ ನಿಜವ ತೋರ್ದಡಿಯ ಪೊಡಮಡುತ |
ನಿದಿರೆಯಿಂದೆಚ್ಚರಿತು ತನ್ನಿರವಿನಚ್ಚರಿಯ ತಾನು ತಾನರಿಯೆ ಬಗೆಯ ತೋರ್ದಡಿಯ ಪೊಡಮಡುತ || ೧ ||
ಮೊಳಕೆಯೊಳಗಣ ಆ ಮುಗುಳುಗಳು ಬಿರಿವಡೆದು ತನ್ನೊಳಚ್ಚರಿಯನಿರಗೊಟ್ಟಡಿಯ ಪೊಡಮಡುತ |
ದೇಶಕಾಲಗಳದೀ ತೋರಿಕೆಯನಣಿಗೊಳಿಸಿ ನಿರ್ವಿಕಲ್ಪವ ಮಾರ್ಪಡಿಪಡಿಯ ಪೊಡಮಡುತ || ೨ ||
ಮಿಡಿತವದೊಂದರಿಂದೀಯಿದರನಳಗೊಳಿಸಿ ಈಯಿದದೆಂಬುದನರಿಯಗೊಟ್ಟಡಿಯ ಪೊಡಮಡುತ |
ನಿಜದರಿವನಿರಗೊಡುತ ಇಳೆಯೊಳಾ ಪರಮವನು ಮರುವಾರಿ ಬಾರಗೊಡದಡಿಯ ಪೊಡಮಡುತ || ೩ ||
ಜಮ್ಮು ಮತ್ತು ಕಾಶ್ಮೀರ ಭಾಗದ ಚೆನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿರುವುದು ಕೇವಲ ಅಭಿವೃದ್ಧಿಯ ಹೆಜ್ಜೆ ಎಂಬರ್ಥದಲ್ಲಷ್ಟೇ ಗ್ರಹಿಸಬೇಕಾದ ಸಂಗತಿಯಲ್ಲ. ಇದು ಹಿಮ ಕಣಿವೆಗಳ ತಪ್ಪಲಿನಲ್ಲಿ ಭಾರತ ಕೈಗೊಂಡ ಅತ್ಯಾಧುನಿಕ ಎಂಜಿನಿಯರಿಂಗ್ ಸಾಹಸಕ್ಕೆ ಮತ್ತೊಂದು ನಿದರ್ಶನ ಕೂಡ.
ಜೈ ಭೀಮ್,
ಹೊಸದೊಂದು ಕೊಠಡಿಯ ಒಳಗಡೆ ಪಶ್ಚಾತಾಪ ಪಡುವವರಿಗೆ ಮಾತ್ರ ಎಂದು ಬೋರ್ಡ್ ನೇತು ಹಾಕಲಾಗಿದೆ. ಆಲ್ಲಿ ಸ್ಥಳಾವಕಾಶದ ಕೊರತೆಯಿಂದ ಇನ್ನೊಂದಷ್ಟು ಕೊಠಡಿಗಳನ್ನು ನಿರ್ಮಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.