ಕನಸುಗಳು
ಕನಸುಗಳ ಕಾಣುತ್ತ
ತೆರೆದ ಕಣ್ಣುಗಳಿಂದ
- Read more about ಕನಸುಗಳು
- Log in or register to post comments
ಕನಸುಗಳ ಕಾಣುತ್ತ
ತೆರೆದ ಕಣ್ಣುಗಳಿಂದ
ಸುಡು ಬೇಸಗೆಯ ಉರಿಬಿಸಿಲಿಗೆ ಕೆರೆಬಾವಿಗಳೆಲ್ಲ ಬತ್ತುತ್ತವೆ. ಅಲ್ಲಿಯ ವರೆಗೆ ಜತನದಿಂದ ಬೆಳೆಸಿದ ಗಿಡಮರಬಳ್ಳಿಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದೇ ರೈತರ ಚಿಂತೆ. ಬಾವಿ ಅಥವಾ ನೀರಿನಾಸರೆಯಲ್ಲಿರುವ ಚೂರುಪಾರು ನೀರನ್ನು ಹನಿ ನೀರಾವರಿಯಿಂದ ನಾಲ್ಕು ಪಟ್ಟು ಹೆಚ್ಚು ಜಮೀನಿಗೆ ಎರೆಯಬಹುದು. ಆದರೆ, ಅದಕ್ಕೆ ಹೆಕ್ಟೇರಿಗೆ ಒಂದು ಲಕ್ಷದಿಂದ ಒಂದೂವರೆ ಲಕ್ಷ ರೂಪಾಯಿ ವೆಚ್ಚವಾದೀತು.
ನಿನಗಾಗಿ ತಂಗಾಳಿಯ ಹಿಡಿದು ತರುವೆ ಎಂದು ಹೇಳುವ ಪ್ರೇಮಿ ನಾನಲ್ಲ.
ತಂಪೂ ಬಿಸಿಯೋ ನೀಡುವೆ ನಿನಗೆ ನನ್ನ ಉಸಿರೆಲ್ಲ.
ನಿನಗಾಗಿ ಆಕಾಶದಿಂದ ಮಳೆ ತರಿಸುವ ಶಕ್ತಿ ನನಗಿಲ್ಲ..
ಆದರೆ ನಿನ್ನ ಕಣ್ಣಿನಿಂದ ಒಂದು ಹನಿ ಕೂಡ ಜಾರಲು ನಾ ಬಿಡುವುದಿಲ್ಲ.
ನಿನಗಾಗಿ ಚಂದಿರನ ಹಿಡಿದು ತರುವೆ ಎಂದು ಸುಳ್ಳು ಭರವಸೆ ನಾ ನೀಡುವುದಿಲ್ಲ..
ಮಗುವಿನಂತಿರುವ ನಿನ್ನ ನವಿರಾದ ಹೃದಯಕ್ಕೆ ನಾ ಎಂದಿಗೂ ಮೋಸ ಮಾಡುವದಿಲ್ಲ..
ಇಂತಿ
(ಜಿ.ವಿ.ಕೆ) ಶೇಖರ . ಎಸ್.ಎಸ್ .ಎಲ್.ಸಿ
ದಿನ ನಿತ್ಯದ ಸ್ಕ್ರೀನ್ ಟೈಮ್
ಸಾಮಾನ್ಯವಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಗ್ಯಾಜೆಟ್ ಗಳಲ್ಲಿ ನಿಮ್ಮ ದಿನ ನಿತ್ಯದ ಸ್ಕ್ರೀನ್ ಟೈಮ್ ಎಷ್ಟಾಯಿತು ಎಂಬುದರ ಲೆಕ್ಕ ಇಡಬಹುದು. ಅಂದರೆ ನಿಮ್ಮ ಟ್ಯಾಬ್ಲೆಟ್ ಅಥವ ಸ್ಮಾರ್ಟ್ ಫೋನನ್ನು ಎಷ್ಟು ಹೊತ್ತು ದಿಟ್ಟಿಸಿ ನೋಡುತ್ತಿದ್ದಿರಿ ಎಂಬುದರ ಲೆಕ್ಕ. ಮನೆಯಲ್ಲಿ ಮಡದಿ “ನನ್ನ ಮುಖ ನೋಡುವುದಕ್ಕಿಂತ ಹೆಚ್ಚು ನೀವು ಆ ಸ್ಮಾರ್ಟ್ ಫೋನನ್ನು ನೋಡುತ್ತಿರುತ್ತೀರ” ಎಂಬ ಆಪಾದನೆ ಮಾಡಿದರೆ, ಮಡದಿಯ ಮುಖವನ್ನು ನೋಡಿದ ಲೆಕ್ಕ ಗೊತ್ತಿಲ್ಲ, ಆದರೆ ಸ್ಮಾರ್ಟ್ ಫೋನನ್ನು ಎಷ್ಟು ಹೊತ್ತು ಎವೆಯಿಕ್ಕದೆ ನೋಡುತ್ತಿದ್ದಿರಿ ಎಂಬುದರ ಖರೆ ಲೆಕ್ಕ ನಿಮಗೆ ಈಗ ಸಿಗುತ್ತದೆ.
ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ೧೪ರ ಯುಗಾದಿ ಸಂಭ್ರಮದ ಹಬ್ಬ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ)
ಸೌರಮಾನ ದಿನಗಣನೆ ಅನುಸಾರ ಹೊಸ ವರುಷದ ಮೊದಲ ದಿನ ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ. ಕೃಷಿಕರಾದರೆ ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, ಹೂ, ಹಣ್ಣು, ತರಕಾರಿಗಳನ್ನು ತಂದು ದೇವರಿಗೆ ಅರ್ಪಿಸಿ ಕೈಮುಗಿಯುತ್ತಾರೆ. ಈಗ ನಗರಗಳಲ್ಲಿ ವಿವಿಧ ಧಾನ್ಯ, ಹೂ, ಹಣ್ಣು, ತರಕಾರಿಗಳನ್ನು ಖರೀದಿಸಿ ತಂದು ದೇವರ ಮೂರ್ತಿಯೆದುರು ಇಟ್ಟು ನಮಿಸುತ್ತಾರೆ.
ಇಲ್ಲಿ ಯುಗಾದಿಯಂದು ಬೆಳಗ್ಗೆ ಎದ್ದೊಡನೆ ಯುಗಾದಿ "ಕಣಿ" ನೋಡಿ, ಕಣ್ತುಂಬಿಸಿಕೊಂಡು ಅದಕ್ಕೆ ನಮಿಸುವುದು ವಾಡಿಕೆ. ಅದಕ್ಕಾಗಿ ಮುಂಚಿನ ದಿನ ರಾತ್ರಿಯೇ "ಕಣಿ" ಜೋಡಿಸುತ್ತಾರೆ.
ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ, ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್ಲವನ್ನು ನನ್ನ ಹೆಂಡತಿಗಿಂತ ಜಾಸ್ತಿ ನೆನಪಿಟ್ಟುಕೊಳ್ಳತ್ತೆ. ಸ್ವಲ್ಪ ದಿನ ಉಪಯೋಗಿಸಿದ ನಂತರ ಹೊಳೆದಿದ್ದು ಈ ಲೇಖನ. ಇಲ್ಲಿರುವ ಪಾತ್ರಗಳು ಮತ್ತು ನಿರ್ಜೀವ ಪಾತ್ರಗಳು (!!!) ಕೇವಲ ಕಾಲ್ಪನಿಕ. ಅವುಗಳ ವರ್ತನೆಗಳು ಕೂಡ ಕಾಲ್ಪನಿಕಾನೇ, ಹಾಗೇನೇ ಸ್ವಲ್ಪ ಮಸಾಲೆ ಬೆರೆಸಿ ಅರೆದಿದ್ದೇನೆ. ಇನ್ನು ಸ್ಮಾರ್ಟ್ ಅಸಿಸ್ಟೆಂಟ್ ಗೆ SIRI/ALEXA ಅಂತೆಲ್ಲ ದಿಗ್ಗಜರುಗಳು ಹೆಸರಿಟ್ಟರೆ ನಾನು ನನ್ನ ಸ್ಮಾರ್ಟ್ ಅಸಿಸ್ಟೆಂಟ್ ರೋಬೋಗೆ "ಸಖಿ" (ಅಚ್ಚ ಕನ್ನಡದ ಹೆಸರು) ಅಂತ ನಾಮಕರಣ ಮಾಡಿದ್ದೇನೆ .
ಇಂದೇಕೆ ಹೂವೇ
ನಿನ್ನ ನಗುವು ಉಮ್ಮಳಿಸಿದೆ
ರಾಮ ಬರುವೆನೆಂದೇ? ರಾಮ ಬರುವೆನೆಂದೇ?
ಗಾಳಿಯಲಿಂದೇಕೆ
ಸುಗಂಧ ಪಸರಿಸಿದೆ ಹೆಚ್ಚಾಗಿ
ರಾಮ ಬರುವೆನೆಂದೇ? ರಾಮ ಬರುವೆನೆಂದೇ?
ಇಂದೇಕೆ ಮನವರಳಿದೆ
ಈ ತಾಪಸಿಗಿಂದು ಆತಂಕ ಹೆಚ್ಚಾಗಿದೆ
ರಾಮ ಬರುವೆನೆಂದೇ? ರಾಮ ಬರುವೆನೆಂದೇ?
ವರುಷಗಳು ಕಾದಿಹೆನು
ಅವನ ಕಾಣ್ವ ಭರವಸೆಯು ಹೆಚ್ಚಾಗಿದೆ
ರಾಮ ಬರುವೆನೆಂದು! ರಾಮ ಬರುವೆನೆಂದು!
ಕಾದಿಹೆನು ಪೂಜೆಗೆ ಅನವರತ
ಕಾತರವಿದೆ ಅವನ ಬರುವಿಕೆಗೆ
ರಾಮ ಬರುವನಿಂದು! ರಾಮ ಬರುವನಿಂದು!
ಎಂದು ಕಾಂಬೆನೋ!
ಲಕ್ಷ್ಮಣಾ
ಆ ಮಾತೃ ಹೃದಯಿಯಾ!
ಎಂದು ಕಾಂಬೆನೋ!।।
ಅವಳ ಹೆಸರು ಶಬರಿಯಂತೆ
ಮಾತಂಗ ಮುನಿಯ ಶಿಷ್ಯಳಂತೆ
ಈ ರಾಮನ ಕಾಣ್ವ ತವಕವಂತೆ ।।
ಆಶ್ರಮದಿ ಅವಳು ತಾಪಸಿಯಂತೆ
ಮಮತೆಯಲಿ ಅವಳು ತಾಯಿಯಂತೆ
ರಾಮನಾಮವೇ ಅವಳ ಉಸಿರಂತೆ ।।
ಹಲವು ಬಗೆಯ ಹೂಗಳ ಕೊಯ್ವಳಂತೆ
ಕಚ್ಚಿ ರುಚಿ ರುಚಿ ಹಣ್ಣುಗಳ ಇಟ್ಟಿಹಳಂತೆ
ಈ ರಾಮನ ದಾರಿಯನೇ ನೋಡ್ವಳಂತೆ ।।
ಈ ರಾಮನ ನೋಡಲು ಕಾತುರವಂತೆ
ಈ ರಾಮನ ಪೂಜಿಸಲು ಕಾದಿಹಳಂತೆ
ಹನುಮನ ಕಡೆ ದಾರಿ ತೋರ್ವಳಂತೆ ।।
(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.
ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.
ಅಂಚೆಕಚೇರಿಗೆ ಕೆಲವು ಅಂಚೆಯಾಳುಗಳು ಬೇಕಾಗಿದ್ದಾರೆಂಬ ಸುದ್ದಿ ಪುಟ್ಟ ಆಮೆಗೆ ತಿಳಿಯಿತು. “ಓ, ಪತ್ರಗಳ ಬಟವಾಡೆ ಆಸಕ್ತಿಯ ಕೆಲಸ. ನಾನು ಹೋಗಿ ಅರ್ಜಿ ಹಾಕ್ತೇನೆ” ಎಂದು ಹೊರಟಿತು ಪುಟ್ಟ ಆಮೆ.
ಅಂಚೆ ಕಚೇರಿಗೆ ಪುಟ್ಟ ಆಮೆ ಹೋದಾಗ, ಅಲ್ಲಿ ಅರ್ಜಿ ಹಾಕಲು ಕಾಂಗರೂ ಕೂಡ ಕಾದಿತ್ತು. ಪೋಸ್ಟ್ ಮಾಸ್ಟರ್ ಉಷ್ಟ್ರ ಪಕ್ಷಿ ಇಬ್ಬರಿಗೂ ಒಂದೊಂದು ಹಸುರು ಟೊಪ್ಪಿ ಕೊಟ್ಟರು. ಪುಟ್ಟ ಆಮೆಯದು ಪುಟ್ಟ ತಲೆ. ಹಾಗಾಗಿ ಅದಕ್ಕೆ ಪುಟ್ಟ ಟೊಪ್ಪಿ - ಅರ್ಧ ಸೇಬು ಹಣ್ಣಿನ ಗಾತ್ರದ್ದು. ಹಸುರು ಟೊಪ್ಪಿ ತಲೆಗಿಟ್ಟ ಪುಟ್ಟ ಆಮೆ ಚಂದ ಕಂಡಿತು.