ಈರಪ್ಪ ಬಿಜಲಿಯವರ ಎರಡು ಮನಮೋಹಕ ಗಝಲ್ ಗಳು

ಗಝಲ್ ೧

ಸರಿರಾತ್ರಿ ನಡುದಾರಿಯಲಿ ದುಷ್ಟರ ಕೈಯಿಂದ ರಕ್ಷಿಸಿದೆಯಲ್ಲ ಸಖ

ಸುರಿಯುವ ಕಣ್ಣೀರನು ಸರಸರನೆ ವಸ್ತ್ರದಲಿ ಒರೆಸಿದೆಯಲ್ಲ ಸಖ||

 

ಹಿರಿಯರ ಹಿತವಚನ ದಿಕ್ಕರಿಸಿದ

ಹೆಸರು ಹೇಳಬೇಕೆ ? ಮತ್ತು ಇತರೆ ಗಝಲ್ ಗಳು

ಹೆಸರು ಹೇಳಬೇಕೆ ಚೆಲುವೆ

ಒಲವೆಂದರೆ ಸಾಲದೆ

ಖುಷಿಯೆಡೆಯಲಿ ಸವಿ ಕಾಣದೆ

ಹೋದೆಯೆಲ್ಲೆ  ಕೋಮಲೆ

 

ಮೌನದೊಳಗೆ ಪ್ರೀತಿಯೋಲೆ

ನಿನ್ನ ಮನಸ್ಸೇ ನಿನಗೆ ಶತ್ರು

ಒಬ್ಬ ಭಕ್ತನು ದೇವರನ್ನು ಕುರಿತು ಬಹಳ ಕಾಲ ತಪಸ್ಸು ಮಾಡುತ್ತಿದ್ದ. ಕಡೆಗೊಂದು ದಿನ ಭಗವಂತನು ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ. ಭಗವಂತನ ಕೈಯಲ್ಲಿ ಗದೆ ಕೂಡಾ ಇತ್ತು. ನಿನಗೇನು ವರ ಬೇಕು? ಎಂದು ಭಗವಂತನು ಕೇಳಿದ ಕೂಡಲೇ ಆ ಭಕ್ತನು, "ಭಗವಂತಾ! ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ಶಕ್ತಿಗಳನ್ನೆಲ್ಲಾ ನಿನ್ನ ಗದೆಯ ಮೂಲಕ ನೀನು ಚಚ್ಚಿ ಹಾಕಬೇಕು. ಇದೇ ನನ್ನ ಅಭಿಲಾಷೆ!" ಎಂದು ಬೇಡಿಕೊಂಡ.

Image

ಮಾಂಸಹಾರಿ ಸಸ್ಯಗಳ ಅದ್ಭುತ ಲೋಕ

ಹೊಟ್ಟೆಪಾಡಿಗಾಗಿ ನಾವು ಏನೆಲ್ಲಾ ಸರ್ಕಸ್ ಮಾಡುತ್ತೇವೆ. ದಾಸರು ಹೇಳಿದ ಹಾಗೆ ‘ ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಇದು ನೂರು ಶೇಕಡಾ ಸತ್ಯವಾದ ಮಾತು. ಇದು ಮಾನವರಿಗೆ ಮಾತ್ರ ಅನ್ವಯಿಸುತ್ತಾ, ಇಲ್ಲ ಪ್ರಾಣಿಗಳಿಗೂ, ಪಕ್ಷಿಗಳಿಗೂ ಹಾಗೂ ಜೀವ ಇರುವ ಎಲ್ಲಾ ಜೀವಿಗಳಿಗೂ ಅನ್ವಯಿಸುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಬಟ್ಟೆಯ ಹಂಗು ಮಾನವನನ್ನು ಬಿಟ್ಟರೆ ಬೇರೆ ಜೀವಿಗಳಿಗಿಲ್ಲ. ಆದರೆ ಹೊಟ್ಟೆಯ ಹಸಿವು ಎಂಬುದು ಸಕಲ ಜೀವಿಗಳನ್ನು ಏನೆಲ್ಲಾ ಮಾಡಿಸಿಬಿಡುತ್ತದೆ? ನಿಮಗೆ ತಿಳಿದೇ ಇದೆ. ಇರಲಿ, ಇದು ಓಡಾಡುವ ಜೀವ ಜಂತುಗಳ ವಿಷಯವಾಯಿತು. ಹೊಟ್ಟೆ ಪಾಡಿಗಾಗಿ ಸಸ್ಯಗಳೂ ಮಾಂಸಹಾರ ತಿನ್ನುತ್ತವೆಯೆಂದರೆ ನಿಮಗೆ ಅಚ್ಚರಿಯಾದೀತು ಅಲ್ಲವೇ? ಸಸ್ಯಗಳಿಗೇಕೆ ಮಾಂಸಹಾರ?

Image

ಬಾಳಿಗೊಂದು ಚಿಂತನೆ (15) - ಪರಮಸತ್ಯ

ಸತ್ಯ ನಮಗೆಲ್ಲ ತಿಳಿದ ವಿಚಾರ. *ಪರಮ ಸತ್ಯ* ಭಗವಂತನಿಗೆ ಪೂರ್ಣ ಶರಣಾಗುವುದು, ಅವನ ನಾಮವನ್ನು ಮನಸಾ ಧ್ಯಾನಿಸುವುದು, ಎಲ್ಲಾ ನಿನಗೇ ಬಿಟ್ಟದ್ದು, ನಾನು ಮಾಡುವ ಕರ್ತವ್ಯ ಮಾಡುತ್ತೇನೆ, ನೀನು ನನ್ನನ್ನು ನೋಡಿಕೊ, ಕಷ್ಟ ಸುಖ ಎರಡೂ ನಿನ್ನ ಲೀಲೆ ಎನ್ನುವುದೇ ಪರಮ ಸತ್ಯ.

Image

ಝೆನ್ ಪ್ರಸಂಗ: ಅಂತಿಮ ಗುರಿ ಏನು?

ಒಂದಕ್ಕೊಂದು ಹತ್ತಿರದಲ್ಲಿದ್ದ ಉತ್ತರ ಮತ್ತು ದಕ್ಷಿಣ ಎಂಬ ಎರಡು ಝೆನ್ ಗುರುಕುಲಗಳಲ್ಲಿ ಹಲವಾರು ಮಕ್ಕಳೂ ಕಲಿಯುತ್ತಿದ್ದರು. ಗುರುಕುಲಗಳಲ್ಲಿ ಅತ್ಯಂತ ಮೇಧಾವಿ ಹುಡುಗರನ್ನು ಆಯ್ದು ಹೊರಗಿನ ಕೆಲಸಗಳಿಗೆ ನೇಮಿಸುತ್ತಿದ್ದರು.

ಅದೊಂದು ದಿನ ಉತ್ತರ ಗುರುಕುಲದ ಹುಡುಗನನ್ನು ಸಂಧಿಸಿದ ದಕ್ಷಿಣ ಗುರುಕುಲದ ಹುಡುಗ ಪ್ರಶ್ನಿಸಿದ, “ಎಲ್ಲಿಗೆ ಹೋಗೋದು ನೀನು?” ಉತ್ತರ ಗುರುಕುಲದ ಹುಡುಗ ಉತ್ತರಿಸಿದ, "ನನ್ನ ಕಾಲುಗಳು ಎಲ್ಲಿಗೆ ಕರೆದೊಯ್ಯುತ್ತವೆಯೋ ಅಲ್ಲಿಗೆ.”

Image

ಅದಕ್ಕೆ ಯಾರದ್ದೂ ಹಂಗಿಲ್ಲ

ಅಭಿನಂದನೆ ಹೇಳದಿದ್ದರೂ
ಮುಂಜಾವು ಮುನಿಸಿಕೊಂಡಿಲ್ಲ.
ಪ್ರತಿದಿನವೂ ಹೊತ್ತು ತರುತ್ತಿದೆ
ಹೊಸದೊಂದು ಆಹ್ಲಾದ.

ಹಗಲೆಲ್ಲ ಹರಿದು ಸುಸ್ತಾದ ನದಿ
ಮಲಗುವುದೇ ರಾತ್ರಿ ಕವದಿ ಹೊದ್ದು!
ಇಲ್ಲವಲ್ಲ,
ಮತ್ಯಾಕೆ ನಿಲ್ದಾಣ ನಮಗೆ ಮಾತ್ರ !?

ಈಗ್ಯಾರಿದ್ದಾರೆ ಚಂದ್ರನನ್ನು ನೋಡಿ
ಬೆಳದಿಂಗಳಲಿ ಪ್ರೇಮಿಸುವ ಪ್ರೇಮಿಗಳು
ಆದರೂ ಚಂದ್ರನಿಲ್ಲವೇ
ಮುಗುಳ್ನಗುತ್ತಾ !

ಅದೆಷ್ಟು ಜನ ಬೈದುಕೊಂಡಿಲ್ಲ.
ಅವಿರತವಾಗಿ ಸುರಿದ ಮಳೆಯ ಕಂಡು.
ಆದರೇನು ನೀರು ತನ್ನನ್ನೆ ತಾನು ಬಿಸಿಗೆ ಮೈಒಡ್ಡಿ
ಆವಿಯಾಗುವದ ನಿಲ್ಲಿಸಿತೇ!
ಮೋಡವಾಗಲು ಬೇಸರಿಸಿಕೊಂಡಿತೇ!
ಸುರಿಯಲಿಲ್ಲವೇ ಧಾರಾಕಾರವಾಗಿ ಮತ್ತೆ ಮತ್ತೆ!

ಯಕ್ಷಗಾನದ ಸವಿ ನೆನಪುಗಳ ಹೀಗೊಂದು ಗಝಲ್

ಎನಿತು ಅಂದ ಚೆಂದವೋ ಈ ಕಲೆ ನೋಡಿದೊಡನೇ ಮೈಮರೆತಿದ್ದೆವಲ್ಲಾ ಸಖಿ

ಸೆಳೆತವೇನೋ ಯಕ್ಷಗಾನದ ಹೆಸರು ಕೇಳಿದೊಡನೇ ಮನದೊಳಗೆ ಹರ್ಷಿಸುತ್ತಿದ್ದೆವಲ್ಲಾ ಸಖಿ

 

ಸಂಜೆಯ ಹೊತ್ತಲಿ ಬಯಲಾಟ ವೀಕ್ಷಣೆಗೆ ಕಾದು ಕುಳಿತಿರುವ ಪರಿ ನೆನಪಿದೆಯೇ

ಚೌಕಿಯ ಒಳಗ್ಹೋಗಿ ಮೆಲ್ಲಗೆ ವೇಷಭೂಷಣಗಳ ಪ್ರೇಮದಿಂ ಸ್ಪರ್ಶಿಸುತ್ತಿದ್ದೆವಲ್ಲಾ ಸಖಿ

ಕನ್ನಡ ಭಾಷೆ - ಬದುಕು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಜಿ.ಸಿದ್ದರಾಮಯ್ಯ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ: ೨೦೧೯

ಪ್ರೊ. ಎಸ್. ಜಿ.ಸಿದ್ಧರಾಮಯ್ಯ ಅವರು ಕನ್ನಡ ಕಾವ್ಯಲೋಕದ ನೆಲದನಿಯ ಸಂವೇದನೆ. ಅವರ ಕಾವ್ಯಕಾರಣದ ದೇಸಿ ನುಡಿಗಟ್ಟುಗಳು ಕನ್ನಡ ಸಾಹಿತ್ಯದ ಕಾವ್ಯ ತೆನೆಯನ್ನು ಸದಾ ಹಸಿರಾಗಿಡುವುದರಲ್ಲಿ ಸಾವಯವ ಸಂಬಂಧವನ್ನು ಹೊಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದು ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಸಿದ್ಧರಾಮಯ್ಯನವರು ರಾಜ್ಯದ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ, ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕವನ, ನಾಟಕ, ವಿಮರ್ಶೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿರುವ ಸಿದ್ಧರಾಮಯ್ಯ ಅವರು ಕ್ರಿಯಾಶೀಲ ಹಾಗೂ ಸೃಜನಾತ್ಮಕ ಬರವಣಿಗೆಯ ಕಣಜ. ಅವರ ಬರವಣಿಗೆಗಾಗಿ ಪು.ತಿ.ನ.

ಗೀತಾಮೃತ - 13

*ಅಧ್ಯಾಯ ೪*

*ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹ:/*

*ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್//೨೧//*

Image