ಸದ್ಭಾವನೆ: ಯಶಸ್ಸಿನ ಕೀಲಿಕೈ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಐಟಿ ಉದ್ಯೋಗಕ್ಕೆ ವಿದಾಯ, ಕೃಷಿಕನಾಗಿ ಮೂರು ಪಟ್ಟು ಆದಾಯ!

“ಸಂಬಳದ ಕೆಲಸದ ಸುಳಿಯಿಂದ ಹೊರ ಬರಬೇಕಾದರೆ ಧೈರ್ಯ ಬೇಕು” ಎಂದು ಸಾಪ್ಟ್-ವೇರ್ ಇಂಜಿನಿಯರ್ ಉದ್ಯೋಗ ತೊರೆದು ಈಗ ಕೃಷಿಯಲ್ಲಿ ತೊಡಗಿರುವ ಅನುಪ್ ಪಾಟೀಲ್ (೨೮ ವರುಷ) ಹೇಳುವಾಗ ಕಿವಿಗೊಡ ಬೇಕಾಗುತ್ತದೆ.
ಯಾಕೆಂದರೆ, ವರುಷಕ್ಕೆ ರೂ.೬.೫ ಲಕ್ಷ ವೇತನ ಪಡೆಯುತ್ತಿದ್ದ ಅನುಪ್ ಪಾಟೀಲ್ ಆ ಸುಳಿಯಲ್ಲಿ ನಾಲ್ಕು ವರುಷ ಸಿಲುಕಿದ್ದರು. ಎರಡು ವರುಷಗಳ ಮುಂಚೆ ಆ ಸುಳಿಯಿಂದ ಪಾರಾದ ಅನುಪ್ ಈಗ ಕೃಷಿಕರಾಗಿ ಗಳಿಸುತ್ತಿರುವ ಆದಾಯ ವರುಷಕ್ಕೆ ರೂ.೨೦ ಲಕ್ಷ!

Image

ಕವಿತೆ

ಕವಿತೆ
** **

೧ 
ನೋಡು,
ಜಗದಗಲ, ಮುಗಿಲಗಲ
ಆ ಬಾನು ಈ ಭೂಮಿ
ಪ್ರಕೃತಿಯ ಅಣು ಅಣುವ 
ನೋಡು.... 
ಆ ಬೆಳಕಲ್ಲಿ
ಸೂರ್ಯ, ಚಂದ್ರ, ತಾರೆ
ತಲೆ‌ ಎತ್ತಿ 
ದಿಗಂತವ ನೋಡು.....


ಒಮ್ಮೆ ಕಣ್ತೆರೆದು ನೋಡು
ಬೆಟ್ಟ ಗುಡ್ಡಗಳ
ಅಲ್ಲೆಲ್ಲೋ ಸಣ್ಣಗೆ ಹರಿವ ನದಿಯ
ಗಿರಿ ತೊರೆಯ
ಜಳಪಾತ, ಪ್ರಪಾತವ ನೋಡು
ಜಲಚರಗಳ ಬಯಲಾಟವ.


ದಿಟ್ಟಿಸಿ ನೋಡು 
ಆ ಕಾನನದ ನಡುವೆ
ತಂಪಾಗಿ ಬೀಸೋ ಗಾಳಿಯ
ಆ ಮರದ ಕೊಂಬೆಯಲಿ 
ಕೂಗೋ ಕೊಗಿಲೆಯ
ಆ ವನ ಸುಮಗಳ ನಡುವೆ
ನಲಿದು ನರ್ತಿಸೋ
ನವಿಲ.

ರೈತ ಮತ್ತು ಹುಲಿ

ಒಂದಾನೊಂದು ಕಾಲದಲ್ಲಿ ದೊಡ್ಡ ಹುಲಿಯೊಂದಿತ್ತು. ಅದು ಕಾಡುಪ್ರಾಣಿಗಳ ರಾಜನಾಗಿತ್ತು. ಕಪ್ಪು ಚರ್ಮದ, ಬೆಂಕಿಯಂತಹ ಕಣ್ಣುಗಳ ಮತ್ತು ಚೂರಿಯಂತಹ ಹರಿತ ಹಲ್ಲುಗಳ ಈ ಹುಲಿ, ಕಾಡಿನ ಪ್ರಾಣಿಗಳಲ್ಲಿ ನಡುಕ ಹುಟ್ಟಿಸುತ್ತಿತ್ತು. ಹಲವಾರು ಪ್ರಾಣಿಗಳನ್ನು ಕೊಂದು ತಿನ್ನುತ್ತಿತ್ತು.

ಅದೊಂದು ದಿನ ಬೆಳಗ್ಗೆ ಜಿಂಕೆಯನ್ನು ಕೊಂದು ತಿಂದ ಹುಲಿ ಸುತ್ತಾಡಲು ಹೊರಟಿತು. ತನ್ನನ್ನು ಕಾಣುತ್ತಲೇ ಇತರ ಪ್ರಾಣಿಗಳು ಓಡುವುದನ್ನು ಕಂಡು ಅದರ ಸೊಕ್ಕು ಹೆಚ್ಚುತ್ತಿತ್ತು. ಆಗ ಹುಲಿಗೆ ಅಲ್ಲೊಂದು ದೃಶ್ಯ ಕಂಡಿತು; ಅದೇನೆಂದು ಅದಕ್ಕೆ ಅರ್ಥವಾಗಲಿಲ್ಲ. ಅಲ್ಲಿನ ಪರ್ವತದ ಬುಡದಲ್ಲಿದ್ದ ಗದ್ದೆಯಲ್ಲಿ ಕೋಣವೊಂದು ಸದ್ದಿಲ್ಲದೆ ನೇಗಿಲನ್ನು ಎಳೆಯುತ್ತಿತ್ತು. ಅದನ್ನು ಬಿದಿರಿನ ಕೋಲಿನಿಂದ ಬಡಿಯುತ್ತಾ, ಬೊಬ್ಬೆ ಹಾಕುತ್ತಾ ಯುವಕನೊಬ್ಬ ಹಿಂಬಾಲಿಸುತ್ತಿದ್ದ.

Image

ಪಾರಂಪರಿಕ ಕೆರೆಗಳು: ನೀರಾವರಿ ಮತ್ತು ಕುಡಿನೀರಿನ ಆಕರಗಳು

ಭಾರತದಂತಹ ಉಷ್ಣವಲಯ ದೇಶಗಳಲ್ಲಿ ಬಾವಿಗಳು, ಕೆರೆಗಳು ಮತ್ತು ಕಾಲುವೆಗಳು – ಈ ಮೂರು ನೀರಿನ ಆಕರಗಳೇ  ಕೃಷಿಗೆ ಆಧಾರ.
ಭಾರತದಲ್ಲಿ ೧೯೫೦ರ ದಶಕದಿಂದ ಶುರುವಾಯಿತು ಹಸುರು ಕ್ರಾಂತಿ. ಅದಕ್ಕಿಂತ ಮುಂಚೆ, ಕೃಷಿ ನೀರಾವರಿಗಾಗಿ ರೈತರು ಅಂತರ್ಜಲವನ್ನು ಅವಲಂಬಿಸಿರಲಿಲ್ಲ. ಆದರೆ ಈಗ ಇದುವೇ ಕೃಷಿ ನೀರಾವರಿಯ ಮೊದಲ ಆಕರವಾಗಿದೆ.
೧೯೭೦ರ ದಶಕದ ವರೆಗೆ ಹಲವು ರಾಜ್ಯಗಳಲ್ಲಿ ಕೆರೆಗಳೇ ಕೃಷಿ ನೀರಾವರಿಯ ಆಕರಗಳಾಗಿದ್ದವು. ಕ್ರಮೇಣ, ಬೃಹತ್ ನೀರಾವರಿ ಯೋಜನೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣವೇ ಪ್ರಧಾನವಾಯಿತು ಮತ್ತು ಕೆರೆ ನೀರಾವರಿಯಂತಹ ಸಣ್ಣ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಲಾಯಿತು.

Image

“ಪದ್ಮಶ್ರೀ” ರೈತ ರಾಮ್ ಶರಣ್ ವರ್ಮಾರ ವಾರ್ಷಿಕ ಆದಾಯ ರೂ.೪೮ ಲಕ್ಷ!

“ಬಾಳೆ ರಾಜ” ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ ೨೦೧೯ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು ೩೦ ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್‍ಪುರ ಗ್ರಾಮದಲ್ಲಿದೆ.
ಅಲ್ಲಿ ಅವರ ಕುಟುಂಬದ ಹಿಂದಿನ ಮೂರು ತಲೆಮಾರುಗಳದ್ದು ಬಡತನದ ಬದುಕು. ಹತ್ತನೆಯ ತರಗತಿಯ ನಂತರ ಶಿಕ್ಷಣ ಮುಂದುವರಿಸುವ ಕನಸು ಕಂಡಿದ್ದರು ರಾಮ್ ಶರಣ್ ವರ್ಮಾ. ಆದರೆ ಕುಟುಂಬದ ಬಡತನದಿಂದಾಗಿ ಅವರೂ ಕೃಷಿಯಲ್ಲಿ ತೊಡಗಬೇಕಾಯಿತು.

Image

ಬಿಳಿ ಒಂಟೆಮರಿಯಿಂದ ತಾಯಿ ಒಂಟೆಯ ಹುಡುಕಾಟ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜಕುಮಾರ ಮತ್ತೊಬ್ಬ ಶ್ರೀಮಂತ ಒಂದೂರಿನಲ್ಲಿ ವಾಸ ಮಾಡುತ್ತಿದ್ದರು. ರಾಜಕುಮಾರನ ಕುಟುಂಬದೊಂದಿಗೆ ವೈವಾಹಿಕ ಸಂಬಂಧ ಬೆಳೆಸಬೇಕೆಂಬುದು ಶ್ರೀಮಂತನ ಆಶೆ.
ಅದಕ್ಕಾಗಿ ರಾಜಕುಮಾರನಿಗೆ ಒಂದು ನೂರು ಬಿಳಿ ಒಂಟೆಗಳನ್ನು ಉಡುಗೊರೆ ನೀಡಲು ನಿರ್ಧರಿಸಿದ ಶ್ರೀಮಂತ. ಆದರೆ, ಕೊನೆಗೆ ಎಣಿಸುವಾಗ ಅವನಲ್ಲಿದ್ದದ್ದು ತೊಂಬತ್ತೊಂಬತ್ತು ಬಿಳಿ ಒಂಟೆಗಳು. ಹಾಗಾಗಿ, ತನ್ನದೇ ಹೆಣ್ಣು ಬಿಳಿ ಒಂಟೆಯನ್ನು ಸೇರಿಸಿ, ಭರ್ತಿ ಒಂದು ನೂರು ಬಿಳಿ ಒಂಟೆಗಳನ್ನು ಉಡುಗೊರೆಯಾಗಿತ್ತ. ತನ್ನ ಬಿಳಿ ಒಂಟೆಯ ಮರಿಯನ್ನು ತನ್ನ ಮನೆಯಲ್ಲೇ ಉಳಿಸಿಕೊಂಡ.

Image

ನದಿಗಳ ಪುನರುಜ್ಜೀವನ : ತರುಣ್ ಭಾರತ್ ಸಂಘದ ಮಾದರಿ

ವಾರ್ಷಿಕ ೫೩೧ ಮಿಮೀ ಮಳೆ ಸುರಿಯುವ ರಾಜಸ್ಥಾನದಲ್ಲಿ ಆಗಾಗ ಬರಗಾಲ. ೧೯೭೦ರಲ್ಲಿ ಅಳ್ವಾರ್ ಜಿಲ್ಲೆಯ ರಾಜ್‍ಘರ್, ಲಚ್‍ಮನ್‍ಘರ್, ತಾನಘಜಿ ಮತ್ತು ಬಾನ್ಸು – ಈ ನಾಲ್ಕು ತಾಲೂಕುಗಳನ್ನು “ಕಪ್ಪು ಪ್ರದೇಶ”ವೆಂದು ರಾಜ್ಯ ಸರಕಾರ ಘೋಷಿಸಿತು.

Image

ಶೂನ್ಯ ಭಂಡವಾಳ ಸಹಜ ಕೃಷಿ – ಮುಂದೇನು?

ಜುಲಾಯಿ ೨೦೧೭ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ, “ಶೂನ್ಯ ಭಂಡವಾಳದ ಸಹಜ ಕೃಷಿ” ವಿಧಾನವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದರು. “ಇಂತಹ ಕ್ರಮಗಳಿಂದ ಭಾರತದ ೭೫ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರೈತರ ಆದಾಯ ಇಮ್ಮಡಿಗೊಳಿಸಲು ಸಹಾಯವಾದಿತು” ಎಂದು ಘೋಷಿಸಿದರು.

Image

ಮಜಾ ಭಾರತದ ಗುರುವೇ ನಮ್ಮ ಗುರು ಕಿರಣ್

ಮನೆಯಲ್ಲಿ ಕುಳಿತು ದೂರದರ್ಶನ ನೋಡುವವರಿಗೆಲ್ಲ ಮಜಾ ಭಾರತ ಅಚ್ಚು ಮೆಚ್ಚಿನ ಕಾರ್ಯಕ್ರಮವೆಂದರೆ ತಪ್ಪಾಗಲಾರದು. ಅದರಲ್ಲಿನ ತೀರ್ಪುಗಾರರ ಪೈಕಿ ಓರ್ವವೇ ನಮ್ಮವರೇ ಆದ ಗುರು ಕಿರಣ್. ಗುರು ಕಿರಣ್ ಕಾರ್ಯಕ್ರಮದ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡಿ ಅವರ ಅಭಿನಯದಲ್ಲಿನ ಕುಂದು ಕೊರತೆಗಳನ್ನು ತಿದ್ದುವ ಕೆಲಸ ಮಾಡುತ್ತಾ ಬಂದಿದ್ದಾರೆ. ಈ ಅನುಭವ ಅವರಿಗೆ ಬಂದದ್ದಾದರೂ ಹೇಗೆ ಎಂದರೆ ಅವರ ಹಿಂದಿನ ದಿನಗಳು ನೆನಪಾಗುವುದು ಸಹಜ. ಈಗ ಕನ್ನಡ ಚಿತ್ರರಂಗದಲ್ಲಿ ಸಂಗೀತ ಎಂದರೆ ಗುರುಕಿರಣ್ ಎಂದು ಹೆಸರುವಾಸಿಯಾಗಿದೆ. ಗುರು ನಿಜಕ್ಕೂ ಉತ್ತಮ ಸಂಗೀತಗಾರ ಮತ್ತು ಹಾಡುಗಾರರೂ ಹೌದು. ನಟನೆಯಲ್ಲೂ ಸೈ ಅನಿಸಿಕೊಂಡಿದ್ದಾರೆ. 

Image