ಕನ್ನಡ ಭಾಷೆ, ನಾಡು ಮತ್ತು ಕನ್ನಡಿಗನ ಕರ್ತವ್ಯ

ಕರ್ನಾಟಕ ರಾಜ್ಯೋತ್ಸವದ ತಿಂಗಳು ಇಂದು ಮುಗಿಯುತ್ತಿದೆ. ಆದರೆ ಕನ್ನಡ ಭಾಷೆ ಮತ್ತು ನಾಡನ್ನು ಉಳಿಸಿ ಬೆಳೆಸುವ ಕೆಲಸ ನಿರಂತರ ನಡೆಯುತ್ತಲೇ ಇರಬೇಕಾದ ಅನಿವಾರ್ಯತೆ ಇದೆ. ಸಂಪದದಲ್ಲಿ ಈ ನವೆಂಬರ್ ತಿಂಗಳಲ್ಲಿ ಈಗಾಗಲೇ ನಾವು ಹಲವಾರು ಕನ್ನಡ ಭಾಷಾ ಪರ, ಕನ್ನಡಕ್ಕಾಗಿ ದುಡಿದವರ ಬಗ್ಗೆ, ಕನ್ನಡ ಪುಸ್ತಕದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಮುಂದೆಯೂ ಕನ್ನಡ ಭಾಷೆಗಾಗಿ ನಮ್ಮ ಪ್ರೀತಿ ಮತ್ತು ಕಳಕಳಿ ಮುಂದುವರೆಯಲಿದೆ.

Image

ಮೂರು ಟೆಡ್ಡಿ ಕರಡಿಗಳ ಸಾಗರ ಸಾಹಸ

ಬೇಸಗೆಯ ಒಂದು ದಿನ, ಮೂವರು ಪುಟ್ಟ ಹುಡುಗರು ನದಿ ದಡದಲ್ಲಿ ಆಟವಾಡಲು ಬಂದರು. ತಮ್ಮೊಂದಿಗೆ ಈಜು ಉಡುಗೆಗಳು, ಬ್ರೆಡ್-ಜಾಮ್, ಬಾಳೆಹಣ್ಣು ಮತ್ತು ಟೆಡ್ಡಿ ಕರಡಿಗಳನ್ನು ತಂದಿದ್ದರು.

ಅವರು ಅಲ್ಲಿಗೆ ಬಂದಾಗ, ಅಲ್ಲೊಂದು ನೀಲಿ ಬಣ್ಣದ ದೋಣಿಯನ್ನು ಮರಕ್ಕೆ ಕಟ್ಟಿದ್ದನ್ನು ಕಂಡರು. ಮೂವರು ಹುಡುಗರೂ ದೋಣಿಯನ್ನೇರಿ ಖುಷಿಯಿಂದ ಕಡಲುಗಳ್ಳರ ಆಟವಾಡಿದರು. ನೀರನ್ನು ಎರಚಿಕೊಳ್ಳುತ್ತಾ, ಈಜಾಡುತ್ತಾ ಹೊತ್ತು ಕಳೆದರು. ಅನಂತರ ನದಿಯ ದಡದಲ್ಲಿ ಒಬ್ಬರನ್ನೊಬ್ಬರು ಬೆನ್ನಟ್ಟುತ್ತಾ, ಅವರು ಕಣ್ಮರೆಯಾದರು.

Image

ಮರಡೋನಾ ಮತ್ತು ಹ್ಯಾಂಡ್ ಆಫ್ ಗಾಡ್

ಮೊನ್ನೆ ಸಂಪದದಲ್ಲಿ ಅಗಲಿದ ಫುಟ್ಬಾಲ್ ದಂತಕತೆ ಎಂದು ಡೀಗೋ ಮರಡೋನಾ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮರಡೋನಾ ಅವರಿಗೆ ಕುಖ್ಯಾತಿ ತಂದ ‘ಹ್ಯಾಂಡ್ ಬಾಲ್’ ಪ್ರಕರಣವನ್ನು ಉಲ್ಲೇಖಿಸಿದ್ದೆ. ಆದರೆ ವಿವರವಾಗಿ ಬರೆಯಲು ಆ ದಿನ ಸಾಧ್ಯವಾಗಿರಲಿಲ್ಲ. ೧೯೮೬ರ ಫುಟ್ಬಾಲ್ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಏನಾಯಿತು? ಏನಿದು ದೇವರ ಕೈ ಗೋಲು (ಹ್ಯಾಂಡ್ ಆಫ್ ಗಾಡ್)? ಆ ಗೋಲ್ ಯಾಕೆ ಈ ಹೆಸರು ಪಡೆಯಿತು? ಬನ್ನಿ ಸ್ವಲ್ಪ ಗಮನ ಹರಿಸೋಣ.

Image

ಹುಲಿ ವೇಷ - ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ವಿಠಲ್ ಶೆಣೈ
ಪ್ರಕಾಶಕರು
ಟೋಟಲ್ ಕನ್ನಡ, ಜಯನಗರ, ಬೆಂಗಳೂರು.
ಪುಸ್ತಕದ ಬೆಲೆ
ರೂ. ೧೬೦.೦೦. ಮುದ್ರಣ: ೨೦೧೯

ಹುಲಿವೇಷ- ಕಥೆಗಳು ವಿಠಲ್ ಶೆಣೈ ಅವರ ಕಥಾ ಸಂಗ್ರಹ ಪುಸ್ತಕ. ಅವರೇ ಹೇಳಿಕೊಂಡಂತೆ ಹುಲಿವೇಷ ಎಂಬ ಕಥೆ ಕಾದಂಬರಿಯಷ್ಟು ದೊಡ್ಡದಾಗಿಲ್ಲದೇ, ಕಥೆಯಷ್ಟು ಸಣ್ಣದಾಗಿಯೂ ಇಲ್ಲ. ನೀಳ್ಗತೆ ಎಂದು ಕರೆಯಬಹುದೇನೋ? ಇಲ್ಲಿರುವ ಏಳೂ ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ ಎನ್ನುವುದು ವಿಠಲ್ ಶೆಣೈ ಅವರ ಬರಹದ ವಿಶೇಷತೆ. ಸರಳವಾದ ವಾಕ್ಯಗಳು, ನಮಗೆ ಗೊತ್ತಿರುವ ಸುಲಭ ಪದಗಳು, ನಮ್ಮ ಸುತ್ತ ಮುತ್ತಲಿನಲ್ಲೇ ನಡೆಯುವಂಥಹ ಕಥಾ ಹಂದರ ಇವು ಈ ಕಥೆಗಳಿಗೆ ವಿಶೇಷ ಮೆರುಗನ್ನು ನೀಡಿವೆ. 

ಕಾಗೆಯ ಜನ್ಮ ಮತ್ತು ಅದ್ವೈತ ಸಂದೇಶ

ಹಿರಿಯ ಕಂಚಿ ಶ್ರೀಗಳಲ್ಲಿ ಭಕ್ತನೊಬ್ಬನು ಪ್ರಶ್ನಿಸಿದನಂತೆ "ಸ್ವಾಮೀಜಿ,ನಾವೇಕೆ,ಮಹಾಲಯದ ಸಂದರ್ಭ ಕಾಗೆಗಳಿಗೆ ಉಣಬಡಿಸಿ ಉಪಚರಿಸುತ್ತೇವೆ? ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿರುತ್ತಾರಾ? ಅವರೇಕೆ ಕಾಗೆಗಳಂಥ ಹೀನ ಜನ್ಮ ತಾಳಬೇಕು? ಇನ್ಯಾವುದೇ ಶ್ರೇಷ್ಠ ಹಕ್ಕಿಯಾಗಕೂಡದೆ?

Image