ಬಿಳಿ ಹಾಲಿನ ಕಪ್ಪು ವಹಿವಾಟು
ಈಗ ಜಗತ್ತಿನಲ್ಲೇ ಅತ್ಯಧಿಕ ಹಾಲು ಉತ್ಪಾದಿಸುವ ದೇಶ ಭಾರತ. ೨೦೧೭-೧೮ರಲ್ಲಿ ಯುರೋಪಿಯನ್ ಒಕ್ಕೂಟಕ್ಕಿಂತಲೂ ಹೆಚ್ಚು ಹಾಲು ಉತ್ಪಾದಿಸುವ ಮೂಲಕ ಮೊದಲ ಸ್ಥಾನಕ್ಕೇರಿದೆ.
- Read more about ಬಿಳಿ ಹಾಲಿನ ಕಪ್ಪು ವಹಿವಾಟು
- Log in or register to post comments
ಈಗ ಜಗತ್ತಿನಲ್ಲೇ ಅತ್ಯಧಿಕ ಹಾಲು ಉತ್ಪಾದಿಸುವ ದೇಶ ಭಾರತ. ೨೦೧೭-೧೮ರಲ್ಲಿ ಯುರೋಪಿಯನ್ ಒಕ್ಕೂಟಕ್ಕಿಂತಲೂ ಹೆಚ್ಚು ಹಾಲು ಉತ್ಪಾದಿಸುವ ಮೂಲಕ ಮೊದಲ ಸ್ಥಾನಕ್ಕೇರಿದೆ.
ಸರಕಾರಿ ಲೆಕ್ಕಾಚಾರದಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಇರಬಹುದು. ಆದರೆ ವಾಸ್ತವಿಕತೆ ಇದಕ್ಕಿಂತ ಭಿನ್ನವಾಗಿದೆ. ಬಡತನ ಇರಬೇಕಾದರೆ ದುಡಿಯಲು ಉದ್ಯೋಗ ಅವಕಾಶ ಇಲ್ಲದಾಗಬೇಕು. ಇಲ್ಲಿ ಉದ್ಯೋಗಕ್ಕೆ ಬರವಿಲ್ಲ. ಉದ್ಯೋಗ ವಿಲ್ಲದೆ ಇರುವವರೇ ಇಲ್ಲ.
"ಏನು ಮಾತನಾಡುತ್ತಿದ್ದೀರಿ ನೀವೆಲ್ಲ?" ಎಂಬ ಪ್ರಶ್ನೆ ಆ ಸಭೆಯಲ್ಲಿ ಇದ್ದವರನ್ನೆಲ್ಲ ಬೆಚ್ಚಿ ಬೀಳಿಸಿತು. ಯಾಕೆಂದರೆ ಪ್ರಶ್ನೆ ಕೇಳಿದವನು ಬಹುರಾಷ್ಟ್ರೀಯ ಕಪ್ಪುಕೋಲಾ ಕಂಪೆನಿಯನ್ನು ವಾರದ ಮುಂಚೆ ಸೇರಿದ್ದ ಯುವಕ. ವಯಸ್ಸಿನಲ್ಲಿ ಅಲ್ಲಿದ್ದ ಎಲ್ಲರಿಗಿಂತ ಕಿರಿಯ.
ಕಳೆದ ಒಂದು ತಾಸಿನಿಂದ ಆ ಸಭೆಯಲ್ಲಿ ಬಿರುಸಿನ ಚರ್ಚೆ. ಎದುರಾಳಿ ಕಂಪೆನಿಯ ಕೆಂಪುಕೋಲಾಕ್ಕಿಂತ ಕಪ್ಪುಕೋಲಾವನ್ನು ಜಾಸ್ತಿ ಮಾರಾಟ ಮಾಡುವುದು ಹೇಗೆ? ಎಂಬ ಬಗ್ಗೆ. ಹಲವು ಐಡಿಯಾಗಳ, ಸಲಹೆಗಳ ಪರಿಶೀಲನೆ. ಮಾರಾಟಗಾರರಿಗೆ ಹೆಚ್ಚು ಕಮಿಷನ್ ಪಾವತಿ ಮತ್ತು ಹೆಚ್ಚು ಕೋಲಾ ಕುಡಿಯುವವರಿಗೆ ಲಾಟರಿ ಎತ್ತಿ ಬಹುಮಾನ ಇತ್ಯಾದಿ ಪ್ರಸ್ತಾಪಗಳು. ಇದನ್ನೆಲ್ಲ ಕೇಳಿಕೇಳಿ ಬೇಸತ್ತ ಯುವಕ ಎದ್ದು ನಿಂತು, ಏರಿದ ಸ್ವರದಲ್ಲಿ ಆ ಪ್ರಶ್ನೆ ಕೇಳಿದ್ದ.
ಮಹಾರಾಷ್ಟ್ರದ ಮರಾಠವಾಡದಲ್ಲಿ ೨೦೧೧ರಿಂದ ಸತತ ಬರಗಾಲ. ಅಲ್ಲಿ ಇಸವಿ ೨೦೧೩ರ ಹೊರತಾಗಿ, ಉಳಿದೆಲ್ಲ ವರುಷಗಳಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ.
ಮರಾಠವಾಡ ಪ್ರದೇಶದ ಬೀಡ್ ಜಿಲ್ಲೆ ರೈತರ ಆತ್ಮಹತ್ಯೆಗಳ ಜಿಲ್ಲೆಯೆಂದು ಕುಪ್ರಸಿದ್ಧ. ಯಾಕೆಂದರೆ, ೨೦೧೨ರಿಂದೀಚೆಗೆ ಬೀಡ್ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಮರಾಠವಾಡದಲ್ಲೇ ಅತ್ಯಧಿಕ. ಮರಾಠವಾಡದಲ್ಲಿ ದಾಖಲಾದ ಒಟ್ಟು ೨,೪೫೦ ರೈತರ ಆತ್ಮಹತ್ಯೆಗಳಲ್ಲಿ ೭೦೨ ಬೀಡ್ ಜಿಲ್ಲೆಯಲ್ಲಾಗಿದೆ.
ಇಂತಹ ದಾರುಣ ಪರಿಸ್ಥಿತಿಯಲ್ಲಿ, ಬೀಡ್ ಜಿಲ್ಲೆಯ ಬಹಿರ್ವಾಡಿ ಗ್ರಾಮದ ವಿಶ್ವನಾಥ ಬೊಬಡೆ ಹತಾಶರಾಗಿ ಕೂರಲಿಲ್ಲ. ತನ್ನ ಒಂದೆಕ್ರೆ ಜಮೀನಿನಲ್ಲೇ ಸುಧಾರಿತ ಬೇಸಾಯ ಮಾಡಿ ಒಂದೇ ವರುಷದಲ್ಲಿ ರೂ.೭ ಲಕ್ಷ ಆದಾಯ ಗಳಿಸಿ, ಸತತ ಬರಗಾಲ ಎದುರಿಸುವ ದಾರಿ ತೋರಿದ್ದಾರೆ.
ಇವತ್ತು ಸಂಕ್ರಾಂತಿಯ ಶುಭ ದಿನ. ಸಂಕ್ರಾಂತಿ ಎಂದರೆ ದಾಟುವುದು. ಸೂರ್ಯನು ಒಂದು ರಾಶಿಯಿಂದ ಇನ್ನೊಂದಕ್ಕೆ ದಾಟುವ ದಿನವೇ ಸಂಕ್ರಾಂತಿ ಅಥವಾ ಸಂಕ್ರಮಣ. ಒಂದು ರಾಶಿಗೆ ಪ್ರವೇಶಿಸುವ ಸೂರ್ಯ ಒಂದು ತಿಂಗಳ ಅವಧಿ ಅಲ್ಲಿರುತ್ತಾನೆ. ಹಾಗಾಗಿ, ಒಂದು ವರುಷದಲ್ಲಿ ೧೨ ಸಂಕ್ರಾಂತಿಗಳು. ಯಾಕೆಂದರೆ ಮೇಷದಿಂದ ಮೀನದ ವರೆಗೆ ೧೨ ರಾಶಿಗಳಿವೆ.
ಬೆಂಗಳೂರಿನವರು ಪುಣ್ಯವಂತರು! ಮಂಗಳೂರಿನವರೂ ಪುಣ್ಯವಂತರು! ಯಾಕೆಂದರೆ ಮನೆಯ ನಳ್ಳಿ ತಿರುಗಿಸಿದರೆ ನೀರು ಬರುತ್ತದೆ, ಅಲ್ಲವೇ? ಬೆಂಗಳೂರಿನ ಮನೆಮನೆಗಳಿಗೆ ನೀರು ತರಲಿಕ್ಕಾಗಿ ಕಾವೇರಿಯಿಂದ ಕುಡಿಯುವ ನೀರು ಸರಬರಾಜು ಮಹಾಯೋಜನೆಯ ವಿವಿಧ ಹಂತಗಳಿಗಾಗಿ ಸರಕಾರವು ರೂಪಾಯಿ ೧,೦೦೦ ಕೋಟಿಗಳಿಗಿಂತ ಜಾಸ್ತಿ ವೆಚ್ಚ ಮಾಡಿದೆ.
ಜನವರಿ ೧೨ ಸ್ವಾಮಿ ವಿವೇಕಾನಂದರ ಜಯಂತಿ ದಿನ. ಗೊಂದಲದ ಬೀಡಾಗಿರುವ ನಮ್ಮ ಬದುಕಿನಲ್ಲಿ ಆದರ್ಶಪ್ರಾಯ ವ್ಯಕ್ತಿ ಯಾರೆಂಬ ಪ್ರಶ್ನೆಗೆ ಸಮರ್ಥ ಉತ್ತರವಾಗಿ ನಿಲ್ಲುವವರು ಸ್ವಾಮಿ ವಿವೇಕಾನಂದ. ಅವರ ಬರಹಗಳನ್ನು ಓದುತ್ತ, ಅವರ ಚಿಂತನೆಗಳನ್ನು ಮಥಿಸುತ್ತ ಹೋದಂತೆ ಈ ಮಾತು ಮತ್ತೆಮತ್ತೆ ಮನದಟ್ಟಾಗುತ್ತದೆ.
ಸ್ವಾಮಿ ವಿವೇಕಾನಂದರು ಇಂದಿನ ಕಾಲಮಾನದಲ್ಲಿ ಯಾಕೆ ಮುಖ್ಯವಾಗುತ್ತಾರೆ ಎಂದರೆ ಅವರು ನುಡಿದಂತೆ ನಡೆದವರು. ನುಡಿ ಒಂದು, ನಡೆ ಇನ್ನೊಂದು ಎಂಬಂತೆ ಜೀವಿಸುವ ಬಹುಪಾಲು ಜನರಿಗೆ ಹೋಲಿಸಿದಾಗ, ನುಡಿದಂತೆ ನಡೆದ ಸ್ವಾಮಿ ವಿವೇಕಾನಂದರದ್ದು ಪ್ರತಿಯೊಬ್ಬರನ್ನೂ ಪ್ರಭಾವಿಸಬಲ್ಲ ಪ್ರಖರ ವ್ಯಕ್ತಿತ್ವ.
ಎರಡೂ ಕೈಕಾಲು ಸರಿ ಇದ್ದವರೇ ಕೃಷಿ ಮಾಡಲು ಹಿಂದೇಟು ಹಾಕುವ ಕಾಲವಿದು. ಹಾಗಿರುವಾಗ ಪೋಲಿಯೋ ಪೀಡಿತ ಪತಿ-ಪತ್ನಿ ಶಿವಾಜಿ ಸೂರ್ಯವಂಶಿ ಮತ್ತು ಗೀತಾಂಜಲಿ ಇತರರಿಗೆ ಮಾದರಿಯಾಗುವಂತೆ ಕೃಷಿ ಮಾಡಿತ್ತಿರೋದು ಸಾಧನೆಯೇ ಸೈ.
“ನನ್ನ ಕೈಗಳೇ ನನ್ನ ಕಾಲುಗಳ ಹಾಗೆ ಆಗಿವೆ” ಎನ್ನುತ್ತಾರೆ ೩೬ ವರುಷದ ಶಿವಾಜಿ ಸೂರ್ಯವಂಶಿ. ಅವರ ಪತ್ನಿ ಗೀತಾಂಜಲಿ “ಬೇಸಾಯ ಮಾಡೋದಕ್ಕೆ ನಮಗೆ ಯಾರ ಸಹಾಯವೂ ಬೇಡ” ಎಂದು ದನಿಗೂಡಿಸುತ್ತಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹಟ್-ಕನಾನ್-ಗ್ಲೆ ತಾಲೂಕಿನ ಅಂಬಾಪ್ ಹಳ್ಳಿಯವರಿಗೆ ಈ ದಂಪತಿಗಳದ್ದು ಸ್ಫೂರ್ತಿದಾಯಕ ಸಾಧನೆ. ಆದರೆ ತಮ್ಮ ಹೊಲದತ್ತ ನಡೆಯುವಾಗೆಲ್ಲ ದಂಪತಿಗೆ ನೆನಪಾಗುವುದು ಹಳ್ಳಿಗರ ಲೇವಡಿ ಮತ್ತು ಅದರಿಂದಾಗಿ ಶಿಕ್ಷಣ ಪಡೆಯುವ ತಮ್ಮ ಕನಸು ಮಣ್ಣುಗೂಡಿದ ಸಂಗತಿ.
"ಅದು ನನ್ನ ನೀರಿನ ಟ್ಯಾಂಕ್. ಅದರಿಂದ ಏನು ಬೇಕಾದರೂ ಮಾಡಿಕೊಳ್ತೇನೆ. ಅದನ್ನು ಕೇಳಲಿಕ್ಕೆ ನೀವ್ಯಾರು?"
"ನಾನು ಯಾರಂತ ಗೊತ್ತುಂಟಾ? ನನ್ನ ಟ್ಯಾಂಕ್ ಮೊದಲು ಭರ್ತಿ ಆಗಬೇಕು. ಇಲ್ಲಾಂದ್ರೆ ನಿಮ್ಮ ಟ್ಯಾಂಕಿಗೆ ಬೆಂಕಿ ಕೊಡ್ತೇನೆ."
ಇದನ್ನು ಹೇಳಿದವರು ಯಾರು? ದೇಶದ ರಾಜಧಾನಿ ನವದೆಹಲಿಯ ಪ್ರಧಾನ ಪ್ರದೇಶವಾದ ವಸಂತಕುಂಜದ ನಿವಾಸಿಗಳು.
ಅವರು ಈ ಮಾತುಗಳನ್ನು ಹೇಳಿದ್ದು ಯಾರಿಗೆ? "ನಿಮ್ಮ ಟ್ಯಾಂಕಿನಿಂದ ನೀರು ಉಕ್ಕಿ ಹರಿದು ಪೋಲಾಗುತ್ತಿದೆ. ನಿಮ್ಮ ನೀರಿನ ಪಂಪ್ ಬಂದ್ ಮಾಡಿ" ಎಂದು ವಿನಂತಿಸಿದ ಶಾಲಾಮಕ್ಕಳಿಗೆ.
ಹೊಸ ವರುಷ ಮತ್ತೆಮತ್ತೆ ಬರುತ್ತದೆ. ಅದು ಕಾಲ ನಿಯಮ. ಹೊಸ ವರುಷ ಬಂದಾಗ ಹೊಸತನದಿಂದ ಮುನ್ನಡೆಯುದಷ್ಟೇ ನಾವು ಮಾಡಬಹುದಾದ ಕೆಲಸ.
ಅದಕ್ಕಾಗಿ "ಹೊಸ ವರುಷದ ಸಂಕಲ್ಪ”ಗಳನ್ನು ಮಾಡುವ ಹುಮ್ಮಸ್ಸು ಹಲವರಿಗೆ. ಇದು ಒಳ್ಳೆಯ ಕೆಲಸ. ಆದರೆ, ಈ ಸಂಕಲ್ಪಗಳು ಮಳೆಗಾಲದ ಮಿಂಚಿನಂತಾಗಬಾರದು ಅಷ್ಟೇ. ಸಂಕಲ್ಪಗಳನ್ನು ಸಾಧಿಸುವ ಛಲ ಬೆಳೆಸಿಕೊಳ್ಳೋಣ.
ಎಲ್ಲರೂ ಸಾಧಿಸಬಹುದಾದ ಐದು ಸಂಕಲ್ಪಗಳನ್ನು ಪರಿಶೀಲಿಸೋಣ.