ಪುಸ್ತಕನಿಧಿ - 2. ಕೈಲಾಸಂ ಅವರ 'ಪರ್ಪಸ್' , ಜಿ ಪಿ ರಾಜರತ್ನಂ ಅವರ 'ಏಕಲವ್ಯ' - ನಾವು ಮಾಡುವ ಕೆಲಸದ ಉದ್ದೇಶ

ಚಿತ್ರ

ಮಹಾಭಾರತದಲ್ಲಿ ಏಕಲವ್ಯನ ಕಥೆ ತುಂಬಾ ಸಂಕ್ಷಿಪ್ತವಾಗಿದೆ.   ಆತನ ಭವ್ಯ ಜೀವನದ ದರ್ಶನವನ್ನು ನಮಗೆ ಕೈಲಾಸಂ ತಮ್ಮ 'ಪರ್ಪಸ್' ಎಂಬ ಇಂಗ್ಲಿಷ್ ನಾಟಕದ ಮೂಲಕ ಮಾಡಿಸುತ್ತಾರೆ. 

ನಾನು ಪರಿಚಯಿಸುತ್ತಿರುವ ಈ ಪುಸ್ತಕವು ಕೈಲಾಸಂ ಅವರು ಇಂಗ್ಲಿಷ್ನಲ್ಲಿ ಬರೆದಿರುವ  ಪರ್ಪಸ್  ಎಂಬ ನಾಟಕದ    'ಸಾರವಿಸ್ತಾರ' - .ಜಿ ಪಿ ರಾಜರತ್ನಂ ಅವರು ಮಾಡಿರೋದು. ಈ ಪುಸ್ತಕ ಇಲ್ಲಿ ಇದೆ-  https://archive.org/details/unset0000unse_y9a4/mode/2up

ಪಾಲಿಹೌಸಿನಲ್ಲಿ ರಾಜಕುಮಾರರ ತಪಸ್ಸಿಗೊಲಿದ ತರಕಾರಿ ಕೃಷಿ

ಮಂಗಳೂರು – ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಣಂಬೂರು ಬಂದರು ದಾಟಿದ ನಂತರ ಸಿಗುವ ಊರು ಹೊಸಬೆಟ್ಟು. ಅಲ್ಲಿನ ಬಸ್‍ನಿಲ್ದಾಣದ ಪಕ್ಕದಲ್ಲಿ ಪೂರ್ವ ದಿಕ್ಕಿಗೆ ಕಾಂಕ್ರೀಟು ರಸ್ತೆಯಲ್ಲಿ ಸುಮಾರು ಅರ್ಧ ಕಿಮೀ ಸಾಗಿದರೆ ಸಿಗುತ್ತದೆ ಶ್ರೀನಗರ ಬಡಾವಣೆ.
ಅಲ್ಲಿ ವಿ. ರಾಜಕುಮಾರ್ ಅವರ ಮನೆಯಿರುವ ಕಂಪೌಂಡಿಗೆ ಇತ್ತೀಚೆಗೆ ಕಾಲಿಟ್ಟಾಗ ಕಾಣಿಸಿತು: ಒಂದು ಸೆಂಟ್ಸ್ ವಿಸ್ತೀರ್ಣದ ಪಾಲಿಹೌಸ್. ಅದರೊಳಗೆ ಹೊಕ್ಕರೆ ಕೃಷಿಲೋಕವೊಂದರ ದರ್ಶನ.

Image

ಪುಸ್ತಕನಿಧಿ - 1.ಕನ್ನಡ ಕೀಚಕ - ಜಿ ಪಿ ರಾಜರತ್ನಂ / ಕೈಲಾಸಂ ಅವರ ಪುಸ್ತಕ

ಚಿತ್ರ

 ಕನ್ನಡದ ಶ್ರೇಷ್ಠ ನಾಟಕಕಾರ ಕೈಲಾಸಂ ಅವರು ಕೆಲವು ನಾಟಕಗಳನ್ನು ಇಂಗ್ಲೀಷ್ನಲ್ಲಿ ಬರೆದಿದ್ದಾರೆ.  ಒಂದು ನಾಟಕವನ್ನು ಕೀಚಕನ ಕುರಿತಾಗಿ ಇಂಗ್ಲೀಷಿನಲ್ಲಿ ಬರೆಯುವ ವಿಚಾರ ಇತ್ತು. ಅದರ ಕುರಿತು ಕೆಲವು ಸಂಗತಿಗಳನ್ನು ತಮ್ಮ ಆಪ್ತರೊಬ್ಬರಲ್ಲಿ ಹೇಳಿದ್ದರು. ಆ ನಾಟಕವನ್ನು ಬರೆಯುವ ಮುನ್ನವೇ ಅವರು ತೀರಿಕೊಂಡರು. ಮುಂದೆ ಆ ನಾಟಕವನ್ನು ತಮಗೆ ನೆನಪಿದ್ದ ಹಾಗೆ ಆಪ್ತರು ಇಂಗ್ಲಿಷ್ ನಲ್ಲಿ ಬರೆದರು. ಅದನ್ನು ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಜಿ ಪಿ ರಾಜರತ್ನಂ ಅವರು ಅನುವಾದಿಸಿದರು.  ಈ ಪುಸ್ತಕದ ಮುಖಪುಟವನ್ನು ಜೊತೆಯಲ್ಲಿನ ಚಿತ್ರದಲ್ಲಿ ನೋಡಬಹುದು. ಈ ಪುಸ್ತಕವು archive.org ನಲ್ಲಿ ನೀವು ಕೀಚಕ ಎಂದು ಹುಡುಕಿದರೆ ಸಿಗುತ್ತದೆ. 

ರೈತರ ಬೀಜದ ಹಕ್ಕು: ಪೆಪ್ಸಿ ಕಂಪೆನಿಯ “ಕೊಕ್”

ಗುಜರಾತಿನ ಕೆಲವು ರೈತರು, ಹಲವಾರು ವರುಷಗಳಿಂದ ಆಲೂಗಡ್ಡೆ ಬೆಳೆಯುತ್ತಿದ್ದಾರೆ. ಈ ಬಾರಿ ಮಾತ್ರ ಅವರಿಗೆ ಸಿಡಿಲು ಬಡಿದಂತಾಯಿತು. ಯಾಕೆಂದರೆ, ಅಮೇರಿಕಾದ ದೈತ್ಯ ಕಂಪೆನಿ ಪೆಪ್ಸಿಕೋ ೧೧ ರೈತರ ಮೇಲೆ ೮ ಮೊಕದ್ದಮೆ ಹೂಡಿತು – ತಮ್ಮ ಕಂಪೆನಿಯ ಬೈದ್ಧಿಕ ಸೊತ್ತಾದ ಆಲೂಗಡ್ದೆ ತಳಿಯನ್ನು “ಕಾನೂನುಬಾಹಿರವಾಗಿ” ಬೆಳೆಯುತ್ತಿದ್ದಾರೆ ಎಂಬ ಕಾರಣಕ್ಕಾಗಿ! ಪ್ರತಿಯೊಬ್ಬ ರೈತನೂ ರೂಪಾಯಿ ೧.೦೫ ಕೋಟಿ ಪರಿಹಾರ ಪಾವತಿಸಬೇಕೆಂಬುದು ಪೆಪ್ಸಿಕೋ ಕಂಪೆನಿಯ ಆಗ್ರಹ!

Image

ಶಾಲಾಕಾಲೇಜುಗಳಲ್ಲಿ ನೀರಪಾಠ, ಪ್ರಾತ್ಯಕ್ಷಿಕೆ

ಫಸಲು ಬೇಕಿದ್ದರೆ ಹೊಲಗಳಲ್ಲಿ ಬೀಜ ಬಿತ್ತಬೇಕು. ಜಲಜಾಗೃತಿಯ ಫಸಲು ಬೇಕಿದ್ದರೆ ಜಲಸಾಕ್ಷರತೆಯ ಬೀಜ ಬಿತ್ತಬೇಕು. ಎಲ್ಲಿ? ಶಾಲೆಗಳಲ್ಲಿ. ಅದೆಲ್ಲ ಹೇಗೆ ಸಾಧ್ಯ ಅಂತೀರಾ? ಅದು ಸಾಧ್ಯವೆಂದು ತೋರಿಸಿಕೊಟ್ಟ ಮಂಗಳೂರಿನ ಎರಡು ಕಾಲೇಜುಗಳ ನಿದರ್ಶನಗಳಿಲ್ಲಿವೆ.

Image

ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜು: ೧೫೨ನೇ ವರುಷದ ಸಂಭ್ರಮ

ಮಂಗಳೂರಿನ ಪ್ರಸಿದ್ಧ ಕಾಲೇಜುಗಳು ಎಂದಾಗ ನೆನಪಿಗೆ ಬರುವ ಹೆಸರುಗಳಲ್ಲಿ ಮುಖ್ಯವಾದದ್ದು, ಇಲ್ಲಿನ ಕೇಂದ್ರಭಾಗವಾದ ಹಂಪನಕಟ್ಟೆಯಲ್ಲಿರುವ "ಗವರ್ನಮೆಂಟ್ ಕಾಲೇಜು". ಇದು ೧೯೯೩ರಲ್ಲಿ “ಯುನಿವರ್ಸಿಟಿ ಕಾಲೇಜ್” ಆಗಿ ಪರಿವರ್ತನೆಗೊಂಡಿದ್ದರೂ, ನನ್ನಂತಹ ಹಳೆಯ ತಲೆಮಾರಿನವರಿಗೆ ಆ ಕಾಲೇಜಿನ ಪ್ರಸ್ತಾಪ ಮಾಡುವಾಗಲೆಲ್ಲ ಬಾಯಿಗೆ ಬರುವ ಹೆಸರು ಗವರ್ನಮೆಂಟ್ ಕಾಲೇಜ್.

ಈ ಕಾಲೇಜಿಗೆ ಇದೀಗ ೧೫೦ ಸಾರ್ಥಕ ವರುಷಗಳ ಸಂಭ್ರಮ. ೬ ಫೆಬ್ರವರಿ ೨೦೨೦ರಂದು ಕಾಲೇಜಿಗೆ ೧೫೦ ವರುಷ ತುಂಬಿದ್ದನ್ನು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಆ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನವಂತೂ ಜನಮನ ಗೆದ್ದಿತು. ಸಂದರ್ಶಕರ ದಟ್ಟಣೆಯಿಂದಾಗಿ ಅದನ್ನು ಕೆಲವು ದಿನ ವಿಸ್ತರಿಸಬೇಕಾಯಿತು.

Image

ರೇಡಿಯೋ ಕೇಳಲು ಲೈಸೆನ್ಸ್ ಬೇಕಿತ್ತಾ?

ಮೇಲಿನ ಶೀರ್ಷಿಕೆ ಓದಿದಾಗ ಈಗಿನ ಯುವಕರಿಗೆ ಆಶ್ಚರ್ಯವಾದೀತು. ಆದರೆ ಹಿಂದೆ ೭೦ರ ದಶಕದಲ್ಲಿ ನೀವು ರೇಡಿಯೋ ಬಳಸಬೇಕಾದಲ್ಲಿ ಲೈಸೆನ್ಸ್ ಮಾಡಿಸಕೊಳ್ಳ ಬೇಕಿತ್ತು. 
ಇತ್ತೀಚೆಗೆ ಮನೆಯನ್ನು ನವೀಕರಣ ಸಲುವಾಗಿ ಸ್ವಚ್ಛಗೊಳಿಸುತ್ತಿರುವಾಗ ರೇಡಿಯೋ ಲೈಸನ್ಸ್ ಸಿಕ್ಕಿತು. ಇದು ನನ್ನ ಅಮ್ಮನ ಹೆಸರಿನಲ್ಲಿ ೧೯೭೯-೮೦ರ ಸಮಯದ ಲೈಸನ್ಸ್. ಆ ಸಮಯದಲ್ಲಿ ಈಗಿನಂತೆ ಉಚಿತವಾಗಿ ರೇಡಿಯೋ ಕೇಳಲು ಅನುಮತಿಯಿರಲಿಲ್ಲ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಲೈಸೆನ್ಸ್ ಪಡೆದುಕೊಳ್ಳ ಬೇಕಿತ್ತು. ಅಂಚೆ ಇಲಾಖೆಯಲ್ಲಿ ಅದಕ್ಕೆ ಬೇಕಾಗುವ ಹಣ ಕೊಟ್ಟು ಅಂಚೆ ಚೀಟಿ ಪಡೆದುಕೊಂಡು ಮೊಹರು ಒತ್ತಿಸಿ ಪ್ರತೀ ವರ್ಷ ಲೈಸೆನ್ಸ್ ನವೀಕರಣ ಮಾಡಿಕೊಳ್ಳ ಬೇಕಾಗುತ್ತಿತ್ತು. ಮೊದಲ ವರ್ಷ ರೂ.೭.೫೦ ಇದ್ದ ಪಾವತಿ ಎರಡನೇ ವರ್ಷಕ್ಕೆ ೧೫ ರೂ ಆಗಿರುವುದನ್ನು ಗಮನಿಸಬಹುದು.

Image

ಮಹಾತ್ಮಾ ಗಾಂಧಿ ಹೆಸರಿನ ರಸ್ತೆಯೇ ಅಂದ!!

ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಜನರ ಉಪಯೋಗಕ್ಕಾಗಿ ಸ್ಥಳವನ್ನು ಗುರುತಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ರಸ್ತೆಗಳ ಮತ್ತು ಸ್ಥಳಗಳ ಹೆಸರನ್ನು ಸುಂದರವಾಗಿ ಬರೆಯಿಸಿ ಹಾಕಿರುತ್ತಾರೆ. ಇದರಿಂದ ಹೊರ ಊರಿನಿಂದ ಬಂದವರಿಗೆ ತುಂಬಾ ಅನುಕೂಲ. ನಮ್ಮ ಮಂಗಳೂರಿನಲ್ಲಿ ಅನೇಕ ಗಣ್ಯ ವ್ಯಕ್ತಿಗಳ ಹೆಸರನ್ನು ರಸ್ತೆಗೆ ಅಥವಾ ವೃತ್ತಕ್ಕೆ ಇರಿಸಿರುತ್ತಾರೆ. ಇವರಲ್ಲಿ ಮಹಾತ್ಮಾ ಗಾಂಧಿ, ಕಾರ್ನಾಡ್ ಸದಾಶಿವ ರಾವ್, ಪಂಜೆ ಮಂಗೇಶ್ ರಾವ್, ಬಿ.ಆರ್.ಅಂಬೇಡ್ಕರ್, ಮಂಜೇಶ್ವರ ಗೋವಿಂದ ಪೈ ಹೀಗೆ ಹತ್ತು ಹಲವಾರು ಖ್ಯಾತ ನಾಮರ ಸ್ಮಾರಕ ರಸ್ತೆಗಳಿವೆ.

ಕನಿಷ್ಠ ನೀರಿನಿಂದ ಕೃಷಿ

"ನಮ್ ಕಡೆ ಹಿಂದಿನ್ ವರ್ಷ ಮಳೇನೇ ಆಗಿಲ್ಲ. ನಿಮ್ ಕಡೆ ಸ್ವಲ್ಪನಾದ್ರೂ ಮಳೆ ಆಗೈತಿ. ನಿಮ್ ತೋಟದಾಗೆ ಮಣ್ ಅಗೆದ್ರೆ ಎಷ್ಟಡಿ ಆಳ ನೀರಿನ್ ಪಸೆ ಇರ್ತದೆ?" ಎಂಬ ಪ್ರಶ್ನೆ ವಿಠಲಾಪುರದ ವೀರಪ್ಪ ಅವರದು.
ನನ್ನೊಂದಿಗಿದ್ದ ಚಿಕ್ಕಮಗಳೂರು ತಾಲೂಕಿನ ಕುನ್ನಾಳು ಗ್ರಾಮದ ಹದಿನೈದು ರೈತರು ತಮ್ಮೊಳಗೆ ಮಾತಾಡಿಕೊಂಡು ಉತ್ತರಿಸಿದರು, "ಮಣ್ಣಲ್ಲಿ ಐದಾರು ಇಂಚು ಆಳದ ವರೆಗೆ ನೀರಿನ್ ಪಸೆ ಇರಬೋದು."

Image

ಕೊಡಿಯಾಲ ತೇರು (ಮಂಗಳೂರು ರಥೋತ್ಸವ)

ಮಂಗಳೂರಿನ ಸುಪ್ರಸಿದ್ಧ ವಾರ್ಷಿಕ ಉತ್ಸವ ಕೊಡಿಯಾಲ ತೇರು ಅಥವಾ ಮಂಗಳೂರು ರಥೋತ್ಸವ. ಇದು ಗೌಡಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು (ಕೊಂಕಣಿಗರು) ವರುಷವಿಡೀ ನಿರೀಕ್ಷಿಸುವ ಸಂಭ್ರಮದ ಆಚರಣೆ.

ಇತ್ತೀಚೆಗೆ, ೧ ಫೆಬ್ರವರಿ ೨೦೨೦ರಂದು ಜರಗಿದ ಮಂಗಳೂರು ರಥೋತ್ಸವ ಕೊಂಕಣಿಗರ ಭಾವಭಕ್ತಿ ತುಂಬಿದ ಭಾಗವಹಿಸುವಿಕೆಗೆ ಮಗದೊಮ್ಮೆ ಸಾಕ್ಷಿಯಾಯಿತು. ಶತಮಾನಗಳ ಮುಂಚೆ ತಮ್ಮ ಮೂಲನೆಲೆ ತೊರೆದು ದಕ್ಷಿಣಕ್ಕೆ ಸಾಗಿ ಬಂದ ಈ ಸಮುದಾಯದವರು ಮಂಗಳೂರು ಸಹಿತ ಪಶ್ಚಿಮ ಕರಾವಳಿಯ ಹಲವಾರು ಊರುಗಳಲ್ಲಿ ನೆಲೆಯೂರಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿ ಎಲ್ಲ ಊರುಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ.

Image