ಸುಬಾಬುಲ್: ಮೇವು, ಸೌದೆ ಕೊರತೆಗೆ ಪರಿಹಾರ
ನಮ್ಮ ದೇಶದ ಉದ್ದಗಲದಲ್ಲಿ ಕಂಡು ಬರುವ ಸುಬಾಬುಲ್ ಗಿಡಗಳನ್ನು ಹವಾಯಿಯಿಂದ ತಂದು ಮೊದಲಾಗಿ ಇಲ್ಲಿ ಬೆಳೆಸಿದ್ದು ೧೯೮೦ರಲ್ಲಿ.
- Read more about ಸುಬಾಬುಲ್: ಮೇವು, ಸೌದೆ ಕೊರತೆಗೆ ಪರಿಹಾರ
- Log in or register to post comments
ನಮ್ಮ ದೇಶದ ಉದ್ದಗಲದಲ್ಲಿ ಕಂಡು ಬರುವ ಸುಬಾಬುಲ್ ಗಿಡಗಳನ್ನು ಹವಾಯಿಯಿಂದ ತಂದು ಮೊದಲಾಗಿ ಇಲ್ಲಿ ಬೆಳೆಸಿದ್ದು ೧೯೮೦ರಲ್ಲಿ.
ಈ ಹಿಂದಿ ಹಾಡು ನೀವು ಕೇಳಿರಬಹುದು . ತುಂಬ ಪ್ರಸಿದ್ಧ ವಾದದ್ದು. ಯೂಟ್ಯೂಬ್ ನಲ್ಲಿ ಸಿಗುತ್ತದೆ.
ಅದರ ಅನುವಾದವನ್ನುಅದೇ ಧಾಟಿಗೆ ಹೊಂದುವಂತೆ ಮಾಡಿದ್ದೇನೆ. ಹಾಡಲು ಯತ್ನಿಸಿ ಆನಂದಿಸಿ.
ನಡೀತ ನಡೀತ ಅವನು ಸಿಕ್ಕಿ ಬಿಟ್ಟ
ನಡು ಹಾದಿಯಲ್ಲಿ ನನಗೆ
ಅಲ್ಲೇ ತಾನು ನಿಂತು ಬಿಟ್ತು
ನನ್ನ ರಾತ್ರಿ ಅಳೆದೂ ಸುರಿದೂ
ನಾ ಏನ ಹೇಳದಾದೆ
ಅದ ಜಗವೆ ಹೇಳುತಿಹುದು
ಕತೆಯಾಗಿ ಹೋಯಿತಂತೆ
ನನ ಮಾತು ಹಬ್ಬಿ ಹರಡಿ
ಅಗಲಿಕೆಯ ಈ ದೀರ್ಘ ರಾತ್ರಿ
ಆದೀತು ಎಂದು ಕಿರಿದು
ಈ ದೀಪ ಆರುತಿಹುದು
ನನ್ನೊಡನೆ ಉರಿದು ಉರಿದು
ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನವಂಬರ್ 12 ಕ್ಕೆ ನಡೆಯಲಿದ್ದು ಈ ಬಾರಿ ಮತದಾರರ ಒಲವು ಯಾರ ಪರವಾಗಿ ಬರುತ್ತದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಇತ್ತೀಚೆಗೆ ನಡೆದ ಲೋಕ ಸಭಾ ಚುನಾವಣೆಯ ಫಲಿತಾಂಶ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರ ಪಕ್ಷಾಂತರಿಗಳಿಂದಾಗಿ ಪತನವಾಗಿರುವ ಸಂಧರ್ಭದಲ್ಲಿ ಇದರ ಪರಿಣಾಮ ಜನತೆಯಲ್ಲಿ ಅಲ್ಪ ಮಟ್ಟಿಗಾದರೂ ಮನೋಸ್ಥಿತಿಗಳನ್ನು ಬದಲಾಯಿಸಬಲ್ಲುದು ಎಂಬುವುದನ್ನು ಅಲ್ಲಗೆಳೆಯುವಂತಿಲ್ಲ.
ಅಂದು ಪ್ರಸನ್ನರ ಮಾಗಡಿ ಮನೆಯಿಂದ ತೋಟಕ್ಕೆ ನಡೆದು ಹೊರಟಾಗ ಕತ್ತಲಾಗಲು ಇನ್ನೂ ಒಂದು ತಾಸಿತ್ತು. ಆಗಷ್ಟೇ ಕುಡಿದಿದ್ದ ಕಾಫಿಯ ಘಮದ ಗುಂಗಿನಲ್ಲಿ ಅವರ ಕಾಫಿ ತೋಟದತ್ತ ಹೆಜ್ಜೆ ಹಾಕಿದೆವು. ಮನೆಯೆದುರಿನ ಗೇಟು ದಾಟಿ, ಬೇಲೂರು ರಸ್ತೆಗೆ ಬಂದಾಗ ಪಕ್ಕದಲ್ಲಿರುವ ಹಲಸುಲಿಗೆ ಬಸ್ಸ್ಟಾಪ್ ತೋರಿಸುತ್ತಾ ಪ್ರಸನ್ನ ಹೇಳಿದರು, "ಇಲ್ಲಿಂದ ಸಕಲೇಶಪುರ ಬಹಳ ಹತ್ತಿರ, ಐದೇ ಕಿಲೋಮೀಟರ್". ಬೇಲೂರು ರಸ್ತೆ ಹಾದು, ಅದರಾಚೆಗಿನ ಪ್ರಸನ್ನರ ಐದೆಕ್ರೆ ರೊಬಸ್ಟ ಕಾಫಿ ತೋಟ ತಲಪಿದೆವು.
ಮೂಡುಬಿದ್ರೆಯ ಬಳಿ ಇರುವ ಡಾ. ಸೋನ್ಸ್ ರವರ ಫಾರ್ಮ್ ಜಗತ್ಪ್ರಸಿದ್ಧ. ದೇಶ ವಿದೇಶಗಳಿಂದ ರೈತರು, ವಿದ್ಯಾರ್ಥಿಗಳು ಹಾಗು ಯಾತ್ರಿಗಳು ಇಲ್ಲಿಗೆ ಭೇಟಿ ಕೊಡುತ್ತಿರುತ್ತಾರೆ. ಸುಮಾರು ಮೂವತ್ತು ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಪ್ರಯೋಗಗಳ ಕುರಿತು ಡಾ. ಸೋನ್ಸ್ ರವರೊಂದಿಗಿನ ಸಂಪದ ಮಾತುಕತೆ ಇಲ್ಲಿದೆ. ವೀಕ್ಷಿಸಿ.
ಬಸ್ಸಿನಿಂದ ಇಳಿದು ಇನ್ನೇನು ಮುಂದೆ ಹೆಜ್ಜೆ ಇಡಬೇಕು, ಎನ್ನುವಷ್ಟರಲ್ಲೇ ಡಿಕ್ಕಿ ಹೊಡದ ಯುವತಿಯೊಬ್ಬಳು I'm sorry ಅನ್ನುತ್ತ ಬಿದ್ದ ಸಾಮಾನುಗಳನ್ನು ಜೋಡಿಸಲು ಅನುವಾದಳು. ಪರವಾಗಿಲ್ಲ ಬಿಡಿ ಎನ್ನುತ್ತಾ ತನ್ನ ವಸ್ತುಗಳನ್ನೆಲ್ಲ ತಾನೇ ಜೋಡಿಸಲು ಅನುವಾದನು ಆನಂದ. ಅವಳು ಜೋಡಿಸಿದ ಸಾಮಾನುಗಳನ್ನು ಅವನಿಗೆ ಕೊಟ್ಟು ಮುಂದೆ ನಡೆದಳು. ಮೇಲೆದ್ದ ಆನಂದ ಅವಳಿಗೆ ಕೃತಜ್ಞತೆ ಸಲ್ಲಿಸಲೆಂದು ತಲೆಯೆತ್ತಿದ್ದರೆ ಅವಳು ಅಲ್ಲಿಂದ ಕದಲಿದ್ದಳು. ಅವಳು ಕಾಣಿಸುತ್ತಿದ್ದರೂ ತನ್ನ ಸ್ವರ ಅವಳಲ್ಲಿಗೆ ತಲುಪಲಾರದು ಎಂದು ತಿಳಿದಿದ್ದ ಆನಂದ ಅಲ್ಲಿಗೆ ಸುಮ್ಮನಾದನು. ಆದರೆ ದೂರದಲ್ಲಿ ನಡೆಯುತ್ತಿದ್ದ ಆಕೆಯ ನಡಿಗೆ ಯಾಕೊ ಚಿರಪರಿಚಿತ ಎನಿಸಿತು. ಆ ನಡಿಗೆಯನ್ನು ಬಹಳ ಹತ್ತಿರದಲ್ಲಿ ಕಂಡಿದ್ದೇನೆ ಅನಿಸಿತು. yes ಇದು ಅವಳದೇ ನಡಿಗೆ.
ಕೇಂದ್ರ ಸರಕಾರದ ಕೃಷಿ ಹಾಗೂ ಜಲ ಸಂಪನ್ಮೂಲ ಸಚಿವರು, ಯೋಜನಾ ಆಯೋಗದ ಅಥವಾ ಜಾಗತಿಕ ಬ್ಯಾಂಕಿನ ವಕ್ತಾರರು ಇವರು ಯಾರನ್ನೇ ಕೇಳಿ: ಕೃಷಿಯ ಸಮಸ್ಯೆಗಳಿಗೆ ಪರಿಹಾರವೇನು? ಅವರಿಂದ ಒಂದೇ ಉತ್ತರ: ಬೃಹತ್ ಜಲಾಶಯಗಳನ್ನು ನಿರ್ಮಿಸಿ, ಅಗಾಧ ಪ್ರಮಾಣದ ಮಳೆನೀರು ಸಂಗ್ರಹಿಸಿ, ಕೃಷಿಗಾಗಿ ಬಳಸಿ.
ಆದರೆ ಈ ಬಗ್ಗೆ ನಾವೆಲ್ಲರೂ ಕೇಳಲೇ ಬೇಕಾದ ಪ್ರಶ್ನೆಗಳಿವೆ: ಕೋಟಿಗಟ್ಟಲೆ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಜಲಾಶಯಗಳಿಂದ ಆಗಿರುವ ಪ್ರಯೋಜನಗಳೇನು? ಅವುಗಳ ನಿರ್ಮಾಣದ ಮುಂಚೆ ಆಶ್ವಾಸನೆ ನೀಡಿದ್ದ ಪ್ರಯೋಜನಗಳು ಸಿಕ್ಕಿವೆಯೇ?
ಓ ದೇವಕನ್ಯೆ! ನಿನಗಿದೊ ಸ್ವಾಗತ
ಎಂದು ನಿಮ್ಮ ಆಗಮನ? ಸದ್ದಿಲ್ಲದೆ ಬಂದು ಬಿಟ್ಟಿರಿ
ಪಯಣ ಸುಖಕರವಾಗಿತ್ತೆ? ಅಂತರೀಕ್ಷದಲಿ
ಉಪಗ್ರಹಗಳ ದಟ್ಟಣೆ ತೊಂದರೆ ಕೊಡಲಿಲ್ಲವೆ?
ದಾರಿಯಲೆಲ್ಲಾರೂ ಉಪಗ್ರಹಗಳು ಕಣ್ಣಿಗೆ ಬಿದ್ದವೆ?
ಕ್ಷೇಮ ಸಮಾಚಾರ ವಿಚಾರಿಸಿದಿರಾ? ಒಂದು
ಸಣ್ಣ ಲಿಫ್ಟ್ ಕೇಳಿದ್ದರೂ ನಡೆಯುತ್ತಿತ್ತು
ಪ್ರಕೃತಿಯ ಮಡಿಲಲಿ ಮಗುವಾಗುವಾಸೆ.
ಪ್ರಕೃತಿಯ ಐಸಿರಿಯಲಿ ಒಂದಾಗುವಾಸೆ.
ಸೃಷ್ಠಿಯ ಜೀವಿಗಳಿಗೆ ಮುದ ನೀಡುವಾಸೆ.
ಪ್ರಕೃತಿ ತಾಳುವ ವಿಕೋಪಕೆದರಿ ಚಿಗುರದಿದೆ ಎನ್ನಾಸೆ.
ಹಕ್ಕಿಯಾಗಿ ಹಾರಿ ಎಲ್ಲೆಡೆ ಸಂಚರಿಸುವಾಸೆ.
ಬಾನಂಗಳಕೆ ಹಾರಿ ಮೋಡಗಳೊಡನೆ ತೇಲುವಾಸೆ.
ಎತ್ತರಕೆ ಹಾರಿ ಭೂರಮೆಯ ವೀಕ್ಷಿಸುವಾಸೆ.
ಬೇಡನ ಬಲೆಗೆದರಿ ಗರಿಗೆದರದಿದೆ ಎನ್ನಾಸೆ.
ಮಧುರಕಂಠವನೋಲುವ ಕೋಗಿಲೆಯಾಗುವಾಸೆ.
ಇಂಪಾದ ಧನಿಬೆರೆಸಿ ಹಾಡುವಾಸೆ.
ಸಂಗೀತ ಪ್ರಿಯರ ಮನತಣಿಸುವಾಸೆ.
ಕೋಗಿಲೆ ಬಣ್ಣಕೆದರಿ ಧನಿಗೂಡದಿದೆ ಎನ್ನಾಸೆ.