ಪ್ಲಾಸ್ಟಿಕ್ ಬಳಕೆ ವಿರುದ್ಧ ದೊಡ್ಡ ಅಭಿಯಾನದ ತುರ್ತು ಅಗತ್ಯ

ಹೋಟೇಲ್ ಗಳಲ್ಲಿ ಇಡ್ಲಿ ಮಾಡುವಾಗ ಬಳಸುವ ಪ್ಲಾಸ್ಟಿಕ್ ಹಾಳೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಕಂಡು ಬಂದ ಹಿನ್ನಲೆಯಲ್ಲಿ ಅವುಗಳ ಬಳಕೆ ಮೇಲೆ ನಿಷೇಧ ಹೇರಲು ರಾಜ್ಯ ಸರಕಾರ ನಿರ್ಧರಿಸಿದೆ. ಆದರೆ ನಿತ್ಯ ಹಲವು ರೀತಿಯಲ್ಲಿ ನಮ್ಮ ದೇಹ ಸೇರುತ್ತಿರುವ ಪ್ಲಾಸ್ಟಿಕ್ ಮೇಲೆ ನಿಯಂತ್ರಣಕ್ಕೆ ಈ ಸಣ್ಣ ಕ್ರಮ ಸಾಲದು.

Image

ಆಧುನಿಕ ವೈದ್ಯಕೀಯ ಕ್ಷೇತ್ರದ ದುಸ್ಥಿತಿ

"ಕೆಲ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಭಯಪಡುವಂತೆ ಆಗಿದೆ. ಹಲವಾರು ಅನಗತ್ಯ ತಪಾಸಣೆಗಳನ್ನು ಮಾಡಿಸಲಾಗುತ್ತದೆ. ಸುಮಾರು 10 ಲಕ್ಷದಿಂದ 20 ಲಕ್ಷಕ್ಕೂ ಹೆಚ್ಚು ಬಿಲ್ ಮಾಡಲಾಗುತ್ತದೆ. ವೈದ್ಯಕೀಯ ಸೇವೆ ವ್ಯಾಪಾರ ಆಗಿದೆ...." - ದಿನೇಶ್ ಗುಂಡೂರಾವ್, ಆರೋಗ್ಯ ಸಚಿವರು ಕರ್ನಾಟಕ ಸರ್ಕಾರ.

Image

ಸ್ಟೇಟಸ್ ಕತೆಗಳು (ಭಾಗ ೧೨೪೭) - ವೇಶ್ಯೆ

ಆ ದಿನದ ದಿನಪತ್ರಿಕೆ ಆಕೆಯ ಕೈಯಲ್ಲಿತ್ತು. ಪ್ರತಿದಿನವೂ ಸುದ್ದಿಯನ್ನು ಓದುವವಳಿಗೆ ಅದೊಂದು ಸುದ್ದಿ ಯಾಕೋ ಮನಸೊಳಗೆ ಮಾತನಾಡಬೇಕು ಅನ್ನೋದನ್ನ ಮತ್ತೆ ಮತ್ತೆ ಸಾರಿ ಹೇಳ್ತಾ ಇತ್ತು. 8 ತಿಂಗಳ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರ ಮಾಡಿದವನಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿತ್ತು. ಆಕೆಯ ಕಣ್ಣಲ್ಲಿ ಒಂದು ಕ್ಷಣ ಕಣ್ಣೀರು ಇಳಿದು ರೋಷ ಹೆಚ್ಚಾಗಿ ಸಮಾಜಕ್ಕೊಂದು ಪತ್ರವನ್ನೇ ಬರೆದುಬಿಟ್ಟಳು.

Image

ಕಣಜದ ಗೂಬೆಯ ಕರಾಮತ್ತು !

ನಾನು ಚಿಕ್ಕವನಿದ್ದಾಗ ರಜೆಯಲ್ಲಿ ಹಳ್ಳಿಯಲ್ಲಿದ್ದ ನಮ್ಮ ಅಜ್ಜಿಯ ಮನೆಗೆ ಹೋಗುತ್ತಿದ್ದೆ. ಅಲ್ಲಿ ನಮ್ಮ ಪೇಟೆಯ ಮನೆಯಂತೆ ಸದ್ದುಗದ್ದಲ ಇರುತ್ತಿರಲಿಲ್ಲ. ನಮ್ಮ ಅಜ್ಜಿಯ ಮನೆ ರಸ್ತೆಯಿಂದ ಒಂದೆರಡು ಕಿಲೋಮೀಟರ್‌ ದೂರ. ಕತ್ತಲಾದ ನಂತರ ಅಲ್ಲಿಗೆ ಹೋಗಬೇಕಾದರೆ ಕೈಯಲ್ಲೊಂದು ಟಾರ್ಚ್‌ ಇರಲೇಬೇಕಾಗುತ್ತಿತ್ತು. ಇಂದು ನಮ್ಮೆಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ.

Image

ದಾಲ್ಚಿನ್ನಿ ನೀರು ಕುಡಿದು ನಿಮ್ಮ ಬೊಜ್ಜು ಕರಗಿಸಿ !

ಬಹಳಷ್ಟು ಮಂದಿಗೆ ತಮ್ಮ ಏರಿದ ತೂಕವನ್ನು ಕಡಿಮೆ ಮಾಡುವುದು ಹೇಗೆಂಬ ಚಿಂತೆ. ಬೊಜ್ಜು ಕರಗಿಸಿ ತೂಕ ಕಡಿಮೆ ಮಾಡಬಲ್ಲ ಹಲವಾರು ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಮಾತ್ರೆಗಳು, ಸಿರಪ್, ಜ್ಯೂಸ್, ವ್ಯಾಯಾಮ ಸಾಧನಗಳು, ಡಯಟ್ ಉಪಾಯಗಳು ಎಲ್ಲವೂ ಇದೆ. ಆದರೆ ಇವೆಲ್ಲಾ ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಪರಿಣಾಮಕಾರಿ? ದುಷ್ಪರಿಣಾಮಗಳು ಇಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು?

Image

ಪೂರ್ವಜರ ನೆನಪುಗಳ ದಾಖಲಾತಿಯ ಚಾರಿತ್ರಿಕ ಮೌಲ್ಯ

“ಎಂಬತ್ತರ ಕೊಯ್ಲಿನ ಕಾಳುಗಳು: ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ” - ನನ್ನ ತಂದೆಯವರ ಬಗ್ಗೆ ನಾನು ಬರೆದು ಪ್ರಕಟಿಸಿದ ಪುಸ್ತಕ (2004ರಲ್ಲಿ). “ರಾಜನೀತಿಯ ಅಪರಂಜಿ: ಡಾ. ಎ. ಸುಬ್ಬರಾವ್” - ನನ್ನ ದೊಡ್ಡಪ್ಪನವರ ಬದುಕಿನ ಸಾಧನೆಗಳ ಕುರಿತು ನಾನು ಬರೆದು, ಕಾಂತಾವರ ಕನ್ನಡ ಸಂಘ “ನಾಡಿಗೆ ನಮಸ್ಕಾರ: ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ”ಇಲ್ಲಿ ಪ್ರಕಟಿಸಿದ ಪುಸ್ತಕ (2009ರಲ್ಲಿ). ಇವು ಪ್ರತಿಯೊಬ್ಬರಿಗೂ ಮಾದರಿಯಾಗಬಲ್ಲ ಆ ಧೀಮಂತ ವ್ಯಕ್ತಿಗಳ ಆದರ್ಶ ಬದುಕಿನ ಹಾಗೂ ಮರೆಯಬಾರದ ನೆನಪುಗಳ ದಾಖಲಾತಿ ಪುಸ್ತಕಗಳು.

Image

ಶಿವನ ಆಲಯವಾದ ಮುರ್ಡೇಶ್ವರ

ಭಟ್ಕಳ ಹಾಗೂ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ ಕಾಣುವ ಈ ಮುರ್ಡೇಶ್ವರ, ಹೆದ್ದಾರಿಯಿಂದ ಎರಡು ಕಿ.ಮೀ. ದೂರದಲ್ಲಿದೆ. ಮುರ್ಡೇಶ್ವರಕ್ಕೆ ಕಾಲಿಟ್ಟಾಗ ಮನಸ್ಸಿನಲ್ಲಿ  ಕುತೂಹಲ ಉಂಟಾಗುವುದು ಸಹಜ. ಇಲ್ಲಿಗೆ ಬರುವ ಕೆಲವರಿಗೆ ಇದು ಪ್ರವಾಸಿ ತಾಣ ಮಾತ್ರ. ಉಪ್ಪು ನೀರಿನಾಟ, ದೋಣಿ ವಿಹಾರದಲ್ಲಿ ಅವರೆಲ್ಲ ತಲ್ಲೀನರಾಗಬಹುದು.

Image

ಸ್ಟೇಟಸ್ ಕತೆಗಳು (ಭಾಗ ೧೨೪೬) - ಅಂದುಕೊಂಡು

ಅಂದುಕೊಂಡೇ ದಿನವನ್ನು  ದೂಡಿಬಿಟ್ಟಿದ್ಯಲ್ಲ. ನೀನು ಅಂದುಕೊಳ್ಳುವುದಕ್ಕೆ ಆರಂಭ ಮಾಡಿ ಹಲವು ಸಮಯ ದಾಟಿಯಾಗಿದೆ. ಇನ್ನು ಕೂಡ ಅಂದುಕೊಂಡದ್ದು ಯಾವುದೂ ಸಾಧನೆ ಆಗಿಲ್ಲವೆಂದರೆ ನೀನು ಅಂದುಕೊಂಡಂತೆ ಮಾಡುವುದಕ್ಕೆ ಪ್ರಯತ್ನವೇ ಪಟ್ಟಿಲ್ಲ. ಅಂದುಕೊಳ್ಳುವುದು ತಪ್ಪಲ್ಲ, ಆದರೆ ಅಂದುಕೊಂಡ ಕ್ಷಣದಿಂದ ಒಂದು ಹೆಜ್ಜೆಯಾದರೂ ಎತ್ತಿಡಬೇಕು.

Image

ದೇವುಡು ಅವರ ಸಣ್ಣ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ದೇವುಡು ನರಸಿಂಹ ಶಾಸ್ತ್ರಿ
ಪ್ರಕಾಶಕರು
ವಸಂತ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.150/-

“ದೇವುಡು” ಎಂದೇ ಪ್ರಸಿದ್ಧರಾದ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ದೇವುಡು ನರಸಿಂಹ ಶಾಸ್ತ್ರಿಗಳು ಬರೆದಿರುವ 22 ಸಣ್ಣ ಕತೆಗಳು ಈ ಸಂಕಲನದಲ್ಲಿವೆ. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಈ ಕೃತಿಯ ಸಂಪಾದಕರು ಲಿಂಗರಾಜು.