ಆಧುನಿಕ ಮಹಿಳೆ: ಗಂಡ, ಮನೆ, ಮಕ್ಕಳು ಮತ್ತು ಕಚೇರಿ

ಕಾಲದೊಂದಿಗೆ ನಮ್ಮ ಜೀವನ ಶೈಲಿಗಳೂ ಬದಲಾಗಿವೆ. ಒಂದು ಕಾಲದಲ್ಲಿ ನಾವು ಕೃಷಿ ಬಿಟ್ಟು ಮತ್ತೇನನ್ನೂ ಯೋಚಿಸುತ್ತಿರಲಿಲ್ಲ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಎಕ್ರೆಗಟ್ಟಲೆ ಭತ್ತದ ಗದ್ದೆಗಳಿದ್ದವು. ಕೃಷಿಕರಿಗೆ ಸೇರಿದ ತೋಟಗಳು, ಗದ್ದೆಗಳು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದವು. ನಮ್ಮಲ್ಲಿ ಇಷ್ಟು ಸಾಗುವಳಿಯಿದೆ, ಇಷ್ಟು ಮುಡಿ ಅಕ್ಕಿಯಾಗುತ್ತದೆ ಇವೆಲ್ಲಾ ಪ್ರತಿಷ್ಟೆಯ ವಿಷಯಗಳಾಗಿದ್ದವು.

Image

ಹೀಗೂ ಉಂಟೇ! ಸರಿದಾಡುವ ಜೀವಿಗಳು (ಭಾಗ 2)

ಇರುವೆಗಳು ಮನುಷ್ಯರಂತೆಯೇ ಹಲವು ಕೆಲಸಗಳನ್ನು ಮಾಡುತ್ತವೆ. ಡಾ. ಲೂಯಿಸ್ ಥೋಮಸ್ ಎಂಬ ವಿಜ್ನಾನಿ ಹೀಗೆ ಬರೆಯುತ್ತಾರೆ: “ಇರುವೆಗಳು ಬೂಸ್ಟ್ (ಫಂಗಸ್) ಬೆಳೆಸುತ್ತವೆ. ಗಿಡಹೇನುಗಳನ್ನು (ಅಫಿಡ್) ನಾವು ದನಗಳನ್ನು ಸಾಕಿದಂತೆ ಸಾಕುತ್ತವೆ. ತಮ್ಮ ಸೈನ್ಯಗಳಿಂದ ಯುದ್ಧ ಮಾಡುತ್ತವೆ. ವೈರಿಗಳನ್ನು ಬೆದರಿಸಲಿಕ್ಕಾಗಿ ಮತ್ತು ಗೊಂದಲ ಪಡಿಸಲಿಕ್ಕಾಗಿ ರಾಸಾಯನಿಕ ಸಿಂಪಡಿಸುತ್ತವೆ. ಗುಲಾಮರನ್ನು ಸೆರೆಹಿಡಿಯುತ್ತವೆ. ನೇಕಾರ-ಇರುವೆಗಳು ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತವೆ. ದಾರವನ್ನು ಎಳೆದು, ಅದರಿಂದ ಎಲೆಗಳನ್ನು ಜೋಡಿಸಿ, ತಮ್ಮ ಬೂಸ್ಟ್ ಉದ್ಯಾನಗಳನ್ನು ನಿರ್ಮಿಸುತ್ತವೆ. ಟೆಲಿವಿಷನ್ ನೋಡುವುದರ ಹೊರತಾಗಿ ಹತ್ತುಹಲವು ಮನುಷ್ಯಸಹಜ ಕೆಲಸಗಳನ್ನು ಅವು ಮಾಡುತ್ತವೆ."

Image

ರಿಯಾಲಿಟಿ ಶೋಗಳ ಬಗ್ಗೆ ಒಂದಿಷ್ಟು…

ಮನುಷ್ಯ ಒಂದು ಪ್ರಾಣಿ. ಅವನನ್ನು ಸಹ ಹಣ ಪ್ರಚಾರ ಮುಂತಾದ ಆಮಿಷಗಳಿಂದ ಆಕರ್ಷಿಸಿ ಒಂದು ಬೋನಿನಲ್ಲಿ ಕೂಡಿ ಹಾಕಿ ಪ್ರಾಣಿಯಂತೆ ಆಡಿಸಿ ಜನರಿಗೆ ಮನರಂಜನೆ ನೀಡಿ ಹಣ ಮಾಡಬಹುದು. ಹೆಚ್ಚು ಕಡಿಮೆ ಒಂದು ಸರ್ಕಸ್ ಕಂಪನಿಯಂತೆ. ಅದನ್ನು ಟಿವಿ ಮಾಧ್ಯಮ ಮಾಡುತ್ತಿದೆ. ಅದೇ ಬಿಗ್ ಬಾಸ್...

Image

ನಮ್ಮ ವೃತ್ತಪತ್ರಿಕೆಗಳ ಕಥೆ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಚಂಚಲ್ ಸರ್ಕಾರ್, ಕನ್ನಡಕ್ಕೆ: ಬಿ.ಎಸ್. ಮಹದೇವಪ್ಪ
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ಹೊಸ ದೆಹಲಿ.
ಪುಸ್ತಕದ ಬೆಲೆ
ರೂ.೧೨.೦೦, ಮುದ್ರಣ: ೨೦೦೪

‘ನಮ್ಮ ವೃತ್ತಪತ್ರಿಕೆಗಳ ಕಥೆ’ ಎಂಬ ಪುಟ್ಟ ಪುಸ್ತಕವು ಹಳೆಯ ಕಾಲದ ಪತ್ರಿಕೆಗಳ ಬಗ್ಗೆ ಕೊಂಚ ಮಾಹಿತಿ ನೀಡುತ್ತದೆ. ಇದು ಕನ್ನಡಕ್ಕೆ ಅನುವಾದ ಮಾಡಿದ ಪುಸ್ತಕವಾದುದರಿಂದ ಭಾಷೆ ಸ್ವಲ್ಪ ಕಗ್ಗಂಟಾಗಿಯೇ ಇದೆ. ೧೯೯೨ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕವು ೨೦೦೪ರಲ್ಲಿ ನಾಲ್ಕನೇ ಮುದ್ರಣವಾಗಿದೆ.  

ಪುಸ್ತಕ ನಿಧಿ - 15.ನೆಟ್ ನಲ್ಲಿ ಪುಕ್ಕಟೆ ಕಾದಂಬರಿ - 'ನನ್ನ ಗೃಹಿಣಿ '

ಚಿತ್ರ

- ಇದನ್ನು ನೆಟ್ ನಲ್ಲಿ ಓದಬಹುದು. ಡೌನ್ಲೋಡ್ ಕೂಡ ಮಾಡಬಹುದು. ಲಿಂಕ್ ಅನ್ನು ಮುಂದೆ ಕೊಟ್ಟಿದ್ದೇನೆ

- ಈ ಪುಸ್ತಕದ ಮೂಲ ಮತ್ತು ಓದುವುದರ ಲಾಭ ತಿಳಿಯಲು ನಾನು ಹಾಕಿರುವ ಫೋಟೋದ ಭಾಗವನ್ನು ಓದಿ.

- ಈ ಪುಸ್ತಕವು ಒಬ್ಬ ಸಂಸಾರಿಗನು ಹೇಳಿದಂತೆ ಅವನ ಬದುಕಿನ ಚಿತ್ರಣ. ಬದುಕಿನ ಭಾಗವಾದ ಹೆಂಡತಿಯ ಕುರಿತು ಮೆಚ್ಚಿಗೆಯ ಮಾತುಗಳಿವೆ. 

- ' ಮನುಷ್ಯನು ಹುಟ್ಟಿ ಬಂದುದರ ಸಾರ್ಥಕ್ಯವೇನು? ಹಣಗಳಿಕೆ , ಲೋಕದ ಮತ್ತು ದೇವರ ಸೇವೆ. ಮನುಷ್ಯನು ಹಣ, ಕೀರ್ತಿ ಮತ್ತು ದೇವರ ಪ್ರೀತಿ ಇವುಗಳ ಹೊರತು ಮತ್ತೇನೂ ಸಾಧಿಸುವುದು ಇರುವುದಿಲ್ಲ' - ಇಲ್ಲಿ ನಾನು ಮೆಚ್ಚಿದ ಸಾಲು. 

ರಾಯನ ದಿನಚರಿ - ದಿನ ಮೂರು

ಈ ರಾಯನ ಅನುದಿನದ ದಿನಚರಿ ನನಗೆ ಹೀಗೆ ಗೊತ್ತಾಗುತ್ತದೆ ಎಂದಿರೋ ? ಈ ರಾಯ ನನ್ನ ಇತ್ತೀಚಿನ ಹೊಸ ಸ್ನೇಹಿತ. ಇವನ ಬಗ್ಗೆ ನನಗೆ ಗೌರವ, ಕುತೂಹಲ. ಆದರೆ ಕೆದಕುವ ಪ್ರಶ್ನೆಗಳನ್ನು ಕೇಳುವುದು ತರವಲ್ಲ ಎ೦ದು ಅವನ ಖಾಸಗಿ ವಿಷಯ ಕೇಳಿಲ್ಲ, ಅದು ನನ್ನ ಜಾಯಮಾನವೂ ಅಲ್ಲ. (ನನಗೆ ಪುರಸೊತ್ತೂ ಇಲ್ಲ ಅನ್ನಿ). ಅನಗತ್ಯವಾಗಿ ಯಾರ ಜೀವನದಲ್ಲಿಯೂ ತಲೆ ಹಾಕಬಾರದಂತೆ , ತಾನಾಗಿ ನಮಗೆ ಏನು ದಕ್ಕುವುದೋ , ಏನು ತಿಳಿದು ಬರುವುದೋ ಅಷ್ಟರಿಂದ ತೃಪ್ತಿ ಪಡಬೇಕಂತೆ . ಈ ಮನುಷ್ಯ ನನಗೆ ದಿನಾಲೂ ಸಿಗುತ್ತಾನೆ. ತನ್ನ ದಿನದ ವರದಿಯನ್ನು ನನ್ನಲ್ಲಿ ಒಪ್ಪಿಸುತ್ತಾನೆ - ನನ್ನ ಮಾಮೂಲು ಕುಶಲೋಪರಿಯ ಪ್ರಶ್ನೆಗೆ . ಈತ ತೀರಾ ವೈಯಕ್ತಿಕವಲ್ಲದ ಆದರೆ ನನಗೆ ಆಸಕ್ತಿಯ ವಿಷಯಗಳಾದ ಸಾಹಿತ್ಯ ಸಿನಿಮಾ ಮುಂತಾದವುಗಳ ಬಗೆಗೆ ಮಾತಾಡುತ್ತಾನೆ .

‘ಭಾವ’ದಲ್ಲಿ ಲೀನವಾದ ಲಕ್ಷ್ಮೀನಾರಾಯಣ ಭಟ್ಟರು

‘ಕವಿಯಾದವನು ಮಾತ್ರ ಹಾಡು ಬರೆಯಬಲ್ಲ' ಎಂದು ಅಚಲವಾಗಿ ನಂಬಿದ್ದ ಮತ್ತು ನಂಬಿದ್ದನ್ನು ಸಾಧಿಸಿ ತೋರಿಸಿದ ಖ್ಯಾತ ಕವಿ ಡಾ॥ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಇವರು ಮಾರ್ಚ್ ೬, ೨೦೨೧ರಂದು ಕನ್ನಡ ಸಾರಸ್ವತ ಲೋಕವನ್ನು ಅಗಲಿದ್ದಾರೆ. ಆದರೆ ಅವರ ರಚಿತ ಕವನಗಳು, ಬರಹಗಳು ಮುಂದೆ ಸದಾ ಕಾಲ ನಮ್ಮ ಜೊತೆಯಾಗಿ ಇದ್ದೇ ಇರುತ್ತದೆ.

Image