ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾವ್ಯಾರು ಬಡವರಲ್ಲ ! (ಭಾಗ 2)

ನಿಸರ್ಗ ಹೇಗೆ ರೂಪಿಸಿದಿಯೋ ಹಾಗೆ ಶುಚಿಯಾಗಿ ಇಟ್ಟುಕೊಳ್ಳಬೇಕು. ಮೈ, ಹಲ್ಲು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೈಸರ್ಗಿಕ ಆಹಾರ ಸೇವಿಸಬೇಕು, ಆನಂದ ಪಡಬೇಕು. ಇದಕ್ಕೆ ಸಂಪತ್ತು ರಕ್ಷಣೆ ಎನ್ನುವರು. ಚೆನ್ನಾಗಿರುವುದನ್ನು ಎಷ್ಟು ಬೇಕು ಅಷ್ಟು ಸಂತೋಷವಾಗಿ ಊಟ ಮಾಡುವುದು ಶರೀರದ ಸಂಪತ್ತಿನ ರಕ್ಷಣೆ. ಎರಡನೇ ಸಂಪತ್ತು ಇಂದ್ರಿಯ ಸಂಪತ್ತು.

Image

ಪುಸ್ತಕನಿಧಿ: ಸೀತಾ ರಾಮ-ಫ. ಗು. ಹಳಕಟ್ಟಿ ?

ಈ ಪುಸ್ತಕವು archive.org ತಾಣದಲ್ಲಿದ್ದು ಇದನ್ನು pustaka.sanchaya.net ಜಾಲತಾಣದಲ್ಲಿ 'ಸೀತಾ ರಾಮ' ಎಂದು ಹುಡುಕುವ ಮೂಲಕ ಪಡೆಯಬಹುದು.

ಇದನ್ನು ಫ.ಗು. ಹಳಕಟ್ಟಿ ಅವರು ಬರೆದಿರಬಹುದು. ಬರೆದಿರಬಹುದು ಅಂತ ಯಾಕೆ ನಾನು ಹೇಳುತ್ತಿದ್ದೇನೆ ಅಂದರೆ ಈ ಪುಸ್ತಕದಲ್ಲಿ ಆ ಬಗ್ಗೆ ಮಾಹಿತಿ ಇಲ್ಲ. ಆದರೆ pustaka.sanchaya.net ತಾಣದಲ್ಲಿ ಲೇಖಕ ಫ. ಗು. ಹಳಕಟ್ಟಿ ಅಂತ ಒಂದು ಕಡೆ ಹೇಳಿದ್ದಾರೆ ಮತ್ತು  ಹಳಕಟ್ಟೆಯವರ ಹೆಸರು ನಾವು ಕೇಳಿದ್ದೀವಿ.

ಇರಲಿ. ಈ ಪುಸ್ತಕದ ವಿಶೇಷವೇನು ಅದನ್ನು ನೋಡೋಣ. ಇಲ್ಲಿ ರಾಮಾಯಣದ ಕಥೆ ಇದ್ದು ರಾವಣನನ್ನು ಕೊಂದು ರಾಮಚಂದ್ರನು ಸೀತೆಯೊಂದಿಗೆ ಬಂದು ಭರತನಿಂದ ಅಧಿಕಾರ ವಹಿಸಿಕೊಂಡ ತನಕ ಅಷ್ಟೇ ಇದೆ. ರಾಮಾಯಣದ ಕಥೆ - ಸೀತಾ ಪರಿತ್ಯಾಗ ಇದರಲ್ಲಿ ಇಲ್ಲ.

ಭತ್ತದ ಬೆಂಕಿ ರೋಗ

ಪ್ರತೀ ವರ್ಷದ ಮಳೆಗೆ ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಗರಿ ತಿನ್ನುವ ಹುಳು ಹಾಗೂ ಎಲೆ ಕೆಂಪಗಾಗುವ ಸಮಸ್ಯೆ ಎದುರಾಗುತ್ತದೆ. ಮುಖ್ಯವಾಗಿ ಮಳೆ ಅಧಿಕವಾದದ್ದೇ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಸಂಪೂರ್ಣವಾಗಿ ಇದಕ್ಕೆ ಅಧಿಕ ಮಳೆಯೇ ಕಾರಣ ಎನ್ನುವಂತಿಲ್ಲ. ಬೀಜ ಜನ್ಯವಾಗಿ, ಪೋಷಕಾಂಶದ ವ್ಯತ್ಯಾಸದಿಂದಾಗಿಯೂ ಈ ರೋಗ ಬರಬಹುದಾದ ಸಾಧ್ಯತೆ ಇಲ್ಲದ್ದಿಲ್ಲ.

Image

ಪ್ರಮೇಯ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಗಜಾನನ ಶರ್ಮ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೩೯೫.೦೦, ಮುದ್ರಣ: ಎಪ್ರಿಲ್ ೨೦೨೩

ಚೆನ್ನಭೈರಾದೇವಿ, ಪುನರ್ವಸು ಅಂತಹ ಕಾದಂಬರಿಗಳನ್ನು ರಚಿಸಿದ ಅದ್ಭುತ ಕಾದಂಬರಿಕಾರ ಡಾ ಗಜಾನನ ಶರ್ಮ ಅವರು ಮಹಾಮಾಪನದ ಅಪೂರ್ವ ಕಥನವನ್ನು ‘ಪ್ರಮೇಯ’ ಎನ್ನುವ ಕಾದಂಬರಿ ಮೂಲಕ ಹೇಳಲು ಹೊರಟಿದ್ದಾರೆ. ಗಜಾನನ ಶರ್ಮ ಅವರು ಬರೆಯುವ ಕಾದಂಬರಿಗಳು ಇತಿಹಾಸದ ಯಾವುದೋ ಒಂದು ಮೂಲೆಯಲ್ಲಿ ಅಡಗಿರುವ ಸತ್ಯ ಕಥೆಯನ್ನು ಕಾಲ್ಪನಿಕವಾಗಿ ಚಿತ್ರಿಸುತ್ತಾ ಬರುತ್ತವೆ. ಇದೇ ಅವರ ಹೆಗ್ಗಳಿಕೆ.

ಬುದ್ಧತ್ವದೆಡೆಗೆ ಹೆಜ್ಜೆ ಹಾಕುತ್ತಾ… (ಭಾಗ 1)

ಬುದ್ಧ ಪೂರ್ಣಿಮೆಯ ಬೆಳಕಿನಲ್ಲಿ, ಯುದ್ಧ ಕಾಶ್ಮೀರದ ಕತ್ತಲಿನಲ್ಲಿ.... ಶಾಂತಿ, ಅಹಿಂಸೆ,  ಜ್ಞಾನ, ನೆಮ್ಮದಿಯನ್ನು ಹುಡುಕುತ್ತಾ… ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ  ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ.

Image

ಸ್ಟೇಟಸ್ ಕತೆಗಳು (ಭಾಗ ೧೩೧೯) - ವಿಪರ್ಯಾಸ

ಆ ತಾಯಿಯಲ್ಲಿ ತುಂಬಾ ಕನಸುಗಳಿದ್ದವು. ತನ್ನ ಮಕ್ಕಳನ್ನು ಅದ್ಭುತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಅಂದುಕೊಂಡಳು, ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಕ್ಕಳು ಬಹುಮಾನ ತಂದಾಗ ತಾಯಿ ಮನೆಯಲ್ಲಿ ಸಂಭ್ರಮ ಪಡುತ್ತಿದ್ದಾಳೆ. ಎಲ್ಲಾ ಬಹುಮಾನಗಳನ್ನ ಮನೆಯ ಗೋಡೆಯಲ್ಲಿ ಅಲ್ಲಲ್ಲಿ ನೇತುಹಾಕಿ ಪ್ರತಿದಿನವೂ ಆ ಬಹುಮಾನವನ್ನು ನೋಡಿ ಖುಷಿಪಡುತ್ತಿದ್ದಳು. ದಿನಗಳ ಹಾಗೆ ಉರುಳಿದವು.

Image

ಕಣ್ಣಿಗೆ ಕಾಣಿಸದ ಮಹಾಶಕ್ತಿ

ಮಾತು ಮಾತಿಗೆ ನಾವು ಹೇಳುವುದಿದೆ ಭಗವಂತ ಇದ್ದಾನೆ. ದೇವರಿದ್ದಾನೆ ಎಂಬುದಾಗಿ. ಹಾಗೆಂದು ದೇವರಿದ್ದಾನೆಂದು ಸುಮ್ಮನೆ ಕುಳಿತರೆ ಹೊಟ್ಟೆ ಹಸಿವು ನೀಗುವುದೇ? ನೀಗದು. ಕೆಲಸವೇ ಭಗವಂತ ಅಲ್ಲವೇ? ಬೆವರು ಹರಿಸಿ, ಮೈಬಗ್ಗಿಸಿ ದುಡಿಯುವುದರಲ್ಲಿ ದೇವರನ್ನು ಕಾಣಬೇಕು. ಮನುಷ್ಯ ಪ್ರಯತ್ನ ಬೇಕಲ್ಲವೇ? ಒಬ್ಬರು ಕೊಡುತ್ತಾರೆಂದು ಕುಳಿತು ಉಣ್ಣುವುದು ಸರಿಯಲ್ಲ. ನಮ್ಮ ದುಡಿಮೆ, ನಮ್ಮ ಸಂಪಾದನೆ, ನಮ್ಮ ಊಟ.

Image

ನಾವ್ಯಾರು ಬಡವರಲ್ಲ ! (ಭಾಗ 1)

ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಬೇರೆಯವರೊಂದಿಗೆ ಹೋಲಿಸಿಕೊಂಡು, ನಾವು ಬಡವರೆಂದುಕೊಂಡಿದ್ದೇವೆ. ನಮ್ಮಲ್ಲಿರುವ ಅಂತಸ್ತುಗಳನ್ನು ಎಣಿಸಿಕೊಂಡು, ಬಡವರೆಂದು ಕಲ್ಪಿಸಿಕೊಂಡು ಕೊರಗುತ್ತೇವೆ. ಈ ಲೇಖನ ಓದಿ ನಂತರ ತೀರ್ಮಾನಿಸಿ. ನಾವು ಬಡವರೆ?

Image