ವಿಧ: ಬ್ಲಾಗ್ ಬರಹ
October 30, 2007
ಭರತಖಂಡದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತ ಎಲ್ಲರಿಗೂ ಪೂಜನೀಯ. ಮೂಲ ವ್ಯಾಸಭಾರತದ ನಂತರದಲ್ಲಿ ಕನ್ನಡವೂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲೂ ಹಲವಾರು ಮಹಾಭಾರತಗಳು ರಚಿತವಾಗಿವೆ. ಆದರೆ ಮೂಲ ಭಾರತಕ್ಕೂ ಮತ್ತು ಇತರೆ ಭಾಷೆಗಳಲ್ಲಿ ನಂತರ ರಚಿತವಾದ ಭಾರತಕ್ಕೂ ಕೆಲವೊಂದು ವ್ಯತ್ಯಾಸಗಳಿರುವುದು ಕಂಡುಬಂದಿದೆ. ಕಾರಣಗಳು ಹಲವಿರಬಹುದು.
ಪ್ರಸ್ತುತದ ಚರ್ಚೆ ಮಹಾಭಾರತದಲ್ಲಿ ಬರುವ ಯಕ್ಷಪ್ರಶ್ನಾ ಎನ್ನುವ ಪ್ರಸಂಗದ ಕುರಿತಾದದ್ದು. ಎಲ್ಲರಿಗೂ ತಿಳಿದಂತೆ ಧರ್ಮರಾಯನು ಯಕ್ಷರೂಪಿ ತನ್ನ ತಂದೆಯಾದ…
ವಿಧ: Basic page
October 30, 2007
ಅಂತರ್ಜಾಲ ಬಳಸುವ ಬಹುತೇಕ ಎಲ್ಲರಿಗೂ ವಿಕಿಪೀಡಿಯಾ ಬಗ್ಗೆ ತಿಳಿದೇ ಇರುತ್ತದೆ.ಅಂತರ್ಜಾಲದ ಪ್ರಮುಖ ವೆಬ್-ಸೈಟ್ಗಳಲ್ಲಿ ಒಂದಾದ ಆಂಗ್ಲ ವಿಕಿಪೀಡಿಯಾದಲ್ಲಿ ಸುಮಾರು ೨೦ ಲಕ್ಷಕ್ಕೂ ಹೆಚ್ಚು ಲೇಖನಗಳಿವೆ.ಗೂಗಲ್,ಯಾಹು ಮುಂತಾದ ಸರ್ಚ್-ಇಂಜಿನ್ಗಳಲ್ಲಿ ಹುಡುಕಿದಾಗ,ಸಾಮಾನ್ಯವಾಗಿ ವಿಕಿಪೀಡಿಯಾ ಲೇಖನಗಳು ಮೊದಲ ಹತ್ತು ಸರ್ಚ್-ರಿಸಲ್ಟಗಳಲ್ಲಿ ಬಂದೇ ಬರುತ್ತದೆ.ಈ ದೃಷ್ಟಿಯಿಂದ ನೋಡಿದರೆ, ವಿಕಿಪೀಡಿಯಾ ಲೇಖನವು ವಿಷಯಾಸಕ್ತರಿಗೆ ಮಾಹಿತಿಯ ಮೊದಲ ಕೊಂಡಿಯಾಗಿರುತ್ತದೆ. ವಿಕಿಪೀಡಿಯಾದಲ್ಲಿ ಲೇಖನಗಳ…
ವಿಧ: ಬ್ಲಾಗ್ ಬರಹ
October 30, 2007
ದೇವದಾಸಿಯ ನಾಜೂಕಯ್ಯ, ಸದಾರಮೆಯ ಕಳ್ಳ, ಮಕ್ಮಲ್ ಟೋಪಿಯ ನಾಣಿ, ಭ್ರಷ್ಟಾಚಾರದ ದಫೇದಾರ್, ನಡುಬೀದಿಯ ನಾರಾಯಣ - ಇವರೆಲ್ಲರ ಜೊತೆ ಒಮ್ಮೆ ಮಾತನಾಡಬೇಕೆನಿಸಿತು. ಕೂಡಲೇ ಮಾಸ್ಟರ್ ಹಿರಣ್ಣಯ್ಯ ಅವರನ್ನು ಕರೆಸಿದೆವು. ಕರ್ನಾಟಕ ರಾಜ್ಯೋತ್ಸವ ಸಮಯಕ್ಕೆ ಇವರಿಗಿಂತ ಸೂಕ್ತ ವ್ಯಕ್ತಿ ಮತ್ತೊಬ್ಬರು ಬೇಕೆ?
ನಮಸ್ಕಾರ ಸರ್ ಎನ್ನುತ್ತಲೇ, ಬಹಳ ಪರಿಚಯ ಇರುವವರ ಹಾಗೇ ಆತ್ಮೀಯವಾಗಿ ಬೆನ್ನ ಮೇಲೆ ಕೈಯಾಡಿಸಿ, ನಿಮ್ಮ ಕಾರ್ಯಕ್ರಮ ಚೆನ್ನಾಗಿ ಬರ್ತಾ ಇದೆ ಎಂದು ಮೆಚ್ಚುಗೆ ಸೂಚಿಸಿದರು. ಪ್ರಸಾದನ ಕೊಠದಿಗೆ…
ವಿಧ: ಕಾರ್ಯಕ್ರಮ
October 30, 2007
ಸಂಪದಿಗರೆ,
ಇದೇ ಶನಿವಾರ ಸುಚಿತ್ರದಲ್ಲಿ 'ಮುಖಾಮುಖಿ' ಚಲನಚಿತ್ರದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸಂಪದದ ಸದಸ್ಯರೇ ಆದ ಅನಿವಾಸಿ ಚಿತ್ರಕತೆ ಬರೆದು, ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. 'ಮುಖಾಮುಖಿ' ಚಿತ್ರಕ್ಕೆ ೨೦೦೬ನೇ ಸಾಲಿನ 'ಅತ್ಯುತ್ತಮ ಸಂಭಾಷಣೆ' ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಹೆಸರಾಂತ ನಟ ದತ್ತಣ್ಣ, ಕಿರುತೆರೆಯಲ್ಲಿ ಹೆಸರುವಾಸಿಯಾದ ದಿಲೀಪ್ ರಾಜ್, ಶ್ವೇತಾ ಶ್ರೀವಾತ್ಸವ್ ಇನ್ನಿತರರು ನಟಿಸಿದ್ದಾರೆ. ಕನ್ನಡದಲ್ಲಿ ಅತ್ಯಂತ ಕಲಾತ್ಮಕ…
ವಿಧ: Basic page
October 30, 2007
ಕಣ್ಣು ಬಂದಾವೇನ್ರಿ? ಸರ..... ಎಂದ ನಮ್ಮಾಫೀಸಿನ Pಯೂನ್ ಕಲ್ಲಪ್ಪ. ಈಗ ಎಲ್ಲಿದೋ ಹೊಸದಾಗಿ ಕಣ್ಣು, ಮಣ್ಣು ನಾ ಹುಟ್ಟಿದಾಗಿನಿಂದ ಅದಾವೊ ಅವು ನೋಡಿಲ್ಲಿ ಒಂದಲ್ಲಾ ಎರಡು ಅದಾವಪ್ಪಾ ಎಂದೆ. ಅಯ್ಯ ಅದಲ್ಲ ಬಿಡ್ರಿ ಸ್ಸರಾ.... ನೀವು ಚಾಸ್ಟಿ ಮಾಡಲಾಕ ಹತ್ತೀರಿ, ನಾ ಕೇಳಿದ್ದು ಕಣ್ಣರಿ, ಕೆಂಪಾಗ್ಯಾವಲ್ಲಾ, ಕಣ್ಣಬ್ಯಾನಿ ಬಂದಂಗ ಕಾಣಿಸ್ತು ಅದಕ್ಕ ಕೇಳಿದೆರಿ. ಹೂ ನೊ ಯಪ್ಪಾ ಕಣ್ಣಬ್ಯಾನಿ ಸುರುವಾಗೇತಿ ಸರಿಯಾಗಿ ಕಣ್ಣ ಬಿಡಾಕ ಬರವಲ್ತು ಎಂದೆ. ಮತ್ತ ಕಪ್ಪ ಚಸಮಾ ಹಾಕ್ಕೋರಿ ಸರಾ ಇದು ಓಬ್ಬರಿಂದ…
ವಿಧ: ಬ್ಲಾಗ್ ಬರಹ
October 30, 2007
ಯಾವುದೇ ಆಧಾರಗ್ರಂಥವಿಲ್ಲದೇ ಕೇವಲ ಮುಂಡಿಗೆ, ಒಗಟು, ಪ್ರಸಂಗಗಳ ಪರಂಪರೆಯನ್ನು ಮಾತ್ರ ಹೊಂದಿರುವ ಝೆನ್ ಯಾವುದೇ ಪೂರ್ವಾಗ್ರಹವಿಲ್ಲದೇ ಜೀವನಕ್ಕೆ ಹೊಂದಿಕೊಳ್ಳುತ್ತದೆ. ಆದರೆ ಯಾವ ಹಂತದಲ್ಲೂ ಸಹ ಹೀಗೆ ಜೀವಿಸು ಎಂಬುದಾಗಿ ಹೇಳುವುದಿಲ್ಲ. ಲೌಕಿಕ ಬದುಕನ್ನು ಜೀವಿಸುತ್ತಲೇ, ಬದುಕಿನೆಲ್ಲ ದ್ವಂದ್ವಗಳನ್ನು ಅನುಭವಿಸುತ್ತಾ, ಎಲ್ಲವನ್ನೂ ಸ್ವೀಕರಿಸುತ್ತಾ ಬದುಕುವ ಪರಿಯೇ ಝೆನ್.
ಆಸಕ್ತಿರಿಗೊಂದು ಝೆನ್ ಕಥೆ.............
ಗುರು ಇಕ್ಕ್ಯೂ, ಇನ್ನೂ ಬಾಲಕನಾಗಿದ್ದಾಗಲೇ ಭಾರೀ ಬುದ್ಧಿವಂತ…
ವಿಧ: ಬ್ಲಾಗ್ ಬರಹ
October 29, 2007
ಸಣ್ಣವನಿದ್ದಾಗಲೇ ಅಲೀಬಾಬಾ ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ಆಡಿಸಿದ ಪ್ರೇಮಾ ಕಾರಂತ್ ಈವತ್ತು ಕೊನೆ ಉಸಿರೆಳೆದರು... ಒಂದೆರಡು ವಾರದಿಂದ ಬಳಲುತ್ತಿದ್ದರು... ಆಸ್ಪತ್ರೆಯಲ್ಲಿದ್ದರು...ಈ ಸಲ ಬೆಂಗಳೂರಿಗೆ ಬಂದಾಗ ಅವರ ಜತೆ ಗಂಟೆಗಟ್ಟಲೆ ಮಾತಾಡಿ ವಿಡಿಯೋ ಇಂಟರ್ವ್ಯೂ ಮಾಡಬೇಕು ಅಂತ ಲೆಕ್ಕ ಹಾಕಿದ್ದೆ. ಬೆಂಗಳೂರಿಗೆ ಬಂದಿಳಿದ ದಿನ ಫೋನ್ ಮಾಡಿದ್ದೆ. "ಯಾಕೋ ತುಂಬಾ ಬ್ರೆತ್ಲೆಸ್ ಆಗತ್ತೆ. ಜಾಸ್ತಿ ಮಾತಾಡಕ್ಕೆ ಆಗಲ್ಲ... ಈವತ್ತು ಆಸ್ಪತ್ರೆಗೆ ಹೋಗಿ ಒಂದೆರಡು ದಿನ ಇದ್ದು ಕೆಲವು ಟೆಸ್ಟ್…
ವಿಧ: Basic page
October 29, 2007
Udayavani
(ಇ-ಲೋಕ-46)(29/10/2007)
ಅಂತರ್ಜಾಲದಲ್ಲಿ ಕನ್ನಡ ಟೈಪಿಸುವುದೀಗ ಚಿಟಿಕೆ ಹೊಡೆದಷ್ಟೇ ಸುಲಭ.ತಂತ್ರಜ್ಞಾನವನ್ನು ಜನರ ಸಮೀಪಕ್ಕೆ ತರಲು ಹಲವಾರು ಸಂಶೋಧನೆಗಳನ್ನು ಮಾಡುತ್ತಿರುವ ಗೂಗಲ್, ಭಾರತೀಯ ಭಾಷೆಗಳನ್ನು ಟೈಪಿಸುವುದನ್ನು ಸುಲಭವಾಗಿಸುವ ಆನ್ಲೈನ್ ಸೇವೆ ಒದಗಿಸಲಾರಂಭಿಸಿದೆ.ಗೂಗಲ್ ಇಂಡಿಕ್ ಟ್ರಾನ್ಸಿಲಿಟರೇಷನ್ ಎಂಬ ನೂತನ ಶೋಧನೆಯು ಜನರಿಗೆ http://www.google.com/transliterate/indic/Kannada# ಪುಟದಲ್ಲಿ ಲಭ್ಯ. ಕನ್ನಡ,ಮಲೆಯಾಳಮ್,ಹಿಂದಿ,ತಮಿಳು ಮತ್ತು ತೆಲುಗು ಈ…
ವಿಧ: ಚರ್ಚೆಯ ವಿಷಯ
October 29, 2007
ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡುವಲ್ಲಿ ಹಲವು ರಂಗಕರ್ಮಿಗಳ ಶ್ರಮ ಸ್ಮರಣೀಯ. ಅಂಥಹವರಲ್ಲೊಬ್ಬರು ಕಾರಂತರು. ಅವರ ಪತ್ನಿಯಾಗಿ, ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಂಗಕರ್ಮಿಯಾಗಿ ಜೀವತೆಯ್ದವರು ಪ್ರೇಮಾಕಾರಂತರು. ಇಂದವರು ನಮ್ಮನ್ನಗಲಿದ್ದಾರೆ. ಈ ಕ್ಷೇತ್ರದಲ್ಲಿನ ಅವರ ಹೆಜ್ಜೆಗುರುತುಗಳನ್ನು ಗುರುತಿಸುವುದು ಮತ್ತು ಸ್ಮರಿಸುವುದು ಸ್ತುತ್ಯ ಪ್ರಯತ್ನ.
ಇದರ ಕುರಿತಂತೆ ಪ್ರತಿಸ್ಪಂದನಕ್ಕಾಗಿ ಕೋರಿದೆ.........
ವಿಧ: Basic page
October 29, 2007
ಒಳಗೊಳಗೆ ಏನೋ ಕುದಿಏನನ್ನಾದರೂ ಮಾಡಬೇಕೆಂದುಹೊರಗೆ ತುಂಬ ಚಳಿ-ಮಳೆಕುದಿಯನ್ನು ಆರಿಸಿ ಏನೂ ಮಾಡಕ್ಕೆ ಬಿಡಲ್ಲಹೆಂಗೆ ತಪ್ಪಿಕೊಳ್ಳದು ಈ ಚಳಿ-ಮಳೆಯಿಂದ?ಚಳಿಲಿ ನಡುಗಿ, ಮಳೆಯಲ್ಲಿ ನೆನ್ದುಆಮೇಲೂ ಕುದಿ ಇರುತ್ತಾ ನೋಡ್ತಿನಿ !! :)