ವಿಧ: ಚರ್ಚೆಯ ವಿಷಯ
April 05, 2007
ಭಾರವಾದ ಮನಸ್ಸಿನಿಂದಲೇ ಟಿವಿ ಯಲ್ಲಿ ಪೂಚಂತೆ ಬಗ್ಗೆ ಬರುತ್ತಿದ್ದ ಕಾರ್ಯಕ್ರಮಗಳನ್ನು ನೋಡ್ತಿದ್ದೆ. ಕೆಲವು ಜನರದ್ದು ಅದೇ ರಾಗ ಅದೇ ಹಾಡು. ಯಾರು ತೀರಿಕೊಂಡರೂ ಒಂದೇ ಥರದ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡ ಹಾಗೆ ಒದರಿಬಿಡ್ತಾರೆ. ತೇಜಸ್ವಿ ಬಗ್ಗೆ ಹೇಳಿ ಅಂದ್ರೆ ತೇಜಸ್ವಿಯವರ ಬಯೋಡಾಟ ಹೇಳೋಕೆ ಶುರು ಮಾಡ್ತಾರೆ. ತೇಜಸ್ವಿ ಕುವೆಂಪು ಅವರ ಮಗ, ಅವರು ಕತೆ ಕಾದಂಬರಿ ಬರಿತಿದ್ರು, ಇಂಥ ಕಡೆ ಹುಟ್ಟಿದ್ರು ಇಲ್ಲಿ ವಾಸಿಸುತ್ತಿದ್ರು ಹೀಗಿರ್ತವೆ ಅವರ ಮಾತುಗಳು. ಕೊನೆಗೆ ತುಂಬಲಾರದ ನಷ್ಟ…
ವಿಧ: Basic page
April 05, 2007
ಇದೀಗ ತಾನೆ ನನ್ನ ಗೆಳೆಯರೊಬ್ಬರು ದೂರವಾಣಿ ಕರೆ ಮಾಡಿ ತಿಳಿಸಿದರು...
ಇಂದು ಮಧ್ಯಾಹ್ನ ಊಟದ ನಂತರ ಹೃದಯಾಘಾತದಿಂದ ವಿಧಿವಶರಾದರೆಂದು ಕೇಳಿ ವಿಶಾದವಾಯಿತು... ನಿಮ್ಮಲ್ಲಿ ಯಾರಿಗಾದರೂ... ಹೆಚ್ಚು ವಿಷಯ ತಿಳಿದಿದ್ದರೆ ದಯವಿಟ್ಟು ನನಗೂ ತಿಳಿಸಿ.
ಧನ್ಯವಾದಗಳೊಂದಿಗೆ
ರಾಘವೇಂದ್ರ
ವಿಧ: ಚರ್ಚೆಯ ವಿಷಯ
April 05, 2007
ರುಜುವಾತು ಮತ್ತು ಋಜುವಾತು ಶಬ್ದಗಳ ನಿಘಂಟು ಅರ್ಥ ಕೆಳಗಿದೆ. ಇವುಗಳ ನಡುವೆ ಇರುವ ವ್ಯತ್ಯಾಸ ಏನು? ಎರಡನ್ನೂ ಪರ್ಯಾಯವಾಗಿ ಬಳಸಲಡ್ಡಿಯಿಲ್ಲವೇ?
*ರುಜುವಾತು--------------------------------------------------------------------------------
1. alibi (ನಾ) 1) ಅನುಪಸ್ಥಿತಿಯ ರುಜುವಾತು, ಗೈರುಹಾಜರಿಯ ಸಾಕ್ಷ್ಯ 2) ಆತ್ಮರಕ್ಷಣೋಪಾಯ, ಸಬೂಬು
2. corroborate (ಕ್ರಿ) ದೃಢೀಕರಿಸು, ಸಮರ್ಥಿಸು, ರುಜುವಾತು ಮಾಡು, ಪುಷ್ಟೀಕರಿಸು
3. credentials (ನಾ) 1) ಪರಿಚಯ ಪತ್ರ,…
ವಿಧ: ಬ್ಲಾಗ್ ಬರಹ
April 05, 2007
ಉಪಮೆಗಳ ನಿರ್ವಿವಾದ ಪ್ರಭು ಕಾಳಿದಾಸ. ಅದಕ್ಕೆ ’ಶಾಕುಂತಲೆ’, ’ಮೇಘದೂತ’ ಗಳಂತಹ ಮಹಾಕೃತಿಗಳು ಸಾಕ್ಷಿಯಾದರೆ, ರಂಗಶಂಕರದಲ್ಲಿ ಪ್ರದರ್ಶನಗೊಂಡ ’ನೆನಪಾದಳು ಶಾಕುಂತಲೆ’ ಅದರ ಸಾಕ್ಷಾತ್ಕಾರ.
ಸಂಭಾಷಣೆ, ಅನುವಾದ ಹಾಗು ನಿರ್ದೇಶನದ ಗೌರವ ಬನ್ನಂಜೆ ಗೋವಿಂದಾಚಾರ್ಯರಿಗೆ ಸಲ್ಲುತ್ತದೆ. ದುಶ್ಯಂತ, ಮಾಡವ್ಯ, ಶಾಕುಂತಲೆ ಹಾಗು ಆಕೆಯ ಸಖಿಯರು - ಇವರುಗಳ ಹಾವಭಾವ ಮತ್ತು ಕವನಭರಿತ, ಭಾವಸಹಿತ, ಅಪ್ಪಟ ಕನ್ನಡ ಸಂಭಾಷಣೆಗಳೇ ಇದರಲ್ಲಿ ಗಮನಿಸಬೇಕಾದ ಅಂಶಗಳು. ನಿಮ್ಮನ್ನು ಮನಸ್ಸೂರೆ ಮಾಡಿ ಸೆರೆಹಿಡಿದು…
ವಿಧ: ಕಾರ್ಯಕ್ರಮ
April 04, 2007
ಪುಸ್ತಕ ಬಿಡುಗಡೆ: ರಾಘವೇಂದ್ರ ಪಾಟೀಲ, ಖ್ಯಾತ ಸಾಹಿತಿ
ಸಂವಾದದಲ್ಲಿ ಭಾಗವಹಿಸುವವರು:
ಪಟ್ಟಾಭಿರಾಮ ಸೋಮಯಾಜಿ
ಎಸ್. ಆರ್. ವಿಜಯಶಂಕರ್
ಪ್ರತಿಭಾ ನಂದಕುಮಾರ್
ಸುದರ್ಶನ್ ಪಾಟೀಲ್ ಕುಲಕರ್ಣಿ
ಅಧ್ಯಕ್ಷತೆ: ಡಾ. ಆರ್ ಪೂರ್ಣಿಮಾ, ಸಂಪಾದಕರು, ಉದಯವಾಣಿ
ಸ್ಥಳ: ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ನಂ.6, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-560 004
ವಿಧ: ಬ್ಲಾಗ್ ಬರಹ
April 04, 2007
ಕೊನಷ್ಟೈ ಕತೆಗಳು ಗೋರೂರು ರಾಮಸ್ವಾಮಿ ಅಯ್ಯಂಗಾರರ ಈ ಪುಸ್ತಕವನ್ನು ಬಹಳ ಹಿಂದೆ ಓದಿದ್ದೆ . ಅಲ್ಲಿರುವ ಎಲ್ಲಾ ಹಾಸ್ಯ ಪ್ರಸಂಗಗಳು ಇನ್ನೂ ನನ್ನ ನೆನಪಿನಲ್ಲಿವೆ . ತುಂಬ ಚೆನ್ನಾಗಿವೆ . - ತಮಿಳಿನಿಂದ ಅನುವಾದ ಎಂದು ಓದಿದ ನೆನಪು . ಈ ಪುಸ್ತಕ ಇಲ್ಲಿದೆ. ನೀವೂ ಓದಿ.
ವಿಧ: ಬ್ಲಾಗ್ ಬರಹ
April 04, 2007
ಆ ದೇಶದಲ್ಲಿ ಎಲ್ಲವನ್ನೂ ಸರಕಾರವೇ ನಿರ್ಧರಿಸುತ್ತದೆ . ಶಿಕ್ಷಣ , ಉದ್ಯೋಗ , ಮದುವೆ, ವಸತಿ ಇತ್ಯಾದಿ ಎಲ್ಲವನ್ನೂ . ಎಲ್ಲದಕ್ಕೂ ಸರಕಾರದ ಅನುಮತಿ ಬೇಕು.
ದಂಪತಿಯೊಂದು ಮಗನ ಶಾಲೆಯ ಸಂಬಂಧ ಒಂದು ಅರ್ಜಿ ಕೊಟ್ಟಿದೆ. ಆ ಸಂಬಂಧ ಸರಕಾರದ ಇಲಾಖೆ ಅವರನ್ನು ಕರೆದಿದೆ. ಮಗುವಿನ ಸಮೇತ ಅವರು ಕಛೇರಿಗೆ ನಿಗದಿತ ಸಮಯಕ್ಕೆ ಬರುತ್ತಾರೆ. ಅಲ್ಲಿ ಒಬ್ಬ ಸಹಾಯಕಳು ಮಗುವನ್ನು ಆಚೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿಯ ಅಧಿಕಾರಿ ಅವರಿಗೆ ಮದುವೆಯ ಅನುಮತಿಪತ್ರ ತೋರಿಸಲು ಹೇಳುತ್ತಾನ. ಅದನ್ನು…
ವಿಧ: ಬ್ಲಾಗ್ ಬರಹ
April 04, 2007
“ಧಾರವಾಡ ಮಳಿ ನ೦ಬ೦ಗಿಲ್ಲ” ಅನ್ನೂ ಮಾತು ನೆನಪ್ಪಿಟ್ಕೊ೦ಡು ಅವತ್ತು ಕಾಲೆಜಿಗೆ ಕೊಡೆ ತಗೋ೦ಡ ಹೋಗಿದ್ದೆ. ಹೋಗುವಾಗ ಇಲ್ಲದ ಮಳಿ ಬರೋವಾಗ ಧೋ ಅ೦ತ ಸುರಿಲಿಕ್ಕ ಸುರು ಮಾಡ್ತು.ಅವತ್ತು ಪ್ರಾಕ್ಟಿಕಲ್ ಇದ್ದಿದ್ದಕ್ಕ ಪುಸ್ತಕ ಯಾವ್ದು ಒಯ್ದಿರಿರಲಿಲ್ಲ. ಕೊಡೆ ಏರಿಸ್ಕೊ೦ಡು ಸುತ್ತ ಮುತ್ಲಿನ ಮ೦ದಿ ನೋಡ್ಕೊ೦ತ ಹೊ೦ಟೆ. ಒ೦ದಷ್ಟ ಮ೦ದಿ ಏನೂ ಆಗೇಲ್ಲ ಅನ್ನೊ೦ರ೦ಗ ನಡೆದಿದ್ದರ, ಒ೦ದಷ್ಟ ಮ೦ದಿ ಗಡಿಬಿಡಿ ಮಾಡ್ಕೊ೦ತ ಹತ್ರಿದ್ದ ಅ೦ಗಡಿ ಒಳಗ ಜಾಗ ಮಾಡ್ಕೊ೦ಡು, ಕೊಡೆ ಮರ್ತ್ ಬ೦ದಿದ್ದಕ್ಕ ತಮ್ಮನ್ನ ತಾವು…
ವಿಧ: ಬ್ಲಾಗ್ ಬರಹ
April 03, 2007
ಸೋಮವಾರ war ಸುರು
ಮಗಳು ನಡುವಿರಲು ಮಂಗಳ
ಬುಧವಾರ ಬಧ್ಧ ವೈರಿಗಳು
ಅಬ್ಬರವಿಳಿಯಲು ಸುರು ಗುರುವಾರ
ಶುಕ್ರವಾರ ವಾರೆನೋಟಕೆ ಸೋತು
ಸನಿಹ ಬರುವರು ಶನಿವಾರ
ರವಿ ಸವಿ ಸವಿ ವಾರ
sorry..ನೆಂಟರು ಹಾಜರು
ಮತ್ತದೇ ಸೋಮವಾರ
ವಿಧ: Basic page
April 03, 2007
ದೇಶ ಹೇಗಿದೆ ನೋಡಿನಾವು ಕಟ್ಟಿದ ಹಾಗೆ ಬದುಕು ಸಾಗಿದೆ ಬನ್ನಿ ನಾವು ನಗುವ ಹಾಗೆ. ಎಲ್ಲರೂ ಮತ ಹಾಕುವುದೇ ಒಂದಾಗಿ ನಗಲಿಕ್ಕಾಗಿ ಅಳುತ ಕುಳಿತರೆ ಒಬ್ಬರೇ ಯಾರೂ ಜತೆಗಿಲ್ಲ ಬಿಡಿ. ನಗುವಿನಲ್ಲೂ ನೂರಾರು ಬಗೆ ಮಗುವಿನ ಮುಗ್ದ ನಗೆ ಮಹಾಮಹಿಮರ ಸ್ನಿಗ್ಧ ನಗೆ ಭಗವದ್ಗೀತೆಯ ಬೋಧಕ ಶ್ರೀ ಕೃಷ್ಣನ ಮನಮೋಹಕ ನಗೆ ವಿಶ್ವ ಸುಂದರಿಯರ ಸೋಗಿನ ಸೊಬಗು ಬಿನ್ನಾಣ ವೈಭವದ ನಗೆ ರಾಜಕಾರಣಿಯರ ದೇಶಾವರಿ ನಗೆ ಭ್ರಷ್ಟರ,ದುಷ್ಟರ ವಿಕಟ ನಗೆ ಸಿ.ಬಿ.ಐ ಗೆ ಸೆರೆ ಸಿಕ್ಕವರು ಹೊಮ್ಮಿಸುವ ಹುಸಿ ನಗೆ,ಮಹಾತ್ಮರಾಗಿ…