ವಿಧ: ಬ್ಲಾಗ್ ಬರಹ
May 04, 2006
ಕೆಲಸ ಮಾಡದೇ ದುಡಿಮೆ ಇಲ್ಲ. ದುಡಿಮೆ ಇಲ್ಲದೇ ಬಾಳಿಲ್ಲ. ದೈಹಿಕವಾಗಿ ಕೆಲಸ ಮಾಡಿ ದುಡಿಯುವವರೂ ಇದ್ದಾರೆ ಮತ್ತು ಮಾನಸಿಕವಾಗಿ ಕೆಲಸ ಮಾಡಿ ದುಡಿಯುವವರು ಇದ್ದಾರೆ. ದೈಹಿಕವಾಗಿ ಕೆಲಸ ಮಾಡುವವರನ್ನು ಸಾಮಾನ್ಯ ಭಾಷೆಯಲ್ಲಿ ಕೂಲಿಗಳೆಂದು ಕರೆಯುವುದು ವಾಡಿಕೆ. ಅವರ ಕೆಲಸ ನಿರ್ವಹಣೆಯಲ್ಲಿ ಬುದ್ಧಿಯ ಉಪಯುಕ್ತತೆ ಅಷ್ಟಾಗಿ ಬೇಕಿಲ್ಲ. ಆದರೆ ಮಾನಸಿಕವಾಗಿ ದುಡಿಯುವವರಿಗೆ ಬುದ್ಧಿಯ ಉಪಯೋಗವೇ ಪ್ರಧಾನವಾದದ್ದು.
ತಂತ್ರಾಂಶ ಅಭಿಯಂತರ ಕೆಲಸವು ಪೂರ್ತಿಯಾಗಿ ಬುದ್ಧಿ ಶಕ್ತಿ ಉಪಯೋಗದಿಂದಲೇ ಆಗುವುದು…
ವಿಧ: Basic page
May 03, 2006
ಡಾ.ಯು.ಆರ್. ಅನಂತಮೂರ್ತಿಯವರ ಇತ್ತೀಚಿನ ಬರೆಹಗಳಿರುವ ಬ್ಲಾಗ್ ಋಜುವಾತು ಈಗ ಅಂತರಜಾಲದಲ್ಲಿ ಲಭ್ಯವಿವೆ. ಇಲ್ಲಿರುವ ಲೇಖನಗಳು ಅವರು ಪ್ರತೀ ವಾರ ಉದಯವಾಣಿ ಪತ್ರಿಕೆಯಲ್ಲಿ ಬರೆಯುತ್ತಿರುವ ಅಂಕಣ ಬರೆಹಗಳು.
ಈ ಬರೆಹಗಳಿಗೆ ಸಂಪದ ಸದಸ್ಯರು ಸಂಪದದಲ್ಲಿ ಬಳಸುವ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಗಳನ್ನೇ ಬಳಸಿ ಪ್ರತಿಕ್ರಿಯಿಸಬಹುದು. ಇದಕ್ಕಾಗಿ ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ರಾಜಕಾರಣದಿಂದ ಆರಂಭಿಸಿ ಸಾಹಿತ್ಯದವರೆಗೆ ವಿವಿಧ ವಿಷಯಗಳಿಗೆ ಕನ್ನಡದ ಪ್ರಮುಖ ಲೇಖಕರೊಬ್ಬರ ಸ್ಪಂದನೆ ಈ…
ವಿಧ: ಬ್ಲಾಗ್ ಬರಹ
May 03, 2006
ಹೊಸ ಮುಗುಳ್ನಗೆಯೊಂದಿಗೆ ಬಂದಿರುವ ಸಂಪದ ಚೆನ್ನಾಗಿದೆ. ಸಂಪದದ ಮೊದಲ ಆವೃತ್ತಿಗೆ ನನ್ನ ಮನಸ್ಸು ಹೊಂದಿಕೊಂಡುಬಿಟ್ಟಿದೆಯಾದ್ದರಿಂದ ಸ್ವಲ್ಪ ಕಷ್ಟವೆನ್ನಿಸಿತು. ಆದರೂ ಪರ್ವಾಗಿಲ್ಲ. ಹೊಸ ಆವೃತ್ತಿ ಆಕರ್ಷಕವಾಗಿ ಕಣ್ಣಿಗೆ ತಂಪಾಗಿ ಕಾಣುತ್ತಿದೆ. ಕನ್ನಡದ ಕೈಂಕರ್ಯ ಇನ್ನೂ ಹೆಚ್ಚು ಬಲಯುತವಾಗಿ ಮುಂದುವರೆಯಲಿ. ನಾನು ಒಬ್ಬ ವೃತ್ತಿಪರ ಚಿತ್ರವಿನ್ಯಾಸಕಾರ. ನೀವು ಮಾಡುತ್ತಿರುವ ಭುವನೇಶ್ವರಿಯ ಸೇವೆಯಲ್ಲಿ ಪಾಲ್ಗೊಳ್ಳಲು ನನಗೇದರೂ ಅವಕಾಶವಿದೆಯೇ?
ಎನಗಿಂತ ಕಿರಿಯರಿಲ್ಲ
ರಘುನಂದನ
ವಿಧ: Basic page
April 26, 2006
ಈ ಪುಟವನ್ನು ೩, ಮೇ, ೨೦೧೭ ರಂತೆ ಆರ್ಕೈವ್ ಮಾಡಲಾಗಿದೆ. ಈ ಪುಟದ ಹೊಸ ಆವೃತ್ತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ.
ಕನ್ನಡದಲ್ಲಿ ಬರೆಯಿರಿ - (ಯೂನಿಕೋಡ್ ಬಳಸಿ ಕನ್ನಡ ಲಿಪಿಯಲ್ಲಿ ಬರೆಯಿರಿ).
ಲೇಖನಗಳಲ್ಲಿ ಸಂವಹನ ಮತ್ತು ವ್ಯಾಕರಣಗಳೆರಡನ್ನೂ ಸಾಧ್ಯವಾದಷ್ಟು ಗಂಭೀರವಾಗಿ ಪರಿಗಣಿಸಿ ಬರೆಯಿರಿ.
ನಿಮ್ಮ ಬರಹ ಅಥವಾ ಪ್ರತಿಕ್ರಿಯೆಗಳು ಹೊಸ ಸಂವಾದವನ್ನು ತೆರೆಯುವಂತಿರುವುದು ಉತ್ತಮ. ಹಾಗೆಂದು…
ವಿಧ: ಚರ್ಚೆಯ ವಿಷಯ
April 26, 2006
ಬೆಳ್ದಿಂಗಳು ಮತ್ತು ಕರ್ದಿಂಗಳು ನನಗೆ ಗೊತ್ತಿರ್ಲಿಲ್ಲ ; ನಿಮಗೆ ?
ಬೆಳದಿಂಗಳು ಶುಕ್ಲಪಕ್ಷಕ್ಕೆ ಕನ್ನಡ ಪದ ; ಕರ್ದಿಂಗಳು ಕೃಷ್ಣಪಕ್ಷಕ್ಕೆ !
ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಕರ್ದಿಂಗಳು ಪ್ರಯೋಗ ಇದೆಯಂತೆ!
ಬೆಳದಿಂಗಳು ಚಂದ್ರನ ಬೆಳಕಾಗಿ ಅರ್ಥಾಂತರ ಹೊಂದಿ ಕರ್ದಿಂಗಳು ಮಾಯವಾಗಿದೆಯಂತೆ!
ವಿಧ: Basic page
April 25, 2006
ಅಮೇರಿಕದ ಅಧ್ಯಕ್ಷ ಅಬ್ರಹಾಮ್ ಲಿಂಕನ್ನನು ತನ್ನ ಮಗನ ಅಧ್ಯಾಪಕರಿಗೆ ಬರೆದ ಪತ್ರದ ಕೆಲವು ಭಾಗ.
ಎಲ್ಲ ಮನುಷ್ಯರೂ ನೀತಿವಂತರಲ್ಲ ಮತ್ತು ಸತ್ಯಾಚರಣೆ ಉಳ್ಳವರಲ್ಲ ಎಂದು ಅವನು ಕಲಿಯಬೇಕು . ಆದರೆ ಪ್ರತಿಯೊಬ್ಬ ದುಷ್ಟನಿಗೂ ಪ್ರತಿಯಾಗಿ ಗುಣಶಾಲಿ ನಾಯಕನಿರುತ್ತಾನೆ , ಪ್ರತಿಯೊಬ್ಬ ಸ್ವಾರ್ಥಿ ರಾಜಕಾರಣಿಗೂ ಪ್ರತಿಯಾಗಿ ಆದರ್ಶಗಳಿಗೆ ತನ್ನನ್ನು ಸಮರ್ಪಿಸಿಕೊಂಡ ಜನನಾಯಕನೊಬ್ಬನಿರುತ್ತಾನೆ ಎಂಬುದನ್ನು ಅವನಿಗೆ ಕಲಿಸಿ.
ಶತ್ರುಗಳಿರುವಂತೆಯೇ ಮಿತ್ರರೂ ಇರುತ್ತಾರೆ ಎಂಬುದನ್ನು ಅವನಿಗೆ ಕಲಿಸಿ .…
ವಿಧ: ಬ್ಲಾಗ್ ಬರಹ
April 25, 2006
ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ 'ಆರ್ಯ'ರವರು ಬರೆದ 'ಭಾಷೆ, ಧರ್ಮ, ದೇಶ ಮುಂತಾದ ಗಡಿಗಳನ್ನು ನಯಗೊಳಿಸಿದ' ಒಂದು ಕಥೆ ಇದೆ. ಚೆನ್ನಾಗಿ ಓದಿಸಿಕೊಂಡೂ ಹೋಗುತ್ತದೆ.
ಕ್ರಿಸ್ಟಲ್ ರೀಡಿಂಗ್ , ಟಾರಟ್ ಕಾರ್ಡ್ , ಕಾಲಗಣನೆ ಕುರಿತ ಲೇಖನಗಳು ಇಲ್ಲಿವೆ. ಮುಖ್ಯವಾಗಿ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿನ ಶಿಕ್ಷಣ , ವೈದ್ಯಕೀಯ , ಕೈಗಾರಿಕೋದ್ಯಮ , ಪ್ರವಾಸೋದ್ಯಮ, ಬ್ಯಾಂಕಿಂಗ್ ರಂಗಗಳಲ್ಲಿನ ಅದ್ಭುತ ಸಾಧನೆಗಳ ಬಗ್ಗೆ ಸ್ವಲ್ಪ ಹೆಚ್ಚೇ ಅನಿಸುವಷ್ಟು ( ೧೦೦ ಪುಟ !!) ಇದೆ.
ಸೆಲ್…
ವಿಧ: ಬ್ಲಾಗ್ ಬರಹ
April 25, 2006
ಸದ್ಯದಲ್ಲಿ ಜನರು ಬರೆಯುತ್ತಿರುವ ಕವನಗಳ ಕುರಿತು ಈ ಸಲದ ತರಂಗ ಯುಗಾದಿ (೨೦೦೬) ವಿಶೇಷಾಂಕದಲ್ಲಿ ಒಂದು ಕವಿತೆ ಇದೆ, ಸುಮತೀಂದ್ರ ನಾಡಿಗರದು . ಕವನ ಬರೆವ ಹವ್ಯಾಸವುಳ್ಳವರು ತಪ್ಪದೇ ಗಮನಿಸಬೇಕು . ಅಲ್ಲಿಯ ಕೆಲವು ಸಾಲುಗಳು ಹೀಗಿವೆ .
ಗಳಿಗೆಗಳಿಗೆಯೂ ಹುಟ್ಟುತ್ತಾವೆ ಅಸಂಖ್ಯ ಕವಿತೆಗಳು
ಅಲ್ಪಾಯುಷಿಗಳಿದ್ದಲ್ಲಿ ಜನನ ಸಂಖ್ಯೆಯು ಜಾಸ್ತಿ .
ಉಪಮಾನ ರೂಪಕ, ಸಂಕೇತ, ಛಂದಸ್ಸು ಇವುಗಳಿಗೆ ಗೊತ್ತಿಲ್ಲ
ನೋಡಿ ನಕ್ಕಿರಬಹುದು , ಕುವೆಂಪು ಬೇಂದ್ರೆ ..
... ದಾವಾಗ್ನಿ ಬಡಬಾಗ್ನಿ ಎರಡೂ ಒಂದೇ…
ವಿಧ: Basic page
April 24, 2006
ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * !
ಸಾರಾಂಷ :
ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ ಕ್ರಾಂತಿ,' ಹತ್ತಿಯ ನೂಲು ತಯಾರಿಸಲು ಸೃಶ್ಟಿಸಿದ 'ಸ್ಪಿನ್ನಿಂಗ್ ಜೆನ್ನಿ,' ಯಿಂದಲೇ ಆರಂಭವಾಗಿರುವುದು, ಎಲ್ಲರಿಗೂ ತಿಳಿದ ಸಂಗತಿ. ! ಹತ್ತಿ ಬೆಳೆಯ ಗುಣ ಸಂವರ್ಧನೆಯಲ್ಲಿ ಅನೇಕಾನೇಕ 'ತಳಿ ತಾಂತ್ರಿಕತೆ' ಗಳ ಚಾರಿತ್ರ್ಯಿಕ ಹಿನ್ನೆಲೆಗಳನ್ನು ಗಮನಿದರೆ, ಈ ಬೆಳೆಯ ಗುಣ ಸಂವರ್ಧನೆಗೆ ವಿಶ್ವದಾದ್ಯಂತ ನಡೆಸಿದ '…
ವಿಧ: ಬ್ಲಾಗ್ ಬರಹ
April 23, 2006
ನನ್ನ ಕನಸಿನಲ್ಲಿ ಅನಂತಮೂರ್ತಿ
ಅನಂತಮೂರ್ತಿ ರಾಜ್ಯ ಸಭೆಯ ಚುನಾವಣೆಗೆ ಸ್ಪರ್ಧಿಸಿದ್ದರಲ್ಲ, ಆಗ ನನಗೊಂದು ಕನಸು ಬಿತ್ತು.ಅವರು ಕೋಲಾರದ ಟೇಕಲ್ ರೋಡಿನ ಮೂಲೆಯೊಂದರಲ್ಲಿ, ನಮ್ಮ ಮನೆಯ ಹತ್ತಿರವೇ ಒಂದು ದಿನಸಿ ಅಂಗಡಿ ತೆರೆದಿದ್ದರು.ನನಗೋ ಆ ದೇಶ, ಈ ದೇಶ ಸುತ್ತಿ ಸಾಹಿತ್ಯ, ಸಂಸ್ಕೃತಿ ಮಾತಾಡಿ ಬರೆದುಕೊಂಡಿರುವ ಅನಂತಮೂರ್ತಿ ಇದೇಕೆ ಹೀಗೆ ಮಾಡಿದರು ಅಂತ ಕುತೂಹಲ. ಪಾಪ,ಜಾಗತೀಕರಣದ ವ್ಯಾಪಾರದ ವಿಚಾರ ಮಾತ್ರ ಮಾತಾಡಿ ಗೊತ್ತಿರುವ ಅನಂತಮೂರ್ತಿ ಇಲ್ಲಿ ಏನು ವ್ಯಾಪಾರ ಮಾಡುತ್ತಾರೆ? ಟೋಪಿ…