ಎಲ್ಲ ಪುಟಗಳು

ಲೇಖಕರು: ರಾಮಕುಮಾರ್
ವಿಧ: Basic page
May 24, 2006
೧. ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿತು. ೨. ದಾನಕ್ಕೆ ಕೊಟ್ಟ ಎಮ್ಮೆಯ ಹಲ್ಲು ಎಣಿಸಿದರು. ೩. ಬಂದಷ್ಟು ಬಂತು ಬರಡೆಮ್ಮೆ ಹಾಲು. ೪. ಮೂರು ಕೋಟಿ ಜನ ಸೇರಲ್ಲಿಲ್ಲ ಮೈಲಾರಲಿಂಗನ ಜಾತ್ರೆ ನಡೀಲ್ಲಿಲ್ಲ. ೫. ಮೂರೂ ಬಿಟ್ಟವರು ಊರಿಗೆ ದೊಡ್ಡವರು. ೬. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು. ೭. ಎಮ್ಮೆ ತಪ್ಪಿದರೆ ಕಪ್ಪೆ ಹೊಂಡ. ೮. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ. ೯. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ. ೧೦. ಕೋತಿ ತಾನು ಕೆಡೋದಲ್ಲದೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 24, 2006
ಸದ್ಯದಲ್ಲಿ ಕನ್ನಡ ಸಾಹಿತ್ಯ ಡಾಟ್ ಕಾಮ್‍ನಲ್ಲಿನ ಲೇಖನಗಳಲ್ಲಿನ ತಪ್ಪುಗಳನ್ನು ತಿದ್ದುತ್ತಿದ್ದೇನೆ. ಹೀಗಾಗಿ ಬ್ಲಾಗ್ ಬರೆದಿಲ್ಲ . ಜತೆ ಜತೆಗೇ ಪದಪರೀಕ್ಷಕ ( ಸ್ಪೆಲ್ಲ್ ಚೆಕ್ಕರ್) ಗೆ ಶಬ್ದಗಳನ್ನು ಸೇರಿಸುತ್ತಿದ್ದೇನೆ. . ಈಗಾಗಲೇ ಐವತ್ತು ಸಾವಿರಕ್ಕೂ ಹೆಚ್ಚು ಪದಗಳು ಸೇರ್ಪಡೆಯಾಗಿವೆ . ನಾನು ಸೋಲುವೆನೋ ; ಬೇಸತ್ತು ಕೈ ಬಿಡುವೆನೋ ; ಅಥವಾ ಕಂಪ್ಯೂಟರ್ ಸೋಲುವದೋ ನೋಡೋಣ ; ಏನೇ ಆಗಲಿ ನಿಮಗೆಲ್ಲ ತಿಳಿಸುವೆ ;
ಲೇಖಕರು: ahoratra
ವಿಧ: Basic page
May 23, 2006
ಭೂಮಿ ತಾಯಿ ಗಂಗ:- ಅಮ್ಮ ಅಮ್ಮ ಹೇಳಮ್ಮ, ಭೂಮಿ ಹೇಗೆ ನಮ್ಮಮ್ಮ? ಅಮ್ಮ:- ಕಣ್ಣ ತೆರೆದು ನೋಡಮ್ಮ, ಪುಟ್ಟ ಕಂದ ಗಂಗಮ್ಮ, ನಮ್ಮೆಲ್ಲರ ಅಮ್ಮ ಇಳೆಯಮ್ಮ, ಸೀತಮ್ಮಮ್ಮನ ಹೆತ್ತಮ್ಮ.//೧//. ಗಂಗ:- ಕೈಯಿಲ್ಲಾ, ಕಾಲಿಲ್ಲ, ಇವಳ್ಯ್ಹಾಗಾದಳು ನಮ್ಮಮ್ಮ? ಅಮ್ಮ:- ಸೂರ್ಯನ ಸುತ್ತ ಸುತ್ತಿಸುತ್ತಿ, ಕಾಲು ಕಳೆದುಕೊಂಡಳಮ್ಮ. ತಿಂಗಳನೊಡನೆ ಆಡಿ ಆಡಿ ಕೈಗಳ ಕಳೆದುಕೊಂಡಳಮ್ಮ.//೨…
ಲೇಖಕರು: Rohit
ವಿಧ: ಚರ್ಚೆಯ ವಿಷಯ
May 23, 2006
ಕನ್ನಡ ಹಾಗೂ ತಂತ್ರಜ್ಞಾನವನ್ನು ಬೆಸೆಯುವುದರ ಬಗ್ಗೆ ಈಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ಚರ್ಚೆಗಳೂ ಒಂದು ಕೃತಿಸ್ವರೂಪವನ್ನು ಪಡೆಯುವಲ್ಲಿ ಮುಂದಡಿಯಿಟ್ಟಿವೆ. ಅಂತರ್ಜಾಲ ತಾಣಗಳನ್ನು ನಿರ್ವಹಿಸಲು ಅಗತ್ಯವಾದ 'Content Management System(CMS)' ....ಕನ್ನಡವೂ ಸೇರಿದಂತೆ ಇತರ ಯಾವುದೇ ಭಾಷೆಗೂ ಕಸ್ಟಮೈಸ್ ಮಾಡಿಕೊಳ್ಳಬಹುದಾದಂತಹ ಒಂದು ಸಿಎಂಎಸ್ ಪೂರ್ಣಕಾರ ಪಡೆಯುವ ಹಂತದಲ್ಲಿದೆ. ಇದನ್ನು ಸಾಧ್ಯವಾಗಿಸಲು 'ಸಂಪೂರ್ಣ' ಶ್ರಮ ಮೀಸಲಿರಿಸುವವರು, ಕನ್ನಡಸಾಹಿತ್ಯ.ಕಾಂ ನ ಶೇಖರ್‍…
ಲೇಖಕರು: ರಾಮಕುಮಾರ್
ವಿಧ: Basic page
May 23, 2006
ಸಂಪದದಲ್ಲಿ ಪ್ರಕಟವಾಗಿದ್ದ ಗಾದೆಗಳೆಲ್ಲ ಚೆನ್ನಾಗಿದ್ದವು. ನನಗೆ ಗೊತ್ತಿರುವ,ಮಲೆನಾಡು ಪ್ರಾಂತದಲ್ಲಿ ಹೆಚ್ಚಾಗಿ ಕೇಳಿಬರುವ ಕೆಲವು ಗಾದೆಗಳು... ೧. ಅಂಕೆ ಇಲ್ಲದ ಕುದುರೆ ಅಗಳು ಹಾರಿತ್ತು. ೨. ಕರಕರೆ ದೇವರಿಗೆ ಮರದ ಜಾಗಟೆ. ೩. ಅಜ್ಜಿ ನೂತದ್ದೆಲ್ಲ ಮೊಮ್ಮಗನ ಉಡಿದಾರಕ್ಕೆ. ೪. ಸಲುಗೆ ಕೊಟ್ಟ ನಾಯಿ ನೊಸಲು ನೆಕ್ಕಿತ್ತಂತೆ. ೫. ಚರಿಗೆ ಅವಲಕ್ಕಿ, ಮರಿಗೆ ಗೊಜ್ಜು. ೬. ಹೆಣ ಹೊರುವವರಿಗೆ ತಲೆ ಕಡೆ ಆದರೇನು, ಕಾಲು ಕಡೆ ಆದರೇನು. ೭. ಬಡೆತ್ತಿಗೆ ಯಾಕೆ ದರೆ ಮೇಲಿನ ಹುಲ್ಲು. ೮…
ಲೇಖಕರು: ahoratra
ವಿಧ: ಬ್ಲಾಗ್ ಬರಹ
May 23, 2006
ಹಾಲು. ಬಹಿರಂಗ ಪ್ರೀತಿಯಿಂದದುರ್ಜನ ಸಂಘ,ಅಂತರಂಗ ಪ್ರೀತಿಯಿಂದಸಜ್ಜನ ಸಂಘ.ಪ್ರೀತಿಹಾಲಾದರೆ,ಅಪೇಕ್ಷೆಮೊಸರು.ಹಸು ಹಾಲನ್ನು ಕೊಡುತ್ತದೆ,ಮೊಸರು ಬಾಹ್ಯ ಕ್ರಿಯೆ.ಕರುವಿಗೆ ಕೊಟ್ಟು ಉಳಿದದ್ದುಹಾಲು.ಕರುವಿಗಿಡದೆ ಕರೆದದ್ದುಹಾಲಾಹಲ.ಆದುದರಿಂದಬೆಳ್ಳಗಿರುವುದೆಲ್ಲಹಾಲಲ್ಲ. ಅಹೋರಾತ್ರ.
ಲೇಖಕರು: vnag
ವಿಧ: ಬ್ಲಾಗ್ ಬರಹ
May 22, 2006
ಕಡಲಾಗಬೇಕೇನು? ಹನಿಯಾಗು ಮೊದಲುಅ೦ಕೆಗೆ ಬೆಲೆ ಬರಲು, ಸೊನ್ನೆಯಾಗು ಮೊದಲುನಿಜರೂಪ ಅರಿಯಲು, ಕನ್ನಡಿಯಾಗು ಮೊದಲುಚಿಗುರುವ ವಸ೦ತವಾಗಲು, ಬೋಳು ಶಿಶಿರವಾಗು ಮೊದಲುಆವರಿಸಿದ ಕತ್ತಲೆ ಬೆಳಗಲು, ಬೀಜಬಿತ್ತು ಮೊದಲುಕವನವಾಗಬೇಕೇನು? ಜೀವ೦ತ ಶಬ್ಧವಾಗು ಮೊದಲು ಜ೦ಬಣ್ಣ ಅಮರಚಿ೦ತ
ಲೇಖಕರು: ahoratra
ವಿಧ: Basic page
May 22, 2006
                                 ಪರೀಕ್ಷೆ.                 ಶ್ರದ್ದೆಯಿಂದ ಬೇಡಬೇಕು ವಿನಾಯಕನ ಸುರಕ್ಷೆ,                ವರುಷ ಪಡೆದ ಶಿಕ್ಷಣಕೆ ಬಂತು ಈಗ ಪರೀಕ್ಷೆ.                ಆದರ್ಶದಿ ನಡೆಯಲೆಂದು ಉತ್ತರಗಳ ಸಮೀಕ್ಷೆ,                ಆವೇಗದಿ ಕಾಯುತಿರುವ ನಮ್ಮೆಲ್ಲರ ನಿರೀಕ್ಷೆ.//ಪ//.                          ಬೇಕು ಸತತ ಅಭ್ಯಾಸ,                         ಮನಸಿನಲ್ಲಿ ಉಲ್ಲಾಸ,                         ಬರವಣಿಗೆಯ ವಿನ್ಯಾಸ…
ಲೇಖಕರು: ನಿರ್ವಹಣೆ
ವಿಧ: Basic page
May 22, 2006
ಗಮನಿಸಿ: ಪ್ರಶ್ನೆಗಳನ್ನು ಕಳುಹಿಸುವ ಕಾಲಾವಧಿ ಮೇ ೨೪, ೨೦೦೬ ಕ್ಕೆ ಮುಗಿದಿದೆ. ಸಂಪದ Podcastನ ೬ನೆಯ ಸಂಚಿಕೆ ನಿಮಗರ್ಪಿಸಲು ಸಂಪದದ ಸದಸ್ಯರು [http://kn.wikipedia.org/wiki/%E0%B2%9F%E0%B2%BF_%E0%B2%8E%E0%B2%A8%E0%B3%8D_%E0%B2%B8%E0%B3%80%E0%B2%A4%E0%B2%BE%E0%B2%B0%E0%B2%BE%E0%B2%82|ಟಿ ಎನ್ ಸೀತಾರಾಂರವರೊಂದಿಗೆ] ಸಂವಾದ ನಡೆಸಲಿದ್ದಾರೆ. ಈ ಸಂವಾದಕ್ಕೆ ಉಳಿದ ಸದಸ್ಯರೂ ಪ್ರಶ್ನೆಗಳನ್ನು ಕಳುಹಿಸಬಹುದು. ಸೂಕ್ತವಾದ ಪ್ರಶ್ನೆಗಳನ್ನು ಆಯ್ದು ಸಂವಾದದಲ್ಲಿ…
ಲೇಖಕರು: srikanth
ವಿಧ: Basic page
May 22, 2006
ಲಾಸ್ ವೇಗಸ್ ನ್ ಡಾನ್ಸ್ ಬಾರೊಂದಕ್ಕೆ ಭೇಟಿ ನೀಡಿದ್ದ ನನ್ನ ಸ್ನೇಹಿತನೊಬ್ಬನನ್ನು ಅಲ್ಲಿನ ಡಾನ್ಸರೊಬ್ಬಳು ಭಾರತದ ಬಗ್ಗೆ ಕೇಳಿದಾಗ “India is a land of cultures” ಅಂತ ಥಟ್ಟೆಂದು ಉತ್ತರಿಸಿದನೆಂದು ಹೇಳಿದಾಗ ನನಗೆ ಅಭಾಸವಾದರೂ “ಭಾರತದ ಬಗ್ಗೆ ಮಾತನಾಡವಾಗ ಸಹಜವಾಗಿ ಅದರ ಪ್ರಾಚೀನ ಹಾಗು ಭವ್ಯ ಸಂಸ್ಕೃತಿಯ ಬಗ್ಗೆ ಮಾತನಾಡುವವರೇ ಹೆಚ್ಚು” ಎಂಬ ಮಾತು ಸ್ಪಷ್ಟವಾಯಿತು. ಬಹುತೇಕ ಭಾರತೀಯರೂ, ಸ್ಥಳ ಕಾಲಗಳ ಪರಿವಿಲ್ಲದೇ ಈ ಸಾಂಸ್ಕೃತಿಕ ಬಳುವಳಿಯ ಬಗ್ಗೆ ಹೆಮ್ಮೆಯಿಂದ ಹೇಳುತ್ತಾ ಪ್ರಾಚೀನ…