ಪುಸ್ತಕ ಪರಿಚಯ
ಲೇಖಕರು: Ashwin Rao K P
July 19, 2022

ದನಗಳ ಪಾಲನೆ, ರೋಗಗಳು, ಮುಂಜಾಗ್ರತೆ ಹಾಗೂ ಪ್ರಾಥಮಿಕ ಚಿಕಿತ್ಸೆ ಕುರಿತು ಜನಪ್ರಿಯ ಪಶುವೈದ್ಯಕೀಯ ಲೇಖನಗಳ ಸಂಗ್ರಹವೇ ‘ಪಶುವೈದ್ಯ ಸಮಾಲೋಕನ' ಎಂಬ ಪುಸ್ತಕ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಪಶು ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಕೆ ಆರ್ ಲಕ್ಷ್ಮಯ್ಯ ಇವರು ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ "ಪಶುವೈದ್ಯಕೀಯ ಅತ್ಯಂತ ಪವಿತ್ರ ವೃತ್ತಿ. ಮೂಕ ಪ್ರಾಣಿಗಳ ವೇದನೆ ಪರಿಹರಿಸುವಲ್ಲಿ ಮತ್ತು ಬಡ ಪಶುಪಾಲಕನ ಶ್ರೇಯೋಭಿವೃದ್ಧಿಯಲ್ಲಿ ಪಶುವೈದ್ಯ…
ಲೇಖಕರು: Ashwin Rao K P
July 16, 2022

“ಭಾರತದಲ್ಲಿ ವೆನಿಲ್ಲಾ ಬೆಳೆಯ ವಾಣಿಜ್ಯ ಕೃಷಿ ಈಗ್ಗೆ ಕೆಲವು ವರ್ಷಗಳಿಂದ ಮಾತ್ರ ನಡೆಯುತ್ತಿದೆ. ವೆನಿಲ್ಲಾ ಬೆಳೆಗಾರರಿಗೆ ಈ ಬೆಳೆಯ ಕೃಷಿಯ ಬಗ್ಗೆ ಉಪಯುಕ್ತ ತಾಂತ್ರಿಕ ಮಾಹಿತಿಯ ಕೊರತೆಯನ್ನು ಈ ಪುಸ್ತಕ ನಿವಾರಿಸಿದೆ. ವೆನಿಲ್ಲಾ ಕೃಷಿಯನ್ನು ಆರಂಭಿಸಲು ಆಸಕ್ತರಿರುವ ರೈತರಿಗೆ ಇದು ಒಂದು ಉತ್ತಮ ಕೈಪಿಡಿ. ವೆನಿಲ್ಲಾ ಕೃಷಿಗೆ ತಗಲುವ ವೆಚ್ಚ, ಅದರ ಲಾಭ ಮುಂತಾದ ಉಪಯುಕ್ತ ಮಾಹಿತಿಯಿರುವ ಈ ಪುಸ್ತಕ ವೆನಿಲ್ಲಾ ಬೆಳೆಗೆ ಸಾಲವ್ಯವಸ್ಥೆಯನ್ನು ಯೋಜಿಸಲು ಬ್ಯಾಂಕುಗಳಿಗೆ ಅತ್ಯವಶ್ಯ. ತಾಂತ್ರಿಕ ಸಲಹೆ…
ಲೇಖಕರು: Ashwin Rao K P
July 14, 2022

ಕೃಷಿ ಪ್ರಯೋಗ ಪರಿವಾರ ಸಂಸ್ಥೆಯವರು ಹೊರತರುತ್ತಿದ್ದ ನಮ್ಮೂರ ವೈವಿಧ್ಯ ಮಾಲಿಕೆಯ ಮೂರನೇ ಕಾಣಿಕೆಯಾಗಿದೆ ಕದಿರು. ಇವರು ಭತ್ತದ ನಾಟಿತಳಿಗಳ ದಾಖಲೆಯನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಐವತ್ತಕ್ಕೂ ಮಿಕ್ಕಿದ ನಾಟಿತಳಿಗಳ ಹೆಸರು ಮತ್ತು ಅವುಗಳ ವಿಶ್ಲೇಷಣೆಗಳನ್ನು ಗಮನಿಸುವಾಗ ಅಚ್ಚರಿಯೆನಿಸುತ್ತದೆ. ಈ ರೀತಿಯ ದಾಖಲಾತಿಯನ್ನು ಮಾಡುವುದು ಒಂದು ಅಪರೂಪದ ವಿದ್ಯಮಾನವೇ ಸರಿ. ಈ ನಿಟ್ಟಿನಲ್ಲಿ ಕೃಷಿ ಪ್ರಯೋಗ ಪರಿವಾರದ ಕೆಲಸ ಸ್ತುತ್ಯಾರ್ಹ.
ಸಿಹಿ ಕೆಂಪಕ್ಕಿಯ ಸಿದ್ಧಸಾಲೆ…
ಲೇಖಕರು: Ashwin Rao K P
July 12, 2022

ಕಥೆಗಳ ರಚನೆಯಲ್ಲಿ ಆಸಕ್ತಿ ಹೊಂದಿರುವ ರವೀಂದ್ರ ಶೆಟ್ಟಿ ಕುತ್ತೆತ್ತೂರು ಅವರ ಚೊಚ್ಚಲ ಕಥಾ ಸಂಕಲನೇ 'ಪುನರ್ಜನ್ಮ'. ವಿವಿಧ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿರುವ ೧೦ ಉತ್ತಮ ಕಥೆಗಳನ್ನು ಆರಿಸಿ ಪುಟ್ಟ ಪುಸ್ತಕವನ್ನಾಗಿಸಿ ಓದುಗರ ಕೈಗಿರಿಸಿದ್ದಾರೆ. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ಕೆ. ಆನಂದ ಶೆಟ್ಟಿ ಇವರು. ಅವರ ಅಭಿಪ್ರಾಯದಂತೆ "ರವೀಂದ್ರ ಶೆಟ್ಟಿಯವರು ಬರೆದ ಹಲವಾರು ಕಥೆಗಳು ವಿವಿಧ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಓದುಗರ ಗಮನ ಸೆಳೆದಿದೆ…
ಲೇಖಕರು: Ashwin Rao K P
July 08, 2022

ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಇವರು ಹಲವಾರು ವಿಮರ್ಶಾ ಕೃತಿಗಳನ್ನು, ಪ್ರಬಂಧ ಸಂಕಲನಗಳನ್ನು ರಚಿಸಿದ್ದಾರೆ. ಇವರ ನೂತನ ಕೃತಿ 'ಅರಿವಿನ ಬಂಡಾಯ'ವನ್ನು ಕಣ್ಣ ಕೈದೀವಿಗೆಯ ಬೆಳಕು ಎಂದಿದ್ದಾರೆ. ಪುಸ್ತಕದ ಒಳಪುಟಗಳಿಂದ ಆಯ್ದ ಕೆಲವು ಸಾಲುಗಳೂ ಇಲ್ಲಿವೆ…
"...ಇಂದು ಜಗತ್ತನ್ನು ಗಾಢವಾಗಿ ಪ್ರಭಾವಿಸುತ್ತಿರುವ ಮೂರು ಪ್ರಭಾವೀ ಶಕ್ತಿಗಳೆಂದರೆ ರಾಜಕೀಯ, ಧರ್ಮ ಹಾಗೂ ತಂತ್ರಜ್ಞಾನ. ಇವುಗಳಲ್ಲಿ ರಾಜಕೀಯ ಹಾಗೂ ಧರ್ಮ ಅಧಿಕಾರ ಕೇಂದ್ರಗಳಾಗಿದ್ದು ಅಧೀನ…
ಲೇಖಕರು: Ashwin Rao K P
July 06, 2022

ಭಾರತದ ಚರಿತ್ರೆ ಎಡ-ಬಲಗಳ ಅತಿರೇಕದ ನಡುವೆ ಸಿಕ್ಕು ತತ್ತರಿಸಿದೆ. ನಿರ್ಮಲ ಚಿತ್ತದಿಂದ, ವಸ್ತುನಿಷ್ಟವಾಗಿ, ಕಲೆ, ಸಾಹಿತ್ಯ ಚರಿತ್ರೆಗಳನ್ನೆಲ್ಲ ಪೃಥಕ್ಕರಿಸಿ ಸತ್ಯಶೋಧನೆಗೆ ತೊಡಗಬೇಕೆಂಬ ಆದ್ಯತೆಯನ್ನು ಬಹುತೇಕರು ಮರೆತು, ತಾವು ನಂಬಿದ ಸಿದ್ಧಾಂತಕ್ಕೆ ಆಕರಗಳನ್ನು ಹುಡುಕಿದ್ದಾರೆ ಅಥವಾ ಜೋಡಿಸಿದ್ದಾರೆ. ಭಾರತದಂತ ಬಹುಮುಖಿ ಸಂಸ್ಕೃತಿಯ ದೇಶವನ್ನು ಕುರಿತು ಅಧ್ಯಯನ ಮಾಡುವಾಗ ಎಷ್ಟು ವ್ಯವಧಾನವಿದ್ದರು ಅದು ಅಲ್ಪವೇ. ವ್ಯವಧಾನದ ಜೊತೆಗೆ ಬಹುಜ್ಞಾತ ವ್ಯುತ್ಪತ್ತಿ ಹಾಗೂ ಚಿಕಿತ್ಸ ಬುದ್ಧಿಗಳು…