ಪುಸ್ತಕ ಪರಿಚಯ

ಲೇಖಕರು: Ashwin Rao K P
September 20, 2022
ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾಗಿ ವಿಂಗಡಿಸಿ 'ಹೊಸತು ಸಂಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಈ ವಾಚಿಕೆಗಳ ಪ್ರಕಟಣೆಯ ಹಿಂದಿರುವ ಉದ್ದೇಶ. ಈ 'ಮಹಿಳಾ ಲೋಕ' ೩೪ ಲೇಖನಗಳ ಸಂಕಲನ. ಹೊಸತು ಪತ್ರಿಕೆಯ ಆರಂಭದ ಐದು ವರ್ಷಗಳ ಅರವತ್ತು ಸಂಚಿಕೆಗಳಿಂದ ಈ ಲೇಖನಗಳನ್ನು…
ಲೇಖಕರು: Ashwin Rao K P
September 17, 2022
'ಪರಿಮಳದ ಸುಗ್ಗಿ' ಎಂಬ ಕವಿತೆಗಳ ಸಂಗ್ರಹವನ್ನು ಸಂಪಾದಿಸಿದ್ದಾರೆ ಬಿ ಶ್ರೀನಿವಾಸ ರಾಜು ಅವರು. 'ಹೊಸತು' ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂಗಡಿಸಿ 'ಹೊಸತು ವಾಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಈ ವಾಚಿಕೆಗಳ ಪ್ರಕಟಣೆಯ ಹಿಂದಿರುವ ಉದ್ದೇಶ. ಈ 'ಪರಿಮಳದ…
ಲೇಖಕರು: Ashwin Rao K P
September 15, 2022
ಗರಿಮಾ ಶ್ರೀವಾಸ್ತವ ಅವರ ಯುದ್ಧಕಾಲದ ಮಹಿಳೆಯರ ಅನುಭವ ಕಥನವನ್ನು ವಿಕ್ರಮ ವಿಸಾಜಿಯವರು ಕನ್ನಡಕ್ಕೆ 'ದೇಹವೇ ದೇಶ' ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ೧೯೯೨ ರಿಂದ ೧೯೯೫ರವರೆಗೆ ಪೂರ್ವ ಯುರೋಪಿನ ದೇಶಗಳ ನಡುವೆ ನಡೆದ ಯುದ್ಧ ಹಲವು ಘೋರ ದುರಂತಗಳಿಗೆ ಕಾರಣವಾಯಿತು. ಮುಖ್ಯವಾಗಿ ಕ್ರೊವೇಶಿಯಾ, ಸರ್ಬಿಯಾ, ಹರ್ಜೆಗೋವಿನಾ ಮತ್ತು ಬೋಸ್ನಿಯಾ ದೇಶಗಳಲ್ಲಿ ರಕ್ತದ ಕಲೆಗಳು ಎಲ್ಲೆಡೆ ಉಳಿದುಕೊಂಡವು. ಇಂಥ ನರಕದಲ್ಲಿ ಹೆಚ್ಚಾಗಿ ಬೆಂದವರು ಸ್ತ್ರೀಯರು ಮತ್ತು ಮಕ್ಕಳು. ಹತ್ಯೆ, ಅತ್ಯಾಚಾರ, ಮಾನವ ಕಳ್ಳ…
ಲೇಖಕರು: Ashwin Rao K P
September 13, 2022
ಕರ್ನಾಟಕದಲ್ಲಿ 'ಸಂವಿಧಾನದ ಓದು' ಎಂಬ ಆಂದೋಲನವನ್ನೇ ಪ್ರಾರಂಭಿಸಿ, ವಿವಿಧ ನಗರಗಳಲ್ಲಿ ಸಂಚರಿಸಿ ಭಾರತದ ಸಂವಿಧಾನದ ಆಶಯಗಳನ್ನು ಮನೆ-ಮನಗಳಿಗೆ, ಶಾಲಾ-ಕಾಲೇಜುಗಳಿಗೆ ತಲುಪಿಸುವ ಮಹತ್ವದ ಕೆಲಸವನ್ನು ಮಾಡಿದ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಇವರು ಬರೆದ ಕೃತಿಯೇ'ಸಂವಿಧಾನ ಮತ್ತು ವಚನಗಳು'. ಪುಸ್ತಕದ ಬೆನ್ನುಡಿಯಲ್ಲಿ ಸಾಹಿತಿ ಡಾ. ಸಿದ್ಧನಗೌಡ ಪಾಟೀಲ ಇವರು ಅಭಿಪ್ರಾಯ ಪಡುವಂತೆ "ಸಂವಿಧಾನದ ಮೂಲ ಆಶಯಗಳು ಜನಪರವಾದ ತತ್ವಶಾಸ್ತ್ರೀಯ ಚಿಂತನೆಗಳಲ್ಲೂ ಹೇಗೆ ಪ್ರತಿಪಾದನೆಗೊಂಡಿದೆ ಎಂಬ…
ಲೇಖಕರು: Ashwin Rao K P
September 11, 2022
ಅರವಿಂದ ಚೊಕ್ಕಾಡಿಯವರು ಬರೆದ ಸುಂದರ ಕೃತಿ 'ಮೂರನೆಯ ಇರುವು'. ಪುಸ್ತಕದ ಬೆನ್ನುಡಿಯಲ್ಲಿ ಯು ಆರ್ ಅನಂತಮೂರ್ತಿ ಇವರು ಹೀಗೆ ಬರೆದಿದ್ದಾರೆ " ಕನ್ನಡ ಭಾಷೆಯಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ದೀರ್ಘವಾಗಿ ಸಮಗ್ರವಾಗಿ ಯೋಚಿಸಿ ಬರೆದಿರುವವರ ಸಂಖ್ಯೆ ತೀರಾ ವಿರಳ. ಅರವಿಂದ ಚೊಕ್ಕಾಡಿ ಅವರ ಈ ಪುಸ್ತಕ ವಿನಾಯಿತಿ. ಬ್ರಿಟಿಷ್ ವಿಮರ್ಶಕನೊಬ್ಬ ಶೋಧನಾತ್ಮಕವಾದ ಬರಹಗಾರರಿಗೆ ಒಂದು ಸೂಚನೆ ಕೊಡುತ್ತಾನೆ "Only Connect” ಅಂದರೆ ಸಂಬಂಧವಿರದಂತೆ ಕಾಣುವ ವಿಷಯಗಳಲ್ಲಿ ಸಂಬಂಧಗಳನ್ನು ಕಂಡಾಗ…
ಲೇಖಕರು: Ashwin Rao K P
September 08, 2022
ಸಾಹಿತಿ ಶೋಭಾ ರಾವ್ ಅವರು 'ಹನಿ ಕಡಿಯದ ಮಳೆ' ಎಂಬ ಪ್ರಬಂಧ ಮಾಲೆಯನ್ನು ರಚಿಸಿದ್ದಾರೆ. ಈ ಕೃತಿಗೆ ಮಾಲಿನಿ ಗುರುಪ್ರಸನ್ನ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ "ಸಿಕ್ಕಿದ್ದನ್ನು ಸಿಕ್ಕ ಹಾಗೆಯೇ ಬಳಸಲಾಗದ ಕೆಸ, ಕಳಲೆ ಬದುಕಿನಲ್ಲಿ ಸಂಸ್ಕರಣದ ಅಗತ್ಯವನ್ನು ಎತ್ತಿಹಿಡಿಯುತ್ತಲೇ ಬಾಯಲ್ಲಿ ನೀರೂರಿಸುತ್ತದೆ. ಯಾರು ಪಳಗಿಸಿದರು ಮೊದಲು ಇವನ್ನು? ಮುಟ್ಟಿದರೆ ತುರಿಸುವ ಕೆಸು, ಬಾಯಿಗಿಡಲಾಗದಷ್ಟು ಕಪ್ಪಟೆ ಕಹಿ ಕಳಲೆಯನ್ನು ಇಷ್ಟು ರುಚಿಕಟ್ಟಾಗಿ ಉಣ್ಣಬಹುದು ಎಂದು…