ಝೆನ್ ಪ್ರಸಂಗ: ಅಂತಿಮ ಗುರಿ ಏನು?

ಒಂದಕ್ಕೊಂದು ಹತ್ತಿರದಲ್ಲಿದ್ದ ಉತ್ತರ ಮತ್ತು ದಕ್ಷಿಣ ಎಂಬ ಎರಡು ಝೆನ್ ಗುರುಕುಲಗಳಲ್ಲಿ ಹಲವಾರು ಮಕ್ಕಳೂ ಕಲಿಯುತ್ತಿದ್ದರು. ಗುರುಕುಲಗಳಲ್ಲಿ ಅತ್ಯಂತ ಮೇಧಾವಿ ಹುಡುಗರನ್ನು ಆಯ್ದು ಹೊರಗಿನ ಕೆಲಸಗಳಿಗೆ ನೇಮಿಸುತ್ತಿದ್ದರು.

ಅದೊಂದು ದಿನ ಉತ್ತರ ಗುರುಕುಲದ ಹುಡುಗನನ್ನು ಸಂಧಿಸಿದ ದಕ್ಷಿಣ ಗುರುಕುಲದ ಹುಡುಗ ಪ್ರಶ್ನಿಸಿದ, “ಎಲ್ಲಿಗೆ ಹೋಗೋದು ನೀನು?” ಉತ್ತರ ಗುರುಕುಲದ ಹುಡುಗ ಉತ್ತರಿಸಿದ, "ನನ್ನ ಕಾಲುಗಳು ಎಲ್ಲಿಗೆ ಕರೆದೊಯ್ಯುತ್ತವೆಯೋ ಅಲ್ಲಿಗೆ.”

Image

ಅದಕ್ಕೆ ಯಾರದ್ದೂ ಹಂಗಿಲ್ಲ

ಅಭಿನಂದನೆ ಹೇಳದಿದ್ದರೂ
ಮುಂಜಾವು ಮುನಿಸಿಕೊಂಡಿಲ್ಲ.
ಪ್ರತಿದಿನವೂ ಹೊತ್ತು ತರುತ್ತಿದೆ
ಹೊಸದೊಂದು ಆಹ್ಲಾದ.

ಹಗಲೆಲ್ಲ ಹರಿದು ಸುಸ್ತಾದ ನದಿ
ಮಲಗುವುದೇ ರಾತ್ರಿ ಕವದಿ ಹೊದ್ದು!
ಇಲ್ಲವಲ್ಲ,
ಮತ್ಯಾಕೆ ನಿಲ್ದಾಣ ನಮಗೆ ಮಾತ್ರ !?

ಈಗ್ಯಾರಿದ್ದಾರೆ ಚಂದ್ರನನ್ನು ನೋಡಿ
ಬೆಳದಿಂಗಳಲಿ ಪ್ರೇಮಿಸುವ ಪ್ರೇಮಿಗಳು
ಆದರೂ ಚಂದ್ರನಿಲ್ಲವೇ
ಮುಗುಳ್ನಗುತ್ತಾ !

ಅದೆಷ್ಟು ಜನ ಬೈದುಕೊಂಡಿಲ್ಲ.
ಅವಿರತವಾಗಿ ಸುರಿದ ಮಳೆಯ ಕಂಡು.
ಆದರೇನು ನೀರು ತನ್ನನ್ನೆ ತಾನು ಬಿಸಿಗೆ ಮೈಒಡ್ಡಿ
ಆವಿಯಾಗುವದ ನಿಲ್ಲಿಸಿತೇ!
ಮೋಡವಾಗಲು ಬೇಸರಿಸಿಕೊಂಡಿತೇ!
ಸುರಿಯಲಿಲ್ಲವೇ ಧಾರಾಕಾರವಾಗಿ ಮತ್ತೆ ಮತ್ತೆ!

ಯಕ್ಷಗಾನದ ಸವಿ ನೆನಪುಗಳ ಹೀಗೊಂದು ಗಝಲ್

ಎನಿತು ಅಂದ ಚೆಂದವೋ ಈ ಕಲೆ ನೋಡಿದೊಡನೇ ಮೈಮರೆತಿದ್ದೆವಲ್ಲಾ ಸಖಿ

ಸೆಳೆತವೇನೋ ಯಕ್ಷಗಾನದ ಹೆಸರು ಕೇಳಿದೊಡನೇ ಮನದೊಳಗೆ ಹರ್ಷಿಸುತ್ತಿದ್ದೆವಲ್ಲಾ ಸಖಿ

 

ಸಂಜೆಯ ಹೊತ್ತಲಿ ಬಯಲಾಟ ವೀಕ್ಷಣೆಗೆ ಕಾದು ಕುಳಿತಿರುವ ಪರಿ ನೆನಪಿದೆಯೇ

ಚೌಕಿಯ ಒಳಗ್ಹೋಗಿ ಮೆಲ್ಲಗೆ ವೇಷಭೂಷಣಗಳ ಪ್ರೇಮದಿಂ ಸ್ಪರ್ಶಿಸುತ್ತಿದ್ದೆವಲ್ಲಾ ಸಖಿ

ಕನ್ನಡ ಭಾಷೆ - ಬದುಕು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಜಿ.ಸಿದ್ದರಾಮಯ್ಯ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ: ೨೦೧೯

ಪ್ರೊ. ಎಸ್. ಜಿ.ಸಿದ್ಧರಾಮಯ್ಯ ಅವರು ಕನ್ನಡ ಕಾವ್ಯಲೋಕದ ನೆಲದನಿಯ ಸಂವೇದನೆ. ಅವರ ಕಾವ್ಯಕಾರಣದ ದೇಸಿ ನುಡಿಗಟ್ಟುಗಳು ಕನ್ನಡ ಸಾಹಿತ್ಯದ ಕಾವ್ಯ ತೆನೆಯನ್ನು ಸದಾ ಹಸಿರಾಗಿಡುವುದರಲ್ಲಿ ಸಾವಯವ ಸಂಬಂಧವನ್ನು ಹೊಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದು ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಸಿದ್ಧರಾಮಯ್ಯನವರು ರಾಜ್ಯದ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿಯೂ, ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕವನ, ನಾಟಕ, ವಿಮರ್ಶೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿರುವ ಸಿದ್ಧರಾಮಯ್ಯ ಅವರು ಕ್ರಿಯಾಶೀಲ ಹಾಗೂ ಸೃಜನಾತ್ಮಕ ಬರವಣಿಗೆಯ ಕಣಜ. ಅವರ ಬರವಣಿಗೆಗಾಗಿ ಪು.ತಿ.ನ.

ಗೀತಾಮೃತ - 13

*ಅಧ್ಯಾಯ ೪*

*ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹ:/*

*ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್//೨೧//*

Image

ಸಾಮಾನ್ಯನ ಓದು - ಮಹಾಭಾರತದಲ್ಲಿ ಕೃಷ್ಣ ಮತ್ತು ಧರ್ಮರಾಯ

ಹಳೆಯ ತುಷಾರ ( ತಿಂಗಳ ಪತ್ರಿಕೆ ) ಒಂದನ್ನು ಓದುತ್ತಿದ್ದೆ. ಅದರಲ್ಲಿ ಮಹಾಭಾರತ ಕುರಿತಾದ ಲಕ್ಷ್ಮೀಶ ತೋಳ್ಪಾಡಿಯವರ ಒಂದು ಲೇಖನ ಕಂಡಿತು. ಅದು ಮುಂದಿನ ಸಂಚಿಕೆಯಲ್ಲಿ ಮುಂದುವರಿದದ್ದು , ಸದ್ಯ ಆ ಸಂಚಿಕೆಯು ನನ್ನಲ್ಲಿತ್ತು. 

ಮಹಾಭಾರತದಲ್ಲಿ ಕೃಷ್ಣ ಮತ್ತು ಧರ್ಮರಾಜನ ಕುರಿತಾಗಿ ಈ ಲೇಖನ ಇತ್ತು. ಕೃಷ್ಣನು ಸಾಕ್ಷಾತ್ ಕಾಲನೇ ಆಗಿದ್ದು ಲೋಕದ ನಾಶಕ್ಕೆ ಕಾರಣ ಎಂದು ಸ್ವತಃ ಹೇಳಿಕೊಂಡಿದ್ದಾನೆ. ಅವನ ಪಾಲಿಗೆ ಮಹಾಭಾರತದಲ್ಲಿ ಬರುವ 14 ಅಕ್ಷೋಹಿಣಿ ಸೈನ್ಯದಷ್ಟು ಜನರ ಸಾವು ಸಹಜ. ಅವನ ಪಾಲಿಗೆ ಎಲ್ಲರೂ ಈ ಸರ್ವನಾಶದ ನೆಪ ಮಾತ್ರರು, ಕೇವಲ ನಿಮಿತ್ತರು. ಇದೆಲ್ಲ ಆಗಬೇಕಾದದ್ದೇ ಎಂಬ ನಿರ್ಲಿಪ್ತತೆ ಅವನಲ್ಲಿ ಇದೆ.

ಹಾಗೇ ಸುಮ್ಮನೇ...!

*ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ. ಅದು ಉಪ್ಪನ್ನು ಹೀರ್ಕೊಳುತ್ತೆ.*

ನಮಗೂ ಹೀಗೊಬ್ಬ ಆಪತ್ಭಾಂಧವ ಇದ್ದಿದ್ರೆ ಚೆನ್ನಾಗಿರೋದಲ್ವಾ, ಸಾಲದ ಹೊರೆಯೇರಿದಾಗ ತೀರ್ಸೋಕೆ.

 

*ಈರುಳ್ಳಿ ಕತ್ತರಿಸಿ ನೀರಲ್ಹಾಕಿ ಹೆಚ್ಚಿದರೆ ಕಣ್ಣೀರು ಬರಲ್ಲ.*

Image

ರಾಬಿನ್ ಹುಡ್ ಕಥೆಗಳಲ್ಲಿ ಸತ್ಯ ಎಷ್ಟು?

ಬಾಲ್ಯದಲ್ಲಿ ನಾವು ರಾಮಾಯಣ, ಮಹಾಭಾರತ ಕಥೆಗಳ ಜೊತೆಗೆ ಕೆಲವು ಇಂಗ್ಲೀಷ್ ಕಥೆಗಳನ್ನೂ ಕೇಳುತ್ತಾ ಬೆಳೆದಿದ್ದೇವೆ. ಅವುಗಳಲ್ಲಿ ಪ್ರಮುಖವಾದದ್ದು ರಾಬಿನ್ ಹುಡ್. ಇವನು ಕಾಡಿನಲ್ಲಿ ವಾಸಿಸುತ್ತಾ, ಶ್ರೀಮಂತರ ಸಂಪತ್ತನ್ನು ದರೋಡೆ ಮಾಡುತ್ತಾ ಅವುಗಳನ್ನು ಬಡವರಿಗೆ ಹಂಚುತ್ತಿದ್ದ ದಯಾಮಯಿ. ಆದರೆ ಯಾವತ್ತೂ ರಾಜನ ಸೈನಿಕರಿಗೆ ಅಥವಾ ಕೋತ್ವಾಲರ ಕೈಗೆ ಸಿಗುತ್ತಲೇ ಇರಲಿಲ್ಲ. ರಾಬಿನ್ ಹುಡ್ ಕಥಾನಕವನ್ನು ಕೇಳುವಾಗ ಈಗಲೂ ರೋಮಾಂಚನವಾಗುತ್ತದೆ. ನಿಜವಾಗಿಯೂ ರಾಬಿನ್ ಹುಡ್ ಎಂಬ ವ್ಯಕ್ತಿ ಜೀವಂತವಾಗಿದ್ದನೇ? ಅಥವಾ ಕಲ್ಪನಾ ಲೋಕದ ವ್ಯಕ್ತಿಯೇ? ಹಲವಾರು ಗೊಂದಲಗಳಿವೆ. ಕೆಲವರು ರಾಬಿನ್ ಹುಡ್ ಎಂಬುದು ಅವನ ನಿಜನಾಮಧೇಯವಲ್ಲ. ನಿಜ ಹೆಸರು ಬೇರೆಯೇ ಇರಬೇಕು.

Image