ಒಂದು ನೀತಿಕಥೆ - ಇಬ್ಬರು ರಾಜರು

ಒಮ್ಮೆ ಇಬ್ಬರು ನೆರೆ ಹೊರೆಯ ರಾಜರು ರಥದಲ್ಲಿ ಪ್ರಯಾಣಿಸುತ್ತ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಎದಿರಾಗುತ್ತಾರೆ. ಒಬ್ಬರು ಮುಂದೆ ಹೋಗಬೇಕಾದರೆ, ಇನ್ನೊಬ್ಬ ರಾಜನು ತನ್ನ ರಥವನ್ನು ಹಿಂತೆಗೆಯಬೇಕು. ಆದರೆ ಇಬ್ಬರು ರಾಜರೂ ಸಹ ರಥವನ್ನು ಹಿಂದೆಗೆಯಲು ಸಿದ್ಧರಿರಲಿಲ್ಲ. ಕೊನೆಗೆ ಇಬ್ಬರ ರಾಜರ ರಥದ ಸಾರಥಿಯರು ಒಂದು ಒಪ್ಪಂದಕ್ಕೆ ಬಂದರು. ಇಬ್ಬರೂ ತಮ್ಮ ರಾಜನು ಮಾಡಿದ ಸತ್ಕಾರ್ಯಗಳನ್ನು ಕುರಿತು ಹೇಳುವುದು. ಯಾವ ರಾಜನು ಹೆಚ್ಚಿನ ಸತ್ಕಾರ್ಯಗಳನ್ನು ಮಾಡಿರುತ್ತಾರೋ ಅಂತಹ ರಾಜನು ಮುಂದೆ ಹೋಗುವುದು. ಇನ್ನೊಬ್ಬ ರಾಜನು ರಥವನ್ನು ಹಿಂತೆಗೆದುಕೊಳ್ಳುವುದು.

Image

ಒಂದು ಒಳ್ಳೆಯ ನುಡಿ (20) - ತಪ್ಪು ಮಾಡದವರು…

ತಪ್ಪು ಮಾಡದವರು ಯಾರಾದರೂ ಇದ್ದಾರೆಯೇ ಎಂದು ಕೇಳಿದರೆ, ಸಾವಿಲ್ಲದ ಮನೆಯ ಸಾಸಿವೆ ಕಾಳು ಹುಡುಕಿದಂತೆ ಆದೀತು. ನಮ್ಮ ಬದುಕಿನ ದೀರ್ಘ ಹಾದಿಯಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ *ತಪ್ಪುಗಳು* ಗೊತ್ತಿದ್ದೋ, ಗೊತ್ತಿಲ್ಲದೆಯೋ ಆಗಿಬಿಡುತ್ತದೆ. ಯಾರು ತಪ್ಪನ್ನು ತಿದ್ದಿ ಮುಂದೆ ಆಗದ ಹಾಗೆ ನೋಡಿಕೊಳ್ಳುತ್ತಾನೋ ಅವನು ಜಾಣ. ಗೊತ್ತಿದ್ದೂ ಮತ್ತೆ ಮತ್ತೆ ತಪ್ಪುಗಳನ್ನು ಎಸಗುವವ ಮೂರ್ಖರ ಸಾಲಿಗೆ ಸೇರುವವ. ತನ್ನ *ಭವಿಷ್ಯ*ಕ್ಕೆ ತಾನೇ ಕಲ್ಲು ಹಾಕಿಕೊಂಡ ಹಾಗೆ.

Image

ಎರಡು ಟೆಡ್ದಿ ಕರಡಿಗಳ ಕಿತಾಪತಿ

ಟೋರಾ ಮತ್ತು ಬೋರಾ ಎಂಬ ಎರಡು ಟೆಡ್ದಿ ಕರಡಿಗಳು ಜೀವದ ಗೆಳೆಯರು. ಅವರಿಬ್ಬರೂ ಸ್ವೀಟಿ ಎಂಬ ಪುಟ್ಟ ಹುಡುಗಿಯೊಂದಿಗೆ ಇದ್ದರು. ಅವಳು ಅವರನ್ನು ತನ್ನ ಹಾಸಿಗೆಯಲ್ಲೆಯೇ ಇಟ್ಟಿದ್ದಳು.

ಅವಳ ತಲೆದಿಂಬುಗಳನ್ನೇರಿದರೆ ಕಿಟಕಿಯ ಮೂಲಕ ಅವುಗಳಿಗೆ ಹೊರಗಿನ ಉದ್ಯಾನ ಕಾಣಿಸುತ್ತಿತ್ತು. ಹಂಗಾಮಿನಿಂದ ಹಂಗಾಮಿಗೆ ಬಣ್ಣ ಬದಲಾಯಿಸುವ ಆ ಉದ್ಯಾನದ ಗಿಡಗಳನ್ನು ನೋಡುವುದೆಂದರೆ ಅವುಗಳಿಗೆ ಖುಷಿಯೋ ಖುಷಿ.

ಚಳಿಗಾಲದ ಒಂದು ಮುಂಜಾವದಲ್ಲಿ ಸ್ವೀಟಿ ಹಾಸಿಗೆಯಿಂದ ಎದ್ದು, ಪರದೆಗಳನ್ನು ಪಕ್ಕಕ್ಕೆ ಸರಿಸಿ, ಕಿಟಕಿಯಿಂದ ಹೊರಗೆ ನೋಡುತ್ತಾ “ಓ, ಹಿಮ ಬೀಳುತ್ತಿದೆ” ಎಂದು ಕೂಗಿದಳು.

Image

ಬಹು ಉಪಯೋಗಿ ರೋಸ್ ಮೇರಿ ಸಸ್ಯ

ರೋಸ್ ಮೇರಿ ಸಸ್ಯದ ಹೆಸರನ್ನು ಬಹಳಷ್ಟು ಮಂದಿ ಕೇಳಿಯೇ ಇರುತ್ತೀರಿ. ಇದನ್ನು ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಬಹಳಷ್ಟು ಮಂದಿ ಇದರ ಎಣ್ಣೆ ಹಾಗೂ ಹುಡಿಯನ್ನು ನೋಡಿರಲೂ ಬಹುದು. ಆದರೆ ಗಿಡವನ್ನು, ಹೂವನ್ನು ನೋಡಿರುವವರು ಕಮ್ಮಿ. ರೋಸ್ ಮೇರಿ ಗಿಡದ ಬಗ್ಗೆ ಹಾಗೂ ಅದರ ಉಪಯೋಗಗಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯೋಣ.

Image

ಸರ್ವಜ್ಞನ ದೃಷ್ಟಿಯಲ್ಲಿ ಸಜ್ಜನ - ದುರ್ಜನ

ಮಾನವ ಜನ್ಮ ಬಹಳ ದೊಡ್ಡದು. ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯಗಳಿಗನುಸಾರವಾಗಿ, ಈ ಜನ್ಮವೆತ್ತಿದವರು ನಾವುಗಳು. ನಮ್ಮ ಗುಣಾವಗುಣಗಳಿಗೂ, ನಾವೆಸಗಿದ ಕಾರ್ಯಗಳೇ ಕಾರಣ. ವಿವೇಕಿಗಳಾದವರು, ಜ್ಞಾನವಂತರು, ಉತ್ತಮರು, ವಿದ್ಯಾವಂತರು ತಮ್ಮ ತಮ್ಮ ಗುಣದೋಷಗಳನ್ನು ಅರಿತು, ಇನ್ನೂ ಒಳ್ಳೆಯವರಾಗಲು ಪ್ರಯತ್ನಿಸಬೇಕು. *ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ* ಅವರ ಸಹವಾಸವು ನಮ್ಮಲ್ಲಿ ಪರಿವರ್ತನೆಯನ್ನು ಮಾಡಬಹುದು. ಸತ್ಸಂಗದಿಂದ ನಾವು ಪರಿಶುದ್ಧ ಬದುಕನ್ನು ಕಟ್ಟಿಕೊಳ್ಳಬಹುದು.

ಸತ್ಯರಾ ನುಡಿ ತೀರ್ಥ ನಿತ್ತರಾ ನಡೆ ತೀರ್ಥ

Image

ಪಿಂಚ್ ಆಫ್ ಪ್ರಪಂಚ

ಪುಸ್ತಕದ ಲೇಖಕ/ಕವಿಯ ಹೆಸರು
ರಂಗಸ್ವಾಮಿ ಮೂಕನಹಳ್ಳಿ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦. ಮುದ್ರಣ: ೨೦೨೦

ಪಿಂಚ್ ಆಫ್ ಪ್ರಪಂಚ ಪುಸ್ತಕವು ರಂಗಸ್ವಾಮಿ ಮೂಕನಹಳ್ಳಿ ಇವರ ಒಂಬತ್ತನೇ ಪ್ರಕಟಿತ ಪುಸ್ತಕ. ತುಮಕೂರು ಜಿಲ್ಲೆಯ ಸಿರಾದಲ್ಲಿ ಇವರ ಜನನ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಿರಾ ಮತ್ತು ಬೆಂಗಳೂರಿನಲ್ಲಿ. ಇಪ್ಪತ್ತಮೂರನೆಯ ವಯಸ್ಸಿಗೆ ದುಬಾಯಿ ಪ್ರಯಾಣ. ನಂತರ ಕೈಬೀಸಿ ಕರೆದದ್ದು ಬಾರ್ಸಿಲೋನಾ. ಇಂಗ್ಲೆಂಡ್ ನ ಇನ್ಸ್ಟಿಟ್ಯೂಟ್ ಆಫ್ ಇಂಟರ್ನಲ್ ಆಡಿಟರ್ಸ್ ಸಂಸ್ಥೆಯ ಮೂಲಕ ಸರ್ಟಿಫೈಡ್ ಇಂಟರ್ನಲ್ ಆಡಿಟರ್ ಪದವಿ. ಇದುವರೆಗೆ ಅರವತ್ತು ದೇಶಗಳ ಪ್ರಯಾಣ, ಪ್ರವಾಸ. ಆ ದೇಶಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ನಿರಂತರ ಲೇಖನ ಕೃಷಿ ಮಾಡಿ ಇದುವರೆಗೆ ಪ್ರಕಟಿಸಿರುವ ಪುಸ್ತಕಗಳು ಎಂಟು. 

ನಮ್ಮ ಹೆಮ್ಮೆಯ ಭಾರತ (ಭಾಗ 29 - 30)

೨೯.ಜಗತ್ತಿನ ಅಪರೂಪದ ದೈತ್ಯ ಪ್ರಾಣಿ ಏಷ್ಯಾದ ಆನೆ
ಅತ್ಯಧಿಕ ಸಂಖ್ಯೆಯ ಏಷ್ಯಾದ ಆನೆಗಳು ಭಾರತದಲ್ಲಿವೆ. ಗಾತ್ರದಲ್ಲಿ ಇವು ಆಫ್ರಿಕಾದ ಆನೆಗಳಿಗಿಂತ ಸಣ್ಣವು. ಇವುಗಳ ಸೊಂಡಿಲುಗಳ ತುದಿಯಲ್ಲಿರುವ ಪುಟ್ಟ ಬೆರಳಿನಂತಹ ಭಾಗದಿಂದ ಇವು ಅತ್ಯಂತ ಸಣ್ಣ ವಸ್ತುಗಳನ್ನೂ ಎತ್ತಿಕೊಳ್ಳಬಲ್ಲವು. ಏಷ್ಯಾದ ಗಂಡಾನೆಗಳಿಗೆ ಮಾತ್ರ ಎರಡೆರಡು ದಂತಗಳಿವೆ.

ಈ ಆನೆಗಳು ದಕ್ಷಿಣ ಭಾರತದ ಮತ್ತು ಈಶಾನ್ಯ ಭಾರತದ ಕಾಡುಗಳಲ್ಲಿ ಗುಂಪುಗುಂಪಾಗಿ ವಾಸ ಮಾಡುತ್ತವೆ. ಇವು ಸಣ್ಣ ಮರಗಳನ್ನೂ ದೊಡ್ಡ ಮರಗಳ ಕೊಂಬೆಗಳನ್ನೂ ನೆಲಕ್ಕೆಳೆದು ಎಲೆಗಳನ್ನು ತಿನ್ನುತ್ತವೆ. ಕಾಡಿನಲ್ಲಿ ಇವು ಸಾಗಿದ ದಾರಿ ಇತರ ಪ್ರಾಣಿಗಳಿಗೂ ದಾರಿಯಾಗುತ್ತದೆ. "ಆನೆ ಸಾಗಿದ ದಾರಿ" ಎಂಬ ನಾಣ್ಣುಡಿಯೇ ಬಳಕೆಯಲ್ಲಿದೆ.

Image

ಬದುಕಿನಲ್ಲಿ ಬಾಗುವುದನ್ನು ಕಲಿಯಿರಿ

ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ. ಆದರೆ ಪ್ಲಾಸ್ಟಿಕ್ ಕೊಡ ಹಾಗಲ್ಲ. ನೀರು ತುಂಬಿಸಲು ಪ್ರಯಾಸ ಪಡಬೇಕು. ಬೇಗನೇ ಬಾಗುವುದೂ ಇಲ್ಲ. ಎತ್ತಿ ಕುಕ್ಕಿ ತುಂಬಿಸಬೇಕು. ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ. ಯಾವುದು ಬಾಗುತ್ತದೆಯೋ. ಅದು ಪೂರ್ಣ ತುಂಬಿಕೊಳ್ಳುತ್ತದೆ. ಯಾವುದು ಬಾಗುವುದಿಲ್ಲವೊ ಅದು ಅಪೂರ್ಣವೇ.

Image