ಮಖಾನ (ತಾವರೆ ಬೀಜ) ಮಸಾಲಾ

Image

ಮಿಕ್ಸಿ ಜಾರ್ ಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಟೊಮೆಟೋ, ಬೆಳ್ಳುಳ್ಳಿ, ಶುಂಠಿ, ಗೇರುಬೀಜ, ಸ್ವಲ್ಪ ನೀರು ಸೇರಿಸಿ ನಯವಾಗಿ ಮಸಾಲೆ ರುಬ್ಬಿರಿ. ತಾವರೆ ಬೀಜಗಳನ್ನು ಸ್ವಲ್ಪ ಹುರಿದು ತೆಗೆದಿರಿಸಿ.

ಬೇಕಿರುವ ಸಾಮಗ್ರಿ

ತಾವರೆ ಬೀಜ ಅಥವಾ ಮಖಾನ ಬೀಜಗಳು ೧ ಕಪ್, ದೊಡ್ಡ ನೀರುಳ್ಳಿ ೧, ದೊಡ್ಡ ಟೋಮೆಟೋ ೧, ಗೇರುಬೀಜಗಳು ೧೦, ಬೆಳ್ಳುಳ್ಳಿ ಎಸಳು ೪,  ಶುಂಠಿ ತುಂಡು ಸಣ್ಣದು, ಕೊತ್ತಂಬರಿ ಸೊಪ್ಪು ಸ್ವಲ್ಪ, ಜೀರಿಗೆ ೧ ಚಮಚ, ಅರಶಿನ ಹುಡಿ ೧/೨ ಚಮಚ, ಮೆಣಸಿನ ಹುಡಿ ೧ ಚಮಚ, ಕೊತ್ತಂಬರಿ ಹುಡಿ ೧ ಚಮಚ, ಗರಂ ಮಸಾಲ ಹುಡಿ ೧/೨ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಸಕ್ಕರೆ ಸ್ವಲ್ಪ, ತುಪ್ಪ ೨-೩ ಚಮಚ.

ಒಂದು ಒಳ್ಳೆಯ ನುಡಿ (15) - ನಿಶ್ಚಿತ ಗುರಿ

*ಗುರಿ ಬೇಕು ನಡೆಯಲ್ಲಿ

ಗುರಿ ಬೇಕು ನುಡಿಯಲ್ಲಿ

ಛಲ ಬೇಕು ಸಾಧನೆಯ ಹಾದಿಯಲ್ಲಿ*

ಈ ಮೂರು ಸಾಲುಗಳಲ್ಲಿ ಬದುಕಿನ ತತ್ವವೇ ಅಡಗಿದೆ. ವಾಮನನ ಮೂರು ಹೆಜ್ಜೆಗಳಿಗೆ ಇದನ್ನು ಹೋಲಿಸಬಹುದು.ಈ ಮೂರರಲ್ಲಿ ಲೋಕಾನುಭವವೇ ಅಡಗಿದೆ.

Image

ಸಿದ್ಧಿದಾತ್ರಿದೇವಿ

ನವರಾತ್ರಿಯ ವೈಭವದಿ ಕಣ್ಮನ ಸೆಳೆಯುತ

ಭವರೋಗ ತಡೆವಳು ವಿಶ್ವಾಪ್ರಿತ

ಭವಸಾಗರ ತರಣಿ ನಾನಾಲಂಕಾರ ಭೂಷಿತೆ

ನವರಾಗ ಕರುಣಿಸೋ ವಿಶ್ವವಿತಾ...

 

ಶಂಕಚಕ್ರಗದಾಪದ್ಮ ಶಿರ್ಮಮುಖಿ ಶಿವಪತ್ನಿ

ಸೋಮಾರಿ ಟೆಡ್ಡಿ ಕರಡಿ

ಸೋಮಾರಿ ಟೆಡ್ದಿ ಕರಡಿಗೆ ಭಾರೀ ಖುಷಿ ಕೊಡುವುದು ಯಾವುದು ಗೊತ್ತೇ? ಗುಂಡಣ್ಣನ ಹಾಸಿಗೆಯಲ್ಲಿ ಬೆಚ್ಚಗೆ ಮಲಗುವುದು. ಪ್ರತಿ ದಿನ ಬೆಳಗ್ಗೆ ಗಡಿಯಾರದ ಅಲಾರಮ್ ಸದ್ದು ಮಾಡಿದೊಡನೆ ಗುಂಡಣ್ಣ ಹಾಸಿಗೆಯಿಂದ ಜಿಗಿದು, ಕಿಟಕಿಯ ಪರದೆಗಳನ್ನು ಪಕ್ಕಕ್ಕೆ ಸರಿಸುತ್ತಿದ್ದ.

ಸೂರ್ಯನ ಬೆಳಕು ಕಿಟಕಿಯಿಂದ ತೂರಿ ಬಂದು ಕೋಣೆಯನ್ನೆಲ್ಲ ಬೆಳಗುತ್ತಿದ್ದಂತೆ, “ಆಹಾ, ಎಷ್ಟು ಸುಂದರ ಮುಂಜಾನೆ" ಎಂದು ಹೇಳುತ್ತಾ ಅವನು ತನ್ನ ಕೈಗಳನ್ನು ಮೇಲಕ್ಕೆತ್ತಿ ಜೋರಾಗಿ ಉಸಿರೆಳೆದುಕೊಳ್ಳುತ್ತಿದ್ದ. "ನಿನಗೆ ತಲೆಕೆಟ್ಟಿದೆ” ಎಂದು ಗೊಣಗುತ್ತಾ ಟೆಡ್ಡಿ ಕರಡಿ ಗುಂಡಣ್ಣನ ಹಾಸಿಗೆಯ ಕ್ವಿಲ್ಟಿನೊಳಗೆ ಇನ್ನಷ್ಟು ತೂರಿಕೊಳ್ಳುತ್ತಿತ್ತು. ನಂತರ ಬಿಸಿಲೇರುವ ವರೆಗೂ ಟೆಡ್ಡಿ ಕರಡಿ ಆ ಹಾಸಿಗೆಯಲ್ಲಿಯೇ ಗೊರಕೆ ಹೊಡೆಯುತ್ತಾ ಬಿದ್ದುಕೊಳ್ಳುತ್ತಿತ್ತು.

Image

ಪೂರ್ಣತೆಯಲ್ಲೂ ಶೂನ್ಯತೆಯ ಕಾಣುವ ಖಿನ್ನತೆ

ಕ್ಷಣಮಾತ್ರದಲ್ಲಿ ಇಡೀ ಜಗತ್ತನ್ನೇ ಸುತ್ತಿ ಬರುವಷ್ಟು ವೇಗ ಪಡೆದಿರುವುದು ಮನಸ್ಸು ಮಾತ್ರ. ಭೂಮಿಯ ಯಾವುದೋ ಮೂಲೆಯಲ್ಲಿದ್ದ ಮನುಷ್ಯ ಚಂದ್ರಯಾನ, ಮಂಗಳಯಾನ ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ ಮತ್ತೆ ಬಂದು ಸ್ವಸ್ಥಾನವನ್ನು ಸೇರಿಬಿಡುತ್ತಾನೆ. ಈ *ಮನಸ್ಸು ಸರಿಯಾಗಿದ್ದರೆ ಸ್ವರ್ಗವನ್ನೇ ಸೃಷ್ಟಿಸಬಲ್ಲದು; ಕೆಟ್ಟರೆ ಘೋರ ನರಕವನ್ನೇ ಸೃಷ್ಟಿಸುತ್ತದೆ.* ಅದಕ್ಕೇ ಆಂಗ್ಲ ಬರಹಗಾರ ಮಿಲ್ಟನ್ ಹೇಳುತ್ತಾರೆ. *The mind in its own place and itself can make a heaven of hell and hell of heaven* ಎಂದು.

Image

ಕೂರ್ಗ್ ರೆಜಿಮೆಂಟ್ -ಬಂದೂಕು ಹಿಡಿದವರ ನಾಡಿಮಿಡಿತ

ಪುಸ್ತಕದ ಲೇಖಕ/ಕವಿಯ ಹೆಸರು
ಮೇಜರ್ ಡಾ. ಕುಶ್ವಂತ್ ಕೋಳಿಬೈಲು (ನಿ)
ಪ್ರಕಾಶಕರು
ಮೈತ್ರಿ ಪ್ರಕಾಶನ, ಬನಶಂಕರಿ, ಬೆಂಗಳೂರು-೫೬೦೦೫೦
ಪುಸ್ತಕದ ಬೆಲೆ
ಬೆಲೆ: ರೂ. 100.00 ಮುದ್ರಣ: ಸೆಪ್ಟೆಂಬರ್ 2020

‘ಕೂರ್ಗ್ ರೆಜಿಮೆಂಟ್’ ಕಥಾ ಸಂಕಲನವು ನಿವೃತ್ತ ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಇವರ ಮೊದಲ ಕೃತಿ. ಕೊಡಗಿನ ಭಾಗಮಂಡಲದಲ್ಲಿ ಜನಿಸಿದ ಇವರು ತಮ್ಮ ಬಾಲ್ಯವನ್ನು ಭಾಗಮಂಡಲದಲ್ಲೇ ಕಳೆದರು. ನಂತರದ ಶಾಲಾ ದಿನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮುಗಿಸಿದರು. ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಕುಶ್ವಂತ್, ೨೦೦೯ರಲ್ಲಿ ಭಾರತೀಯ ಸೇನೆಯ ಆರ್ಮಿ ಮೆಡಿಕಲ್ ಕೋರ್ ವಿಭಾಗಕ್ಕೆ ಸೇರಿಕೊಳ್ಳುತ್ತಾರೆ. ಭಾರತದ ಗಡಿಭಾಗಗಳಲ್ಲಿ ಇವರು ಸಲ್ಲಿಸಿದ ಸೇವೆ ಅನನ್ಯ. ೨೦೧೯ರಲ್ಲಿ ಮಕ್ಕಳ ತಜ್ಞರ ಕಲಿಕೆಯನ್ನು ಮುಗಿಸಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ.

ಮಹಾಗೌರಿಗೆ ನಮಿಸೋಣ

ಅಂದದ ಚಂದದ ಗೌರಿಯ ನೋಡಿರಿ

ಬಾಲ್ಯದಿ ಹೊಳೆಯುವ ಮಹಾಗೌರಿ

ಸುಂದರ ಸುಗುಣಿಯು ದಂಥದ ಬೊಂಬೆಯ

ಮಿಂಚುವ ಅರಗಿಣಿ ಚೆಲುವಸಿರಿ...

 

ಅಷ್ಟಮಿ ದಿನದಲಿ ಪೂಜಿಪ ಸರ್ವರು

ಬಾಳಿಗೊಂದು ಚಿಂತನೆ (9) - ಸಮಯ

ನಮ್ಮ ಊರಿನಲ್ಲಿ ಚಲಿಸುವ ಯಾವುದೇ ಬಸ್ಸುಗಳು ಆಯಾ ಸಮಯಕ್ಕೆ ಸರಿಯಾಗಿ ಬರುತ್ತದೆ, ಹೋಗುತ್ತದೆ. ನಮಗೆಲ್ಲೋ ಹೊರಗೆ ಹೋಗಲಿದೆ ಎಂದಾದರೆ, ಆ ಬಸ್ಸಿನ ಸಮಯಕ್ಕೆ ಸರಿಯಾಗಿ ನಾವು ಹೋಗುತ್ತೇವೆ. ಒಂದು ನಿಮಿಷ ತಡವಾದರೂ ಬಸ್ಸು ಹೋಗಿರುತ್ತದೆ. *ಕಳೆದು ಹೋದ ಸಮಯ ನಮ್ಮ ಬದುಕಿನಲ್ಲಿ ಮತ್ತೆಂದೂ ಬರದು* ಗಡಿಯಾರದ ಮುಳ್ಳುಗಳು ಮುಂದೆ ಸಾಗುವುದು ಸತ್ಯ. ಆ ಸಾಗುವ ಮುಳ್ಳುಗಳೊಂದಿಗೆ ನಾವು ಸಹ ಸಾಗೋಣ, ನಮಗೆ ಬೇಕಾದ್ದನ್ನು ಸಾಧಿಸಿಕೊಳ್ಳೋಣ.

Image

ವಾಕಿಂಗ್‌ನ ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳಿ

ವಾಕಿಂಗ್‌ ಅಥವಾ ನಡಿಗೆಯಿಂದ ಹಲವು ಪ್ರಯೋಜನಗಳಿವೆ ಎಂದು ಹಲವರು ಹೇಳುತ್ತಾರೆ. ವಾಕಿಂಗ್‌ನ ಪ್ರಯೋಜನಗಳನ್ನು ತಿಳಿದಿದ್ದರೂ ಅನೇಕ ಜನರು ನಡೆಯುವುದನ್ನು ತಪ್ಪಿಸುತ್ತಾರೆ. ಆದರೆ ಇಂದಿನ ಜೀವನಶೈಲಿಯಲ್ಲಿ ವಾಕಿಂಗ್ ಬಹಳ ಅವಶ್ಯಕವಾಗಿದೆ. ಚುರುಕಾದ ವಾಕಿಂಗ್ ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ. ವೇಗವಾಗಿ ನಡೆಯುವುದರಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯ ಮತ್ತು ಕಡಿಮೆ ಸಮಯ ಉಳಿಯಬೇಕಾಗುತ್ತದೆ.

Image

ಇದು ವಿಚಿತ್ರ ಉಯಿಲುಗಳ ಲೋಕವಯ್ಯಾ!

ಉಯಿಲು ಅಂದರೆ ವಿಲ್ (Will) ಈಗೀಗ ಬಹಳಷ್ಟು ಪ್ರಚಲಿತದಲ್ಲಿರುವ ವಿಷಯ. ಒಬ್ಬ ವ್ಯಕ್ತಿ ತನ್ನ ಮರಣಾನಂತರ ಏನೆಲ್ಲಾ ಕಾರ್ಯಗಳು ಆಗಬೇಕು, ಆಸ್ತಿ ಹೇಗೆ ವಿಲೇವಾರಿಯಾಗಬೇಕು, ಹಣ ಯಾರಿಗೆ ಸಿಗಬೇಕು, ಎಷ್ಟು ಪಾಲು ಹಂಚಬೇಕು ಎಂಬೆಲ್ಲಾ ವಿಷಯಗಳನ್ನು ತನ್ನ ಜೀವಿತಾವಧಿಯಲ್ಲಿ ಬರೆದು ಇಡುವ ಮರಣ ಪತ್ರವೇ ಉಯಿಲು ಅಥವಾ ವಿಲ್. ಮಾನಸಿಕವಾಗಿ ಸ್ವಸ್ಥವಿರುವ ವ್ಯಕ್ತಿ ತನಗೆ ಬೇಕಾದ ರೀತಿಯಲ್ಲಿ ಉಯಿಲು ಬರೆದು ಇಬ್ಬರು ಸಾಕ್ಷಿಗಳ ಸಹಿ ಮಾಡಿಸಿದರೆ ಉಯಿಲು ಅಧಿಕೃತವಾಗುತ್ತದೆ. ಅದನ್ನು ನೊಂದಾಯಿಸಿದರೆ ಇನ್ನೂ ಉತ್ತಮ. ಸಾಕ್ಷಿಗಳಿಗೆ ಉಯಿಲಿನಲ್ಲಿ ಬರೆದ ವಿಷಯ ತಿಳಿಸಬೇಕೆಂದೇನೂ ಇಲ್ಲ. ಆ ವ್ಯಕ್ತಿ ತಾನು ಬರೆದ ಅಥವಾ ಬರೆಸಿದ ಉಯಿಲನ್ನು ತನ್ನ ಜೀವಿತಾವಧಿಯಲ್ಲಿ ಎಷ್ಟು ಸಲ ಬೇಕಾದರೂ ಬದಲಿಸಬಹುದು.

Image