ನನ್ನಂತರಂಗದ ಪಿಸುಮಾತ ಆಲಿಪೆಯಾ

ತಿಳಿಮುಗಿಲ ತೊಟ್ಟಿಲಲಿ ಮಲಗಿಹ 

ಹೊಳೆವ ಚಂದಿರನ ಬೆಳಕಿನಲಿ

ಚಳಿಯ ಪಿಸುಮಾತ ಶೃಂಗಾರ ಹೆಚ್ಚಿದೆ

ಕಳೆಯಲಿ ಮಿಂಚಿವೆ ಬೆರಗಿನಲಿ...

 

ಪ್ರೀತಿಯ ಕರೆಯನು ಆಲಿಸಿ ತಂದೆನು

ಪ್ರತಿದಿನ ಮೊಸರು ಸೇವನೆಯ ಲಾಭಗಳೇನು?

ನೀವು ದಿನವೂ ಮೊಸರು ಸೇವಿಸುತ್ತೀರಿ. ಅದರಲ್ಲೂ ಮಧ್ಯಾಹ್ನ ಸೇವಿಸಿ. ಮೊಸರು ಸೇವಿಸಿದರೆ ದೇಹಕ್ಕೆ ತಂಪಾಗುತ್ತದೆ ಎನ್ನುತ್ತಾರೆ. ಆದರೆ ಮೊಸರು ಹೀಟ್, ಮಜ್ಜಿಗೆ ತಂಪು. ದೇಹ ಹೀಟ್ ಅಥವಾ ಕೂಲ್ ಮಾಡುವ ಗುಣ ಅಷ್ಟೇ ಅಲ್ಲಾ ಮೊಸರಿನಿಂದ ತುಂಬಾನೇ ಉಪಯೋಗವಿದೆ. ರಾತ್ರಿ ವೇಳೆ ಮೊಸರು ಸೇವನೆ ಅಷ್ಟಾಗಿ ಆರೋಗ್ಯಕ್ಕೆ ಉತ್ತಮವಲ್ಲ. 

ದಿನವೂ ಮೊಸರು ಸೇವಿಸುವುದರಿಂದ ಹೃದಯ, ಹೊಟ್ಟೆ, ಹಾಗೂ ಚರ್ಮಕ್ಕೆ ಆಗುವ ಲಾಭಗಳು:

Image

ಬಾಳಿಗೊಂದು ಚಿಂತನೆ (7) - ಆರೋಗ್ಯ

ಮಾನವನು ಪ್ರಕೃತಿಯ ಅವಿಭಾಜ್ಯ ಅಂಗ. ನಮ್ಮ ಶರೀರ ಆರೋಗ್ಯವಾಗಿದ್ದಷ್ಟೂ ನಾವು ಚೇತೋಹಾರಿಗಳಾಗಿರಲು ಸಾಧ್ಯ. ಕವಿ ಕಾಳಿದಾಸ ಒಂದೆಡೆ *ಶರೀರ ಮಾಧ್ಯಂ ಖಲುಧರ್ಮ ಸಾಧನಂ* ಎಂದು ಬರೆದದ್ದು ಸತ್ಯ. ನಾವು ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿಯೂ ಆರೋಗ್ಯವಂತರಾಗಿರಬೇಕು. ದೇಹದ ಸಮತೋಲನ ತಪ್ಪಿದಾಗ, ನಿತ್ಯ ನಡೆಯುವ ಕ್ರಿಯೆಗಳಿಗೆ ಅಡಚಣೆಯಾದಾಗ *ಆರೋಗ್ಯ ಕೆಟ್ಟಿದೆ* ತೀರ್ಮಾನಕ್ಕೆ ಬರುತ್ತೇವೆ. ನಮ್ಮಲ್ಲಿ ಒಂದು ಅಂಧ ವಿಶ್ವಾಸವಿದೆ. ಹಣವಿದ್ದರೆ ಎಲ್ಲವನ್ನೂ ಕೊಂಡುಕೊಳ್ಳಬಹುದೆಂದು. ಆದರೆ ಆಯುಷ್ಯ ಮುಗಿದರೆ, ಏನೂ ಮಾಡಲಾಗದು. ಹಣ, ಶ್ರೀಮಂತಿಕೆ, ದರ್ಪ, ಅಹಂ ನಮ್ಮನ್ನು ಖಂಡಿತಾ ಉಳಿಸಲಾರದು.

Image

ಮಹಿಳಾ ಸ್ವಾಭಿಮಾನದ ಪ್ರತೀಕ - ಸೀತವ್ವ ಜೊಡ್ಡತಿ

೨೦೧೮ರ ತನಕ ಸೀತವ್ವ ಜೊಡ್ಡತಿ ಎಂಬ ಮಹಿಳೆಯ ಹೆಸರು ಬಹುತೇಕ ಅಪರಿಚಿತವಾಗಿತ್ತು. ಆದರೆ ಆ ವರ್ಷ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಪದ್ಮ ಪ್ರಶಸ್ತಿಯ ಪಟ್ಟಿಯಲ್ಲಿ ಕರ್ನಾಟಕದ ಈ ಮಹಿಳೆಯ ಹೆಸರು ಸಮಾಜ ಸೇವೆಯ ಅಡಿಯಲ್ಲಿ ಇತ್ತು. ಬಹುತೇಕ ಮಂದಿಗೆ ಈ ಆಯ್ಕೆ ಹುಬ್ಬೇರಿಸಿರಬಹುದು. ಯಾರಪ್ಪಾ ಈ ಮಹಿಳೆ? ಏನು ಸಾಧನೆ ಮಾಡಿದ್ದಾರಂತೆ? ಎಂಬೆಲ್ಲಾ ಪ್ರಶ್ನೆಗಳು ಮನದಲ್ಲಿ ಕಾಡುತ್ತಿರಬಹುದು. 

Image

ರುಚಿಕರ, ಆರೋಗ್ಯದಾಯಕ ತಂಬುಳಿಗಳು

Image

೧. ಜೀರಿಗೆ ಮೆಣಸಿನ ಕಾಳಿನ ತಂಬ್ಳಿ:- ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಬೇಕಿದ್ದರೆ ಚೂರು ಬೆಲ್ಲ ಹಾಕಿ. ಛಳಿಗಾಲ, ಮಳೆಗಾಲದ ಸಮಯದಲ್ಲಿ ಸ್ವಲ್ಪ ಬಿಸಿಮಾಡಿ ಊಟಮಾಡಿ. ಜ್ವರ ಬಂದಾಗ ಒಳ್ಳೆಯದು.

೨. ಸಾಸಿವೆ ತಂಬ್ಳಿ:- ಕಾಯಿತುರಿ ಜೊತೆ ಸಾಸಿವೆ, ಚೂರು ಒಣಮೆಣಸಿನಕಾಯಿ ಹಾಕಿ ರುಬ್ಬಿ, ಮಜ್ಜಿಗೆ ಉಪ್ಪು ಹಾಕಿ. ಅಜೀರ್ಣ ಆದಾಗ ಒಳ್ಳೆಯದು.

ಬೇಕಿರುವ ಸಾಮಗ್ರಿ

ತಂಬುಳಿ ತಂಬುಳಿ ತಂಬ್ಳಿ ಇದ್ ಬಿಟ್ರೆ ಊಟ ಅಮೃತಕ್ಕೆ ಸಮಾನ. ಯಾರನ್ನಾದರೂ ಊಟಕ್ಕೆ ಕರುದಾದ್ರೆ ಒಂದ್ ಅನ್ನ- ತಂಬ್ಳಿ ಮಾಡ್ತೆ ಅಥವಾ ಅನ್ನ - ತಂಬ್ಳಿ ಉಂಡಕಂಡು ಹೋಗಲಕ್ಕು ಹೇಳಿ ಕರೆತೋ..ಕಡಿಮೆ ಸಾಮಗ್ರಿಲಿ ರುಚಿ ರುಚಿ ತಂಬ್ಳಿ ಮಾಡುಲಾಗ್ತು. ಅನ್ನಕ್ಕೆ ಮೊದಲು ಹಾಯ್ಕಂಡು ಉಣ್ಣೋ ತಂಬುಳಿ, ಕಡೆಗಣ್ ತಂಬ್ಳಿ ಹೇಳಿ ಎರಡು ಬಗೆ..ಮೊದಲು ಉಂಬುದಕ್ಕೆ ಹಸಿಮೆಣಸು ಅಥವಾ ಒಣಮೆಣಸಿನಕಾಯಿ ಒಗ್ಗರಣೆ ಕೊಡ್ತವಿಲ್ಲೆ. ಹಸಿದ ಹೊಟ್ಟೆಗೆ ತಂಪು ಆಗಲಿ ಹೇಳಿ ಹಿರಿಯರು ಮಾಡಿದ ಪದ್ಧತಿ.

 

*ಹರಿದ ಅಹಂಕಾರ*

ಒಂದು ಊರಿನಲ್ಲಿ ಒಬ್ಬ ನೇಕಾರನಿದ್ದ. ಶಾಂತ ಸ್ವಭಾವದ ಮನುಷ್ಯ, ನಿಗರ್ವಿ, ತುಂಬ ಪ್ರಾಮಾಣಿಕ. ಆತ ಸಿಟ್ಟಾಗಿದ್ದನ್ನು ಆ ಊರಿನಲ್ಲಿ ಯಾರೂ ನೋಡೇ ಇರಲಿಲ್ಲ. ಆ ಊರಿನ ಕೆಲ ಯುವಕರಿಗೆ ಒಂದು ತರಲೆ ಹೊಳೆಯಿತು. ನೇಕಾರನಿಗೆ ಸಿಟ್ಟು ಬರಿಸಬೇಕು ಎಂದು ಅವರು ಮಾತಾಡಿಕೊಂಡರು. ಒಂದು ದಿನ ಯುವಕರ ಗುಂಪು ನೇಕಾರನ ಅಂಗಡಿಗೆ ಆಗಮಿಸಿತು. ಆ ಯುವಕರ ನಾಯಕ ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿದ್ದ. 

Image

ಒಂದು ಒಳ್ಳೆಯ ನುಡಿ (12) - ಸೇವಾಧರ್ಮ

ಮಾನವ ಸಂಘ ಜೀವಿ ಮತ್ತು ಸ್ನೇಹ ಜೀವಿ. ಒಂಟಿಯಾಗಿ ಬದುಕುವುದು ಬಹಳ ಕಷ್ಟ. *ಹುಟ್ಟು ಆಕಸ್ಮಿಕ ಸಾವು ನಿಶ್ಚಿತ*. ತಾನು ಹೇಗಿರಬೇಕು, ಹೇಗಿದ್ದೆ, ಎಲ್ಲರೊಂದಿಗೆ ಹೇಗೆ ಬೆರೆಯಬೇಕು, ತನ್ನ ಬದುಕಿನ ದಾರಿ ಹೇಗೆ ಸಾಗಿ ಬಂದಿದೆ ಇವೆಲ್ಲವೂ ಆತನಿಗೆ ಗೊತ್ತಿರಬೇಕು ಮತ್ತು ಸ್ವ-ವಿಮರ್ಶೆಗೆ ತನ್ನನ್ನು ತಾನೇ ಒಡ್ಡಿಕೊಳ್ಳಬೇಕು. ಆಗ ಮಾತ್ರ ಬದುಕು ಸುಂದರ.

Image

ನಮ್ಮ ಹೆಮ್ಮೆಯ ಭಾರತ (19 - 20)

೧೯.ಜಗತ್ತಿನ ಅಪ್ರತಿಮ ಕಲಾರಚನೆ ಆಗ್ರಾದ ತಾಜಮಹಲ್
ಆಗ್ರಾದ ತಾಜಮಹಲನ್ನು ಜಗತ್ತಿನ ಅತ್ಯಂತ ಸುಂದರ ಮತ್ತು ಭವ್ಯ ಸ್ಮಾರಕ ಎನ್ನಬಹುದು. ಇದು ಮೊಘಲ್ ರಾಜ ಷಾಜಹಾನ್, ತನ್ನ ಪ್ರೀತಿಯ ಪತ್ನಿ ಮಮ್ತಾಜಳ ನೆನಪಿಗಾಗಿ ನಿರ್ಮಿಸಿದ ಸ್ಮಾರಕ. ತನ್ನ ಮಗ ಔರಂಗಜೇಬನಿಂದಲೇ  
ಬಂಧಿಸಲ್ಪಟ್ಟ ರಾಜ ಷಾಜಹಾನ್ ತನ್ನ ಕೊನೆಗಾಲವನ್ನು ತಾಜಮಹಲನ್ನು ಖಿನ್ನತೆಯಿಂದ ನೋಡುತ್ತ ಕಳೆಯ ಬೇಕಾಯಿತು ಎಂಬುದು ದುರಂತ. ಅವನ ಮರಣಾ ನಂತರ ಅವನನ್ನೂ ಮಮ್ತಾಜಳ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.

Image