ಬಯಾಪ್ಸಿ ಬಗ್ಗೆ ಭಯ ಬೇಡ

ಸಮಯ ಕಳೆದಂತೆ ಮಾನವ ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾನೆ. ಕಳೆದ ಶತಮಾನಕ್ಕೂ ಈಗಿನ ಶತಮಾನಕ್ಕೂ ಬಹಳಷ್ಟು ಸುಧಾರಣೆಗಳು ಎಲ್ಲಾ ಕ್ಷೇತ್ರದಲ್ಲಿ ಆಗಿವೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಆಗಿರುವ, ಆಗುತ್ತಿರುವ ಸಂಶೋಧನೆಗಳು ಹಲವಾರು. ಈ ಕಾರಣದಿಂದಲೇ ನಾವಿಂದು ಏನೇ ಕಾಯಿಲೆಗಳು ಬಂದರೂ ಗುಣಮುಖರಾಗುತ್ತಿರುವುದು. ಸದ್ಯಕ್ಕೆ ಬಂದಿರುವ ಕೊರೋನಾ ಮಹಾಮಾರಿಯ ಬಗ್ಗೆ ನಮ್ಮ ವೈದ್ಯಕೀಯ ಲೋಕದಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಆ ಕೊರೋನಾ ವೈರಸ್ ಅನ್ನು ತಡೆಗಟ್ಟುವ ಲಸಿಕೆಯನ್ನು ಸದ್ಯದಲ್ಲೇ ಕಂಡು ಹಿಡಿಯುತ್ತಾರೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. 

Image

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
ರೂ.೧೩೦.೦೦ ಮುದ್ರಣ: ಮಾರ್ಚ್ ೨೦೧೬

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ಮೂರನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ‘ಪಶ್ಚಿಮ ಘಟ್ಟ ಅಪರೂಪದ ಪ್ರಕೃತಿ ಸಂಪತ್ತು. ವಿಸ್ಮಯದ ಗೂಡು. ಅದನ್ನಷ್ಟು ಕಳೆದುಕೊಂಡರೆ ನಮಗೆ ಮತ್ತೇನೂ ಇಲ್ಲ. ಇಂದಿನ ತೆವಲಿಗೆ ನಾವು ಅದರ ಬೆಲೆಯೇ ತಿಳಿಯದೆ ಸೂರೆ ಮಾಡುತ್ತಿದ್ದೇವೆ. ಇಂಚಿಂಚಾಗಿ ಅರಣ್ಯ ನಾಶವಾಗುತ್ತಿದೆ. ಅದನ್ನು ಉಳಿಸಿ ಅದರ ಲಾಭ ಪಡೆಯಲು ತಿಳಿಯದ ನಮಗೆ ಅದರ ನಾಶದ ಬಗೆ ಮಾತ್ರ ಚೆನ್ನಾಗಿ ತಿಳಿದಿದೆ. ಆನೆಗಳಂತಹ ಕಾಡುಪ್ರಾಣಿಗಳು ನೆಲೆ ಇಲ್ಲದೆ ಊರಿಗೆ ದಾಳಿ ಮಾಡುತ್ತವೆ’.

ಒಂದು ಒಳ್ಳೆಯ ನುಡಿ (10)- ಕರ್ತವ್ಯ

ಬದುಕಿನೀ ಕ್ಷೇತ್ರದಲಿ ಕರ್ತವ್ಯ ಹಲವುಂಟು

ಮೊದಲು ಋಣಸಂದಾಯ ಮರೆಯದಿರಬೇಕು/

ಮಮತೆಯೊಲುಮೆಯ ಸಾಲ ಇತ್ತವರ,ಹೆತ್ತವರ

ಅಮ್ಮ--ಅಪ್ಪ ಎಂಬ ಪ್ರೀತಿಯಲಿ ಸಾಕು/

Image

ವಾಲಿದ ತಲೆಯ ಟೆಡ್ಡಿ ಕರಡಿ

ಪುಟ್ಟಣ್ಣ ದಂಪತಿಯ ಗೊಂಬೆ ಮಳಿಗೆಯಲ್ಲಿ ಹತ್ತುಹಲವು ಬಗೆಯ ಬೊಂಬೆಗಳು. ಮಳಿಗೆಯ ಹಿಂಭಾಗದ ಕೋಣೆಯಲ್ಲಿ ಅವರು ಕೈಯಿಂದಲೇ ಗೊಂಬೆಗಳನ್ನು ಮಾಡುತ್ತಿದ್ದರು. ಅವರಿಗೆ ವಯಸ್ಸಾಗಿದ್ದು ಇತ್ತೀಚೆಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ.

ಪುಟ್ಟಣ್ಣನ ಪತ್ನಿ ಪದ್ಮಿನಿ ಹೇಳಿದಳು, “ನಾವಿನ್ನು ಯಾರಿಗಾದರೂ ಗೊಂಬೆ ಮಾಡುವುದನ್ನು ಕಲಿಸಬೇಕು." ಕೆಲವೇ ದಿನಗಳಲ್ಲಿ ಅವರು ತಂಗಣ್ಣ ಎಂಬ ಯುವಕನನ್ನು ಗೊಂಬೆ ಮಾಡುವುದರಲ್ಲಿ ತರಬೇತಿ ಪಡೆಯಲಿಕ್ಕಾಗಿ ನೇಮಿಸಿಕೊಂಡರು. ತಂಗಣ್ಣ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದ. ಮೊದಲನೆಯ ವಾರದಲ್ಲಿ ಅವನು ಟೆಡ್ಡಿ (ಗೊಂಬೆ) ಕರಡಿಗಳನ್ನು ಮಾಡಿದ.

Image

ಶಂಕರಾನಂದ ಹೆಬ್ಬಾಳರ ಗಝಲ್

ಹೃದಯವ ಪ್ರೀತಿಸಿದವನ ಹೆಸರನ್ನು

ಮರೆವೆಯಾ ಗೆಳತಿ|

ಮನಸಿನಲ್ಲಿ ಪ್ರೇಮದ ಭಾವವನು

ತೊರೆವೆಯಾ ಗೆಳತಿ||

 

ಆಂತರ್ಯದ ನಾದವನು ವೀಣೆಯಲಿ

ಸಾವಿರಾರು ಶಿಶುಗಳ ‘ಅಮ್ಮ'- ಸೂಲಗಿತ್ತಿ ನರಸಮ್ಮ

ನಾನು ಈಗಾಗಲೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಲ್ದಾರ್ ನಾಗ್, ಜಾಧವ್ ಪಯಾಂಗ್, ಲಕ್ಷ್ಮಿ ಕುಟ್ಟಿ ಬಗ್ಗೆ ಲೇಖನ ಬರೆದೆ. ನನ್ನ ಲೇಖನ ಓದಿದ ಹಲವಾರು ಮಂದಿ ನೀವು ಬರೆದ ಮಹನೀಯರು ಎಲ್ಲರೂ ಕರ್ನಾಟಕ ರಾಜ್ಯದ ಹೊರಗಿನವರು. ನಮ್ಮ ಕರ್ನಾಟಕ ರಾಜ್ಯದ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರತಿಭಾವಂತರ ಬಗ್ಗೆ ಯಾಕೆ ಬರೆಯುವುದಿಲ್ಲ ಎಂದರು. ಪ್ರತಿಭೆಗೆ ರಾಜ್ಯದ, ದೇಶದ ಸೀಮೆಗಳಿರುವುದಿಲ್ಲ. ಆದರೂ ಕರ್ನಾಟಕದಲ್ಲೂ ಪದ್ಮ ಪ್ರಶಸ್ತಿ ಪಡೆದ ಹಲವಾರು ಮಂದಿ ಗಣ್ಯರು ಇದ್ದಾರೆ. ೨೦೧೮ರಲ್ಲಿ ಪದ್ಮ ಪ್ರಶಸ್ತಿ ದೊರೆತವರ ಪಟ್ಟಿ ನೋಡಿದಾಗ ನಾನು ಸೂಲಗಿತ್ತಿ ನರಸಮ್ಮ ಅವರ ಸಾಧನೆ ಬಗ್ಗೆ ಗಮನಿಸಿದ್ದೆ.

Image