ನಲ್ಲೆಯ ಕೋಪ (ಚಂಪಕಮಾಲ ವೃತ್ತ)
ಹರಿಯುತ ಲಕ್ಷ್ಯವಂ ತರುಣಿಯಂದದ
ನೋಟದಿ ಕಂಗಳಲ್ಲಿಯುಂ |
ಕರೆದೆನು ನಲ್ಲೆಯಂ ಪ್ರಣಯದಾಟಕೆ
ಮಂಚಕೆ ಕಾದನಲ್ಲಿಯೇ|
ಮರುಚಣದಲ್ಲಿಯೇ ಮುನಿಸುತಾಳಲು
- Read more about ನಲ್ಲೆಯ ಕೋಪ (ಚಂಪಕಮಾಲ ವೃತ್ತ)
- Log in or register to post comments
ಹರಿಯುತ ಲಕ್ಷ್ಯವಂ ತರುಣಿಯಂದದ
ನೋಟದಿ ಕಂಗಳಲ್ಲಿಯುಂ |
ಕರೆದೆನು ನಲ್ಲೆಯಂ ಪ್ರಣಯದಾಟಕೆ
ಮಂಚಕೆ ಕಾದನಲ್ಲಿಯೇ|
ಮರುಚಣದಲ್ಲಿಯೇ ಮುನಿಸುತಾಳಲು
ಝೆನ್ ಗುರು ಸೋಯೆನ್ ಶಕುವಿನ ಶಿಷ್ಯರು, ಬಿರು ಬೇಸಗೆಯಲ್ಲಿ ಕೆಲವೊಮ್ಮೆ ಸೆಕೆ ತಾಳಲಾಗದೆ ಹಗಲು ಹೊತ್ತಿನಲ್ಲೇ ನಿದ್ದೆ ಮಾಡುತ್ತಿದ್ದರು. ಸೋಯೆನ್ ಶಕು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆತ ಮಾತ್ರ ದಿನವಿಡೀ ಸದಾ ಚಟುವಟಿಕೆಯಿಂದಿರುತ್ತಿದ್ದ. ಇದಕ್ಕೆ ಕಾರಣ ಆತ ಶಿಷ್ಯನಾಗಿದ್ದಾಗ ನಡೆದ ಒಂದು ಘಟನೆ.
ಆಗ ಸೊಯೇನ್ ಶಕುವಿಗೆ ಹನ್ನೆರಡರ ವಯಸ್ಸು. ಆತ “ತೆಂಡೆ" ತತ್ತ್ವಜ್ನಾನ ಕಲಿಯುತ್ತಿದ್ದ. ಅದೊಂದು ಬೇಸಗೆಯ ನಡುಹಗಲು. ಉರಿ ಬಿಸಿಲು. ದಣಿದಿದ್ದ ಸೋಯೆನ್ ಶಕುವಿಗೆ ತಂಪುಗಾಳಿ ಬೀಸಿದಾಗ ಮಂಪರು. ಆಶ್ರಮದ ಹೊಸ್ತಿಲಲ್ಲೇ ಮಲಗಿ ಬಿಟ್ಟ.
ಇಲ್ಲಿಂದ ಮುಂದೆ ಕೊರೋನಾ ಕಥೆ ಏನು ?
ಬದುಕು ಸಹಜತೆಯೆಡೆಗೆ ಸಾಗುತ್ತಿದೆ ಎಂದು ಭಾವಿಸಬೇಕೆ ?
ಇನ್ನೂ ಹೆಚ್ಚಾಗುತ್ತಿದೆ ಎಂದು ಆತಂಕ ಪಡಬೇಕೆ ?
ಲಸಿಕೆ ಬರುವವರೆಗೂ ಭಯದಲ್ಲೇ ಬದುಕಬೇಕೆ ?
ಥಾಮಸ್ ಆಲ್ವ ಎಡಿಸನ್ ಯಾರಿಗೆ ಗೊತ್ತಿಲ್ಲ? ಎಡಿಸನ್ ಓರ್ವ ಅಮೇರಿಕಾದ ವಿಜ್ಞಾನಿ ಹಾಗೂ ಸಂಶೋಧಕ. ಅವರು ಹಲವಾರು ವಸ್ತುಗಳನ್ನು ಸಂಶೋಧಿಸಿದ ಖ್ಯಾತ ಅನ್ವೇಷಕ ಎಂದು ಹೆಸರುವಾಸಿ. ಎಡಿಸನ್ ೧೮೪೭ ರಿಂದ ೧೯೩೧ರ ಕಾಲಘಟ್ಟದಲ್ಲಿ ಬದುಕಿದ್ದರು. ಬಾಲ್ಯದ ಬಡತನದ ಜೀವನ, ದಡ್ಡ ಹುಡುಗ ಎಂಬೆಲ್ಲಾ ಕೀಳಿರಿಮೆಗಳಿಂದ ಹೊರಬಂದು ಅವರು ಗಳಿಸಿದ ಕೀರ್ತಿ ಸದಾ ಅನುಕರಣೀಯ. ಅವರ ಬಾಳಿನ ಎರಡು ಘಟನೆಗಳನ್ನು ಇಲ್ಲಿ ಬರೆಯುತ್ತಿರುವೆ. ಅದರಿಂದ ಎಡಿಸನ್ ಅವರ ವ್ಯಕ್ತಿತ್ವ ಎಂಥದ್ದು ಎಂದು ಅರ್ಥವಾಗುತ್ತದೆ.
ನಾವು ಮಾಡಿದ ಯಾವುದೇ ಉತ್ತಮ ಕೆಲಸಕ್ಕೆ ಸಾಧನೆಗೆ ಅಭಿನಂದನೆಗಳು ಹೇಳುತ್ತೇವೆ. ಗಳಿಸಿದಾಗ, ಅದನ್ನು ನೀಡಿ ಸಹಕರಿಸಿದವರಿಗೆ ಕೃತಜ್ಞತೆಗಳು, ನಮನಗಳು, ವಂದನೆಗಳು, ಧನ್ಯವಾದಗಳು ಹೀಗೆ ಬೇರೆ ಬೇರೆ ಪದಗಳಿಂದ ಉಪಕಾರ ಸ್ಮರಣೆ ಮಾಡುತ್ತೇವೆ. ಕೆಲವರ ಮನೋಭಾವ ತೆಗೆದುಕೊಳ್ಳುವವರೆಗೆ ಮಾತ್ರ, ಸಿಕ್ಕಿದ ಮೇಲೆ ಒಂದು ಕೃತಜ್ಞತೆ ಸಹ ಹೇಳುವ ಅಭ್ಯಾಸವಿಲ್ಲ. ಇದನ್ನೇ ಕೃತಘ್ನತೆ ಹೇಳಬಹುದು. ಮಾಡಿದ ಉಪಕಾರ ಸ್ಮರಣೆ ಇಲ್ಲದವರೇ ಕೃತಘ್ನತೆಯನ್ನು ಹೊಂದಿದವರು.
ಇದುವರೆಗೆ ನಡೆದುಬಂದ ಈ ಕವಿವರ್ಯರ ಜೀವನದಲ್ಲಿ ಅದೆಷ್ಟು ಅಮೂಲ್ಯ ಘಟ್ಟಗಳಿವೆ ? ಕನ್ನಡದ ಸಾಮಾನ್ಯ ಬಡಕುಟುಂಬವನ್ನು ಪ್ರತಿನಿಧಿಸುವ ಇವರು ತಮ್ಮ ಪ್ರಾರಂಭಿಕ ಜೀವನದಲ್ಲೇ ತಂದೆ ತಾಯಿ ತಮ್ಮ ಎಲ್ಲರನ್ನು ಕಳೆದುಕೊಂಡು ಒಬ್ಬ ಅನಾಥರಂತೆ ಜೀವನದ ದಾರಿಯಲ್ಲಿ ಒಬ್ಬರೇ ಸಾಗುತ್ತಾರೆ. ಧರ್ಯ, ಜೀವನಪ್ರೀತಿ ಮತ್ತು ಎಲ್ಲವನ್ನೂ ತನಗೆ ತಾನೇ ಗ್ರಹಿಸಿ ತಿಳಿದುಕೊಳ್ಳುವ ಪರಿ ಅವರ ಜೀವನವನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಇಂಗ್ಲಿಷ್ ಶಿಕ್ಷಕ. ಆರಿಸಿಕೊಂಡ ವಿಷಯ : ಫಿಲೊಸೊಫಿ. ಆದರೆ ಅವರು ಮಾಡಿದ ಕೃಷಿ ಕನ್ನಡ ಕಾದಂಬರಿಗಳನ್ನು ರಚಿಸುವುದರ ಮೂಲಕ. ಬರೆದ ೨೪ ಕಾದಂಬರಿಗಳೂ ಅವರ ಜೀವನದ ಅನುಭವದ ಕ್ಷಣಗಳನ್ನು ಹರಳುಗಟ್ಟಿಸಿ ಹೆಣೆದ ದಿವ್ಯ ವಸ್ತ್ರಗಳು.
ಶಂಕರ ನಾಟ್ಯದಿಂ ಚಣದಿ ನೋಡುತ ನಿಲ್ಲಲು ಪುಣ್ಯವನ್ನಲಿಂ|
ತೆಂಕಣಗಾಳಿಯಂ ಬರುತ ಬೀಸಿದೆ ಜೋರಲಿ
ಸಿಗ್ಗವನ್ನಲಿಂ|
ಕಿಂಕರ ಸೇವೆಗಿಂ ನಿರತನಾಗಿಹ ದೇವನು
ಬಂದನಂ ಶಿವಂ|
ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪಕೊಟ್ಟು ಪ್ರಕಟಿಸಿದ ‘ಮಲೆನಾಡಿನ ರೋಚಕ ಕಥೆಗಳು’ ಎಂಬ ಓದುಗರಿಗೆ ಮೆಚ್ಚುಗೆಯಾಯಿತು. ಅದರ ಫಲವೇ ಅರಮನೆ ಗುಡ್ಡದ ಕರಾಳ ರಾತ್ರಿಗಳು ಪುಸ್ತಕ. ಇದು ಮಲೆನಾಡಿನ ರೋಚಕ ಕಥೆಗಳು ಸರಣಿಯ ಎರಡನೇ ಪುಸ್ತಕ. ಇದು ಕರ್ಮವೀರ ವಾರಪತ್ರಿಕೆಯಲ್ಲಿ ಧಾರವಾಹಿ ರೂಪದಲ್ಲಿ ಈಗಾಗಲೇ ಪ್ರಕಟವಾಗಿದೆ.
ಮಜ್ಜಿಗೆ ಅನ್ನದಲ್ಲಿ ಈರುಳ್ಳಿಯನ್ನು ತಿಂದರೆ ನಡೆಯುವ ಅದ್ಭುತಗಳನ್ನು ತಿಳಿದರೆ…ಯಾರೂ ತಿನ್ನದೆ ಇರಲಾರರು..!! ಈರುಳ್ಳಿ ಮಾಡುವಷ್ಟು ಒಳಿತನ್ನು ತಾಯಿಯೂ ಮಾಡುವುದಿಲ್ಲ ಎನ್ನುವರು. ಈರುಳ್ಳಿ ಸೇವನೆಯಿಂದ ಶರೀರಕ್ಕೆ ಶೀತವಾಗುತ್ತದೆ ಎನ್ನುತ್ತಾರೆ. ಆದರೆ ಮಜ್ಜಿಗೆಯಲ್ಲಿ ಸ್ವಲ್ಪ ಈರುಳ್ಳಿಯನ್ನು ಸೇವಿಸಿದರೆ ಸಂಪೂರ್ಣ ಆರೋಗ್ಯಕ್ಕೆ ಒಳ್ಳೆಯದಾಗುವುದೆಂದು ಪರಿಶೋಧನೆಯಲ್ಲಿ ತಿಳಿದುಬಂದಿದೆ. ಮಜ್ಜಿಗೆ ಅಥವಾ ಮೊಸರಿನಲ್ಲಿ ಈರುಳ್ಳಿಯನ್ನು ಬೆರೆಸಿ ಸೇವಿಸಿದರೆ ಶರೀರಕ್ಕೆ ಆರೋಗ್ಯ ನೀಡುವ ಹಲವು ಪೋಷಕಾಂಶಗಳು ನೀಡುತ್ತದೆ ಎಂದು ತಿಳಿದಿದೆ.
ಅಧ್ಯಾಯ ೨
ಏಷಾ ತೇ ಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು/
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಸಿ//೩೯//