ಅಪರೂಪದ ಮೀನುಗಳು ಹಾಗೂ ಅವುಗಳ ದೇಹರಚನೆ

ನೀವು ಈಗಾಗಲೇ ವಿದ್ಯುತ್ ಮೀನು ಬಗ್ಗೆ ಓದಿರುತ್ತೀರಿ. ಸಮುದ್ರದಾಳದಲ್ಲಿ ಸಾವಿರಾರು ಬಗೆಯ ಅಪರೂಪದ ಜಲಚರಗಳಿವೆ. ಅವುಗಳನ್ನು ಕೆಲವೊಂದನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದೇನೆ. ಓದುವ ಕೌತುಕ ನಿಮ್ಮದಾಗಲಿ.

Image

ತುಷಾರಿಣಿ

ತಮವನ್ನು ಓಡಿಸುತ
ತರತರದಿ ಬೆಳಕಿನವಳು
ತುಷಾರವಾಗಿ ಮನವ
ತಂಗಾಳಿಯಲಿ ಅಪ್ಪಿದಳು||

ತಳಮಳದ ಹೃದಯವನು
ತಪ್ಪಿಲದೆ ಒಪ್ಪಿದಳು
ತರಂಗದ ಅಲೆಯಂತೆ
ತೆವಂಗದಿ ಕಾಣುವಳು||

ತನುವನು ಬಯಸುತ
ತಪಸಿಯಾಗಿ ನಿಂತಳು
ತಮಟೆಯನು ಬಾರಿಸಿ
ತಳಕಿತ್ತದೆ ಕುಳಿತಳು||

ತಂಗುತಲಿ ಹೃದಯದಿ
ತಂಪನು ಅನುಭವಿಸಿದಳು
ತಂಗದಿರನಾದ ನಲ್ಲನನು
ತಂಗರಗದಿ ನೋಡಿದಳು||

ತೆಪ್ಪದಲಿ ನನಗಾಗಿ
ತಂದಿಹಳು ನಗೆಯಲ್ಲಿ
ತುಪ್ಪವನು ಹೆಪ್ಪಿಳಿಸಿ
ತೆಂಗಿನ ತೋಟದಲ್ಲಿ||

-ಶಂಕರಾನಂದ ಹೆಬ್ಬಾಳ 

ಮಲೆನಾಡಿನ ರೋಚಕ ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
ರೂ.೧೩೦.೦೦ ಮುದ್ರಣ: ೨೦೧೬

ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪ ನೀಡಿ ‘ಕಾಫಿ ನಾಡಿನ ಕಿತ್ತಳೆ’ ಎಂಬ ಹೆಸರಿನಲ್ಲಿ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಯಿತು. ಅದರಲ್ಲಿನ ಚಿಂಟಿಯ ಪಾತ್ರದ ಚಿತ್ರಣದ ಭಾಗ ಮಕ್ಕಳ ಸಾಹಿತ್ಯಕ್ಕೆ ಸ್ವೀಕೃತವಾಯಿತು. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಲೆನಾಡಿಗೆ ಸಂಬಂಧಪಟ್ಟ ಬರಹಗಳ ಪ್ರಭಾವವೂ ಈ ಕೃತಿ ರಚನೆಗೆ ಪ್ರಮುಖ ಕಾರಣ ಎನ್ನುತ್ತಾರೆ ಲೇಖಕರು. ‘ಕಾಫಿ ನಾಡಿನ ಕಿತ್ತಳೆ' ಮುಂದೆ ಮುದ್ರಣವಾಗಿ, ನಂತರ ಪರಿಷ್ಕೃತ ಮುದ್ರಣವಾಗುವ ಸಮಯದಲ್ಲಿ ಮಲೆನಾಡಿನ ರೋಚಕ ಕತೆಗಳು ಎಂದಾಯಿತು. 

ಒಂದು ಒಳ್ಳೆಯ ನುಡಿ (6) - ಗೆಳೆತನ

ಹಾಲು ನೀರು ನಮಗೆಲ್ಲ ತಿಳಿದ ವಿಷಯ, ಅದಿಲ್ಲದೆ ನಾವುಗಳಿಲ್ಲ. ಹಾಲಿನೊಂದಿಗೆ ನೀರು ಸೇರಿದಾಗ ಇಲ್ಲಿ ಬೆಲೆ ನೀರಿಗೂ ಬರುತ್ತದೆ. ಇದು ನಿತ್ಯ ಸತ್ಯ. ಅದೇ ಹಾಲನ್ನು ಕಾಯಿಸುವಾಗ ನೀರೆಲ್ಲಾ ಆವಿಯಾಗಿ, ಹಾಲು ಉಕ್ಕಲು ಪ್ರಾರಂಭಿಸುತ್ತದೆ. ಆಗ ಸ್ವಲ್ಪ ನೀರನ್ನು ಚಿಮುಕಿಸುತ್ತೇವೆ. ಹಾಲಿಗೆ ಬೇಸರ, ಛೇ, ಈ ನನ್ನ ಮಿತ್ರ ನನ್ನನ್ನು ಬಿಟ್ಟು ಹೋಗ್ತಾ ಇದ್ದಾನಲ್ಲ ಅಂತ. ಪುನಃ ನೀರು ಚಿಮುಕಿಸಿದಾಗ ಹಾಲಿಗೆ ಸಂತಸ, ನನ್ನ ಮಿತ್ರ ಬಂದನಲ್ಲ ಅಂತ. ಆಗ ಹಾಲು ಶಾಂತವಾಗುತ್ತದೆ. ಇದುವೇ ನಿಜವಾದ ಗೆಳೆತನ, ಮಿತ್ರತ್ವ ಎಂದರೆ.

Image

ಗಾನ ಮಾಂತ್ರಿಕನಿಗೆ ನುಡಿ ನಮನ

ಭಾವಜೀವಿ

ಧರೆಯಿಂದ ಕಳಚಿತು ಗಾಯನ ಕೊಂಡಿ

ಮರೆಯಲಿ ಇಣುಕುವ ಸಪ್ತಸ್ವರವು

ನೆರೆಹೊರೆ ರಾಜ್ಯದ ಹೃನ್ಮನ ಹೊನ್ನಕಳಶ

ತೆರೆಮರೆ ಶೋಭಿತ ಸ್ವರಗಾನವು||

 

ಒಂದು ಒಳ್ಳೆಯ ನುಡಿ - 5

ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಶಿರಾ/

ಅನುಗ್ರಹಶ್ಚ ದಾನಂತ ಶೀಲವೇತದ್ವಿದುರ್ಬುದಃ//

ಯಾರಿಗೂ ನೋವಾಗದಂತೆ ಬದುಕಿರಿ ಮಕ್ಕಳೇ --ಇದು ಹೆತ್ತಮ್ಮನ ಮಾತು. ಈ ಮಾತಿನಲ್ಲಿ ಎಷ್ಟು ಶಕ್ತಿ ಅಡಕವಾಗಿದೆ ಎಂದು ಅಳೆಯಲು ಸಾಧ್ಯವಿಲ್ಲ. ಹೆತ್ತವರ ಮಾತನ್ನು ಕಡೆಗಣಿಸಿ ಉದ್ದಾರವಾದವರನ್ನು ನಾವು ಕಂಡದ್ದಿಲ್ಲ.

Image

ಕೊರೊನಾ ಕಾಲದಲ್ಲಿ ಕಾಡಿನ ಬುಡಕಟ್ಟು ಜನರ ಸಂರಕ್ಷಣೆ

ಕೊರೊನಾ ವೈರಸ್ ಧಾಳಿಯಿಂದಾಗಿ ಮಾರ್ಚ್ ೨೦೨೦ರಿಂದ ತೊಡಗಿ ಜಗತ್ತಿನಲ್ಲೆಲ್ಲ ಅಲ್ಲೋಲಕಲ್ಲೋಲ. ಭಾರತದಲ್ಲೇ ೫೦ ಲಕ್ಷಕ್ಕಿಂತ ಅಧಿಕ ಜನರಿಗೆ ಈ ವರೆಗೆ ಇದರ ಸೋಂಕು ತಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಗರಗಳಿಂದ ನೂರಾರು ಕಿಲೋಮೀಟರುಗಳ ದೂರದಲ್ಲಿ, ದಟ್ಟ ಕಾಡುಗಳ ಒಳಗೆ ಶತಮಾನಗಳಿಂದ ವಾಸ ಮಾಡುತ್ತಿರುವ ಆದಿ ಬುಡಕಟ್ಟುಗಳಿಗೆ ದೊಡ್ಡ ಅಪಾಯವಿದೆ. ಯಾಕೆಂದರೆ, ನಗರವಾಸಿಗಳನ್ನು ಬಾಧಿಸುವ ಯಾವುದೇ ರೋಗಗಳಿಂದ ಅವರು ಈ ವರೆಗೆ ಮುಕ್ತರಾಗಿದ್ದರು. ಹಾಗಾಗಿ, ಇಂತಹ ಯಾವುದೇ ರೋಗಗಳ ನಿರೋಧ ಶಕ್ತಿ ಬುಡಕಟ್ಟಿನವರಲ್ಲಿ ಇಲ್ಲವೆಂದೇ ಹೇಳಬಹುದು.

Image

ಅಜ್ಜಿ ಹೇಳಿದ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೮೦-೦೦ ಮೊದಲ ಮುದ್ರಣ: ಸೆಪ್ಟೆಂಬರ್ ೨೦೨೦

ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನೂ ಬರೆಯುತ್ತಾರೆ. ಅಜ್ಜಿ ಹೇಳಿದ ಕಥೆಗಳು ಎಂಬ ಹೆಸರಿನಲ್ಲಿ ದೇಶ, ವಿದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಆದರೆ ರೋಹಿತ್ ಅವರ ಈ ಪುಸ್ತಕವನ್ನು ಮಕ್ಕಳು ಸರಾಗವಾಗಿ ಓದಿ ಮುಗಿಸಬಹುದು ಏಕೆಂದರೆ ಬಹುತೇಕ ಕಥೆಗಳು ಒಂದೆರಡು ಪುಟಗಳಲ್ಲೇ ಮುಗಿದು ಹೋಗುವಷ್ಟು ಚಿಕ್ಕದಾಗಿವೆ ಮತ್ತು ಚೊಕ್ಕದಾಗಿಯೂ ಇವೆ.