ಬಾಳಿಗೊಂದು ಚಿಂತನೆ (3) - ನಮ್ಮ ಉನ್ನತಿ

ಆನಂದ, ಸಂತೋಷ, ನೆಮ್ಮದಿ, ಆರೋಗ್ಯ, ಇವೆಲ್ಲವೂ ನಮಗಿದ್ದರೆ ಮಾತ್ರ ನಮ್ಮ ಬದುಕು ಚಂದ. ಸಂತಸ ತಾನಾಗಿಯೇ ಬರುವುದೇ ಇಲ್ಲ, ನಾವದನ್ನು ಬರುವಂತೆ ಮಾಡಬೇಕು. ಅದು ಅಂಗಡಿಯಲ್ಲಿ ಹಣ ಕೊಟ್ಟರೆ ಸಿಗುವ ವಸ್ತುವಲ್ಲ. ನಮ್ಮೊಳಗೆ ಅಡಕವಾಗಿದೆ. ಹೊರತರುವ ಕೆಲಸ ನಮ್ಮಿಂದಾಗಬೇಕು.

Image

ಮಹಾನ್ ಲೇಖಕ ಮಹಾತ್ಮಾ ಗಾಂಧಿ

ಮೊನ್ನೆ, ೨ ಅಕ್ಟೋಬರ್ ೨೦೨೦ರಂದು, ಮಹಾತ್ಮಾ ಗಾಂಧಿಯವರ ೧೫೧ನೇ ಜನ್ಮದಿನದಂದು ಅವರಿಗೆ ನಮ್ಮ ದೇಶವಾಸಿಗಳಿಂದ ಗೌರವಾರ್ಪಣೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಮಹಾನ್ ಲೇಖಕರೂ ಆಗಿದ್ದರು. ಅವರು ಬರೆದದ್ದು ಸುಮಾರು ೧೦೦ ಸಂಪುಟಗಳ “ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮಾ ಗಾಂಧಿ” ಎಂಬ ಪುಸ್ತಕ ಸರಣಿಗೆ ಸಾಕಾಗುವಷ್ಟಿತ್ತು!

ತಮ್ಮ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಇಷ್ಟೊಂದು ಬರೆಯಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದೊಂದು ವಿಸ್ಮಯ. ಅವರು ಯಾಕೆ ಇಷ್ಟೆಲ್ಲ ಬರೆದರು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ.

Image

ಪುಟಾಣಿ ಹಂದಿ ಮರಿಯ ಗುಟ್ಟು

ಅದೊಂದು ಪುಟಾಣಿ ಹಂದಿಮರಿ. ರಾತ್ರಿ ಬೆಚ್ಚಗಿನ ಹುಲ್ಲಿನ ಮೇಲೆ ಸೋದರ ಮತ್ತು ಸೋದರಿ ಹಂದಿಮರಿಗಳ ಜೊತೆ ಮಲಗಿದ್ದಾಗ, ಅದು ತಲೆಯೆತ್ತಿ ಆಕಾಶದ ನಕ್ಷತ್ರಗಳನ್ನು ನೋಡುತ್ತಾ ಮುಗುಳ್ನಗುತ್ತಿತ್ತು - ತನ್ನ ಗುಟ್ಟನ್ನು ನೆನೆಯುತ್ತಾ.  ತಾನು ಪುಟಾಣಿ ಹಂದಿ ಮರಿ ಆಗಿದ್ದರೆ ಒಳ್ಳೆಯದೇ ಎಂದುಕೊಳ್ಳುತ್ತಿತ್ತು.

ಆದರೆ, ಕೆಲವೇ ದಿನಗಳ ಮುಂಚೆ, ಪುಟಾಣಿ ಹಂದಿಮರಿಗೆ ಬಹಳ ಬೇಜಾರಾಗಿತ್ತು. ಅದರ ಕುಟುಂಬದಲ್ಲಿ ಪುಟಾಣಿ ಹಂದಿಮರಿಯೇ ಅತ್ಯಂತ ಕಿರಿಯ ಮತ್ತು ಅತ್ಯಂತ ಪುಟಾಣಿ. ಅದರ ಐದು ಅಣ್ಣಂದಿರು ಮತ್ತು ಐದು ಅಕ್ಕಂದಿರು ಅದಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿದ್ದವು. ರೈತನ ಮಡದಿ ಇದನ್ನು "ಪುಟಾಣಿ" ಎಂದು ಕರೆಯುತ್ತಿದ್ದಳು ಯಾಕೆಂದರೆ ಅದು ಉಳಿದ ಎಲ್ಲ ಹಂದಿಮರಿಗಳಿಗಿಂತ ಗಾತ್ರದಲ್ಲಿ ಬಹಳ ಪುಟಾಣಿ ಆಗಿತ್ತು.

Image

ಕೋಲಾರದ ಶ್ರೀ ಗರುಡ ಸ್ವಾಮಿ ದೇವಸ್ಥಾನ

ಹಿಂದೂ ಪುರಾಣಗಳ ಪ್ರಕಾರ ಮಹಾ ವಿಷ್ಣುವಿನ ವಾಹನ ಗರುಡ ಎಂದು ಬಹುತೇಕರಿಗೆ ತಿಳಿದೇ ಇದೆ. ಆದರೆ ಈ ಗರುಡನಿಗೆ ಒಂದು ದೇವಸ್ಥಾನವಿದೆ ಮತ್ತು ಅಲ್ಲಿ ದೇವರ ರೂಪದಲ್ಲಿ ಅವನಿಗೆ ಪೂಜೆ ಸಲ್ಲಿಕೆಯಾಗುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿಯದೇ ಇರಬಹುದು. ಗರುಡನನ್ನು ಇಲ್ಲಿ ಶ್ರೀ ಗರುಡಸ್ವಾಮಿ ಅಥವಾ ಗರುಡೇಶ್ವರ ಸ್ವಾಮಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಗರುಡನನ್ನೇ ಮುಖ್ಯದೇವರಾಗಿ ಆರಾಧಿಸುವ ಈ ಏಕೈಕ ದೇವಸ್ಥಾನ ಇರುವುದು ನಮ್ಮ ಕರ್ನಾಟಕ ರಾಜ್ಯದಲ್ಲೇ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಎಂಬಲ್ಲಿ ಶ್ರೀ ಗರುಡ ಸ್ವಾಮಿ ದೇವಸ್ಥಾನ ಇದೆ. ಕೊಲದೇವಿ ಎಂಬ ಗ್ರಾಮ ಮುಳಬಾಗಿಲು ತಾಲೂಕಿನಿಂದ ೧೪ ಕಿ.ಮೀ. ದೂರವಿದೆ.

Image

ಜನಾರ್ದನ ದುರ್ಗ ಅವರ ಹನಿಗಳು (ಭಾಗ ೩)

*ಆಗದು ಜಿ..!* 

ಅಹಿಂಸೆ ಪರಮೋ ಧರ್ಮ

ಬೋಧಿಸಿದರಂದು ಗಾಂಧೀ *ಜಿ* ..!

ಛಲ ದೃಢತೆಗೆ ಸಾಕ್ಷಿಯಾದರಂದು

ವಿಜಯಂ ಗೈದ ಶಾಸ್ತ್ರಿ *ಜಿ* ...!!

ಒಂದು ಒಳ್ಳೆಯ ನುಡಿ (7) - ಸತ್ಯ-ಸುಳ್ಳು

'ಸತ್ಯವಂತರಿಗಿದು ಕಾಲವಲ್ಲ' ಎಷ್ಟೋ ಜನ ಹೇಳುವುದು ಕೇಳಿದ್ದೇವೆ. ಸತ್ಯ ನುಡಿದವ ಹೊಂಡಕ್ಕೆ ಬಿದ್ದ. ಅವನಿಗೆ ಯಾಕೆ ಬೇಕಿತ್ತು ಸತ್ಯ ಹೇಳುವ ಕೆಲಸ, ಹೀಗೆಲ್ಲ ಹೇಳುವುದು, ಕೆಲವು ಸಲ ಕಷ್ಟಕ್ಕೆ ಸಿಲುಕಿದ್ದೂ ಇದೆ. ಹೌದು ದಾರಿಯಲ್ಲಿ ಹೋಗುವಾಗ ಆದ ಒಂದು ಅಪಘಾತವನ್ನು ನೋಡಿ, ಅವನನ್ನು ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದರೆ, ಅವನನ್ನೇ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ತಲೆತಿನ್ನುವುದೂ ಇದೆ. ಇದರಿಂದ ಅವನ ಸಮಯವೂ ನಷ್ಟ, ಕೆಲಸವೂ ಇಲ್ಲ. ಇದರಿಂದಲಾಗಿಯೇ ನೋಡಿಯೂ ನೋಡದ ಹಾಗೆ ಮಾಡಿಕೊಂಡು ಹೆಚ್ಚಿನವರು ತಮ್ಮ ಪಾಡಿಗೆ ತಾವಿರುತ್ತಾರೆ. ಹಾಗಾದರೆ ಸತ್ಯ ಬೇಡವೇ? ಸತ್ಯಕ್ಕೆ ಸಾವಿಲ್ಲ, ಸತ್ಯಕ್ಕೆ ಜಯ ಖಂಡಿತಾ ಇದೆ.

Image

ನಮ್ಮ ಹೆಮ್ಮೆಯ ಭಾರತ (15 - 16)

೧೫. ಭಾರತದ ಉಡುಪುಗಳ ವೈವಿಧ್ಯತೆಗೆ ಜಗತ್ತಿನಲ್ಲಿ ಸಾಟಿಯಿಲ್ಲ.
ಭಾರತದಲ್ಲಿ ಸಾಂಪ್ರದಾಯಿಕ ಉಡುಪು ಪ್ರದೇಶದಿಂದ ಪ್ರದೇಶಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಬದಲಾಗುತ್ತದೆ. ಭಾರತದ ಹಲವು ಬುಡಕಟ್ಟಿನವರ ಮತ್ತು ಈಶಾನ್ಯ ರಾಜ್ಯಗಳ ಜನರ ಉಡುಪುಗಳಂತೂ ವರ್ಣಮಯ.

ಪ್ರತಿಯೊಬ್ಬನು ಧರಿಸುವ ಉಡುಪು ಆತನ/ ಆಕೆಯ ವಾಸಸ್ಥಳ, ಸ್ಥಳೀಯ ಪದ್ಧತಿ, ಹವಾಮಾನ ಮತ್ತು ಸಾಮಾಜಿಕ ಅಂತಸ್ತು ಅವಲಂಬಿಸಿ ಬದಲಾಗುತ್ತದೆ. ಭಾರತದ ಉದ್ದಗಲದಲ್ಲಿ ಮಹಿಳೆಯರು ಸೀರೆ ಧರಿಸುವುದು ಸಾಮಾನ್ಯ; ಆದರೆ ಅದನ್ನು ಉಡುವ ರೀತಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ!

Image

‘ಚಂದಮಾಮ' ಪುಸ್ತಕದ ಚಿತ್ರ ಕಲಾವಿದ ಶಂಕರ್ ನೆನಪಿದೆಯೇ?

ಚಂದಮಾಮ, ಬಾಲಮಿತ್ರ, ಬೊಂಬೆಮನೆ ಎಂಬ ಹೆಸರುಗಳನ್ನು ಕೇಳಿದ ಕೂಡಲೇ ನನ್ನಂತಹ ಹಲವರ ಮನಸ್ಸು ತಮ್ಮ ಬಾಲ್ಯದತ್ತ ಚಲಿಸಲು ಶುರು ಮಾಡುತ್ತದೆ ಎಂಬುವುದು ಶೇಕಡಾ ನೂರಕ್ಕೆ ನೂರು ನಿಜ. ಕಳೆದ ಶತಮಾನದಲ್ಲಿ ಮಕ್ಕಳಾಗಿದ್ದ ಎಲ್ಲರ ಮೇಲೂ ಪ್ರಭಾವ ಬೀರಿದ ಮಕ್ಕಳ ಪುಸ್ತಕಗಳಲ್ಲಿ ಚಂದಮಾಮ ಒಂದು. ಆಗಿನ ಮದ್ರಾಸ್ (ಚೆನ್ನೈ) ನಿಂದ ಮುದ್ರಣಗೊಂಡು ಬರುತ್ತಿದ್ದ ಈ ಪುಸ್ತಕಕ್ಕೆ ಸಹಸ್ರಾರು ಓದುಗರಿದ್ದರು. ಸುಮಾರು ಹನ್ನೆರಡು ಭಾಷೆಯಲ್ಲಿ ಹೊರ ಬರುತ್ತಿದ್ದ ಚಂದಮಾಮ ಕನ್ನಡದಲ್ಲೂ ಪ್ರಕಟವಾಗುತ್ತಿತ್ತು. ನಾವೆಲ್ಲಾ ಸಣ್ಣವರಿರುವಾಗ ಮೊಬೈಲ್, ಇಂಟರ್ನೆಟ್ ಎಂಬ ಜಂಜಾಟವಿಲ್ಲದೇ ಚಂದಮಾಮದಂತಹ ಪುಸ್ತಕ ಓದುವುದರಲ್ಲೇ ಸಮಯ ಕಳೆಯುತ್ತಿದ್ದೆವು. 

Image