ಒಂದು ಒಳ್ಳೆಯ ನುಡಿ (೩೧) - ಸುವಿಚಾರಗಳು

ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಅದು ಅತೀತವಾದುದು. ನಾಶರಹಿತವಾದುದು ಮತ್ತು ಶಾಶ್ವತವಾದುದು. ಹೇಗೆ ಮನುಷ್ಯನು ಹಳೆಯ ಬಟ್ಟೆಯನ್ನು ಬೇಡವೆಂದು ನಿರಾಕರಿಸಿ, ಹೊಸವಸ್ತ್ರಗಳನ್ನು ಧರಿಸುವನೋ ಹಾಗೆ ಈ ಆತ್ಮ ಎಂಬುದು. ಆತ್ಮ ಎನ್ನುವುದು ನಿತ್ಯ, ಸತ್ಯ, ಅಚಲ, ಅಖಂಡ, ಶಾಶ್ವತ, ಅವಿನಾಶಿಯಾದುದು. ಬುದ್ಧಿ ಮನಸುಗಳಿಗೆ ನಿಲುಕದ್ದು.

Image

ಹೀಗೂ ಉಂಟೇ! ಝಗಮಗಿಸುವ ಸೊತ್ತುಗಳ ಸಂಗತಿ (2)

-ಜಪಾನಿನ ನಾರಾ ಎಂಬಲ್ಲಿರುವ ತೊಡೈಜಿ ಬೌದ್ಧ ಗುರುಕುಲದ ವಿಶಾಲ ಸಭಾಂಗಣವನ್ನು ಎಂಟನೆಯ ಶತಮಾನದ ಮಧ್ಯಕಾಲದಲ್ಲಿ ನಿರ್ಮಿಸಲಾಯಿತು. ಐವತ್ತಮೂರು ಅಡಿ ಎತ್ತರದ ಬುದ್ಧನ ಭವ್ಯ ಕಂಚಿನ ಮೂರ್ತಿ ಅಲ್ಲಿದೆ. ಹತ್ತು ಲಕ್ಷ ಪೌಂಡುಗಳಿಗಿಂತ ಅಧಿಕ ತೂಕದ ಈ ಮೂರ್ತಿಗೆ ಕಾಲು-ಟನ್ ತೂಕದ ಚಿನ್ನದಿಂದ ಲೇಪ ನೀಡಲಾಗಿದೆ.

-“ವೆಲ್‌ಕಮ್ ಸ್ಟ್ರೇಂಜರ್” ಎಂಬ ಹೆಸರಿನ ಚಿನ್ನದ ತುಂಡು ಈ ವರೆಗೆ ಸಿಕ್ಕಿದ ಅತ್ಯಧಿಕ ತೂಕದ ಚಿನ್ನದ ತುಂಡು. ಅದರ ತೂಕ ೨೦೦ ಪೌಂಡುಗಳಿಗಿಂತ ಜಾಸ್ತಿ. ಆಸ್ಟ್ರೇಲಿಯಾದ ಬಲ್ಲಾರಾಟ್ ಎಂಬಲ್ಲಿ ೧೮೬೯ರಲ್ಲಿ ಇದನ್ನು ಪತ್ತೆ ಮಾಡಿದವರು ಜಾನ್ ಡೀಸನ್ ಮತ್ತು ರಿಚರ್ಡ್ ಓಟ್ಸ್.

-ಈಗ ಸಿಕ್ಕಿರುವ ಪ್ರತಿಯೊಂದು ಔನ್ಸ್ ಚಿನ್ನಕ್ಕಾಗಿ ಗಣಿಗಾರರು ೨.೫ ಮೈಲು ಆಳದ ವರೆಗೂ ಭೂಮಿಯನ್ನು ಅಗೆದಿದ್ದಾರೆ!

Image

ಸ್ವರ್ಗದಿಂದ ಭೂಮಿಗಿಳಿದ ಪಾರಿಜಾತ

ಪಾರಿಜಾತದ ಹೂವು ತುಂಬಾನೇ ವಿಭಿನ್ನ. ಈ ಪಾರಿಜಾತ ಸಸ್ಯಕ್ಕೆ ಸ್ವರ್ಗದಿಂದ ಭೂಮಿಗೆ ಬಂದ ಸಸ್ಯ ಎಂಬ ಹೆಸರಿದೆ. ಇದರ ಪೌರಾಣಿಕ ಹಿನ್ನಲೆಯ ಬಗ್ಗೆ ಹಾಗೂ ದೇಶದಲ್ಲಿರುವ ಏಕೈಕ ಪುರಾತನ ಪಾರಿಜಾತ ವೃಕ್ಷದ ಬಗ್ಗೆ ತಿಳಿದುಕೊಳ್ಳುವ. ಈ ವೃಕ್ಷವನ್ನು ಶ್ರೀಕೃಷ್ಣನು ತನ್ನ ಪತ್ನಿ ಸತ್ಯಭಾಮಾಳಿಗಾಗಿ ಸ್ವರ್ಗದಿಂದ ತಂದಿದ್ದನು ಎಂಬ ಪ್ರತೀತಿ ಇದೆ.

Image

ಪ್ರಚಂಡ ಪತ್ತೇದಾರ

ಪುಸ್ತಕದ ಲೇಖಕ/ಕವಿಯ ಹೆಸರು
ಬಿ.ಎಲ್.ಕೃಷ್ಣಮೂರ್ತಿ
ಪ್ರಕಾಶಕರು
ಬಿ.ಎಲ್.ಕೃಷ್ಣಮೂರ್ತಿ, ಮಹಾಲಕ್ಷ್ಮೀಪುರಂ, ಬೆಂಗಳೂರು
ಪುಸ್ತಕದ ಬೆಲೆ
೯೦.೦೦, ಮುದ್ರಣ : ೨೦೦೨

ಪ್ರಚಂಡ ಪತ್ತೇದಾರ ಪುಸ್ತಕದ ಲೇಖಕರಾದ ಬಿ.ಎಲ್.ಕೃಷ್ಣಮೂರ್ತಿಯವರು ಬೆಂಗಳೂರಿನ ಸಹಾಯಕ ಪೋಲೀಸ್ ಕಮೀಷನರ್ ಆಗಿ ನಿವೃತ್ತ ಹೊಂದಿದವರು.

ಸದ್ಗುರು ಜಗ್ಗಿ ವಾಸುದೇವ್

ಸದ್ಗುರು ಜಗ್ಗಿ ವಾಸುದೇವ್ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು. ಅಧ್ಯಾತ್ಮಿಕ ಚಿಂತಕರಲ್ಲಿ ವಿವಿಧ ರೀತಿಯ ಜನರಿದ್ದಾರೆ. ನಮ್ಮ ನಿಮ್ಮ ನಡುವೆ ದೇವಸ್ಥಾನದ ಪೂಜೆ ಪುನಸ್ಕಾರ ಮಾಡುವ ಪೂಜಾರಿಗಳು, ಮಸೀದಿಗಳ ಮುಲ್ಲಾ ಮೌಲ್ವಿಗಳು, ಚರ್ಚುಗಳ ಫಾದರ್, ಸಿಸ್ಟರುಗಳು, ಬೌದ್ದ ಸನ್ಯಾಸಿಗಳು, ಜೈನ ಮುನಿಗಳು, ಸಿಖ್ ಗುರುಗಳು ಮತ್ತು ಇನ್ನೂ ಈ ರೀತಿಯ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು.

Image

ಪುಸ್ತಕನಿಧಿ: 14.ಪ್ರಸನ್ನ ಅವರ ಮೂಲ ರಾಮಾಯಣ (ಭಾಗ ಒಂದು )

ಚಿತ್ರ

ಕನ್ನಡ ರಂಗಭೂಮಿಯ ನಿರ್ದೇಶಕ ರೂ ಕ್ರಿಯಾಶೀಲ ರಂಗ ಕಾರ್ಯಕರ್ತರೂ ಆದ ಪ್ರಸನ್ನ  ಅವರು ಬರೆದ 'ಮೂಲ' ರಾಮಾಯಣ - ಭಾಗ ಒಂದು ಎಂಬ ಪುಸ್ತಕವನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಮನುಷ್ಯ ಮತ್ತು ನಿಸರ್ಗ ಇವುಗಳ ನಡುವಿನ ಸಮತೋಲನವನ್ನು ಪ್ರತಿಪಾದಿಸುತ್ತ ರಾಮಾಯಣದ ಕಥೆಯನ್ನು ಹೇಳಲಾಗಿದೆ. ಕಥೆಯ ಚೌಕಟ್ಟಿನ ಮಟ್ಟಿಗೆ ಹೇಳುವುದಾದರೆ  ಇದು ವಾಲ್ಮೀಕಿ ರಾಮಾಯಣವನ್ನು ಅನುಸರಿಸಿದರೂ ಕೂಡ ಶ್ರೀರಾಮನನ್ನು ಇಲ್ಲಿ ವಿಶ್ವಮಾನವನನ್ನಾಗಿ ನೋಡಲಾಗಿದೆ. ಇದರ ಎರಡನೆಯ ಭಾಗ ನನಗೆ ಓದಲು ಸಿಕ್ಕಿಲ್ಲವಾದರೂ ಮೊದಲೇ ಭಾಗದಲ್ಲಿ ಸಾಮಾನ್ಯವಾಗಿ ನಾನು ಕಂಡ ಕೆಲ ಸಂಗತಿಗಳು ಇಲ್ಲಿವೆ: -

 

ಬ್ಲಾಗ್ ವರ್ಗಗಳು

ಕಪ್ಪು-ಬಿಳುಪು ಚಿತ್ರದಲ್ಲಿ ವರ್ಣ ಮೂಡಿಸಿದ ವಿ.ಕೆ.ಮೂರ್ತಿ

ನೀವು ಸ್ವಲ್ಪ ಹಳೆಯ ಕಾಲದವರಾಗಿದ್ದು, ಕಪ್ಪು ಬಿಳುಪು ಚಿತ್ರ ನೋಡುವ ಹವ್ಯಾಸವುಳ್ಳವರಾಗಿದ್ದರೆ, ಬಾಲಿವುಡ್ ನ ಖ್ಯಾತ ನಿರ್ದೇಶಕ, ನಟ ಗುರುದತ್ ಅವರ ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀವೀ ಔರ್ ಗುಲಾಮ್, ಆರ್ ಪಾರ್ ಮುಂತಾದ ಚಿತ್ರಗಳನ್ನು ನೋಡಿಯೇ ಇರುತ್ತೀರಿ. ಇವೆಲ್ಲಾ ಆಲ್ ಟೈಂ ಕ್ಲಾಸಿಕ್ ಚಲನ ಚಿತ್ರಗಳು. ಗುರುದತ್ ನಮ್ಮ ಹೆಮ್ಮೆಯ ಕನ್ನಡಿಗರು. ಅವರ ಚಲನಚಿತ್ರಗಳು ಎಲ್ಲವೂ ಕಪ್ಪು ಬಿಳುಪು.

Image