ರುಚಿಕರ, ಆರೋಗ್ಯದಾಯಕ ತಂಬುಳಿಗಳು

Image

೧. ಜೀರಿಗೆ ಮೆಣಸಿನ ಕಾಳಿನ ತಂಬ್ಳಿ:- ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಹುರಿದು ಕಾಯಿತುರಿ ಜೊತೆ ರುಬ್ಬಿ ಮಜ್ಜಿಗೆ ಉಪ್ಪು ಹಾಕಿ. ಬೇಕಿದ್ದರೆ ಚೂರು ಬೆಲ್ಲ ಹಾಕಿ. ಛಳಿಗಾಲ, ಮಳೆಗಾಲದ ಸಮಯದಲ್ಲಿ ಸ್ವಲ್ಪ ಬಿಸಿಮಾಡಿ ಊಟಮಾಡಿ. ಜ್ವರ ಬಂದಾಗ ಒಳ್ಳೆಯದು.

೨. ಸಾಸಿವೆ ತಂಬ್ಳಿ:- ಕಾಯಿತುರಿ ಜೊತೆ ಸಾಸಿವೆ, ಚೂರು ಒಣಮೆಣಸಿನಕಾಯಿ ಹಾಕಿ ರುಬ್ಬಿ, ಮಜ್ಜಿಗೆ ಉಪ್ಪು ಹಾಕಿ. ಅಜೀರ್ಣ ಆದಾಗ ಒಳ್ಳೆಯದು.

ಬೇಕಿರುವ ಸಾಮಗ್ರಿ

ತಂಬುಳಿ ತಂಬುಳಿ ತಂಬ್ಳಿ ಇದ್ ಬಿಟ್ರೆ ಊಟ ಅಮೃತಕ್ಕೆ ಸಮಾನ. ಯಾರನ್ನಾದರೂ ಊಟಕ್ಕೆ ಕರುದಾದ್ರೆ ಒಂದ್ ಅನ್ನ- ತಂಬ್ಳಿ ಮಾಡ್ತೆ ಅಥವಾ ಅನ್ನ - ತಂಬ್ಳಿ ಉಂಡಕಂಡು ಹೋಗಲಕ್ಕು ಹೇಳಿ ಕರೆತೋ..ಕಡಿಮೆ ಸಾಮಗ್ರಿಲಿ ರುಚಿ ರುಚಿ ತಂಬ್ಳಿ ಮಾಡುಲಾಗ್ತು. ಅನ್ನಕ್ಕೆ ಮೊದಲು ಹಾಯ್ಕಂಡು ಉಣ್ಣೋ ತಂಬುಳಿ, ಕಡೆಗಣ್ ತಂಬ್ಳಿ ಹೇಳಿ ಎರಡು ಬಗೆ..ಮೊದಲು ಉಂಬುದಕ್ಕೆ ಹಸಿಮೆಣಸು ಅಥವಾ ಒಣಮೆಣಸಿನಕಾಯಿ ಒಗ್ಗರಣೆ ಕೊಡ್ತವಿಲ್ಲೆ. ಹಸಿದ ಹೊಟ್ಟೆಗೆ ತಂಪು ಆಗಲಿ ಹೇಳಿ ಹಿರಿಯರು ಮಾಡಿದ ಪದ್ಧತಿ.

 

*ಹರಿದ ಅಹಂಕಾರ*

ಒಂದು ಊರಿನಲ್ಲಿ ಒಬ್ಬ ನೇಕಾರನಿದ್ದ. ಶಾಂತ ಸ್ವಭಾವದ ಮನುಷ್ಯ, ನಿಗರ್ವಿ, ತುಂಬ ಪ್ರಾಮಾಣಿಕ. ಆತ ಸಿಟ್ಟಾಗಿದ್ದನ್ನು ಆ ಊರಿನಲ್ಲಿ ಯಾರೂ ನೋಡೇ ಇರಲಿಲ್ಲ. ಆ ಊರಿನ ಕೆಲ ಯುವಕರಿಗೆ ಒಂದು ತರಲೆ ಹೊಳೆಯಿತು. ನೇಕಾರನಿಗೆ ಸಿಟ್ಟು ಬರಿಸಬೇಕು ಎಂದು ಅವರು ಮಾತಾಡಿಕೊಂಡರು. ಒಂದು ದಿನ ಯುವಕರ ಗುಂಪು ನೇಕಾರನ ಅಂಗಡಿಗೆ ಆಗಮಿಸಿತು. ಆ ಯುವಕರ ನಾಯಕ ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿದ್ದ. 

Image

ಒಂದು ಒಳ್ಳೆಯ ನುಡಿ (12) - ಸೇವಾಧರ್ಮ

ಮಾನವ ಸಂಘ ಜೀವಿ ಮತ್ತು ಸ್ನೇಹ ಜೀವಿ. ಒಂಟಿಯಾಗಿ ಬದುಕುವುದು ಬಹಳ ಕಷ್ಟ. *ಹುಟ್ಟು ಆಕಸ್ಮಿಕ ಸಾವು ನಿಶ್ಚಿತ*. ತಾನು ಹೇಗಿರಬೇಕು, ಹೇಗಿದ್ದೆ, ಎಲ್ಲರೊಂದಿಗೆ ಹೇಗೆ ಬೆರೆಯಬೇಕು, ತನ್ನ ಬದುಕಿನ ದಾರಿ ಹೇಗೆ ಸಾಗಿ ಬಂದಿದೆ ಇವೆಲ್ಲವೂ ಆತನಿಗೆ ಗೊತ್ತಿರಬೇಕು ಮತ್ತು ಸ್ವ-ವಿಮರ್ಶೆಗೆ ತನ್ನನ್ನು ತಾನೇ ಒಡ್ಡಿಕೊಳ್ಳಬೇಕು. ಆಗ ಮಾತ್ರ ಬದುಕು ಸುಂದರ.

Image

ನಮ್ಮ ಹೆಮ್ಮೆಯ ಭಾರತ (19 - 20)

೧೯.ಜಗತ್ತಿನ ಅಪ್ರತಿಮ ಕಲಾರಚನೆ ಆಗ್ರಾದ ತಾಜಮಹಲ್
ಆಗ್ರಾದ ತಾಜಮಹಲನ್ನು ಜಗತ್ತಿನ ಅತ್ಯಂತ ಸುಂದರ ಮತ್ತು ಭವ್ಯ ಸ್ಮಾರಕ ಎನ್ನಬಹುದು. ಇದು ಮೊಘಲ್ ರಾಜ ಷಾಜಹಾನ್, ತನ್ನ ಪ್ರೀತಿಯ ಪತ್ನಿ ಮಮ್ತಾಜಳ ನೆನಪಿಗಾಗಿ ನಿರ್ಮಿಸಿದ ಸ್ಮಾರಕ. ತನ್ನ ಮಗ ಔರಂಗಜೇಬನಿಂದಲೇ  
ಬಂಧಿಸಲ್ಪಟ್ಟ ರಾಜ ಷಾಜಹಾನ್ ತನ್ನ ಕೊನೆಗಾಲವನ್ನು ತಾಜಮಹಲನ್ನು ಖಿನ್ನತೆಯಿಂದ ನೋಡುತ್ತ ಕಳೆಯ ಬೇಕಾಯಿತು ಎಂಬುದು ದುರಂತ. ಅವನ ಮರಣಾ ನಂತರ ಅವನನ್ನೂ ಮಮ್ತಾಜಳ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.

Image

ಬಾಳಿಗೊಂದು ಚಿಂತನೆ (6) - ಕತ್ತಿಯ ಅಲಗು

ನಮ್ಮ ಜೀವನವೆನ್ನುವುದು *ಅಸಿಧಾರವ್ರತ* ಎನ್ನುವುದನ್ನು ಎಷ್ಟೋ ಸಲ ಕೇಳಿದ್ದೇವೆ. ಹಲವಾರು ಸನ್ನಿವೇಶ, ಸಂದರ್ಭಗಳು ನಮ್ಮನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತವೆ. ಆಗ *ಅಯ್ಯೋ ಹೀಗಾಯಿತಲ್ಲ*ಅಂತ ಪರಿತಪಿಸುತ್ತೇವೆ. ನಮ್ಮನ್ನು ನಾವು ಇಂತಹ ಸಂದರ್ಭದಲ್ಲಿ ಕಾಪಾಡಿಕೊಳ್ಳಲು ಹೆಣಗಾಡುತ್ತೇವೆ, ಚಡಪಡಿಸುತ್ತೇವೆ. *ಹರಿತವಾದ ಕತ್ತಿಯ ಅಲಗಿನ ಮೇಲೆ ನಿಂತರೆ, ಹೇಗೆ ಮೆಲ್ಲಗೆ ನಾಜೂಕಿನಿಂದ ಹೊರಬರಬಹುದು* ಎಂದು ಯೋಚಿಸಿ ನಿರ್ಧಾರಕ್ಕೆ ಬರುತ್ತೇವೆ. ಕಾಲಿಗೂ ತಾಗಬಾರದು, ಗಾಯವಾಗಬಾರದು. ಹೇಗೆ? ಸ್ನೇಹಿತರೇ ಇದೇ ಜೀವನ ಕಲೆ. ಚಮತ್ಕಾರಿಕವಾದ ವ್ರತವೂ ಹೌದು. ಈ ಖಡ್ಗದ ಅಲಗನ್ನೇ *ಅಸಿಧಾರ *ಹೇಳುತ್ತೇವೆ.

Image

ಮಹಾಭಾರತದಲ್ಲಿ ಪಾಂಡವರನ್ನು ಬದುಕಿಸಿದ ದ್ರೌಪದಿಯ ‘ನಮಸ್ಕಾರ’

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪ್ರಾರಂಭವಾದ ಪೌರಾಣಿಕ ಧಾರವಾಹಿಗಳಾದ ರಾಮಾಯಣ, ಮಹಾಭಾರತ, ರಾಧಾ ಕೃಷ್ಣ, ಗಣಪತಿಯ ಮಹಿಮೆಗಳು ಇತ್ಯಾದಿ ಇನ್ನೂ ದೂರದರ್ಶನದಲ್ಲಿ ಪ್ರಸಾರವಾಗುತ್ತಲೇ ಇವೆ. ಕೆಲವು ಧಾರಾವಾಹಿಗಳು ಮುಗಿದು ಅವುಗಳ ಉಪಕಥೆಗಳು ಪ್ರಾರಂಭವಾಗಿವೆ. ಹಿಂದಿ ಭಾಷೆಯಿಂದ ಡಬ್ ಆಗಿ ಕನ್ನಡಕ್ಕೆ ಕೆಲವು ಧಾರವಾಹಿಗಳು ಬಂದಿವೆ. ಕಡೆಗಾದರೂ ವೀಕ್ಷಕರು ಪೌರಾಣಿಕ ಧಾರವಾಹಿ ನೋಡಲು ಮನಸ್ಸು ಮಾಡುತ್ತಿದ್ದಾರೆ. ಈ ಧಾರವಾಹಿಗಳನ್ನು ನೋಡಿದ ಬಳಿಕ ಜನರಿಗೆ ನಮ್ಮ ಪುರಾತನ ಪರಂಪರೆಗಳ ಬಗ್ಗೆ, ದೈವ ದೇವರ ಬಗ್ಗೆ ತಿಳಿಯುವ ಆಸಕ್ತಿ ಮೂಡಿದೆ. ನಾನು ‘ಸಂಪದ’ದಲ್ಲಿ ಮಹಾಭಾರತದಲ್ಲಿ ಕಡಿಮೆ ಕಾಣಿಸಿದ, ಅಧಿಕ ಮಹತ್ವ ಇರದ ಪಾತ್ರಗಳ ಬಗ್ಗೆ ೧೫ ಕಂತುಗಳನ್ನು ಬರೆದೆ.

Image

ಪೊಲದ್ಯೆ

ಪುಸ್ತಕದ ಲೇಖಕ/ಕವಿಯ ಹೆಸರು
ಸುಂದರ ಬಾರಡ್ಕ
ಪ್ರಕಾಶಕರು
ಅಂಬೇಡ್ಕರ್ ವಿಚಾರ ವೇದಿಕೆ, ಬದಿಯಡ್ಕ, ಕಾಸರಗೋಡು
ಪುಸ್ತಕದ ಬೆಲೆ
ರೂ.70.00 ಮುದ್ರಣ: 2016

*ಸುಂದರ ಬಾರಡ್ಕರ "ಪೊಲದ್ಯೆ": ತುಳುವರ ಜನಪದೀಯ ಚಿಕಿತ್ಸಾ ಕ್ರಮಗಳ ಉನ್ನತ ಅಧ್ಯಯನಕ್ಕೆ ಅಡಿಗಲ್ಲು*

ಕುಣಿದ ಕಿಂಕಿಣಿ

ಕಾಲಗೆಜ್ಜೆಯ ಧರಿಸಿ ಬಂದಳು

ಬಾಲೆ ಮೊಗದಲಿ ನಗುವ ತಂದಳು

ಲೀಲೆ ಪಾಡಲು ವೇಣು ನಾದವು ಕೇಳಿ ಬರುತಿರಲು|

ಮೇಲೆ ನಿಂತಳು ಗೆಜ್ಜೆ ಕಟ್ಟುತ

ಕೋಲ ಹಿಡಿದಳು ಜೊತೆಗೆ ಕುಣಿಯುತ

ಪಾಶ್ಚಾತ್ಯ ಸಂಸ್ಕೃತಿ...ಏನು? ಎತ್ತ?

ನಮ್ಮ ಹಿರಿಯರು ಆಗಾಗ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿರುತ್ತಾರೆ. ನಾವು ಹಾಳಾಗುತ್ತಿರುವುದೇ ಆ ಸಂಸ್ಕೃತಿ ಪ್ರಭಾವದಿಂದ ಅದರಲ್ಲೂ ನಮ್ಮ ಯುವ ಜನಾಂಗ ದಾರಿತಪ್ಪಲು ಅದೇ ಮುಖ್ಯ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಹಾಗಾದರೆ ಪಾಶ್ಚಾತ್ಯ ಸಂಸ್ಕೃತಿ ಎಂದರೆ ಕೆಟ್ಟದ್ದೆ? ಪಾಶ್ಚಾತ್ಯರು ಹಾಳಾಗಿದ್ದಾರೆಯೆ?  ಒಂದು ಸಂಸ್ಕೃತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಎಲ್ಲಾ ಸಂಸ್ಕೃತಿಗಳಿಗಿಂತ ನಮ್ಮ ಜೀವನಶೈಲಿಯೇ ಅತ್ಯುತ್ತಮ ಎಂಬುದು ಸರಿಯಾದ ತಿಳಿವಳಿಕೆಯೇ? ಒಂದಷ್ಟು ಈ ಬಗೆಗೆ ಚಿಂತಿಸಬೇಕಿದೆ, ವಿಮರ್ಶೆಗೆ ಒಳಪಡಿಸಬೇಕಿದೆ...

Image