ಜೋಳದ ಟಿಕ್ಕಿ (ಕಾರ್ನ್ ಟಿಕ್ಕಿ)

Image

ಮೊದಲಿಗೆ ಕುಕ್ಕರ್ ನಲ್ಲಿ ಆಲೂಗಡ್ಡೆಯನ್ನು ಬೇಯಿಸಿ. ನಂತರ ಕಾರ್ನ್ ಅನ್ನು ಸ್ವಲ್ಪ ಬಿಸಿ ಮಾಡಿ.(ಓವನ್ ಇದ್ದರೆ ಅದರಲ್ಲಿ ಬಿಸಿ ಮಾಡಬಹುದು). ಕಾರ್ನ್ ಹುರಿಯಬೇಡಿ. ಬೇಯಿಸಿದ ಬಟಾಟೆಯನ್ನು ಹುಡಿ ಮಾಡಿ, ಅದಕ್ಕೆ ಹಸಿಮೆಣಸು ಕತ್ತರಿಸಿ ಮಿಕ್ಸ್ ಮಾಡಿರಿ. ನಂತರ ಅದಕ್ಕೆ ಕೊತ್ತಂಬರಿಸೊಪ್ಪು, ಕಾರ್ನ್, ಚೀಸ್, ಗರಂ ಮಸಾಲೆ, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಸೇರಿಸಿ ಸರಿಯಾಗಿ ಬೆರೆಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಅವುಗಳ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿರಿ. ಆ ಉಂಡೆಗಳನ್ನು ಚಪ್ಪಟೆ ಆಕಾರಕ್ಕೆ ಬರುವಂತೆ ಕೈಯಿಂದ ಒತ್ತಿ, ಬ್ರೆಡ್ ಹುಡಿಯಲ್ಲಿ ಹೊರಳಿಸಿ ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ. ಒಂದು ಬದಿ ಬೆಂದ ಬಳಿಕ ಇನ್ನೊಂದು ಬದಿಯನ್ನು ಕಾಯಿಸಿರಿ.

ಬೇಕಿರುವ ಸಾಮಗ್ರಿ

ಆಲೂಗಡ್ಡೆ ೪-೫ (ಮೀಡಿಯಂ ಗಾತ್ರ), ಕಾಯಿಮೆಣಸು ೨, ಅಮೇರಿಕನ್ ಕಾರ್ನ್ (ಬಿಡಿಸಿದ್ದು) ೧ ಕಪ್, ಚೀಸ್ ೧ ಟೇಬಲ್ ಸ್ಪೂನ್, ಬ್ರೆಡ್ ಕ್ರಮ್ಸ್ (ಹುಡಿ) ಸ್ವಲ್ಪ, ಕೊತ್ತಂಬರಿ ಸೊಪ್ಪು, ಗರಂ ಮಸಾಲೆ ಹುಡಿ ೧ ಚಮಚ, ಮೆಣಸಿನ ಹುಡಿ ೧ ಚಮಚ, ರುಚಿಗೆ ಉಪ್ಪು.

ಗೀತಾಮೃತ - 5

ಅಧ್ಯಾಯ ೨

     ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣ:/

ಜನ್ಮಬಂಧವಿನಿರ್ಮುಕ್ತಾ: ಪದಂ ಗಚ್ಛಂತ್ಯನಾಮಯಮ್//೫೧//

   ಏಕೆಂದರೆ, ಸಮಬುದ್ಧಿಯಿಂದ ಯುಕ್ತರಾದ ಜ್ಞಾನಿಗಳು ಕರ್ಮಗಳಿಂದ ಉಂಟಾಗುವ ಫಲವನ್ನು ತ್ಯಾಗಮಾಡಿ ಜನ್ಮರೂಪೀ ಬಂಧನದಿಂದ ಮುಕ್ತರಾಗಿ ನಿರ್ವಿಕಾರ ಪರಮಪದವನ್ನು ಹೊಂದುತ್ತಾರೆ.

Image

ಝೆನ್ ಪ್ರಸಂಗ: ಮಠದಿಂದ ಮಠಕ್ಕೆ ಅಲೆತ

ಜ್ನಾನದಾಹಿಯೊಬ್ಬ ಝೆನ್ ಮಠವೊಂದಕ್ಕೆ ಬಂದು ಗುರುವಿಗೆ ನಮಸ್ಕರಿಸಿದ.
ಗುರುವಿನ ಪ್ರಶ್ನೆ: ಎಲ್ಲಿಂದ ಬಂದೆ?
ಜ್ನಾನದಾಹಿಯ ಉತ್ತರ: ದೂರದ ಹಳ್ಳಿಯಿಂದ.
ಗುರುವಿನ ಪ್ರಶ್ನೆ: ಬೇಸಗೆಯಲ್ಲಿ ಯಾವ ಮಠದಲ್ಲಿದ್ದೆ?
ಜ್ನಾಹದಾಹಿಯ ಉತ್ತರ: ಪಕ್ಕದ ರಾಜ್ಯದ ಸರೋವರದ ಹತ್ತಿರದ ಮಠದಲ್ಲಿ.
ಗುರುವಿನ ಪ್ರಶ್ನೆ: ಅಲ್ಲಿಂದ ಯಾವಾಗ ಹೊರಟದ್ದು?
ಜ್ನಾನದಾಹಿಯ ಉತ್ತರ: ಅಲ್ಲಿಂದ ಹುಣ್ಣಿಮೆಯಂದು ಇಲ್ಲಿಗೆ ಹೊರಟೆ.
ಈಗ ಗುರುವಿನ ಪ್ರತಿಕ್ರಿಯೆ: ಒಂದು ಕೋಲು ತಗೊಂಡು ಮೂರು ಏಟು ಬಾರಿಸಬೇಕು ನಿನಗೆ. ಆದರೆ ಇವತ್ತು ನಿನಗೆ ಕ್ಷಮೆ ನೀಡಿದ್ದೇನೆ. ಗೊತ್ತಾಯಿತಾ?

Image

ವೃದ್ದೆಯ ಕಲಾಕುಂಚ

ಅರಳಿದೆ ಪಟದಲಿ ಕುಂಚದ ಕಲೆಯದು

ತಳೆದಿದೆ ನೂತನ ಭಾವವದು|

ಕರೆದಿದೆ ಸಹೃದಯ ಮನವನು ತಣಿಸುತ

ವೃದ್ದೆಯ ಬಿಡಿಸಿದ ಚಿತ್ರವದು||

 

ಹಾಳೆಯ ಮೇಲೆಯೆ ರಂಗಿನ ಕುಂಚವು

ಬಯಾಪ್ಸಿ ಬಗ್ಗೆ ಭಯ ಬೇಡ

ಸಮಯ ಕಳೆದಂತೆ ಮಾನವ ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾನೆ. ಕಳೆದ ಶತಮಾನಕ್ಕೂ ಈಗಿನ ಶತಮಾನಕ್ಕೂ ಬಹಳಷ್ಟು ಸುಧಾರಣೆಗಳು ಎಲ್ಲಾ ಕ್ಷೇತ್ರದಲ್ಲಿ ಆಗಿವೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಆಗಿರುವ, ಆಗುತ್ತಿರುವ ಸಂಶೋಧನೆಗಳು ಹಲವಾರು. ಈ ಕಾರಣದಿಂದಲೇ ನಾವಿಂದು ಏನೇ ಕಾಯಿಲೆಗಳು ಬಂದರೂ ಗುಣಮುಖರಾಗುತ್ತಿರುವುದು. ಸದ್ಯಕ್ಕೆ ಬಂದಿರುವ ಕೊರೋನಾ ಮಹಾಮಾರಿಯ ಬಗ್ಗೆ ನಮ್ಮ ವೈದ್ಯಕೀಯ ಲೋಕದಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಆ ಕೊರೋನಾ ವೈರಸ್ ಅನ್ನು ತಡೆಗಟ್ಟುವ ಲಸಿಕೆಯನ್ನು ಸದ್ಯದಲ್ಲೇ ಕಂಡು ಹಿಡಿಯುತ್ತಾರೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. 

Image

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
ರೂ.೧೩೦.೦೦ ಮುದ್ರಣ: ಮಾರ್ಚ್ ೨೦೧೬

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ಮೂರನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ‘ಪಶ್ಚಿಮ ಘಟ್ಟ ಅಪರೂಪದ ಪ್ರಕೃತಿ ಸಂಪತ್ತು. ವಿಸ್ಮಯದ ಗೂಡು. ಅದನ್ನಷ್ಟು ಕಳೆದುಕೊಂಡರೆ ನಮಗೆ ಮತ್ತೇನೂ ಇಲ್ಲ. ಇಂದಿನ ತೆವಲಿಗೆ ನಾವು ಅದರ ಬೆಲೆಯೇ ತಿಳಿಯದೆ ಸೂರೆ ಮಾಡುತ್ತಿದ್ದೇವೆ. ಇಂಚಿಂಚಾಗಿ ಅರಣ್ಯ ನಾಶವಾಗುತ್ತಿದೆ. ಅದನ್ನು ಉಳಿಸಿ ಅದರ ಲಾಭ ಪಡೆಯಲು ತಿಳಿಯದ ನಮಗೆ ಅದರ ನಾಶದ ಬಗೆ ಮಾತ್ರ ಚೆನ್ನಾಗಿ ತಿಳಿದಿದೆ. ಆನೆಗಳಂತಹ ಕಾಡುಪ್ರಾಣಿಗಳು ನೆಲೆ ಇಲ್ಲದೆ ಊರಿಗೆ ದಾಳಿ ಮಾಡುತ್ತವೆ’.

ಒಂದು ಒಳ್ಳೆಯ ನುಡಿ (10)- ಕರ್ತವ್ಯ

ಬದುಕಿನೀ ಕ್ಷೇತ್ರದಲಿ ಕರ್ತವ್ಯ ಹಲವುಂಟು

ಮೊದಲು ಋಣಸಂದಾಯ ಮರೆಯದಿರಬೇಕು/

ಮಮತೆಯೊಲುಮೆಯ ಸಾಲ ಇತ್ತವರ,ಹೆತ್ತವರ

ಅಮ್ಮ--ಅಪ್ಪ ಎಂಬ ಪ್ರೀತಿಯಲಿ ಸಾಕು/

Image